Please enable javascript.ಆಸ್ತಿ ತೆರಿಗೆ ಅವಧಿ ವಿಸ್ತರಣೆ - ಆಸ್ತಿ ತೆರಿಗೆ ಅವಧಿ ವಿಸ್ತರಣೆ - Vijay Karnataka

ಆಸ್ತಿ ತೆರಿಗೆ ಅವಧಿ ವಿಸ್ತರಣೆ

Vijaya Karnataka Web 26 Apr 2014, 4:52 am
Subscribe

ಬಿಬಿಎಂಪಿ ಆಸ್ತಿ ತೆರಿಗೆ ಪಾವತಿದಾರರು ಅಂತಿಮ ಗಡುವಿನೊಳಗೆ ಪಾವತಿ ಮಾಡಿದರೆ ಶೇ. 5ರಷ್ಟು ರಿಯಾಯಿತಿ ಪಡೆಯಲಿದ್ದಾರೆ. 2014-15ನೇ ಸಾಲಿನ ತೆರಿಗೆಯನ್ನೂ ಸಂಪೂರ್ಣವಾಗಿ ಏಪ್ರಿಲ್ 30ರೊಳಗೆ ಪಾವತಿ ಮಾಡಿದರೆ ಮಾತ್ರ ಈ ರಿಯಾಯಿತಿ ಸಿಗುತ್ತದೆ.

ಆಸ್ತಿ ತೆರಿಗೆ ಅವಧಿ ವಿಸ್ತರಣೆ
- ಏ. 30 ಅಂತಿಮ -

ಬಿಬಿಎಂಪಿ ಆಸ್ತಿ ತೆರಿಗೆ ಪಾವತಿದಾರರು ಅಂತಿಮ ಗಡುವಿನೊಳಗೆ ಪಾವತಿ ಮಾಡಿದರೆ ಶೇ. 5ರಷ್ಟು ರಿಯಾಯಿತಿ ಪಡೆಯಲಿದ್ದಾರೆ. 2014-15ನೇ ಸಾಲಿನ ತೆರಿಗೆಯನ್ನೂ ಸಂಪೂರ್ಣವಾಗಿ ಏಪ್ರಿಲ್ 30ರೊಳಗೆ ಪಾವತಿ ಮಾಡಿದರೆ ಮಾತ್ರ ಈ ರಿಯಾಯಿತಿ ಸಿಗುತ್ತದೆ.

ಬಿಬಿಎಂಪಿ ಕಚೇರಿಯಲ್ಲಿ ಒಂದು ಸಾರ ರೂ.ವರೆಗೆ ನಗದು, ಅದಕ್ಕೂ ಮೇಲ್ಪಟ್ಟ ಪಾವತಿಗೆ ಡಿಡಿಗಳನ್ನು ಸ್ವೀಕರಿಸಲಾಗುತ್ತದೆ. ಆಯ್ದ ಬ್ಯಾಂಕ್‌ಗಳಲ್ಲಿ ನೇರವಾಗಿ ನಗದು ಮತ್ತು ಚೆಕ್‌ಗಳ ಮೂಲಕ ಪಾವತಿಸಬಹುದು. ಇದುವರೆಗೆ 1.10 ಲಕ್ಷ ಆಸ್ತಿದಾರರು ಪೂರ್ಣ ಪ್ರಮಾಣದ ಆಸ್ತಿ ತೆರಿಗೆ ಪಾವತಿಸಿದ್ದು, 100 ಕೋಟಿ ರೂ. ಆದಾಯ ಸಂಗ್ರಹವಾಗಿದೆ.

ಚೆಕ್ ಮತ್ತೆ ಅವಕಾಶ : ಈ ಹಿಂದೆ ಒಂದು ಸಾವಿರ ರೂ.ನೊಳಗಿನ ಪಾವತಿಯನ್ನು ಮಾತ್ರ ಕೌಂಟರ್‌ನಲ್ಲಿ ಮಾಡಬಹುದಾಗಿತ್ತು. ಉಳಿದ ಮೊತ್ತವನ್ನು ಡಿಡಿ ಮೂಲಕವೇ ಸಲ್ಲಿಸಬೇಕಾಗಿತ್ತು. ಹಲವಾರು ಚೆಕ್‌ಗಳು ಬೌನ್ಸ್ ಆದ ಹಿನ್ನೆಲೆಯಲ್ಲಿ ಬಿಬಿಎಂಪಿ ಈ ಕ್ರಮ ಕೈಗೊಂಡಿತ್ತು. ಆದರೆ, ಈಗ ತೆರಿಗೆದಾರರಿಗೆ ಅನಾನುಕೂಲವಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಚೆಕ್ ಪಾವತಿಗೆ ಅನುಮತಿ ನೀಡಲಾಗಿದೆ.

ೞಈ ಹಿಂದೆ ತೆರಿಗೆ ಮೊತ್ತವನ್ನು ಚೆಕ್‌ಗಳ ಮೂಲಕ ಸಂಗ್ರಸಲಾಗುತ್ತಿತ್ತು. ಆದರೆ, ಕೆಲ ಚೆಕ್‌ಗಳು ಬೌನ್ಸ್ ಆದ್ದರಿಂದ ಆದಾಯದಲ್ಲಿ ಸೋರಿಕೆ ಉಂಟಾಗುತ್ತಿತ್ತು. ಇದನ್ನು ತಪ್ಪಿಸುವ ಉದ್ದೇಶದಿಂದ ಈ ಬಾರಿ ಒಂದು ಸಾರ ರೂ. ಒಳಗಿನ ಮೊತ್ತವನ್ನು ನಗದು ಮೂಲಕ ಮತ್ತು ಅದಕ್ಕಿಂತಲೂ ಹೆಚ್ಚು ಇದ್ದರೆ ಡಿಡಿ ಮೂಲಕ ಪಾವತಿಸಿಕೊಳ್ಳಲಾಗುತ್ತಿದೆ. ಆಯ್ದ ಬ್ಯಾಂಕ್‌ಗಳಲ್ಲಿ ನಗದು ಪಾವತಿ ವ್ಯವಸ್ಥೆಯನ್ನೂ ಮಾಡಲಾಗಿತ್ತು ೞ ಎಂದು ಕಂದಾಯ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆದರೆ ಹಿರಿಯ ನಾಗರಿಕರಿಗೆ ಬ್ಯಾಂಕ್‌ಗೆ ತೆರಳಿ ಡಿಡಿ ಇಲ್ಲವೇ ಪೇ ಆರ್ಡರ್ ಪಡೆಯುವುದು ಕಷ್ಟ ಎಂಬ ಅಭಿಪ್ರಾಯ ವ್ಯಾಪಕವಾಗಿ ವ್ಯಕ್ತವಾಗಿದೆ. ಈ ಹಿನ್ನೆಲೆಯಲ್ಲಿ ತೆರಿಗೆಯನ್ನು ಚೆಕ್ ಮೂಲಕ ಪಾವತಿಸಲು ಮತ್ತೆ ಅವಕಾಶ ಕಲ್ಪಿಸಲಾಗಿದೆ ಎಂದು ಬಿಬಿಎಂಪಿ ವಿಶೇಷ ಆಯುಕ್ತರು ತಿಳಿಸಿದ್ದಾರೆ. ಚೆಕ್ ಮೂಲಕ ಪಾವತಿಸಿದಾಗ ಕೇವಲ ಸ್ವೀಕೃತಿ ಚೀಟಿಯನ್ನು ಮಾತ್ರ ನೀಡಲಾಗುತ್ತದೆ. ಚೆಕ್ ನಗದು ಆದ ಬಳಿಕ ಅಧಿಕೃತ ರಶೀತಿ ನೀಡಲಾಗುತ್ತದೆ ಎಂದವರು ಸ್ಪಷ್ಟಪಡಿಸಿದರು.

‘ಕೆಎಂಸಿ ಕಾಯ್ದೆ ಪ್ರಕಾರ ಆಸ್ತಿ ತೆರಿಗೆ ಪಾವತಿ ಸಂದರ್ಭದಲ್ಲಿ ತೆರಿಗೆದಾರರು ನಿಗದಿತ ಅರ್ಜಿ ನಮೂನೆಗಳಲ್ಲಿ ಆಸ್ತಿ ವಿವರ ಘೋಷಣೆ ಸಲ್ಲಿಸುವುದು ಕಡ್ಡಾಯವಾಗಿದೆ. ಆಸ್ತಿಯಲ್ಲಿ ಯಾವುದೇ ಬದಲಾವಣೆ ಇರದಿದ್ದರೆ ಬಿಳಿ ಬಣ್ಣದ ಅರ್ಜಿ ನಮೂನೆ 4ರಲ್ಲಿ ವಿವರ ತುಂಬಿ ಕೊಡಬೇಕು. ಒಂದುವೇಳೆ ಆಸ್ತಿಯಲ್ಲಿ ಬದಲಾವಣೆ ಇದ್ದರೆ ನೀಲಿಬಣ್ಣದ ಅರ್ಜಿ ನಮೂನೆ 5 ಬಳಸಬೇಕು. ‘ಕಳೆದ ಸಾಲಿನಲ್ಲಿ ಬಾಕಿ ಉಳಿಸಿಕೊಂಡಿದ್ದರೆ ಇಲ್ಲವೆ ಹೆಚ್ಚಿನ ಮೊತ್ತ ಪಾವತಿಸಿದ್ದರೆ ಅದಕ್ಕೂ ಪ್ರತ್ಯೇಕ ಅರ್ಜಿ ನಮೂನೆಗಳಿವೆ’ ಎಂದು ಅವರು ಇವರಿಸಿದರು.

ಅವಧಿ ವಿಸ್ತರಣೆಗೆ ಆಗ್ರಹ : ಇದೇ ಸಂದರ್ಭದಲ್ಲಿ ಚುನಾವಣೆ ಹಿನ್ನೆಲೆಯಲ್ಲಿ ಬಿಬಿಎಂಪಿ ಸಿಬ್ಬಂದಿ ಚುನಾವಣೆ ಕರ್ತವ್ಯಕ್ಕೆ ಹಾಜರಾಗಿತ್ತು. ಹೀಗಾಗಿ ನಾಗರಿಕರಿಗೆ ತೆರಿಗೆ ಪಾವತಿ ಮಾಡಲು ಸಾಧ್ಯವಾಗಲಿಲ್ಲ. ಆದ್ದರಿಂದ ಶೇ. 5ರ ರಿಯಾಯಿತಿಯನ್ನು ಮೇ 31ರವರೆಗೆ ವಿಸ್ತರಿಸಬೇಕು ಎಂದು ಬಿಬಿಎಂಪಿ ಸದಸ್ಯ ಎಂ. ಕೆ. ಗುಣಶೇಖರ್ ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ