Please enable javascript.Shashi Kumar,ಮಕ್ಕಳ ಸಿನಿಮಾದಲ್ಲಿ ಸ್ಪೆಷಲ್‌ ಪಾತ್ರಕ್ಕೆ ಬಣ್ಣ ಹಚ್ಚಿದ ನಟ ಶಶಿಕುಮಾರ್‌ - actor sashikumar plays prominent role in prachanda putanigalu movie - Vijay Karnataka

ಮಕ್ಕಳ ಸಿನಿಮಾದಲ್ಲಿ ಸ್ಪೆಷಲ್‌ ಪಾತ್ರಕ್ಕೆ ಬಣ್ಣ ಹಚ್ಚಿದ ನಟ ಶಶಿಕುಮಾರ್‌

Vijaya Karnataka Web 19 Aug 2020, 10:36 pm
Subscribe

ನಟ ಶಶಿಕುಮಾರ್ ಈ ಕನ್ನಡದ ಮೊದಲ 3ಡಿ ಪೌರಾಣಿಕ ಸಿನಿಮಾ 'ಕುರುಕ್ಷೇತ್ರ'ದಲ್ಲಿ ಮುಖ್ಯ ಪಾತ್ರ ಮಾಡಿದ್ದರು. ಈಗ ಮಕ್ಕಳ ಸಿನಿಮಾದಲ್ಲಿ ಒಂದು ವಿಶೇಷ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಆ ಕುರಿತ ಮಾಹಿತಿ ಇಲ್ಲಿದೆ.

actor sashikumar plays prominent role in prachanda putanigalu movie
ಮಕ್ಕಳ ಸಿನಿಮಾದಲ್ಲಿ ಸ್ಪೆಷಲ್‌ ಪಾತ್ರಕ್ಕೆ ಬಣ್ಣ ಹಚ್ಚಿದ ನಟ ಶಶಿಕುಮಾರ್‌
ಸ್ಯಾಂಡಲ್‌ವುಡ್‌ನಲ್ಲಿ 'ಸುಪ್ರಿಮ್‌ ಹೀರೋ' ಎಂದೇ ಖ್ಯಾತರಾದವರು ನಟ ಶಶಿಕುಮಾರ್‌. ಇತ್ತೀಚಿನ ವರ್ಷಗಳಲ್ಲಿ ನಟನೆಯಿಂದ ಕೊಂಚ ಬ್ರೇಕ್‌ ತೆಗೆದುಕೊಂಡಿದ್ದ ಅವರು, ಕಳೆದ ವರ್ಷ ತೆರೆಕಂಡ ದರ್ಶನ್ ಮುಖ್ಯಭೂಮಿಕೆಯ 'ಕುರುಕ್ಷೇತ್ರ' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದೀಗ ಅವರು ಮತ್ತೊಂದು ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ವಿಶೇಷವೆಂದರೆ, ಇದು ಮಕ್ಕಳ ಸಿನಿಮಾ!

ನಿರ್ಮಾಪಕಿ ಪದ್ಮಾವತಿ ನಿರ್ಮಿಸುತ್ತಿರುವ ಈ 'ಪ್ರಚಂಡ ಪುಟಾಣಿಗಳು' ಮಕ್ಕಳ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ. ಕೋಲಾರದ ನರಸಾಪುರದ ಗುಡ್ಡಗಾಡು ಪ್ರದೇಶದಲ್ಲಿ ಮಕ್ಕಳನ್ನು ನಿಧಿಯ ಆಸೆಗಾಗಿ ದುಷ್ಕರ್ಮಿಗಳು ಬಲಿಕೊಡುವಾಗ, ಅಲ್ಲಿಗೆ ನಟ ಶಶಿಕುಮಾರ್ ಬರುತ್ತಾರೆ. 'ಅಮಾಯಕರನ್ನು ಕಾಪಾಡಲು ಯುಗಯುಗದಲ್ಲೂ ನಾನು ಅವತಾರ ಎತ್ತುತ್ತಲೇ ಬಂದಿದ್ದೇನೆ. ಇನ್ನು ಅವತಾರಗಳಿಲ್ಲ... ಸಂಹಾರವೇ...' ಎನ್ನುತ್ತಾ ಖಳನಟರನ್ನು ಶಶಿಕುಮಾರ್‌ ಸೆದೆಬಡಿಯುವ ಸಾಹಸ ದೃಶ್ಯಗಳ ಚಿತ್ರೀಕರಣ ಮಾಡುವುದರೊಂದಿಗೆ ಇಡೀ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ.

ಕೋಲಾರ, ಚಿಂತಾಮಣಿ, ಅಂತರಗಂಗೆ, ಕೈಲಾಸಗಿರಿ ಮುಂತಾದ ಕಡೆ ಚಿತ್ರೀಕರಣ ಮುಗಿಸಿರುವ 'ಪ್ರಚಂಡ ಪುಟಾಣಿಗಳು' ಚಿತ್ರದಲ್ಲಿ ಅವಿನಾಶ್, ಶೋಭರಾಜ್, ಬಲರಾಂ ಪಂಚಾಲ್, ನರಸಾಪುರ ನಾಗರಾಜ್, ಅಶ್ವತ್ಥ್ ರೆಡ್ಡಿ, ಬುಲೆಟ್ ರಘು, ಶ್ರೀಕಾಂತ್, ಹನುಮಂತಪ್ಪ, ಸುಗುಣ, ಮಂಜುಳ, ಸಂದೀಪ್, ರೆಹಮಾನ್ ಹಾಗೂ ಪುಟಾಣಿಗಳಾದ ಬೇಬಿ ಸುಪ್ರಿತಾ ರಾಜ್, ಬೇಬಿ ಅಂಕಿತಾ, ಧ್ರುವ, ಕೀರ್ತನ್, ಹರ್ಷ, ಅಂಜಲಿ, ಆಕಾಶ್, ನಿಖಿಲ್, ನಿತಿನ್ ನಟಿಸಿದ್ದಾರೆ. ಇವರ ಜೊತೆಗೆ ಕೋಲಾರದ ಅಂತರಗಂಗೆ ಬುದ್ದಿಮಾಂದ್ಯ ಮಕ್ಕಳ ಅನಾಥಾಶ್ರಮದ 50 ಮಕ್ಕಳು ನಟಿಸಿದ್ದಾರೆ,

ನಿಧಿಗಳ್ಳರ ಕೈಗೆ ಸಿಕ್ಕಿಕೊಳ್ಳುವ 'ಪ್ರಚಂಡ ಪುಟಾಣಿಗಳು' ಕೊನೆಗೆ ಹೇಗೆ ಪಾರಾಗುತ್ತಾರೆ?

'ಪ್ರಚಂಡ ಪುಟಾಣಿಗಳು ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ನೃತ್ಯ, ಸಾಹಸ ಸಂಯೋಜನೆಯ ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ ರಾಜೀವ್ ಕೃಷ್ಣ. ಚಿತ್ರದ ಹಾಡುಗಳಿಗೆ ವಿನು ಮನಸು ಸಂಗೀತ ನೀಡಿದ್ದು, ಸುರೇಶ್ ಕಂಬಳಿ ಸಾಹಿತ್ಯ ಬರೆದಿದ್ದಾರೆ. ಛಾಯಾಗ್ರಹಣದ ಹೊಣೆ ಪ್ರಮೋದ್ ಭಾರತೀಯ ಅವರದ್ದು. ಸಂಕಲನ ಸಂಜೀವ್ ರೆಡ್ಡಿ ಮಾಡಿದ್ದರೆ, ಸುನಿಲ್ ಕುಮಾರ್ ನಿರ್ಮಾಣ ನಿರ್ವಹಣೆ ಚಿತ್ರಕ್ಕಿದೆ. ಥಿಯೇಟರ್‌ಗಳು ಸಿನಿಮಾ ಪ್ರದರ್ಶನಕ್ಕೆ ಮುಕ್ತವಾಗುತ್ತಿದ್ದಂತೆಯೇ, ಬಿಡುಗಡೆ ಮಾಡಲು ಚಿತ್ರತಂಡ ಚಿಂತನೆ ನಡೆಸಿದೆ.

ಪರಭಾಷೆಗಳ ಮೇಲೂ ಕಣ್ಣಿಟ್ಟರು ರವಿಚಂದ್ರನ್, ಶಶಿಕುಮಾರ್, ಉಪೇಂದ್ರ ಪುತ್ರರು!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ