ಆ್ಯಪ್ನಗರ

ನೈಋತ್ಯ ರೈಲ್ವೆ: ಪ್ರಸಕ್ತ ವರ್ಷ ಗುರಿ ಮೀರಿ ಆದಾಯ

ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯ ಹುಬ್ಬಳ್ಳಿ, ಬೆಂಗಳೂರು ಹಾಗೂ ಮೈಸೂರು ವಿಭಾಗದಲ್ಲಿ ಪ್ರಯಾಣಿಕರಿಗಿಂತಲೂ ಸರಕು ಸಾಗಣೆಯಿಂದಲೇ ಹೆಚ್ಚು ಆದಾಯ ಗಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಪಿ.ಕೆ. ಸಕ್ಸೇನಾ ತಿಳಿಸಿದರು.

ವಿಕ ಸುದ್ದಿಲೋಕ 20 Apr 2016, 4:00 am
ಸರಕು ಸಾಗಣೆ ಮೂಲಕ 3842 ಕೋಟಿ ರೂ. ವರಮಾನ
Vijaya Karnataka Web south western railway beyond the revenue target for the current year
ನೈಋತ್ಯ ರೈಲ್ವೆ: ಪ್ರಸಕ್ತ ವರ್ಷ ಗುರಿ ಮೀರಿ ಆದಾಯ


ಹುಬ್ಬಳ್ಳಿ : ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯ ಹುಬ್ಬಳ್ಳಿ, ಬೆಂಗಳೂರು ಹಾಗೂ ಮೈಸೂರು ವಿಭಾಗದಲ್ಲಿ ಪ್ರಯಾಣಿಕರಿಗಿಂತಲೂ ಸರಕು ಸಾಗಣೆಯಿಂದಲೇ ಹೆಚ್ಚು ಆದಾಯ ಗಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ವಲಯದ ಪ್ರಧಾನ ವ್ಯವಸ್ಥಾಪಕ ಪಿ.ಕೆ. ಸಕ್ಸೇನಾ ತಿಳಿಸಿದರು.

ನಗರದ ಗದಗ ರಸ್ತೆಯಲ್ಲಿನ ಚಾಲುಕ್ಯ ರೈಲ್ವೆ ಇನ್‌ಸ್ಟಿಟ್ಯೂಟ್‌ನಲ್ಲಿ ಮಂಗಳವಾರ ನಡೆದ 61ನೇ ರೈಲ್ವೆ ಸಪ್ತಾಹ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ರೈಲ್ವೆ ಬೋರ್ಡ್ ನೀಡಿದ್ದ 41 ದಶಲಕ್ಷ ಟನ್ ಸರಕು ಸಾಗಣೆಯ ಗುರಿಯನ್ನು ಮೀರಿ 42.9 ದಶಲಕ್ಷ ಟನ್ ಸರಕು ಸಾಗಣೆ ಮಾಡುವ ಮೂಲಕ 3842 ಕೋಟಿ ರೂ. ಆದಾಯ ಗಳಿಸಲಾಗಿದೆ ಎಂದರು.

ರೈಲ್ವೆ ಪ್ರಯಾಣಿಕರ ಹೆಚ್ಚುವರಿ ದಟ್ಟಣೆಯಿಂದಾಗಿ 3,400 ವಿಶೇಷ ರೈಲುಗಳನ್ನು ಓಡಿಸಲಾಗಿದೆ. ಅಲ್ಲದೆ 6,091 ಹೆಚ್ಚುವರಿ ಬೋಗಿಗಳನ್ನು ನಿತ್ಯ ಸಂಚರಿಸುವ ರೈಲುಗಳಿಗೆ ಜೋಡಿಸಲಾಗಿದೆ. ಆ ಮೂಲಕ ರೈಲ್ವೆ ಸಿಬ್ಬಂದಿ ಶೇ.95ರಷ್ಟು ಸಮಯ ಪ್ರಜ್ಞೆ ಮೆರೆದಿದ್ದಾರೆ ಎಂದರು.

ರೈಲ್ವೆ ಪ್ರಯಾಣಿಕರ ಸುರಕ್ಷತೆ ಹಾಗೂ ಭದ್ರತೆಗೆ ಹೆಚ್ಚು ಆದ್ಯತೆ ನೀಡಲಾಗಿದೆ. ನೈಋತ್ಯ ರೈಲ್ವೆ ವಿಭಾಗದಲ್ಲಿ 2015-16 ರಲ್ಲಿ ರೈಲು ಕಾರ್ಯಾಚರಣೆಯ ಸುರಕ್ಷತೆಗಾಗಿ ಮಾನವ ಸಹಿತ ಕ್ರಾಸಿಂಗ್‌ಗಳನ್ನು ತೆಗೆದು ಹಾಕಿ 53 ಮಾನವ ರಹಿತ ಕ್ರಾಸಿಂಗ್‌ಗಳನ್ನು ನಿರ್ಮಿಸಲಾಗಿದೆ. ಅಲ್ಲದೆ ನಾಲ್ಕು ರೈಲು ನಿಲ್ದಾಣಗಳಲ್ಲಿ ಪಾದಚಾರಿಗಳ ಮೇಲ್ಸೇತುವೆ ನಿರ್ಮಿಸಲಾಗಿದೆ ಎಂದು ತಿಳಿಸಿದರು.

ಪ್ರಶಸ್ತಿ ವಿತರಣೆ

ಒಟ್ಟು ಸಾಮರ್ಥ್ಯ ಪರಿಗಣಿಸಿ ಮೈಸೂರು ವಿಭಾಗಕ್ಕೆ ಪ್ರಶಸ್ತಿಯನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು. ಇದೇ ರೀತಿ ನೈಋತ್ಯ ರೈಲ್ವೆ ವಲಯ ವ್ಯಾಪ್ತಿಯ ಹುಬ್ಬಳ್ಳಿ, ಬೆಂಗಳೂರು ಹಾಗೂ ಮೈಸೂರು ವಿಭಾಗಗಳಲ್ಲಿನ ಸುರಕ್ಷತೆ, ಎಲೆಕ್ಟ್ರಿಸಿಟಿ, ಕಮರ್ಷಿಯಲ್, ಕಾರ್ಯಾಚರಣೆ, ವೈದ್ಯಕೀಯ, ಎಂಜಿನಿಯರಿಂಗ್, ಮೆಕ್ಯಾನಿಕಲ್, ಮೆಕ್ಯಾನಿಕಲ್ ಸ್ಟೋರ್, ವರ್ಕಶಾಪ್, ಸ್ಟೇಶನ್, ರೈಲು ನಿಲ್ದಾಣದ ನಿರ್ವಹಣೆ, ಬೆಸ್ಟ್ ಸ್ಟೇಶನ್, ಬೆಸ್ಟ್ ರನ್ನಿಂಗ್ ರೂಮ್‌ಗಳಲ್ಲಿ ಸಾಧನೆ ಮಾಡಿದ ನಾನಾ ಡಿಪಾರ್ಟ್‌ಮೆಂಟ್‌ಗಳಿಗೆ ಪ್ರಶಸ್ತಿ ವಿತರಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ