ಸುಳ್ಯ: ಕಳೆದ ಏಳೆಂಟು ವರ್ಷಗಳಿಂದ ಮಂಗಗಳ ಹಾವಳಿ ಮಿತಿ ಮೀರಿ ಜಿಲ್ಲೆಯ ಮೂರ್ನಾಲ್ಕು ತಾಲೂಕುಗಳಲ್ಲಿ ವಾರ್ಷಿಕ ಸುಮಾರು 2500 ಕೋಟಿ ರೂ. ನಷ್ಟ ಸಂಭವಿಸಿದೆ. ನಾವು ಪರಿಹಾರ ಕೇಳುತ್ತಿಲ್ಲ, ಈ ಹಾವಳಿ ತಡೆಗೆ ಸರಕಾರ ಕಾರ್ಯಪ್ರವೃತ್ತವಾಗಬೇಕು ಎಂದು ರೈತ ಸಂಘದ ಮುಖಂಡ ರವಿಕಿರಣ್ ಪುಣಚ ಆಗ್ರಹಿಸಿದರು. ಮಂಗಗಳ ಹಾವಳಿ ತಡೆಯುವ ನಿಟ್ಟಿನಲ್ಲಿ ಸುಳ್ಯ ತಾಪಂ ಸಭಾಂಗಣದಲ್ಲಿ ನಡೆದ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿದರು.
ಮಂಕಿ ಪಾರ್ಕ್ ಸ್ಥಾಪನೆ, ಮಂಗಗಳನ್ನು ಮಾಂಸ ತಿನ್ನುವ ಕಡೆ ಸಾಗಿಸುವುದು, ಆನೆ ಕಂದಕ ನಿರ್ಮಾಣಕ್ಕೆ ಅನುದಾನ ಇಟ್ಟಂತೆ ಮಂಕಿ ಪಾರ್ಕ್ಗೆ ಅನುದಾನ ಮೀಸಲಿಡುವುದು ಮೊದಲಾದ ವಿಚಾರಗಳ ಬಗ್ಗೆ ಗಮನ ಹರಿಸಬೇಕೆಂದು ಎಂ.ಡಿ. ವಿಜಯಕುಮಾರ್ ಹೇಳಿದರು.
ಮಂಗಗಳು ಅರಣ್ಯ ಇಲಾಖೆಯ ಸ್ವತ್ತು. ಅವುಗಳು ತೋಟಕ್ಕೆ ಇಳಿಯದಂತೆ ಅರಣ್ಯ ಇಲಾಖೆಯವರೇ ನೋಡಿಕೊಳ್ಳಬೇಕು. ಅವುಗಳ ಸಂತತಿ ಹೆಚ್ಚುತ್ತಿದ್ದು, ನಿಯಂತ್ರಣಕ್ಕೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸುವಂತೆ ನಿತ್ಯಾನಂದ ಮುಂಡೋಡಿ ಸಲಹೆ ನೀಡಿದರು.
ವನ್ಯಜೀವಿ ಕಾಯಿದೆಗೆ ತಿದ್ದುಪಡಿ ತರಬೇಕು ಎಂದು ಭವಾನಿ ಶಂಕರ ಪಿಂಡಿಮನೆ ಹೇಳಿದರು. ಕಾಡಿನಲ್ಲಿ ಆಹಾರ ಸಿಗದೇ ಮಂಗಗಳು ನಾಡಿಗೆ ಬರುತ್ತಿದ್ದು, ಕಾಡಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹಣ್ಣಿನ ಮರಗಳನ್ನು ನೆಡಬೇಕು ಎಂದು ಬೀರಾ ಮೊಯಿದ್ದೀನ್ ಸಲಹೆ ಮಾಡಿದರು.
ನಾಗರಾಜ್ ಪೆರುವಾಜೆ, ಮಾಧವ ಭಟ್ ಐವರ್ನಾಡು, ಭೋಜಪ್ಪ ಗುಂಡ್ಯ, ನವೀನ್ಕುಮಾರ್ ಮೇನಾಲ, ಪಿ.ಎಸ್. ಗಂಗಾಧರ್, ಗಂಗಾಧರ್ ರೈ, ದಿನೇಶ್ ಪೆರುವಾಜೆ ಕರುಣಾಕರ ಅಡ್ಪಂಗಾಯ, ಪಿ.ಸಿ. ಜಯರಾಂ, ಕೃಷ್ಣಪ್ಪ ಗೌಡ ನೆಕ್ರಪ್ಪಾಡಿ, ಚಂದ್ರಾ ಕೋಲ್ಚಾರ್ ಮತ್ತಿತರರು ಸಲಹೆ ನೀಡಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ. ದಿನೇಶ್ ಕುಮಾರ್ ಮಾತನಾಡಿ, ಕೃಷಿಕರ ನೋವಿಗೆ ಸ್ಪಂದನೆ ಕೊಡಲಾಗದಿರುವುದಕ್ಕೆ ನಮಗೂ ಬೇಸರ ಇದೆ. ಈಗಿನ ಕಾನೂನು ಪ್ರಕಾರ ನಮಗೆ ಸ್ಪಂದನೆ ನೀಡಲು ಅವಕಾಶವಿಲ್ಲ. ಹಾಗಾಗಿ ಕಾನೂನಿನಲ್ಲಿ ಮಾರ್ಪಾಟು ಆಗಬೇಕು ಎಂದರು.
ಶಾಸಕ ಎಸ್. ಅಂಗಾರ ಅಧ್ಯಕ್ಷತೆ ವಹಿಸಿದ್ದರು. ಕೃಷಿಕರ ಸಲಹೆ ಸ್ವೀಕಾರದ ಬಳಿಕ ಮಾತನಾಡಿದ ಅವರು, ಬೆಳೆ ಹಾನಿ ಪರಿಹಾರ ಕುರಿತಂತೆ ಸರಕಾರದ ಸುತ್ತೋಲೆಗಳಲ್ಲೇ ಗೊಂದಲ ಇದೆ. ಅದೇನೇ ಇದ್ದರೂ ಮಂಗಗಳ ಹಾವಳಿ ಸಮಸ್ಯೆ ಕುರಿತಂತೆ ಅರಣ್ಯ ಸಚಿವರು ಮತ್ತು ಮುಖ್ಯಮಂತ್ರಿ ಗಮನಕ್ಕೆ ತರುತ್ತೇನೆ. ಮುಂದಿನ ಅಧಿವೇಶನದಲ್ಲೂ ಈ ಕುರಿತಂತೆ ಪ್ರಸ್ತಾಪಿಸುತ್ತೇನೆ ಎಂದು ಭರವಸೆ ನೀಡಿದರು.
ತಾಪಂ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಸದಸ್ಯೆ ತಾರಾ ಮಲ್ಲಾರ, ಜಿಪಂ ಸದಸ್ಯರಾದ ನವೀನ್ ಕುಮಾರ್ ಮೇನಾಲ, ಸರಸ್ವತಿ ಕಾಮತ್, ತಹಸೀಲ್ದಾರ್ ಶ್ರೀನಿವಾಸ ಶೆಟ್ಟಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಬಿ.ವಿ. ಮಲ್ಲೇಶಪ್ಪ, ಪಂಜ ವಲಯ ಅರಣ್ಯಾಧಿಕಾರಿ ಪ್ರವೀಣ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಎಪಿಎಂಸಿ ಅಧ್ಯಕ್ಷ ಸತೀಶ್ ಕೂಜುಗೋಡು, ದಿವಾಕರ ಪೈ ಮಜಿಗುಂಡಿ ಸಹಕರಿಸಿದರು.
ಮಂಕಿ ಪಾರ್ಕ್ ಸ್ಥಾಪನೆ, ಮಂಗಗಳನ್ನು ಮಾಂಸ ತಿನ್ನುವ ಕಡೆ ಸಾಗಿಸುವುದು, ಆನೆ ಕಂದಕ ನಿರ್ಮಾಣಕ್ಕೆ ಅನುದಾನ ಇಟ್ಟಂತೆ ಮಂಕಿ ಪಾರ್ಕ್ಗೆ ಅನುದಾನ ಮೀಸಲಿಡುವುದು ಮೊದಲಾದ ವಿಚಾರಗಳ ಬಗ್ಗೆ ಗಮನ ಹರಿಸಬೇಕೆಂದು ಎಂ.ಡಿ. ವಿಜಯಕುಮಾರ್ ಹೇಳಿದರು.
ಮಂಗಗಳು ಅರಣ್ಯ ಇಲಾಖೆಯ ಸ್ವತ್ತು. ಅವುಗಳು ತೋಟಕ್ಕೆ ಇಳಿಯದಂತೆ ಅರಣ್ಯ ಇಲಾಖೆಯವರೇ ನೋಡಿಕೊಳ್ಳಬೇಕು. ಅವುಗಳ ಸಂತತಿ ಹೆಚ್ಚುತ್ತಿದ್ದು, ನಿಯಂತ್ರಣಕ್ಕೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸುವಂತೆ ನಿತ್ಯಾನಂದ ಮುಂಡೋಡಿ ಸಲಹೆ ನೀಡಿದರು.
ವನ್ಯಜೀವಿ ಕಾಯಿದೆಗೆ ತಿದ್ದುಪಡಿ ತರಬೇಕು ಎಂದು ಭವಾನಿ ಶಂಕರ ಪಿಂಡಿಮನೆ ಹೇಳಿದರು. ಕಾಡಿನಲ್ಲಿ ಆಹಾರ ಸಿಗದೇ ಮಂಗಗಳು ನಾಡಿಗೆ ಬರುತ್ತಿದ್ದು, ಕಾಡಿನಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಹಣ್ಣಿನ ಮರಗಳನ್ನು ನೆಡಬೇಕು ಎಂದು ಬೀರಾ ಮೊಯಿದ್ದೀನ್ ಸಲಹೆ ಮಾಡಿದರು.
ನಾಗರಾಜ್ ಪೆರುವಾಜೆ, ಮಾಧವ ಭಟ್ ಐವರ್ನಾಡು, ಭೋಜಪ್ಪ ಗುಂಡ್ಯ, ನವೀನ್ಕುಮಾರ್ ಮೇನಾಲ, ಪಿ.ಎಸ್. ಗಂಗಾಧರ್, ಗಂಗಾಧರ್ ರೈ, ದಿನೇಶ್ ಪೆರುವಾಜೆ ಕರುಣಾಕರ ಅಡ್ಪಂಗಾಯ, ಪಿ.ಸಿ. ಜಯರಾಂ, ಕೃಷ್ಣಪ್ಪ ಗೌಡ ನೆಕ್ರಪ್ಪಾಡಿ, ಚಂದ್ರಾ ಕೋಲ್ಚಾರ್ ಮತ್ತಿತರರು ಸಲಹೆ ನೀಡಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಡಾ. ದಿನೇಶ್ ಕುಮಾರ್ ಮಾತನಾಡಿ, ಕೃಷಿಕರ ನೋವಿಗೆ ಸ್ಪಂದನೆ ಕೊಡಲಾಗದಿರುವುದಕ್ಕೆ ನಮಗೂ ಬೇಸರ ಇದೆ. ಈಗಿನ ಕಾನೂನು ಪ್ರಕಾರ ನಮಗೆ ಸ್ಪಂದನೆ ನೀಡಲು ಅವಕಾಶವಿಲ್ಲ. ಹಾಗಾಗಿ ಕಾನೂನಿನಲ್ಲಿ ಮಾರ್ಪಾಟು ಆಗಬೇಕು ಎಂದರು.
ಶಾಸಕ ಎಸ್. ಅಂಗಾರ ಅಧ್ಯಕ್ಷತೆ ವಹಿಸಿದ್ದರು. ಕೃಷಿಕರ ಸಲಹೆ ಸ್ವೀಕಾರದ ಬಳಿಕ ಮಾತನಾಡಿದ ಅವರು, ಬೆಳೆ ಹಾನಿ ಪರಿಹಾರ ಕುರಿತಂತೆ ಸರಕಾರದ ಸುತ್ತೋಲೆಗಳಲ್ಲೇ ಗೊಂದಲ ಇದೆ. ಅದೇನೇ ಇದ್ದರೂ ಮಂಗಗಳ ಹಾವಳಿ ಸಮಸ್ಯೆ ಕುರಿತಂತೆ ಅರಣ್ಯ ಸಚಿವರು ಮತ್ತು ಮುಖ್ಯಮಂತ್ರಿ ಗಮನಕ್ಕೆ ತರುತ್ತೇನೆ. ಮುಂದಿನ ಅಧಿವೇಶನದಲ್ಲೂ ಈ ಕುರಿತಂತೆ ಪ್ರಸ್ತಾಪಿಸುತ್ತೇನೆ ಎಂದು ಭರವಸೆ ನೀಡಿದರು.
ತಾಪಂ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಸದಸ್ಯೆ ತಾರಾ ಮಲ್ಲಾರ, ಜಿಪಂ ಸದಸ್ಯರಾದ ನವೀನ್ ಕುಮಾರ್ ಮೇನಾಲ, ಸರಸ್ವತಿ ಕಾಮತ್, ತಹಸೀಲ್ದಾರ್ ಶ್ರೀನಿವಾಸ ಶೆಟ್ಟಿ, ತಾಪಂ ಕಾರ್ಯನಿರ್ವಹಣಾಧಿಕಾರಿ ಬಿ.ವಿ. ಮಲ್ಲೇಶಪ್ಪ, ಪಂಜ ವಲಯ ಅರಣ್ಯಾಧಿಕಾರಿ ಪ್ರವೀಣ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಎಪಿಎಂಸಿ ಅಧ್ಯಕ್ಷ ಸತೀಶ್ ಕೂಜುಗೋಡು, ದಿವಾಕರ ಪೈ ಮಜಿಗುಂಡಿ ಸಹಕರಿಸಿದರು.