ಸ್ಯಾಂಡಲ್ವುಡ್ನಲ್ಲಿ 'ಸುಪ್ರಿಮ್ ಹೀರೋ' ಎಂದೇ ಖ್ಯಾತರಾದವರು ನಟ ಶಶಿಕುಮಾರ್. ಇತ್ತೀಚಿನ ವರ್ಷಗಳಲ್ಲಿ ನಟನೆಯಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ಅವರು, ಕಳೆದ ವರ್ಷ ತೆರೆಕಂಡ ದರ್ಶನ್ ಮುಖ್ಯಭೂಮಿಕೆಯ 'ಕುರುಕ್ಷೇತ್ರ' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದೀಗ ಅವರು ಮತ್ತೊಂದು ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ವಿಶೇಷವೆಂದರೆ, ಇದು ಮಕ್ಕಳ ಸಿನಿಮಾ!
ನಿರ್ಮಾಪಕಿ ಪದ್ಮಾವತಿ ನಿರ್ಮಿಸುತ್ತಿರುವ ಈ 'ಪ್ರಚಂಡ ಪುಟಾಣಿಗಳು' ಮಕ್ಕಳ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ. ಕೋಲಾರದ ನರಸಾಪುರದ ಗುಡ್ಡಗಾಡು ಪ್ರದೇಶದಲ್ಲಿ ಮಕ್ಕಳನ್ನು ನಿಧಿಯ ಆಸೆಗಾಗಿ ದುಷ್ಕರ್ಮಿಗಳು ಬಲಿಕೊಡುವಾಗ, ಅಲ್ಲಿಗೆ ನಟ ಶಶಿಕುಮಾರ್ ಬರುತ್ತಾರೆ. 'ಅಮಾಯಕರನ್ನು ಕಾಪಾಡಲು ಯುಗಯುಗದಲ್ಲೂ ನಾನು ಅವತಾರ ಎತ್ತುತ್ತಲೇ ಬಂದಿದ್ದೇನೆ. ಇನ್ನು ಅವತಾರಗಳಿಲ್ಲ... ಸಂಹಾರವೇ...' ಎನ್ನುತ್ತಾ ಖಳನಟರನ್ನು ಶಶಿಕುಮಾರ್ ಸೆದೆಬಡಿಯುವ ಸಾಹಸ ದೃಶ್ಯಗಳ ಚಿತ್ರೀಕರಣ ಮಾಡುವುದರೊಂದಿಗೆ ಇಡೀ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ.
ಕೋಲಾರ, ಚಿಂತಾಮಣಿ, ಅಂತರಗಂಗೆ, ಕೈಲಾಸಗಿರಿ ಮುಂತಾದ ಕಡೆ ಚಿತ್ರೀಕರಣ ಮುಗಿಸಿರುವ 'ಪ್ರಚಂಡ ಪುಟಾಣಿಗಳು' ಚಿತ್ರದಲ್ಲಿ ಅವಿನಾಶ್, ಶೋಭರಾಜ್, ಬಲರಾಂ ಪಂಚಾಲ್, ನರಸಾಪುರ ನಾಗರಾಜ್, ಅಶ್ವತ್ಥ್ ರೆಡ್ಡಿ, ಬುಲೆಟ್ ರಘು, ಶ್ರೀಕಾಂತ್, ಹನುಮಂತಪ್ಪ, ಸುಗುಣ, ಮಂಜುಳ, ಸಂದೀಪ್, ರೆಹಮಾನ್ ಹಾಗೂ ಪುಟಾಣಿಗಳಾದ ಬೇಬಿ ಸುಪ್ರಿತಾ ರಾಜ್, ಬೇಬಿ ಅಂಕಿತಾ, ಧ್ರುವ, ಕೀರ್ತನ್, ಹರ್ಷ, ಅಂಜಲಿ, ಆಕಾಶ್, ನಿಖಿಲ್, ನಿತಿನ್ ನಟಿಸಿದ್ದಾರೆ. ಇವರ ಜೊತೆಗೆ ಕೋಲಾರದ ಅಂತರಗಂಗೆ ಬುದ್ದಿಮಾಂದ್ಯ ಮಕ್ಕಳ ಅನಾಥಾಶ್ರಮದ 50 ಮಕ್ಕಳು ನಟಿಸಿದ್ದಾರೆ,
ನಿಧಿಗಳ್ಳರ ಕೈಗೆ ಸಿಕ್ಕಿಕೊಳ್ಳುವ 'ಪ್ರಚಂಡ ಪುಟಾಣಿಗಳು' ಕೊನೆಗೆ ಹೇಗೆ ಪಾರಾಗುತ್ತಾರೆ?
'ಪ್ರಚಂಡ ಪುಟಾಣಿಗಳು ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ನೃತ್ಯ, ಸಾಹಸ ಸಂಯೋಜನೆಯ ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ ರಾಜೀವ್ ಕೃಷ್ಣ. ಚಿತ್ರದ ಹಾಡುಗಳಿಗೆ ವಿನು ಮನಸು ಸಂಗೀತ ನೀಡಿದ್ದು, ಸುರೇಶ್ ಕಂಬಳಿ ಸಾಹಿತ್ಯ ಬರೆದಿದ್ದಾರೆ. ಛಾಯಾಗ್ರಹಣದ ಹೊಣೆ ಪ್ರಮೋದ್ ಭಾರತೀಯ ಅವರದ್ದು. ಸಂಕಲನ ಸಂಜೀವ್ ರೆಡ್ಡಿ ಮಾಡಿದ್ದರೆ, ಸುನಿಲ್ ಕುಮಾರ್ ನಿರ್ಮಾಣ ನಿರ್ವಹಣೆ ಚಿತ್ರಕ್ಕಿದೆ. ಥಿಯೇಟರ್ಗಳು ಸಿನಿಮಾ ಪ್ರದರ್ಶನಕ್ಕೆ ಮುಕ್ತವಾಗುತ್ತಿದ್ದಂತೆಯೇ, ಬಿಡುಗಡೆ ಮಾಡಲು ಚಿತ್ರತಂಡ ಚಿಂತನೆ ನಡೆಸಿದೆ.
ಪರಭಾಷೆಗಳ ಮೇಲೂ ಕಣ್ಣಿಟ್ಟರು ರವಿಚಂದ್ರನ್, ಶಶಿಕುಮಾರ್, ಉಪೇಂದ್ರ ಪುತ್ರರು!
ನಿರ್ಮಾಪಕಿ ಪದ್ಮಾವತಿ ನಿರ್ಮಿಸುತ್ತಿರುವ ಈ 'ಪ್ರಚಂಡ ಪುಟಾಣಿಗಳು' ಮಕ್ಕಳ ಚಿತ್ರದ ಚಿತ್ರೀಕರಣ ಸಂಪೂರ್ಣವಾಗಿ ಮುಕ್ತಾಯಗೊಂಡಿದೆ. ಕೋಲಾರದ ನರಸಾಪುರದ ಗುಡ್ಡಗಾಡು ಪ್ರದೇಶದಲ್ಲಿ ಮಕ್ಕಳನ್ನು ನಿಧಿಯ ಆಸೆಗಾಗಿ ದುಷ್ಕರ್ಮಿಗಳು ಬಲಿಕೊಡುವಾಗ, ಅಲ್ಲಿಗೆ ನಟ ಶಶಿಕುಮಾರ್ ಬರುತ್ತಾರೆ. 'ಅಮಾಯಕರನ್ನು ಕಾಪಾಡಲು ಯುಗಯುಗದಲ್ಲೂ ನಾನು ಅವತಾರ ಎತ್ತುತ್ತಲೇ ಬಂದಿದ್ದೇನೆ. ಇನ್ನು ಅವತಾರಗಳಿಲ್ಲ... ಸಂಹಾರವೇ...' ಎನ್ನುತ್ತಾ ಖಳನಟರನ್ನು ಶಶಿಕುಮಾರ್ ಸೆದೆಬಡಿಯುವ ಸಾಹಸ ದೃಶ್ಯಗಳ ಚಿತ್ರೀಕರಣ ಮಾಡುವುದರೊಂದಿಗೆ ಇಡೀ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಿದೆ.
ಕೋಲಾರ, ಚಿಂತಾಮಣಿ, ಅಂತರಗಂಗೆ, ಕೈಲಾಸಗಿರಿ ಮುಂತಾದ ಕಡೆ ಚಿತ್ರೀಕರಣ ಮುಗಿಸಿರುವ 'ಪ್ರಚಂಡ ಪುಟಾಣಿಗಳು' ಚಿತ್ರದಲ್ಲಿ ಅವಿನಾಶ್, ಶೋಭರಾಜ್, ಬಲರಾಂ ಪಂಚಾಲ್, ನರಸಾಪುರ ನಾಗರಾಜ್, ಅಶ್ವತ್ಥ್ ರೆಡ್ಡಿ, ಬುಲೆಟ್ ರಘು, ಶ್ರೀಕಾಂತ್, ಹನುಮಂತಪ್ಪ, ಸುಗುಣ, ಮಂಜುಳ, ಸಂದೀಪ್, ರೆಹಮಾನ್ ಹಾಗೂ ಪುಟಾಣಿಗಳಾದ ಬೇಬಿ ಸುಪ್ರಿತಾ ರಾಜ್, ಬೇಬಿ ಅಂಕಿತಾ, ಧ್ರುವ, ಕೀರ್ತನ್, ಹರ್ಷ, ಅಂಜಲಿ, ಆಕಾಶ್, ನಿಖಿಲ್, ನಿತಿನ್ ನಟಿಸಿದ್ದಾರೆ. ಇವರ ಜೊತೆಗೆ ಕೋಲಾರದ ಅಂತರಗಂಗೆ ಬುದ್ದಿಮಾಂದ್ಯ ಮಕ್ಕಳ ಅನಾಥಾಶ್ರಮದ 50 ಮಕ್ಕಳು ನಟಿಸಿದ್ದಾರೆ,
ನಿಧಿಗಳ್ಳರ ಕೈಗೆ ಸಿಕ್ಕಿಕೊಳ್ಳುವ 'ಪ್ರಚಂಡ ಪುಟಾಣಿಗಳು' ಕೊನೆಗೆ ಹೇಗೆ ಪಾರಾಗುತ್ತಾರೆ?
'ಪ್ರಚಂಡ ಪುಟಾಣಿಗಳು ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ನೃತ್ಯ, ಸಾಹಸ ಸಂಯೋಜನೆಯ ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ ರಾಜೀವ್ ಕೃಷ್ಣ. ಚಿತ್ರದ ಹಾಡುಗಳಿಗೆ ವಿನು ಮನಸು ಸಂಗೀತ ನೀಡಿದ್ದು, ಸುರೇಶ್ ಕಂಬಳಿ ಸಾಹಿತ್ಯ ಬರೆದಿದ್ದಾರೆ. ಛಾಯಾಗ್ರಹಣದ ಹೊಣೆ ಪ್ರಮೋದ್ ಭಾರತೀಯ ಅವರದ್ದು. ಸಂಕಲನ ಸಂಜೀವ್ ರೆಡ್ಡಿ ಮಾಡಿದ್ದರೆ, ಸುನಿಲ್ ಕುಮಾರ್ ನಿರ್ಮಾಣ ನಿರ್ವಹಣೆ ಚಿತ್ರಕ್ಕಿದೆ. ಥಿಯೇಟರ್ಗಳು ಸಿನಿಮಾ ಪ್ರದರ್ಶನಕ್ಕೆ ಮುಕ್ತವಾಗುತ್ತಿದ್ದಂತೆಯೇ, ಬಿಡುಗಡೆ ಮಾಡಲು ಚಿತ್ರತಂಡ ಚಿಂತನೆ ನಡೆಸಿದೆ.
ಪರಭಾಷೆಗಳ ಮೇಲೂ ಕಣ್ಣಿಟ್ಟರು ರವಿಚಂದ್ರನ್, ಶಶಿಕುಮಾರ್, ಉಪೇಂದ್ರ ಪುತ್ರರು!