Please enable javascript.Railway Department Jobs In Karnataka 2023,ಕರ್ನಾಟಕ ರೈಲ್ವೆ ಡಿವಿಷನ್‌ಗಳಲ್ಲಿ ಉದ್ಯೋಗ: 10th, ಐಟಿಐ ಪಾಸಾದವರಿಂದ ಅರ್ಜಿ ಆಹ್ವಾನ - south western railway recruitment 2023 apply for karnataka railway jobs - Vijay Karnataka

ಕರ್ನಾಟಕ ರೈಲ್ವೆ ಡಿವಿಷನ್‌ಗಳಲ್ಲಿ ಉದ್ಯೋಗ: 10th, ಐಟಿಐ ಪಾಸಾದವರಿಂದ ಅರ್ಜಿ ಆಹ್ವಾನ

Authored byಸುನೀಲ್ ಬಿ ಎನ್ | Vijaya Karnataka Web 10 Jul 2023, 12:36 pm
Subscribe

South Western Railway Apprentice Recruitment 2023 : ಭಾರತೀಯ ರೈಲ್ವೆ ಇಲಾಖೆಯು ಸೌಥ್ ವೆಸ್ಟರ್ನ್‌ ರೈಲ್ವೆಯ ಕರ್ನಾಟಕ ರಾಜ್ಯದ ಡಿವಿಷನ್‌ಗಳಲ್ಲಿ ಅಪ್ರೆಂಟಿಸ್‌ ಪೋಸ್ಟ್‌ಗಳನ್ನು ಭರ್ತಿ ಮಾಡಲು, ಅರ್ಜಿ ಆಹ್ವಾನಿಸಿದೆ. ಎಸ್‌ಎಸ್‌ಎಲ್‌ಸಿ, ಐಟಿಐ ಪಾಸಾದವರು ಈ ಹುದ್ದೆಗಳಿಗೆ ಅರ್ಜಿ ಹಾಕಬಹುದು.

ಹೈಲೈಟ್ಸ್‌:

  • ಸೌಥ್ ವೆಸ್ಟರ್ನ್‌ ರೈಲ್ವೆಯಲ್ಲಿ ಉದ್ಯೋಗಾವಕಾಶ.
  • ಕರ್ನಾಟಕದಲ್ಲಿ 904 ಹುದ್ದೆಗಳ ನೇಮಕ.
  • ಅರ್ಜಿಗೆ ಆಗಸ್ಟ್‌ 02 ಕೊನೆ ದಿನಾಂಕ.
south western railway recruitment 2023
south western railway recruitment 2023
ಕರ್ನಾಟಕ ಪ್ರದೇಶದ ದಕ್ಷಿಣ ಪಶ್ಚಿಮ ರೈಲ್ವೆಯ ವಿವಿಧ ಡಿವಿಷನ್‌ಗಳಾದ ಹುಬ್ಬಳ್ಳಿ ರೈಲ್ವೆ ಡಿವಿಷನ್, ಹುಬ್ಬಳ್ಳಿ ಕ್ಯಾರಿಯೇಜ್ ರಿಪೇರ್ ವರ್ಕ್‌ಶಾಪ್‌, ಬೆಂಗಳೂರು ಡಿವಿಷನ್, ಮೈಸೂರು ಡಿವಿಷನ್, ಮೈಸೂರು ಸೆಂಟ್ರಲ್‌ ವರ್ಕ್‌ಶಾಪ್‌ ಗಳಲ್ಲಿ ಅಗತ್ಯ ಇರುವ ಪೋಸ್ಟ್‌ಗಳ ಭರ್ತಿಗೆ ಇದೀಗ ನೇಮಕ ಅಧಿಸೂಚನೆ ಪ್ರಕಟಿಸಲಾಗಿದೆ. ಫಿಟ್ಟರ್, ವೆಲ್ಡರ್, ಇಲೆಕ್ಟ್ರೀಷಿಯನ್, ರೆಫ್ರಿಜರೇಷನ್ ಅಂಡ್ ಏರ್‌ ಕಂಡೀಷನರ್ ಮೆಕ್ಯಾನಿಕ್, ಪ್ರೋಗ್ರಾಮಿಂಗ್ ಅಂಡ್ ಸಿಸ್ಟಮ್ ಅಡ್ಮಿನಿಸ್ಟ್ರೇಷನ್‌ ಅಸಿಸ್ಟಂಟ್ ವಿಭಾಗಗಳಲ್ಲಿ ಈ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಹುದ್ದೆಗಳ ವಿವರ, ಇತರೆ ಮಾಹಿತಿಗಳು ಕೆಳಗಿನಂತಿವೆ.
ಹುದ್ದೆಗಳ ವಿವರ
ಮೈಸೂರು ಸೆಂಟ್ರಲ್‌ ವರ್ಕ್‌ಶಾಪ್‌: 43
ಮೈಸೂರು ಡಿವಿಷನ್ : 177
ಬೆಂಗಳೂರು ಡಿವಿಷನ್ : 230
ಕ್ಯಾರಿಯೇಜ್ ರಿಪೇರ್ ವರ್ಕ್‌ಶಾಪ್‌, ಹುಬ್ಬಳ್ಳಿ: 217
ಹುಬ್ಬಳ್ಳಿ ಡಿವಿಷನ್ : 237
ಒಟ್ಟು ಹುದ್ದೆಗಳ ಸಂಖ್ಯೆ : 904

ವಿದ್ಯಾರ್ಹತೆ : ಎಸ್‌ಎಸ್‌ಎಲ್‌ಸಿ ಜತೆಗೆ, ಐಟಿಐ ವಿದ್ಯಾರ್ಹತೆ ಹೊಂದಿರಬೇಕು.

ಈಶಾನ್ಯ ರೈಲ್ವೆಯಲ್ಲಿ 1104 ಹುದ್ದೆಗಳ ನೇಮಕ: 10th, ITI ವಿದ್ಯಾರ್ಹತೆಯುಳ್ಳವರು ಅರ್ಜಿ ಹಾಕಿ

ಪ್ರಮುಖ ದಿನಾಂಕಗಳು
ಆನ್‌ಲೈನ್‌ ಅಪ್ಲಿಕೇಶನ್‌ ಸ್ವೀಕೃತಿ ಆರಂಭ ದಿನಾಂಕ : 03-07-2023
ಆನ್‌ಲೈನ್‌ ಅಪ್ಲಿಕೇಶನ್‌ ಸ್ವೀಕೃತಿಗೆ ಕೊನೆ ದಿನಾಂಕ : 02-08-2023 ರ ರಾತ್ರಿ 12-00 ಗಂಟೆವರೆಗೆ.

ಆಯ್ಕೆ ಪ್ರಕ್ರಿಯೆ ಹೇಗೆ?
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಎಸ್‌ಎಸ್‌ಎಲ್‌ಸಿ'ಯ ಶೇಕಡ.50 ಅಂಕಗಳನ್ನು ಹಾಗೂ ಐಟಿಐ ವಿದ್ಯಾರ್ಹತೆಯ ಶೇಕಡ.50 ಅಂಕಗಳನ್ನು ಪರಿಗಣಿಸಿ, ಮೆರಿಟ್‌ ಸಿದ್ಧಪಡಿಸಿ ಆಯ್ಕೆ ಮಾಡಲಾಗುತ್ತದೆ.

ರೈಲ್ವೆ ಹುದ್ದೆ ನಿರೀಕ್ಷೆಯಲ್ಲಿದ್ದವರಿಗೆ ಗುಡ್‌ ನ್ಯೂಸ್: ಪಶ್ಚಿಮ ರೈಲ್ವೆಯ 3624 ಹುದ್ದೆಗಳಿಗೆ ಅರ್ಜಿ ಆಹ್ವಾನ

ವಯಸ್ಸಿನ ಅರ್ಹತೆ : ಅರ್ಜಿ ಸಲ್ಲಿಸಲು ಕನಿಷ್ಠ 15 ವರ್ಷ ಆಗಿರಬೇಕು, ಗರಿಷ್ಠ 24 ವರ್ಷ ವಯಸ್ಸು ಮೀರಿರಬಾರದು.

ಅರ್ಜಿ ಸಲ್ಲಿಸುವುದು ಹೇಗೆ?
- ಅರ್ಜಿ ಸಲ್ಲಿಸಲು ವೆಬ್‌ಸೈಟ್‌ https://jobs.rrchubli.in/act-2223/ ಗೆ ಭೇಟಿ ನೀಡಿ.
- ಓಪನ್‌ ಆದ ಪೇಜ್‌ನಲ್ಲಿ 'New Registration' ಎಂಬಲ್ಲಿ ಕ್ಲಿಕ್ ಮಾಡಿ.
- ನಂತರ ಪ್ರದರ್ಶಿತವಾಗುವ ಪೇಜ್‌ನಲ್ಲಿ ಹೆಸರು, ಆಧಾರ್, ಮೊಬೈಲ್ ನಂಬರ್ ಮಾಹಿತಿ ನೀಡಿ.
- ರಿಜಿಸ್ಟ್ರೇಷನ್‌ ಪಡೆದು, ನಂತರ ಅಪ್ಲಿಕೇಶನ್‌ ಫಾರ್ಮ್ ಭರ್ತಿ ಮಾಡಬೇಕು.
- ಪೂರ್ಣಗೊಂಡ ಅರ್ಜಿಯನ್ನು ಪ್ರಿಂಟ್‌ ತೆಗೆದುಕೊಳ್ಳಿ.

ರೈಲ್ವೆ ಅಪ್ರೆಂಟಿಸ್ ಹುದ್ದೆಗಳ ಅವಧಿ : 1 ವರ್ಷ.

ಅಪ್ಲಿಕೇಶನ್‌ ಶುಲ್ಕ ರೂ.100.

South Western Railway Recruitment 2023 Notification

ಉದ್ಯೋಗ ವಿವರ

INR 9000 /Month
ಹುದ್ದೆಯ ಹೆಸರುರೈಲ್ವೆ ಅಪ್ರೆಂಟಿಸ್ ಹುದ್ದೆ
ವಿವರದಕ್ಷಿಣ ಪಶ್ಚಿಮ ರೈಲ್ವೆ ಅಧಿಸೂಚನೆ.
ಪ್ರಕಟಣೆ ದಿನಾಂಕ2023-07-03
ಕೊನೆ ದಿನಾಂಕ2023-08-02
ಉದ್ಯೋಗ ವಿಧಇಂಟರ್ನ್‌
ಉದ್ಯೋಗ ಕ್ಷೇತ್ರರೈಲ್ವೆ ಉದ್ಯೋಗ
ವೇತನ ವಿವರ

ಕೌಶಲ ಮತ್ತು ಶೈಕ್ಷಣಿಕ ಅರ್ಹತೆ

ಕೌಶಲ--
ವಿದ್ಯಾರ್ಹತೆಎಸ್‌ಎಸ್‌ಎಲ್‌ಸಿ, ಐಟಿಐ ಪಾಸ್.
ಕಾರ್ಯಾನುಭವ0 Years

ನೇಮಕಾತಿ ಸಂಸ್ಥೆ

ಸಂಸ್ಥೆಯ ಹೆಸರುದಕ್ಷಿಣ ಪಶ್ಚಿಮ ರೈಲ್ವೆ
ವೆಬ್‌ಸೈಟ್‌ ವಿಳಾಸhttps://jobs.rrchubli.in/act-2223/
ಸಂಸ್ಥೆ ಲೋಗೋ

ಉದ್ಯೋಗ ಸ್ಥಳ

ವಿಳಾಸಕರ್ನಾಟಕದ ವಿವಿಧ ಡಿವಿಷನ್‌ಗಳು
ಸ್ಥಳಕರ್ನಾಟಕದ ವಿವಿಧ ಡಿವಿಷನ್‌ಗಳು
ಪ್ರದೇಶಕರ್ನಾಟಕ
ಅಂಚೆ ಸಂಖ್ಯೆ580023
ದೇಶIND
ಸುನೀಲ್ ಬಿ ಎನ್
ಲೇಖಕರ ಬಗ್ಗೆ
ಸುನೀಲ್ ಬಿ ಎನ್
"ಸುನೀಲ್ ಬಿ ಎನ್ ರವರು ಅನುಭವಿ ಬರಹಗಾರರಾಗಿದ್ದು, ಕಳೆದ 7 ವರ್ಷಗಳಿಂದ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು 2015 ರಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದರು. ನಂತರ ಹಲವು ಡೊಮೈನ್‌ಗಳಲ್ಲಿ ಕೆಲಸ ಮಾಡುವ ಮೂಲಕ ತಮ್ಮ ವೃತ್ತಿ ಕೌಶಲ್ಯಗಳನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ. ಸುನೀಲ್ ರವರು ವೈವಿಧ್ಯಮಯ ಪರಿಣತಿಯನ್ನು ಹೊಂದಿದ್ದು, ತಂತ್ರಜ್ಞಾನ, ಸಿನಿಮಾ, ಉದ್ಯೋಗ, ಶಿಕ್ಷಣ, ಜೀವನಶೈಲಿ ಸೇರಿದಂತೆ ಸುದ್ದಿ ವಿಭಾಗದಲ್ಲೂ ಕೆಲಸದ ಅನುಭವ ಹೊಂದಿದ್ದಾರೆ. ಕಳೆದ 3.6 ವರ್ಷಗಳಿಂದ ಸುನೀಲ್‌ ರವರು ಉದ್ಯೋಗ ಮತ್ತು ಶಿಕ್ಷಣ ವಿಭಾಗದಲ್ಲಿ ತಮ್ಮ ಬರವಣಿಗೆ ಕೃಷಿಯನ್ನು ಕೇಂದ್ರೀಕರಿಸಿದ್ದು, ಈ ವಿಷಯಗಳಲ್ಲಿ ಉದ್ಯಮದ ಸೂಕ್ಷ್ಮ ವ್ಯತ್ಯಾಸಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ಬೆಳೆಸಿಕೊಂಡಿದ್ದಾರೆ. ಈ ಎರಡು ಡೊಮೇನ್‌ಗಳಲ್ಲಿನ ಬೆಳವಣಿಗೆ ಹಾಗೂ ಬದಲಾವಣೆ ಕುರಿತು ಲೇಟೆಸ್ಟ್‌ ಮಾಹಿತಿಗಳನ್ನು ರಚಿಸುವ ಮೂಲಕ ಓದುಗರಿಗೆ ಸಹಾಯ ಮಾಡುವ ಹಾಗೂ ಅವರಿಗೆ ಉಪಯುಕ್ತ ಮಾಹಿತಿ ನೀಡುವಲ್ಲಿ ಸದಾ ಉತ್ಸುಕರಾಗಿ ಕೆಲಸ ಮಾಡುತ್ತಿದ್ದಾರೆ. ಬರವಣಿಗೆ ಹೊರತಾಗಿ, ಸುನೀಲ್‌ ಬಿ ಎನ್‌ ರವರು ಹಲವು ಉತ್ತಮ ಹವ್ಯಾಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಬಿಡುವಿನ ವೇಳೆ ಪ್ರಯಾಣಿಸಲು ಹಾಗೂ ಹೊಸ ಸ್ಥಳಗಳನ್ನು ಅನ್ವೇಷಿಸಲು ಇಷ್ಟಪಡುತ್ತಾರೆ. ಪ್ರಯಾಣವನ್ನು ಶಿಕ್ಷಣದ ಒಂದು ಭಾಗ ಎಂದುಕೊಂಡಿರುವ ಇವರು, ತಮ್ಮ ಈ ಹವ್ಯಾಸದಿಂದ ಅವರ ದೃಷ್ಟಿಕೋನವನ್ನು ವಿಸ್ತರಿಸಲು ಮತ್ತು ವಿಭಿನ್ನ ಸಂಸ್ಕೃತಿಗಳ ಉತ್ತಮ ತಿಳುವಳಿಕೆಯನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಭಾವಿಸಿದ್ದಾರೆ. ಅತ್ಯಾಸಕ್ತಿಯ ಓದುಗರು ಆಗಿದ್ದು ಕಥೆ, ಕಾದಂಬರಿ, ನಾಟಕಗಳ ಪುಸ್ತಕಗಳನ್ನು ಓದುವುದನ್ನು ಇಷ್ಟಪಡುತ್ತಾರೆ. ಬಿಡುವಿನ ವೇಳೆ ಚೆಸ್‌ ಆಡುವುದು ಮತ್ತು ಕೃಷಿ ಕೆಲಸಗಳಲ್ಲಿ ತೊಡಗಿಸಿಕೊಳ್ಳುವ ಮೂಲಕವು ವಿಶ್ರಾಂತಿ ಪಡೆಯುತ್ತಾರೆ. "... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ