Please enable javascript.Mukhyamantri Vidyarti Margadarshi Scheme,ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿಗಾಗಿ 'ಮುಖ್ಯಮಂತ್ರಿ ವಿದ್ಯಾರ್ಥಿ ಮಾರ್ಗದರ್ಶಿ' ಯೋಜನೆ ಘೋಷಣೆ - cm basavaraja bommai announces mukhyamantri vidyarti margadarshi scheme for govt exam aspirants - Vijay Karnataka

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿಗಾಗಿ 'ಮುಖ್ಯಮಂತ್ರಿ ವಿದ್ಯಾರ್ಥಿ ಮಾರ್ಗದರ್ಶಿ' ಯೋಜನೆ ಘೋಷಣೆ

Vijaya Karnataka Web 4 Mar 2022, 5:11 pm
Subscribe

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ರವರು ಇಂದ ಮಂಡನೆ ಮಾಡಿದ ತಮ್ಮ ಮೊಟ್ಟ ಮೊದಲ ಬಜೆಟ್‌ನಲ್ಲಿ ಸ್ಪರ್ಧಾತ್ರಿಗಳಿಗೆ ಗುಡ್‌ ನ್ಯೂಸ್‌ ನೀಡಿದ್ದಾರೆ. ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುವ ಹೊಸ ಯೋಜನೆ ಘೋಷಿಸಿದ್ದಾರೆ.

ಹೈಲೈಟ್ಸ್‌:

  • ಸ್ಪರ್ಧಾತ್ರಿಗಳಿಗೆ ಬಜೆಟ್‌ನಲ್ಲಿ ಗುಡ್‌ ನ್ಯೂಸ್‌.
  • ಮುಖ್ಯಮಂತ್ರಿ ವಿದ್ಯಾರ್ಥಿ ಮಾರ್ಗದರ್ಶಿ ಯೋಜನೆ ಘೋಷಿಸಿದ ಸಿಎಂ.
  • ಯೋಜನೆ ಕುರಿತ ಡೀಟೇಲ್ಸ್ ಇಲ್ಲಿದೆ.
Mukhyamantri Vidyarti Margadarshi Scheme
Mukhyamantri Vidyarti Margadarshi Scheme
ವಿವಿಧ ಹೊಸ ಕಾರ್ಯಕ್ರಮಗಳು, ಯೋಜನೆಗಳ ಜತೆಗೆ ಸಿಎಂ ಬಸವರಾಜ ಬೊಮ್ಮಾಯಿ ರವರು ತಮ್ಮ ಚೊಚ್ಚಲ ಬಜೆಟ್‌ನಲ್ಲಿ ಒಂದು ವಿಶೇಷ ಯೋಜನೆ ಘೋಷಣೆ ಮಾಡಿದ್ದಾರೆ. ಅದೇ ''ಮುಖ್ಯಮಂತ್ರಿ ವಿದ್ಯಾರ್ಥಿ ಮಾರ್ಗದರ್ಶಿ' ಯೋಜನೆ. ಈ ಯೋಜನೆಯು ರಾಜ್ಯದ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದುವ ಅಭ್ಯರ್ಥಿಗಳಿಗೆ ಉಪಯುಕ್ತವಾಗಿದೆ. ಅದರ ಬಗ್ಗೆ ಡೀಟೇಲ್ಸ್‌ ಈ ಕೆಳಗಿನಂತೆ ನೀಡಲಾಗಿದೆ.
'ಮುಖ್ಯಮಂತ್ರಿ ವಿದ್ಯಾರ್ಥಿ ಮಾರ್ಗದರ್ಶಿ'
ಕೆಪಿಎಸ್‌ಸಿ, ಯುಪಿಎಸ್‌ಸಿ, ಎಸ್‌ಎಸ್‌ಸಿ, ಬ್ಯಾಂಕಿಂಗ್, ರೈಲ್ವೆ ಸಿಡಿಎಸ್, ನೀಟ್, ಜೆಇಇ ಮುಂತಾದ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುವ ಉದ್ದೇಶದಿಂದ 'ಮುಖ್ಯಮಂತ್ರಿ ವಿದ್ಯಾರ್ಥಿ ಮಾರ್ಗದರ್ಶಿ' ಎಂಬ ಹೊಸ ಯೋಜನೆ ಘೋಷಣೆ ಮಾಡಿದ್ದಾರೆ ಸಿಎಂ ಬಸವರಾಜ ಬೊಮ್ಮಾಯಿರಿ. ಈ ಮೂಲಕ ಸ್ಪರ್ಧಾತ್ರಿಗಳು, ವಿದ್ಯಾರ್ಥಿಗಳು ಆನ್‌ಲೈನ್‌ ವೇದಿಕೆಯ ಮೂಲಕ ಉಚಿತ ಕೋಚಿಂಗ್ ಸೌಲಭ್ಯವನ್ನು ಯಾವುದೇ ಸರ್ಕಾರಿ ಹುದ್ದೆ ಪರೀಕ್ಷೆಗಳಿಗೆ ಪಡೆಯಬಹುದಾಗಿದೆ. ಇದರ ಅನುಷ್ಠಾನದ ನಂತರ ವಿದ್ಯಾರ್ಥಿಗಳು ವಿಶೇಷ ಲಾಗಿನ್‌ ಐಡಿ ಮೂಲಕ ಪ್ರತಿನಿತ್ಯ, ಎಲ್ಲಿಂದ ಬೇಕಾದರೂ ಆನ್‌ಲೈನ್‌ ಮೂಲಕ ತಮ್ಮ ಆಸಕ್ತ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯಬಹುದು.

ಈ ಯೋಜನೆ ಎಷ್ಟು ಬೇಗ ಅನುಷ್ಠಾನ ಆಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

NEP ಅಡಿ ಶಿಕ್ಷಣ ಕ್ಷೇತ್ರಕ್ಕೆ ನೂತನ ಪಠ್ಯಕ್ರಮ, ವಿನೂತನ 7 ವಿವಿ ಸ್ಥಾಪನೆ: ಶಿಕ್ಷಣ ಬಜೆಟ್‌ನಲ್ಲಿ ಏನೆಲ್ಲಾ ಕೊಡುಗೆ?

7 ಬಿಇ ಕಾಲೇಜು ಉನ್ನತೀಕರಿಸಿ, ವಿದೇಶಿ ವಿವಿಗಳೊಂದಿಗೆ ಒಪ್ಪಂದ
ಅತ್ಯುನ್ನತ ಗುಣಮಟ್ಟದ ತಾಂತ್ರಿಕ ಬೋಧನೆ-ಕಲಿಕೆಗಳಿಗೆ ಹಾಗೂ ಸಂಶೋಧನೆಯನ್ನು ಉತ್ತೇಜಿಸಲು ರಾಜ್ಯದ 7 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು 'ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್‌ ಟೆಕ್ನಾಲಜಿ ಗಳನ್ನಾಗಿ ಉನ್ನತೀಕರಿಸಿ, ಪ್ರತಿಷ್ಠಿತ ವಿದೇಶಿ ವಿವಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಸಿಎಂ ಬಜೆಟ್‌ನಲ್ಲಿ ಘೋಷಣೆ ಮಾಡಿದ್ದಾರೆ.

ರಾಜ್ಯದ 215 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳನ್ನು NAAC ಮಾನ್ಯತಾ ಪ್ರಕ್ರಿಯೆಗೆ ಒಳಪಡಿಸಲು ಹಾಗೂ 40 ಸರ್ಕಾರಿ ಪಾಲಿಟೆಕ್ನಿಕ್‌ಗಳು ಮತ್ತು 04 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಕೋರ್ಸ್‌ಗಳನ್ನು ಎನ್‌ಬಿಎ ಮಾನ್ಯತೆಗೆ ಒಳಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಘೋಷಣೆ ಮಾಡಿದ್ದಾರೆ.

Karnataka Education Budget 2022: ಶಿಕ್ಷಣ ಇಲಾಖೆಗೆ ರೂ.31,980 ಕೋಟಿ, ಇತರೆ ಹೈಲೈಟ್ಸ್ ಇಲ್ಲಿದೆ..

ಎಸ್‌ಸಿ / ಎಸ್‌ಟಿ ಯ 300 ಮಹಿಳಾ ಪದವೀಧರರಿಗೆ ಉದ್ಯಮಗಳನ್ನು ಸ್ಥಾಪಿಸಲು ಪೂರಕವಾಗುವಂತೆ ಪ್ರತಿಷ್ಠಿತ ಐಐಎಂ ಬೆಂಗಳೂರಿನಲ್ಲಿ ಉದ್ಯಮಶೀಲತಾ ತರಬೇತಿ ನೀಡುವುದಾಗಿ ಬಜೆಟ್ ಮಂಡನೆ‌ ವೇಳೆ ಸಿಎಂ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ