ಆ್ಯಪ್ನಗರ

ಬಿಪಿ ಶುಗರ್ ಕಾಯಿಲೆ ಇದ್ದವರು ಬ್ರೇಕ್‌ಫಾಸ್ಟ್‌ಗೆ ಏನು ತಿನ್ನಬೇಕು? ಇಲ್ಲಿದೆ ಡಿಟೆಲ್ಸ್

ಶುಗರ್ ಹಾಗೂ ಬಿಪಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬೇಕು ಎಂದರೆ, ಆರೋಗ್ಯಕಾರಿ ಆಹಾರಪದ್ಧತಿ ಸರಿಯಾದ ಜೀವನಶೈಲಿಯನ್ನು ಅನುಸರಿಸಿಕೊಂಡು ಹೋಗಬೇಕು. ಆಗ ಖಂಡಿತವಾಗಿಯೂ ಈ ಕಾಯಿಲೆಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. 

Produced byಮನೋಹರ್ ಶೆಟ್ಟಿ | Vijaya Karnataka Web 5 Jul 2023, 10:30 pm
ಒಮ್ಮೆ ಶುರು ಆದರೆ ಕೊನೆಯವರೆಗೂ ಇರುವ ಎರಡು ಕಾಯಿಲೆಗಳು ಎಂದರೆ ಅದು ಬಿಪಿ ಮತ್ತು ಶುಗರ್! ಇದನ್ನು ಆರೋಗ್ಯ ತಜ್ಞರು ಕೂಡ ಒಪ್ಪಿಕೊಳ್ಳುತ್ತಾರೆ.
Vijaya Karnataka Web breakfast ideas for people who suffering from diabetes and high blood pressure
ಬಿಪಿ ಶುಗರ್ ಕಾಯಿಲೆ ಇದ್ದವರು ಬ್ರೇಕ್‌ಫಾಸ್ಟ್‌ಗೆ ಏನು ತಿನ್ನಬೇಕು? ಇಲ್ಲಿದೆ ಡಿಟೆಲ್ಸ್


ಬಿಪಿ ಇರುವವರು ವೈದ್ಯರು ಸೂಚಿಸಿರುವ ಬಿಪಿ ಮಾತ್ರೆಗಳನ್ನು ಹಾಗೂ ಶುಗರ್ ಇರುವವರು ಅದಕ್ಕೆ ಸಂಬಂಧಪಟ್ಟ ಮಾತ್ರೆಗಳನ್ನು ಸಮಯಕ್ಕೆ ಸರಿಯಾಗಿ ಸೇವನೆ ಮಾಡಬೇಕು ಜೊತೆಗೆ ಸರಿಯಾದ ಜೀವನಶೈಲಿ ಕಟ್ಟುನಿಟ್ಟಿನ ಆಹಾರ ಪದ್ಧತಿಯನ್ನು ಅನುಸರಿಸಿ ಕೊಂಡು, ಹೋದರೆ ಮಾತ್ರ, ಈ ಎರಡೂ ಕಾಯಿಲೆಗಳನ್ನು ಕೂಡ ಕಟ್ಟಿಹಾಕಬಹುದು, ಅಲ್ಲದೇ ನೆಮ್ಮದಿಯ ಜೀವನವನ್ನು ಕೂಡ ಸಾಗಿಸಬಹುದು...

ಈ ಎರಡೂ ಕಾಯಿಲೆ ಇದ್ದವರಿಗೆ ಬ್ರೇಕ್ ಫಾಸ್ಟ್ ಹೇಗಿರಬೇಕು

  • ಬೆಳಗಿನ ಉಪಹಾರ ದಿನದ ಮೊದಲನೆಯ ಆಹಾರ ಆಗಿರುವುದರಿಂದ, ಯಾವುದೇ ಕಾರಣಕ್ಕೂ ಕೂಡ ಎಣ್ಣೆ ಅಂಶ ಹಾಗೂ ಹೆಚ್ಚಿನ ಪ್ರಮಾಣದ ಕ್ಯಾಲೋರಿ ಅಂಶ ಗಳು ಇರುವ ಆಹಾರಗಳನ್ನು ಸೇವನೆ ಮಾಡಬಾರದು.
  • ಪ್ರಮುಖವಾಗಿ, ಅಧಿಕ ಪ್ರಮಾಣದಲ್ಲಿ ಪ್ರೋಟೀನ್ ಅಂಶ ಹಾಗೂ ಪೌಷ್ಟಿಕ ಸತ್ವಗಳನ್ನು ಒಳಗೊಂಡಿರುವ ಆಹಾರ ಗಳನ್ನು ಸೇವನೆ ಮಾಡಬೇಕು.
  • ಅಲ್ಲದೆ ಈ ಎರಡೂ ಕಾಯಿಲೆ ಇದ್ದವರು, ಉಪ್ಪು ಸಕ್ಕರೆ, ಖಾರ ಪದಾರ್ಥಗಳು ಹಾಗೂ ಎಣ್ಣೆಯಾಂಶ ಹೆಚ್ಚಿರುವ ಆಹಾರಗಳಿಂದ ದೂರವಿರಬೇಕು.

ಸಿರಿ ಧಾನ್ಯಗಳು

  • ಸಿರಿ ಧಾನ್ಯಗಳನ್ನು ತಮ್ಮ ಆಹಾರ ಪದ್ಧತಿಯಲ್ಲಿ ಸೇರಿಸಿ ಕೊಂಡರೆ ಬಹಳ ಒಳ್ಳೆಯದು. ಉದಾಹರಣೆಗೆ (ಸಾಮೆ, ಸಜ್ಜೆ, ನವಣೆ) ಇತ್ಯಾದಿ. ಇವುಗಳಲ್ಲಿ ಅಧಿಕ ಪ್ರಮಾಣ ದಲ್ಲಿ ಪ್ರೋಟೀನ್, ವಿಟಮಿನ್ಸ್, ನಾರಿನಾಂಶ ಹಾಗೂ ಇತರ ಪೌಷ್ಟಿಕ ಸತ್ವಗಳು ಸಾಕಷ್ಟು ಪ್ರಮಾಣದಲ್ಲಿ ಇದರಲ್ಲಿ ಕಂಡು ಬರುತ್ತದೆ.
  • ಯಾಕೆಂದರೆ ಇದರಲ್ಲಿ ಕಂಡು ಬರುವ ಕಡಿಮೆ ಗ್ಲೈಸೆ ಮಿಕ್ ಸೂಚ್ಯಂಕವು ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗ ದಂತೆ ನೋಡಿಕೊಂಡು, ಸಕ್ಕರೆಕಾಯಿಲೆಯನ್ನು ಕಂಟ್ರೋಲ್ ಮಾಡುತ್ತದೆ ಅಷ್ಟೇ ಅಲ್ಲದೆ ಇದರಲ್ಲಿ ಕಂಡು ಬರುವ ಇತರ ಪೌಷ್ಟಿಕ ಸತ್ವಗಳು, ರಕ್ತದೊತ್ತಡ ವನ್ನು ಕೂಡ ನಿಯಂತ್ರಣದಲ್ಲಿಡಲು ನೆರವಾಗುತ್ತದೆ. ​

ಓಟ್ಸ್

  • ಓಟ್ಸ್ ನಲ್ಲಿ ಸಿಗುವ ಬೀಟಾ ಗ್ಲುಕಾನ್ ಫೈಬರ್, ರಕ್ತದ ಸಕ್ಕರೆಯ ಮಟ್ಟವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ. ಹೀಗಾಗಿ ಟೈಪ್ 2 ಮಧುಮೇಹ ಕಾಯಿಲೆ ಯಿಂದ ಬಳಲುತ್ತಿರುವವರು ನಿಸ್ಸಂದೇಹವಾಗಿ ಓಟ್‌ಮಿಲ್ ಅನ್ನು ಬ್ರೇಕ್ ಫಾಸ್ಟ್‌ಗೆ ಸೇವಿಸಬಹುದು.
  • ಅಲ್ಲದೆ ಓಟ್ಸ್ ನಲ್ಲಿರುವ ಅಧಿಕ ಪ್ರಮಾಣದ ಫೈಬರ್ ಅಂಶ ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ನಿಯಂತ್ರ ಣದಲ್ಲಿಡಲು ನೆರವಾಗುತ್ತದೆ.
  • ನೆನಪಿಡಿ: ನೀರು ಅಥವಾ ಕಡಿಮೆ-ಕೊಬ್ಬಿನಾಂಶ ಇರುವ ಹಾಲಿನೊಂದಿಗೆ ಇದನ್ನು ತಯಾರಿಸಿ ಹಾಗೂ ತಾಜಾ ಹಣ್ಣುಗಳನ್ನು ಸೇರಿಸುವ ಮೂಲಕ, ಉದಾಹರಣೆಗೆ ಬೆರ್ರಿ ಹಣ್ಣುಗಳು, ಬಾಳೆಹಣ್ಣನ್ನು ಸೇರಿಸುವ ಮೂಲಕ ಸ್ವಾಭಾವಿಕವಾಗಿ ಇದರ ರುಚಿಯನ್ನು ಹೆಚ್ಚಿಸಿ. ಆದರೆ ಯಾವುದೇ ಕಾರಣಕ್ಕೂ ಕೂಡ ಸಕ್ಕರೆಯನ್ನು ಬೆರೆಸಬೇಡಿ

ರಾತ್ರಿ ಇಡೀ ನೆನೆಸಿಟ್ಟ ಓಟ್ಸ್ ತಿನ್ನಿ, ತಿಂಗಳೊಳಗೆ ದೇಹದ ತೂಕ ಇಳಿಸಿ!

ಗ್ರೀಕ್ ಯೋಗರ್ಟ್‌

  • ನಾವು ಪ್ರತಿದಿನ ಸೇವನೆ ಮಾಡುವ ಮೊಸರಿಗಿಂತಲೂ, ಗ್ರೀಕ್ ಯೋಗರ್ಟ್‌ (ಘನೀಕೃತ ಮೊಸರು) ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ.
  • ಪ್ರಮುಖವಾಗಿ ಇದರಲ್ಲಿ ಪ್ರೋಟೀನ್ ಅಂಶ ಅಧಿಕ ಪ್ರಮಾಣ ದಲ್ಲಿ ಸಿಗುವುದರಿಂದ, ಈ ಎರಡೂ ಕಾಯಿಲೆ ಇದ್ದವರು, ಬೆಳಗಿನ ಬ್ರೇಕ್‌ಫಾಸ್ಟ್‌ಗೆ, ಈ ಮೊಸರನ್ನು ಸೇವನೆ ಮಾಡ ಬಹುದು.
  • ಆದರೆ ನೆನಪಿಡಿ, ಜಾಸ್ತಿ ಸಿಹಿಯಾಗಿರುವ ಹಾಗೂ ಸುವಾಸನೆಯ ಪ್ರಬೇಧ ಇರುವ ಗ್ರೀಕ್ ಮೊಸರಿನಿಂದ ದೂರವಿರಿ. ಯಾಕೆಂದ್ರೆ ಇದರಲ್ಲಿ ಸಕ್ಕರೆಯಾಂಶ ಜಾಸ್ತಿ ಪ್ರಮಾಣದಲ್ಲಿ ಇರುವುದರಿಂದ, ಆರೋಗ್ಯಕ್ಕೆ ಸಮಸ್ಯೆ ಕಂಡು ಬರಬಹುದು! ಹೀಗಾಗಿ ಪ್ಲೇನ್ ಆಗಿರುವ ಗ್ರೀಕ್ ಯೋಗರ್ಟ್‌‌ನ್ನು ಸೇವನ ಮಾಡಿ.​

ಮೊಟ್ಟೆಗಳು

ಮೊಟ್ಟೆಯಲ್ಲಿ ಅಧಿಕ ಪ್ರಮಾಣದಲ್ಲಿ ಪ್ರೋಟೀನ್ ಹಾಗೂ ಆರೋಗ್ಯಕರ ಕೊಬ್ಬಿನಾಂಶ ಕಂಡು ಬರುವುದರಿಂದ ಬೆಳಗಿನ ಬ್ರೇಕ್‌ಫಾಸ್ಟ್‌ಗೆ, ಒಂದೊಂದು ಬೇಯಿಸಿದ ಮೊಟ್ಟೆಯನ್ನು ಸೇವನೆ ಮಾಡಬಹುದು. ಆದರೆ ಮೊಟ್ಟೆಗೆ ಉಪ್ಪು ಅಥವಾ ಮೊಟ್ಟೆಯನ್ನು ಎಣ್ಣೆಯಲ್ಲಿ ಫ್ರೈ ಮಾಡಿ ಸೇವನೆ ಮಾಡಲು ಹೋಗಬೇಡಿ.

ಬೆಳಗ್ಗೆ ಟೈಮಲ್ಲಿ ಒಂದೊಂದು ಮೊಟ್ಟೆ ತಿಂದರೆ ಶುಗರ್ ಬರಲ್ವಂತೆ!!

ಹಣ್ಣು- ತರಕಾರಿಗಳ ಸಲಾಡ್

  • ದೈನಂದಿನ ಉಪಹಾರಕ್ಕೆ ಹಸಿ ತರಕಾರಿಗಳ ಸಲಾಡ್ ಹಾಗೂ ನೈಸರ್ಗಿಕವಾಗಿ ಸಿಗುವ ಹಣ್ಣುಗಳನ್ನು ಸೇವನೆ ಮಾಡುವುದರಿಂದ, ರಕ್ತದ ಒತ್ತಡದ ಸಮಸ್ಯೆ ಕಡಿಮೆ ಯಾಗುವುದು ಮಾತ್ರವಲ್ಲದೆ ರಕ್ತದಲ್ಲಿ ಸಕ್ಕರೆ ಅಂಶದ ಪ್ರಮಾಣವು ಕೂಡ ನಿಯಂತ್ರಣದಲ್ಲಿರುವುದು.
  • ಇದಕ್ಕೆ ಪ್ರಮುಖ ಕಾರಣ, ಹಣ್ಣು- ತರಕಾರಿಗಳಲ್ಲಿ ಕಂಡು ಬರುವ ವಿವಿಧ ಬಗೆಯ ವಿಟಮಿನ್ಸ್ ಗಳು, ಖನಿಜಾಂಶ ಗಳು ಹಾಗೂ ನಾರಿನಾಂಶಗಳು, ಈ ಕಾಯಿಲೆಯನ್ನು ಹತೋಟಿಯಲ್ಲಿಡಲು ನೆರವಾಗುತ್ತದೆ.

ಗಿಡಮೂಲಿಕೆಯ ಚಹಾ

  • ಗಿಡಮೂಲಿಕೆಯ ಚಹಾಗಳು ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಹಲವಾರು ಬಾರಿ ಸಾಬೀತಾಗಿದೆ.
  • ಹೀಗಾಗಿ ಕೆಫಿನ್ ಅಂಶ ಹೆಚ್ಚಿರುವ ಟೀ-ಕಾಫಿ ಕುಡಿಯುವ ಬದಲು, ಪ್ರತಿದಿನ ಉಪಹಾರದ ಜೊತೆಗೆ ಗಿಡಮೂಲಿಕೆ ಚಹಾ ಕುಡಿಯುವುದ ರಿಂದ, ಈ ಎರಡು ಕಾಯಿಲೆ ಯನ್ನು ನಿಯಂತ್ರಣದಲ್ಲಿಡಲು ನೆರವಾಗುತ್ತದೆ.
  • ಉದಾಹರಣೆಗೆ -ಗ್ರೀನ್ ಟೀ, ಕ್ಯಾಮೋಮೈಲ್ ಟೀ, ಪುದೀನಾ ಟೀ ಇತ್ಯಾದಿ. ಆದರೆ ಇಂತಹ ಪಾನೀಯಗಳಿಗೆ ತಪ್ಪಿಯೂ ಕೂಡ ಸಕ್ಕರೆ ಬೆರಸಬಾರದು. ಅಷ್ಟೇ ಅಲ್ಲದೆ ಬೆಳಗಿನ ಖಾಲಿ ಹೊಟ್ಟೆಯಲ್ಲಿ ಒಂದೆರಡು ಲೋಟ ನೀರನ್ನು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ.

ಮಾಹಿತಿ:
Dr. Rajesh Padhi, Associate Clinical Director & HOD, internal medicine, care hospitals Bhubneswar

ಲೇಖಕರ ಬಗ್ಗೆ
ಮನೋಹರ್ ಶೆಟ್ಟಿ
"ಕನ್ನಡದ ಲೇಖನ ಬರವಣಿಗೆಯಲ್ಲಿ 9 ವರ್ಷಗಳ ಸುದೀರ್ಘ ವೃತ್ತಿಪರ ಅನುಭವದೊಂದಿಗೆ ಭಾಷೆಯ ಅನುವಾದದೊಂದಿಗೆ ಪ್ರಾರಂಭಿಸಿ ಇಂದಿಗೆ ವಿವಿಧ ವಿಭಾಗಗಳಲ್ಲಿ ಅಂದರೆ ಜೀವನಶೈಲಿ, ಆರೋಗ್ಯ, ಸೌಂದರ್ಯ, ಸಂಬಂಧ, ಜಾಹೀರಾತು ಇತ್ಯಾದಿಗಳಲ್ಲಿ ವ್ಯಾಪಕವಾಗಿ ಆಸಕ್ತಿಕರ ಲೇಖನಗಳನ್ನು ಒದಗಿಸಿದ ಹೆಮ್ಮೆ ನನ್ನದು. ಭಾಷೆಯ ಬಗೆಗಿನ ಹಿಡಿತ, ವಿಚಾರದ ಕುರಿತಾದ ಜ್ಞಾನಾಸಕ್ತಿಯೊಂದಿಗೆ ಓದುಗರಿಗೆ ಅತ್ಯುತ್ತಮ ವಿಷಯಗಳನ್ನೊಳಗೊಂಡ ಲೇಖನಗಳನ್ನು ನೀಡುವಲ್ಲಿ ನನಗೆ ತೃಪ್ತಿಯಿದೆ. ಅದು ವಿಚಾರವಿರುವ ಲೇಖನವಾದರೂ ಅಥವಾ ಸಾಧಾರಣ ಮುಖ್ಯಾಂಶವಾದರೂ ಸಾಧ್ಯವಾದಷ್ಟು ಉತ್ತಮ ಗುಣಮಟ್ಟದ ಬರವಣಿಗೆಯನ್ನು ತರಲು ನಾನು ಪ್ರಯತ್ನಿಸುತ್ತೇನೆ. ಸದ್ಯದ ಡಿಜಿಟಲ್ ವಿದ್ಯಮಾನಗಳ ಬಗ್ಗೆ ನನ್ನನ್ನು ನಾನು ಕ್ರೂಢೀಕರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಕಂಡುಬರುವ ಇತರ ಲೇಖಕರ ವಿಷಯಗಳನ್ನು, ವಿಚಾರಗಳನ್ನು ಅನುಸರಿಸಿ ನನ್ನ ಜ್ಞಾನಾರ್ಜನೆಯನ್ನು ಹೆಚ್ಚಿಸಿಕೊಳ್ಳುತ್ತಾ ನನ್ನ ಬರವಣಿಗೆಯ ಗುಣಮಟ್ಟವನ್ನು ಈಗಿನ ಓದುಗರ ಆಸಕ್ತಿಗೆ ತಕ್ಕಂತೆ ಕಾಪಾಡಿಕೊಳ್ಳುತ್ತೇನೆ. ಬಿಡುವಿನ ಸಮಯದಲ್ಲಿ ನನ್ನ ಕುಟುಂಬದ ಜೊತೆ ಗುಣಮಟ್ಟದ ಸಮಯ ಕಳೆಯುವ ಮೂಲಕ ಉತ್ತಮ ವೃತ್ತಿಪರತೆಗಾಗಿ ನನ್ನನ್ನು ನಾನು ಚೈತನ್ಯದಿಂದ ಕೂಡಿರುವಂತೆ ನೋಡಿಕೊಳ್ಳುತ್ತೇನೆ."... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ