ವಿಕ ಸುದ್ದಿಲೋಕ ಬೆಂಗಳೂರು
ಕಾಂಗ್ರೆಸ್ನಲ್ಲಿ ಕ್ರೈಸ್ತರನ್ನು ಕಡೆಗಣಿಸಲಾಗಿದೆ ಎಂಬ ಅಸಮಾಧಾನದ ಬೆನ್ನಿಗೇ ಮುಸ್ಲಿಂ ಮುಖಂಡರೂ ಮುನಿಸಿಕೊಂಡಿದ್ದಾರೆ. ಈ ವಿಚಾರದಲ್ಲಿ ಫುಲ್ ಗರಂ ಆಗಿರುವ ಮಾಜಿ ಸಚಿವ ರೋಷನ್ ಬೇಗ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧವೇ ಹರಿಹಾಯ್ದಿದ್ದಾರೆ.
ಬೆಂಗಳೂರು ಸೆಂಟ್ರಲ್ನಲ್ಲಿ ಕ್ರೈಸ್ತ ಸಮುದಾಯದವರಿಗೆ ಟಿಕೆಟ್ ನಿರೀಕ್ಷಿಸಲಾಗಿತ್ತು. ಇದು ಹುಸಿಯಾದದ್ದರಿಂದ ಮಾಜಿ ಸಚಿವ ಜೆ.ಅಲೆಕ್ಸಾಂಡರ್ ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಜತೆಗೆ ಕೇಂದ್ರದ ಮಾಜಿ ಸಚಿವೆ ಮಾರ್ಗರೇಟ್ ಆಳ್ವಾ ಹಾಗೂ ಮಾಜಿ ಸಂಸದ ಎಚ್.ಟಿ.ಸಾಂಗ್ಲಿಯಾನ ಅವರೂ ಸಿಟ್ಟಾಗಿದ್ದಾರೆ. ಇವರಿಬ್ಬರನ್ನು ಸಂಪರ್ಕಿಸಲು ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ ರಿಜ್ವಾನ್ ಅರ್ಷದ್ ಸಾಕಷ್ಟು ಪ್ರಯತ್ನ ಪಟ್ಟು ವಿಫಲರಾಗಿದ್ದಾರೆ ಎಂದು ಹೇಳಲಾಗಿದೆ.
ಇಂಥ ಬೆಳವಣಿಗೆ ನಡುವೆಯೇ ಗುರುವಾರ ತುರ್ತು ಸುದ್ದಿಗೋಷ್ಠಿ ಕರೆದಿದ್ದ ಶಿವಾಜಿನಗರದ ಶಾಸಕ ರೋಷÜನ್ ಬೇಗ್, ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ತಿರುಗಿ ಬಿದ್ದಿದ್ದಾರೆ. 'ಮುಸ್ಲಿಂ ಮುಕ್ತ ಕಾಂಗ್ರೆಸ್' ಮಾಡುವ ಷಡ್ಯಂತ್ರವೇನಾದರೂ ಇದೆಯೇ ಎಂದೂ ಬೇಗ್ ಕಿಡಿ ಕಾರಿದ್ದಾರೆ. ಕಾಂಗ್ರೆಸ್ನ ಧೋರಣೆಯಿಂದ ಅಲ್ಪಸಂಖ್ಯಾತರು ಹತಾಶೆಗೊಂಡಿದ್ದಾರೆಂದು ಈ ಬೆಳವಣಿಗೆಯಿಂದ ಗೊತ್ತಾಗುತ್ತದೆ.
ಬೇಗ್ ಹೇಳಿದ್ದಿಷ್ಟು
ಕಾಂಗ್ರೆಸ್ನಿಂದ ಈ ಬಾರಿ ಮುಸ್ಲಿಮರಿಗೆ ಒಂದೇ ಕ್ಷೇತ್ರದಲ್ಲಿ ಟಿಕೆಟ್ ನೀಡಲಾಗಿದೆ. ಬೆಂಗಳೂರು ಸೆಂಟ್ರಲ್, ಬೀದರ್, ಧಾರವಾಡದಲ್ಲಿ ಅವಕಾಶ ಕೇಳಲಾಗಿತ್ತು. ಕ್ರೈಸ್ತರಲ್ಲಿ ಯಾರಿಗೂ ಟಿಕೆಟ್ ನೀಡದ್ದರಿಂದ ಜೆ.ಅಲೆಕ್ಸಾಂಡರ್ ಪಕ್ಷ ತೊರೆದಿದ್ದಾರೆ. ಸಾಂಗ್ಲಿಯಾನ ಅವರೂ ರಾಜೀನಾಮೆ ನೀಡುವ ಮಾತುಗಳು ಕೇಳಿ ಬರುತ್ತಿವೆ. ಅಷ್ಟಕ್ಕೂ ಕಾಂಗ್ರೆಸ್ನಿಂದ ಕಣಕ್ಕಿಳಿದ 21 ಮಂದಿಯೂ ಗೆಲ್ಲುತ್ತಾರಾ? ಇತರರಿಗೆ ಇಲ್ಲದ ಮಾನದಂಡವನ್ನು ಅಲ್ಪಸಂಖ್ಯಾತರ ಮೇಲೆ ಹೇರುವುದೇಕೆ? ರಾಜ್ಯದ ಮುಸ್ಲಿಂ ಮುಖಂಡರಿಗೆ ಆಗುತ್ತಿರುವ ಅನ್ಯಾಯಕ್ಕೆ ಸಿದ್ದರಾಮಯ್ಯ ಹಾಗೂ ಗುಂಡೂರಾವ್ ವೈಫಲ್ಯವೇ ಕಾರಣ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶೇ.99 ರಷ್ಟು ಮುಸ್ಲಿಂ ಮತಗಳು ಕಾಂಗ್ರೆಸ್ಗೆ ಬಂದದ್ದರಿಂದ 80 ಕ್ಷೇತ್ರಗಳಲ್ಲಿ ಗೆಲ್ಲಲು ಸಾಧ್ಯವಾಯಿತು. ಇಲ್ಲದಿದ್ದರೆ 55-60 ಕ್ಷೇತ್ರಗಳಿಗೆ ಕಾಂಗ್ರೆಸ್ ಸೀಮಿತವಾಗುತ್ತಿತ್ತು. ಈ ನಡುವೆಯೂ ಧಾರವಾಡದಿಂದ ಶಾಕೀರ್ ಸನದಿ ಹೆಸರು ಕೇಳಿಬಂದ 24 ಗಂಟೆಯೊಳಗೆ ಬದಲಿಸಲಾಗಿದೆ. ಹಾಲಿ ಶಾಸಕರಿಗೆ ಟಿಕೆಟ್ ಇಲ್ಲವೆಂದಿದ್ದವರು ಕೃಷ್ಣ ಬೈರೇಗೌಡ, ಈಶ್ವರ್ ಖಂಡ್ರೆ ಅವರನ್ನು ಕಣಕ್ಕಿಳಿಸಿದ್ದಾರೆ. ಕಳೆದ ವಾರ ನಡೆದ ಜಂಟಿ ಪ್ರಚಾರ ಸಭೆಯ ಫ್ಲೆಕ್ಸ್ಗಳಲ್ಲಿ ಯಾವುದೇ ಮುಸ್ಲಿಂ ಮುಖಂಡರ ಭಾವಚಿತ್ರವಿರಲಿಲ್ಲ. ಇದನ್ನೆಲ್ಲ ಪ್ರತಿಭಟಿಸಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆಯಲಾಗುವುದು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಕಾರ್ಯವೈಖರಿ ಬಗ್ಗೆಯೂ ಪತ್ರದಲ್ಲಿ ಪ್ರಸ್ತಾಪಿಸಲಾಗುವುದು ಎಂದು ರೋಷÜನ್ ಬೇಗ್ ಎಚ್ಚರಿಕೆ ನೀಡಿದ್ದಾರೆ.
ಕಾಂಗ್ರೆಸ್ನಲ್ಲಿ ಕ್ರೈಸ್ತರನ್ನು ಕಡೆಗಣಿಸಲಾಗಿದೆ ಎಂಬ ಅಸಮಾಧಾನದ ಬೆನ್ನಿಗೇ ಮುಸ್ಲಿಂ ಮುಖಂಡರೂ ಮುನಿಸಿಕೊಂಡಿದ್ದಾರೆ. ಈ ವಿಚಾರದಲ್ಲಿ ಫುಲ್ ಗರಂ ಆಗಿರುವ ಮಾಜಿ ಸಚಿವ ರೋಷನ್ ಬೇಗ್ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ವಿರುದ್ಧವೇ ಹರಿಹಾಯ್ದಿದ್ದಾರೆ.
ಬೆಂಗಳೂರು ಸೆಂಟ್ರಲ್ನಲ್ಲಿ ಕ್ರೈಸ್ತ ಸಮುದಾಯದವರಿಗೆ ಟಿಕೆಟ್ ನಿರೀಕ್ಷಿಸಲಾಗಿತ್ತು. ಇದು ಹುಸಿಯಾದದ್ದರಿಂದ ಮಾಜಿ ಸಚಿವ ಜೆ.ಅಲೆಕ್ಸಾಂಡರ್ ಕಾಂಗ್ರೆಸ್ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಜತೆಗೆ ಕೇಂದ್ರದ ಮಾಜಿ ಸಚಿವೆ ಮಾರ್ಗರೇಟ್ ಆಳ್ವಾ ಹಾಗೂ ಮಾಜಿ ಸಂಸದ ಎಚ್.ಟಿ.ಸಾಂಗ್ಲಿಯಾನ ಅವರೂ ಸಿಟ್ಟಾಗಿದ್ದಾರೆ. ಇವರಿಬ್ಬರನ್ನು ಸಂಪರ್ಕಿಸಲು ಸೆಂಟ್ರಲ್ ಕ್ಷೇತ್ರದ ಅಭ್ಯರ್ಥಿ ರಿಜ್ವಾನ್ ಅರ್ಷದ್ ಸಾಕಷ್ಟು ಪ್ರಯತ್ನ ಪಟ್ಟು ವಿಫಲರಾಗಿದ್ದಾರೆ ಎಂದು ಹೇಳಲಾಗಿದೆ.
ಇಂಥ ಬೆಳವಣಿಗೆ ನಡುವೆಯೇ ಗುರುವಾರ ತುರ್ತು ಸುದ್ದಿಗೋಷ್ಠಿ ಕರೆದಿದ್ದ ಶಿವಾಜಿನಗರದ ಶಾಸಕ ರೋಷÜನ್ ಬೇಗ್, ರಾಜ್ಯ ಕಾಂಗ್ರೆಸ್ ನಾಯಕರ ವಿರುದ್ಧ ತಿರುಗಿ ಬಿದ್ದಿದ್ದಾರೆ. 'ಮುಸ್ಲಿಂ ಮುಕ್ತ ಕಾಂಗ್ರೆಸ್' ಮಾಡುವ ಷಡ್ಯಂತ್ರವೇನಾದರೂ ಇದೆಯೇ ಎಂದೂ ಬೇಗ್ ಕಿಡಿ ಕಾರಿದ್ದಾರೆ. ಕಾಂಗ್ರೆಸ್ನ ಧೋರಣೆಯಿಂದ ಅಲ್ಪಸಂಖ್ಯಾತರು ಹತಾಶೆಗೊಂಡಿದ್ದಾರೆಂದು ಈ ಬೆಳವಣಿಗೆಯಿಂದ ಗೊತ್ತಾಗುತ್ತದೆ.
ಬೇಗ್ ಹೇಳಿದ್ದಿಷ್ಟು
ಕಾಂಗ್ರೆಸ್ನಿಂದ ಈ ಬಾರಿ ಮುಸ್ಲಿಮರಿಗೆ ಒಂದೇ ಕ್ಷೇತ್ರದಲ್ಲಿ ಟಿಕೆಟ್ ನೀಡಲಾಗಿದೆ. ಬೆಂಗಳೂರು ಸೆಂಟ್ರಲ್, ಬೀದರ್, ಧಾರವಾಡದಲ್ಲಿ ಅವಕಾಶ ಕೇಳಲಾಗಿತ್ತು. ಕ್ರೈಸ್ತರಲ್ಲಿ ಯಾರಿಗೂ ಟಿಕೆಟ್ ನೀಡದ್ದರಿಂದ ಜೆ.ಅಲೆಕ್ಸಾಂಡರ್ ಪಕ್ಷ ತೊರೆದಿದ್ದಾರೆ. ಸಾಂಗ್ಲಿಯಾನ ಅವರೂ ರಾಜೀನಾಮೆ ನೀಡುವ ಮಾತುಗಳು ಕೇಳಿ ಬರುತ್ತಿವೆ. ಅಷ್ಟಕ್ಕೂ ಕಾಂಗ್ರೆಸ್ನಿಂದ ಕಣಕ್ಕಿಳಿದ 21 ಮಂದಿಯೂ ಗೆಲ್ಲುತ್ತಾರಾ? ಇತರರಿಗೆ ಇಲ್ಲದ ಮಾನದಂಡವನ್ನು ಅಲ್ಪಸಂಖ್ಯಾತರ ಮೇಲೆ ಹೇರುವುದೇಕೆ? ರಾಜ್ಯದ ಮುಸ್ಲಿಂ ಮುಖಂಡರಿಗೆ ಆಗುತ್ತಿರುವ ಅನ್ಯಾಯಕ್ಕೆ ಸಿದ್ದರಾಮಯ್ಯ ಹಾಗೂ ಗುಂಡೂರಾವ್ ವೈಫಲ್ಯವೇ ಕಾರಣ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶೇ.99 ರಷ್ಟು ಮುಸ್ಲಿಂ ಮತಗಳು ಕಾಂಗ್ರೆಸ್ಗೆ ಬಂದದ್ದರಿಂದ 80 ಕ್ಷೇತ್ರಗಳಲ್ಲಿ ಗೆಲ್ಲಲು ಸಾಧ್ಯವಾಯಿತು. ಇಲ್ಲದಿದ್ದರೆ 55-60 ಕ್ಷೇತ್ರಗಳಿಗೆ ಕಾಂಗ್ರೆಸ್ ಸೀಮಿತವಾಗುತ್ತಿತ್ತು. ಈ ನಡುವೆಯೂ ಧಾರವಾಡದಿಂದ ಶಾಕೀರ್ ಸನದಿ ಹೆಸರು ಕೇಳಿಬಂದ 24 ಗಂಟೆಯೊಳಗೆ ಬದಲಿಸಲಾಗಿದೆ. ಹಾಲಿ ಶಾಸಕರಿಗೆ ಟಿಕೆಟ್ ಇಲ್ಲವೆಂದಿದ್ದವರು ಕೃಷ್ಣ ಬೈರೇಗೌಡ, ಈಶ್ವರ್ ಖಂಡ್ರೆ ಅವರನ್ನು ಕಣಕ್ಕಿಳಿಸಿದ್ದಾರೆ. ಕಳೆದ ವಾರ ನಡೆದ ಜಂಟಿ ಪ್ರಚಾರ ಸಭೆಯ ಫ್ಲೆಕ್ಸ್ಗಳಲ್ಲಿ ಯಾವುದೇ ಮುಸ್ಲಿಂ ಮುಖಂಡರ ಭಾವಚಿತ್ರವಿರಲಿಲ್ಲ. ಇದನ್ನೆಲ್ಲ ಪ್ರತಿಭಟಿಸಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆಯಲಾಗುವುದು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಕಾರ್ಯವೈಖರಿ ಬಗ್ಗೆಯೂ ಪತ್ರದಲ್ಲಿ ಪ್ರಸ್ತಾಪಿಸಲಾಗುವುದು ಎಂದು ರೋಷÜನ್ ಬೇಗ್ ಎಚ್ಚರಿಕೆ ನೀಡಿದ್ದಾರೆ.