ಆ್ಯಪ್ನಗರ

ಸ್ಪೈಸ್‌ಜೆಟ್‌ಗೆ ಹೆಚ್ಚಿದ ಸಂಕಷ್ಟ, ದಯಾನಿಧಿ ಮಾರನ್‌ಗೆ ₹308 ಕೋಟಿ ಪಾವತಿಸುವಂತೆ ಸುಪ್ರೀಂ ಸೂಚನೆ

ಮಾಜಿ ಮಾಲೀಕ ಕಲಾನಿಧಿ ಮಾರನ್‌ಗೆ 380 ಕೋಟಿ ರೂ.ಗಳ ಸಂಪೂರ್ಣ ಮಧ್ಯಸ್ಥಿಕೆ ಮೊತ್ತವನ್ನು ಪಾವತಿಸುವಂತೆ ಸುಪ್ರೀಂ ಕೋರ್ಟ್ ಸ್ಪೈಸ್‌ ಜೆಟ್‌ಗೆ ಶುಕ್ರವಾರ ನಿರ್ದೇಶನ ನೀಡಿದೆ. ಇದು ನಗದು ಕೊರತೆ ಎದುರಿಸುತ್ತಿರುವ ಸ್ಪೈಸ್‌ ಜೆಟ್‌ ಸಂಸ್ಥೆಗೆ ಮಾರಕವಾಗಿ ಪರಿಣಮಿಸಿದೆ. ಕಲಾನಿಧಿ ಮಾರನ್ ಮತ್ತು ಸ್ಪೈಸ್‌ಜೆಟ್‌ ಮಾಲೀಕ ಅಜಯ್ ಸಿಂಗ್ ನಡುವಿನ ಏಳು ವರ್ಷಗಳಷ್ಟು ಹಳೆಯದಾದ ಷೇರು ವರ್ಗಾವಣೆ ವಿವಾದದಲ್ಲಿ ಈ ಆದೇಶ ಹೊರಬಿದ್ದಿದೆ.

Written byಎನ್‌. ಸಚ್ಚಿದಾನಂದ | TNN 8 Jul 2023, 5:59 pm

ಹೈಲೈಟ್ಸ್‌:

  • ಮಾಜಿ ಮಾಲೀಕ ಕಲಾನಿಧಿ ಮಾರನ್‌ಗೆ 380 ಕೋಟಿ ರೂ.ಗಳ ಸಂಪೂರ್ಣ ಮಧ್ಯಸ್ಥಿಕೆ ಮೊತ್ತ ಪಾವತಿಸುವಂತೆ ಸ್ಪೈಸ್‌ ಜೆಟ್‌ಗೆ ಸುಪ್ರೀಂ ಕೋರ್ಟ್ ಸೂಚನೆ
  • ನಗದು ಕೊರತೆ ಎದುರಿಸುತ್ತಿರುವ ಸ್ಪೈಸ್‌ ಜೆಟ್‌ ಸಂಸ್ಥೆಗೆ ಮಾರಕವಾಗಿ ಪರಿಣಮಿಸಿದ ಸರ್ವೋಚ್ಚ ನ್ಯಾಯಾಲಯ ಆದೇಶ
  • ಕಲಾನಿಧಿ ಮಾರನ್ ಮತ್ತು ಸ್ಪೈಸ್‌ಜೆಟ್‌ ಮಾಲೀಕ ಅಜಯ್ ಸಿಂಗ್ ನಡುವಿನ ಏಳು ವರ್ಷಗಳಷ್ಟು ಹಳೆಯದಾದ ಷೇರು ವರ್ಗಾವಣೆ ವಿವಾದದಲ್ಲಿ ಈ ಆದೇಶ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web SpiceJet
ಹೊಸದಿಲ್ಲಿ: ಆರ್ಥಿಕ ಸಂಕಷ್ಟದಲ್ಲಿ ಸಿಲುಕಿರುವ ಸ್ಪೈಸ್‌ ಜೆಟ್‌ಗೆ ಸುಪ್ರೀಂ ಕೋರ್ಟ್‌ ಗಾಯದ ಮೇಲೆ ಬರೆ ಎಳೆದಿದೆ. ಕಂಪನಿಯ ಮಾಜಿ ಮಾಲೀಕ, ಸನ್‌ ಗ್ರೂಪ್‌ ಅಧ್ಯಕ್ಷ ಕಲಾನಿಧಿ ಮಾರನ್‌ಗೆ 380 ಕೋಟಿ ರೂ. ಪಾವತಿಸುವಂತೆ ವಿಮಾನಯಾನ ಸಂಸ್ಥೆಗೆ ಸುಪ್ರೀಂ ಕೋರ್ಟ್‌ ಶುಕ್ರವಾರ ಸೂಚನೆ ನೀಡಿದೆ.
ಬಜೆಟ್ ಕ್ಯಾರಿಯರ್‌ನ ಮಾಜಿ ಮಾಲೀಕ ಕಲಾನಿಧಿ ಮಾರನ್‌ಗೆ 380 ಕೋಟಿ ರೂ.ಗಳ ಸಂಪೂರ್ಣ ಮಧ್ಯಸ್ಥಿಕೆ ಮೊತ್ತವನ್ನು ಪಾವತಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ನಿರ್ದೇಶನ ನೀಡಿದ್ದು, ನಗದು ಕೊರತೆ ಎದುರಿಸುತ್ತಿರುವ ಸ್ಪೈಸ್‌ ಜೆಟ್‌ ಸಂಸ್ಥೆಗೆ ಮಾರಕವಾಗಿ ಪರಿಣಮಿಸಿದೆ.

ಕಲಾನಿಧಿ ಮಾರನ್ ಮತ್ತು ಅಜಯ್ ಸಿಂಗ್ ನಡುವಿನ ಏಳು ವರ್ಷಗಳಷ್ಟು ಹಳೆಯದಾದ ಷೇರು ವರ್ಗಾವಣೆ ವಿವಾದದಲ್ಲಿ ಈ ಆದೇಶ ಹೊರಬಿದ್ದಿದೆ. ಅಜಯ್‌ ಸಿಂಗ್‌ ಅವರು 2015ರಲ್ಲಿ ಕಲಾನಿಧಿ ಮಾರನ್‌ ಅವರಿಂದ ಸ್ಪೈಸ್‌ ಜೆಟ್‌ ವಿಮಾನಯಾನ ಸಂಸ್ಥೆಯನ್ನು ಸ್ವಾಧೀನಪಡಿಸಿಕೊಂಡಿದ್ದರು.

ಸಾಲು ಸಾಲು ತಾಂತ್ರಿಕ ದೋಷದ ಮಧ್ಯೆಯೂ ಸ್ಪೈಸ್‌ಜೆಟ್‌ನ ಶೇ. 80ರಷ್ಟು ಆಸನ ಬುಕ್‌!
ಹಿಂದಿನ ಆದೇಶಗಳ ಪ್ರಕಾರ ಹಣ ಪಾವತಿಸದ ಹಿನ್ನೆಲೆಯಲ್ಲಿ ಸ್ಪೈಸ್‌ ಜೆಟ್‌ ಏರ್‌ಲೈನ್ ಸರ್ವೋಚ್ಚ ನ್ಯಾಯಾಲಯದ ಆಕ್ರೋಶಕ್ಕೂ ಗುರಿಯಾಗಿದೆ. ಇದೀಗ ಒಂದೇ ಕಂತಿನಲ್ಲಿ ಕಲಾನಿಧಿ ಮಾರನ್‌ ಅವರಿಗೆ ಹಣ ಪಾವತಿಸುವಂತೆ ಸುಪ್ರೀಂ ಕೋರ್ಟ್‌ ವಿಮಾನಯಾನ ಸಂಸ್ಥೆಗೆ ನಿರ್ದೇಶನ ನೀಡಿದೆ. ಆದೇಶ ನೀಡುವಾಗ ‘ವಾಣಿಜ್ಯ ನೈತಿಕತೆ’ಯೊಂದಿಗೆ ವ್ಯವಹಾರವನ್ನು ನಡೆಸಬೇಕು ಎಂದು ಸ್ಪೈಸ್‌ ಜೆಟ್‌ ಸಂಸ್ಥೆಗೆ ಸರ್ವೋಚ್ಚ ನ್ಯಾಯಾಲಯ ಚಾಟಿ ಬೀಸಿದೆ.

ಕಲಾನಿಧಿ ಮಾರನ್‌ ಅವರಿಗೆ 380 ಕೋಟಿ ರೂ. ಪಾವತಿ ಮಾಡುವಂತೆ ಸ್ಪೈಸ್‌ ಜೆಟ್‌ಗೆ ದಿಲ್ಲಿ ಹೈಕೋರ್ಟ್ ಇದೇ ಜೂನ್‌ನಲ್ಲಿ ಆದೇಶ ನೀಡಿತ್ತು. ಇದಕ್ಕೂ ಮುನ್ನ ಫೆಬ್ರವರಿಯಲ್ಲಿ, 2018ರ ಮಧ್ಯಸ್ಥಿಕೆ ತೀರ್ಪಿನ ಅಡಿಯಲ್ಲಿ ಕಲಾನಿಧಿ ಮಾರನ್‌ ಬೇಡಿಕೆ ಇಟ್ಟಿದ್ದ 362.5 ಕೋಟಿ ರೂ.ಗಳ ಬಡ್ಡಿ ಬಾಕಿ ಕೋರಿಕೆ ಸಂಬಂಧ 75 ಕೋಟಿ ರೂ.ಗಳನ್ನು ಮೂರು ತಿಂಗಳ ಒಳಗಾಗಿ ಪಾವತಿಸುವಂತೆ ಸ್ಪೈಸ್‌ ಜೆಟ್‌ಗೆ ಸುಪ್ರೀಂ ಕೋರ್ಟ್‌ ಸೂಚಿಸಿತ್ತು.

ಆದರೆ, ಕಲಾನಿಧಿ ಮಾರನ್ ಅವರಿಗೆ 75 ಕೋಟಿ ರೂಪಾಯಿ ಪಾವತಿಸಲು ಹೆಚ್ಚಿನ ಸಮಯ ಬೇಕು ಎಂದು ಸ್ಪೈಸ್ ಜೆಟ್‌ ಮನವಿ ಸಲ್ಲಿಸಿತ್ತು. ಈ ಮನವಿಗಳನ್ನೂ ವಜಾಗೊಳಿಸಿದ್ದ ಸುಪ್ರೀಂ ಕೋರ್ಟ್‌, ಅರ್ಜಿಗಳನ್ನು ಸಲ್ಲಿಸುವುದು ವಿಮಾನಯಾನ ಕಂಪನಿಯ ವಿಳಂಬ ತಂತ್ರವಾಗಿದೆ ಎಂದು ಕಿಡಿಕಾರಿತ್ತು.
ಲೇಖಕರ ಬಗ್ಗೆ
ಎನ್‌. ಸಚ್ಚಿದಾನಂದ
2019ರಿಂದ ವಿಜಯ ಕರ್ನಾಟಕ ವೆಬ್‌ನಲ್ಲಿ ಉಪಸಂಪಾದಕರಾಗಿದ್ದಾರೆ. 2015ರಲ್ಲಿ ಪತ್ರಿಕೋದ್ಯಮಕ್ಕೆ ಕಾಲಿಟ್ಟ ಇವರು ಸದ್ಯ ‘ವಿಕ’ ವೆಬ್‌ನ ವಾಣಿಜ್ಯ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ ಇವರ ಆಸಕ್ತಿಯ ಕ್ಷೇತ್ರಗಳಾಗಿವೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ