ಆ್ಯಪ್ನಗರ

ಅರಿಶಿನ ಹಾಲು, ನೆನೆಸಿಟ್ಟ ಮೆಂತೆ ನೀರು ಕುಡಿದ್ರೆ, ತೂಕ ಕಮ್ಮಿ ಆಗುತ್ತೆ ನೋಡಿ...

ದೇಹದ ತೂಕವನ್ನು ಕಡಿಮೆ ಮಾಡಲು ಅಡುಗೆಮನೆಯಲ್ಲಿಯೇ ಸಿಗುವ ನೈಸರ್ಗಿಕ ಪದಾರ್ಥಗಳನ್ನು ಒಮ್ಮೆ ಟ್ರೈ ಮಾಡಿ ನೋಡಿ

Vijaya Karnataka Web 11 Dec 2021, 3:07 pm
ಸಾಕಷ್ಟು ಜನರು ಸಾಂಪ್ರದಾಯಿಕವಾಗಿ ತಯಾರಾದ ನಮ್ಮ ಭಾರತೀಯ ಆಹಾರ ಪದಾರ್ಥಗಳಿಂದ ದೂರವೇ ಉಳಿಯಲು ಬಯಸುತ್ತಾರೆ. ಏಕೆಂದರೆ ಅವರಿಗೆ ರಸ್ತೆಬದಿಯ ಅನಾರೋಗ್ಯಕರ ಜಂಕ್ ಫುಡ್ ಎಂದರೆ ಬಹಳ ಪ್ರೀತಿ. ಆದರೆ ಭಾರತೀಯ ಅಡುಗೆಗಳಿಗೆ ಮಸಾಲೆ ಪದಾರ್ಥಗಳ ಮಿಶ್ರಣದ ಕಾರಣದಿಂದ ರುಚಿ ಹೆಚ್ಚಾಗಿ, ಅವುಗಳಿಂದ ಆರೋಗ್ಯ ಪ್ರಯೋಜನಗಳು ಕೂಡ ಸಾಕಷ್ಟು ಸಿಗುತ್ತವೆ.
Vijaya Karnataka Web kitchen ingredients you should include in your diet to loss weight naturally
ಅರಿಶಿನ ಹಾಲು, ನೆನೆಸಿಟ್ಟ ಮೆಂತೆ ನೀರು ಕುಡಿದ್ರೆ, ತೂಕ ಕಮ್ಮಿ ಆಗುತ್ತೆ ನೋಡಿ...


ದೇಹದ ತೂಕವನ್ನು ಕಡಿಮೆ ಮಾಡುವಲ್ಲಿ ಇವುಗಳ ಪಾತ್ರ ತುಂಬಾ ದೊಡ್ಡದಿರುತ್ತದೆ. ತಯಾರು ಮಾಡುವ ಆಹಾರಗಳಿಗೆ ಅದ್ಭುತ ರುಚಿಯನ್ನು ಒದಗಿಸಿ ಆಹಾರದ ನೈಜತೆಯನ್ನು ಹೆಚ್ಚು ಮಾಡುತ್ತವೆ. ಹಾಗಾಗಿ ದೇಹದ ತೂಕವನ್ನು ಕಡಿಮೆ ಮಾಡುವ ಮಸಾಲೆ ಪದಾರ್ಥಗಳನ್ನು ಎಂದಿಗೂ ಸಹ ದೂರ ಇರಿಸಬೇಡಿ.

​ದಿನಕ್ಕೊಂದು ಲೋಟ ಅರಿಶಿನ ಬೆರೆಸಿದ ಹಾಲು ಕುಡಿಯಿರಿ

  • ಅರಿಶಿನ ಹಲವಾರು ರೀತಿಯ ಔಷಧೀಯ ಗುಣಗಳನ್ನು ಹೊಂದಿರುವ, ಭಾರತೀಯ ಸಂಸ್ಕೃತಿಯಲ್ಲಿ ತುಂಬಾ ಪವಿತ್ರವೆಂದು ಕೂಡ ಪರಿಗಣಿಸಲಾಗಿರುವಂತದ್ದು. ಇದನ್ನು ಪ್ರತಿಯೊಬ್ಬರು ತಮ್ಮ ಆಹಾರ ಕ್ರಮದಲ್ಲಿ ಬಳಸಿ, ಅದರಿಂದ ಸಿಗುವ ಆರೋಗ್ಯ ಲಾಭಗಳನ್ನು ಪಡೆಯುವರು.
  • ಅದೇ ರೀತಿ ಅರಿಶಿನ ಬಳಸಿ ದೇಹದಲ್ಲಿರುವ ಹೆಚ್ಚುವರಿ ತೂಕ ಇಳಿಸಬಹುದು. ಹೌದು, ಅರಶಿನ ಬಳಸಿದರೆ ಅದರಿಂದ ನಮ್ಮ ದೇಹದಲ್ಲಿನ ಹೆಚ್ಚುವರಿ ತೂಕ ಇಳಿಸಬಹುದು. ಇದರಿಂದ ದೇಹವನ್ನು ಸಮತೋಲಿತ, ಆರೋಗ್ಯಕಾರಿ ಆಗಿ ಇಡಬಹುದು. ಅದರಲ್ಲೂ ದಿನಾ ಮಲಗುವ ಮುನ್ನ ಅರಿಶಿನ ಬೆರೆಸಿದ ಹಾಲು ಕುಡಿದರೆ, ಆರೋಗ್ಯದ ಜೊತೆಗೆ ದೇಹದ ತೂಕವನ್ನು ಕೂಡ ಇಳಿಸಬಹುದು!

​ಅರಿಶಿನ ಹಾಲು ತಯಾರಿಸುವುದು ಹೇಗೆ?

ಬೇಕಾಗುವ ಪದಾರ್ಥಗಳು

  • 1 ಟೀ ಚಮಚ ಅರಿಶಿನ
  • ಹಾಲು ½ ಕಪ್
  • 1 ಟೀ ಚಮಚ ದಾಲ್ಚಿನ್ನಿ ಪುಡಿ
  • 1 ಟೀ ಚಮಚ ಶುಂಠಿ ಪುಡಿ
  • ಕಾಳುಮೆಣಸಿನಪುಡಿ ಚಿಟಿಕೆಯಷ್ಟು
  • 1 ಟೀಸ್ಪೂನ್ ಜೇನುತುಪ್ಪ

ಮಾಡುವ ವಿಧಾನ

  • ಒಂದು ಪಾತ್ರೆಯಲ್ಲಿ ಮೇಲೆ ಹೇಳಿದ ಎಲ್ಲಾ ಪದಾರ್ಥಗಳನ್ನು ಬೆರೆಸಿ ಕುದಿಸಿರಿ
  • ನಂತರ ಕಡಿಮೆ ಮಾಡಿ ಉರಿಯಲ್ಲಿ 10 ನಿಮಿಷಗಳ ಕಾಲ ಕುದಿಸಿ.
  • ಸೋಸಿ, ಇದಕ್ಕೆ ಚಿಟಿಕೆಯಷ್ಟು ದಾಲ್ಚಿನ್ನಿ ಸೇರಿಸಿ ಕುಡಿಯಿರಿ.

​ತೂಕ ಇಳಿಕೆಗೆ ಮೆಂತೆ ಕಾಳಿನ ನೀರು

  • ಆಯುರ್ವೇದವು ಮೆಂತ್ಯೆ ಕಾಳಿನ ನೀರನ್ನು ಮಧುಮೇಹ ಸಹಿತ ವಿವಿಧ ರೀತಿಯ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸುತ್ತದೆ. ಮೆಂತ್ಯೆ ಕಾಳಿನ ನೀರಿನಲ್ಲಿ ತೂಕ ಇಳಿಸುವ ಗುಣಗಳು ಕೂಡ ಇವೆ ಎಂದು ಇತ್ತೀಚಿನ ಕೆಲವೊಂದು ಅಧ್ಯಯನಗಳು ಹೇಳಿವೆ.
  • ಈ ಬೀಜಗಳಲ್ಲಿ ಅತ್ಯಧಿಕ ಮಟ್ಟದ ನಾರಿನಾಂಶವಿದ್ದು, ಬಯಕೆ ಕಡಿಮೆ ಮಾಡುವುದು ಮತ್ತು ದೀರ್ಘಕಾಲ ಹೊಟ್ಟೆ ತುಂಬಿದಂತೆ ಮಾಡುವುದು. ಮೆಂತ್ಯೆ ಕಾಳನ್ನು ಜಗಿದರೆ ಅದರಿಂದ ಅತಿಯಾಗಿ ತಿನ್ನುವುದು ಕಡಿಮೆ ಆಗುವುದು.
  • ಮೆಂತ್ಯೆ ಕಾಳಿನಲ್ಲಿ ಚಯಾಪಚಯ ವೃದ್ಧಿಸುವ ಗುಣಗಳು ಇವೆ ಮತ್ತು ಇದು ತೂಕ ಇಳಿಸುವ ಪ್ರಕ್ರಿಯೆಗೆ ತುಂಬಾ ಸಹಕಾರಿ ಆಗಿರುವುದು. ಇದರಲ್ಲಿ ಇರುವಂತಹ ಒಂದು ಅಂಶವು ಹೊಟ್ಟೆಯ ಕೊಬ್ಬು ಕರಗಿಸಲು ತುಂಬಾ ಪರಿಣಾಮಕಾರಿ ಆಗಿರುವುದು.

​ಮೆಂತ್ಯೆ ಕಾಳಿನ ನೀರು ಸೇವನೆ ಹೇಗೆ?

  • ದೇಹದ ತೂಕ ಇಳಿಸಿಕೊಳ್ಳಲು ನಿಮಗೆ ನಿಜವಾದ ಆಸಕ್ತಿ ಇದ್ದಲ್ಲಿ ಆಗ ನೀವು ದೈನಂದಿನ ಆಹಾರ ಕ್ರಮದಲ್ಲಿ ಮೆಂತ್ಯೆಕಾಳು ಬಳಸಿಕೊಳ್ಳಬಹುದು. ಇದನ್ನು ಹಲವಾರು ವಿಧಾನದಿಂದ ಬಳಸಿಕೊಳ್ಳಬಹುದು. ಮೆಂತ್ಯೆಕಾಳು ಮತ್ತು ಮೆಂತ್ಯೆ ಸೊಪ್ಪನ್ನು ನಿಮ್ಮ ಆಹಾರ ಕ್ರಮದಲ್ಲಿ ಬಳಸಬಹುದು.
  • ಮೆಂತ್ಯೆಕಾಳನ್ನು ಹಾಗೆ ಅಥವಾ ಹುಡಿ ಮಾಡಿಕೊಂಡು ಬೇರೆ ಬೇರೆ ತಿಂಡಿಗಳಿಗೆ ಹಾಕಿ ಸೇವಿಸಬಹುದು. ಮೆಂತ್ಯೆ ಹುಡಿಯಿಂದ ಆರೋಗ್ಯಕಾರಿ ಚಹಾ ಮಾಡಬಹುದು. ಬಿಸಿ ಮೆಂತ್ಯೆಕಾಳಿನ ನೀರು ಕುಡಿದರೆ ಅದರಿಂದ ತೂಕ ಇಳಿಸಬಹುದು. ಇದು ಸರಳ ಮತ್ತು ಬೇಗನೆ ತಯಾರಿಸಿಕೊಳ್ಳಬಹುದು. ಸ್ವಲ್ಪ ಮೆಂತ್ಯೆ ಕಾಳನ್ನು ಹುರಿಯಿರಿ.
  • ಮಿಕ್ಸಿಗೆ ಹಾಕಿ ಇದನ್ನು ಸರಿಯಾಗಿ ಹುಡಿ ಮಾಡಿ.
  • ಒಂದು ಚಮಚ ಮೆಂತ್ಯೆಕಾಳಿನ ಹುಡಿಯನ್ನು ಬಿಸಿ ನೀರಿಗೆ ಹಾಕಿ ಮತ್ತು ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಒಂದು ತಿಂಗಳಲ್ಲಿ ನಿಮಗೆ ಉತ್ತಮ ಫಲಿತಾಂಶ ಕಂಡುಬರುವುದು.

​ದಾಲ್ಚಿನ್ನಿ, ಜೇನುತುಪ್ಪದ ನೀರು

  • ಹಲವಾರು ಖಾದ್ಯಗಳಲ್ಲಿ ದಾಲ್ಚಿನ್ನಿಯನ್ನು ಬಳಕೆ ಮಾಡುವರು. ದಾಲ್ಚಿನ್ನಿ ಬಳಕೆ ಮಾಡಿದರೆ, ಅದರಿಂದ ತೂಕ ಇಳಿಸಲು ಸಹಕಾರಿ. ದಾಲ್ಚಿನ್ನಿ ನೀರು ಕುಡಿದರೆ, ಅದರಿಂದ ಸಕ್ಕರೆ ಸೇವನೆ ಬಯಕೆಯು ಕಡಿಮೆ ಆಗುವುದು ಮತ್ತು ರಕ್ತದಲ್ಲಿ ಇನ್ಸುಲಿನ್ ಮಟ್ಟವು ನಿಯಂತ್ರಣದಲ್ಲಿ ಇರುವುದು.
  • ಒಂದು ಲೋಟ ಬಿಸಿ ನೀರಿಗೆ ಎರಡು ಚಕ್ಕೆ ದಾಲ್ಚಿನ್ನಿ ಮತ್ತು ಒಂದು ಚಮಚ ಜೇನುತುಪ್ಪ ಹಾಕಿ. ಇದನ್ನು ಸರಿಯಾಗಿ ಮಿಶ್ರಣ ಮಾಡಿ ಮತ್ತು ಇದರ ಬಳಿಕ ಸೋಸಿಕೊಳ್ಳಿ. ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರನ್ನು ಕುಡಿಯಬೇಕು. ಇದರಿಂದ ತೂಕ ಇಳಿಸಲು ತುಂಬಾ ನೆರವಾಗಲಿದೆ.

​ಜೀರಿಗೆ ನೀರು

ನಮ್ಮ ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬಿನಲ್ಲಿ ಅತಿ ಕಷ್ಟದಿಂದ ಕರಗುವ ಸೊಂಟದ ಕೊಬ್ಬನ್ನು ತೊಡೆದುಹಾಕಲು ಜೀರಿಗೆ ನೀರು ಉಪಯುಕ್ತವಾಗಿದೆ. ತನ್ಮೂಲಕ ತೂಕ ಇಳಿಕೆಗೆ ನೆರವಾಗುತ್ತದೆ.

ತಯಾರಿಸುವ ವಿಧಾನ

  • ಎರಡು ಚಿಕ್ಕ ಚಮಚ ಜೀರಿಗೆ ಬೀಜವನ್ನು ರಾತ್ರಿಯಿಡೀ ಒಂದು ಕಪ್ ನೀರಿನಲ್ಲಿ ನೆನೆಸಿಡಿ.
  • ಬೆಳಿಗ್ಗೆದ್ದ ಬಳಿಕ ಪ್ರಥಮ ಆಹಾರವಾಗಿ ಮಣ್ಣಿನ ಹಳದಿ ಬಣ್ಣಕ್ಕೆ ತಿರುಗಿರುವ ಈ ನೀರನ್ನು ಸೇವಿಸಿ
  • ಜೀರಿಗೆ, ನೀರು ಮತ್ತು ನಿಂಬೆ ಪಾನೀಯ ವಿಧಾನ

ಅಗತ್ಯವಿರುವ ಪದಾರ್ಥಗಳು

  • 1 ಚಿಕ್ಕ ಚಮಚ ಜೀರಿಗೆ
  • ಅರ್ಧ ಲಿಂಬೆ
  • 1 ಕಪ್ ನೀರು

​ತಯಾರಿಸುವ ವಿಧಾನ

  • ಎರಡು ಚಿಕ್ಕ ಚಮಚ ಜೀರಿಗೆಯನ್ನು ಒಂದು ಕಪ್ ನೀರಿನಲ್ಲಿ ರಾತ್ರಿಯಿಡೀ ನೆನೆಸಿಡಿ.
  • ಬೆಳಿಗ್ಗೆ, ನೀರನ್ನು ಸೋಸಿ ಈ ನೀರಿಗೆ ಅರ್ಧ ಲಿಂಬೆಯ ರಸವನ್ನು ಹಿಂಡಿ ಬೆರೆಸಿ
  • ಚೆನ್ನಾಗಿ ಬೆರೆಸಿ ಬೆಳಗ್ಗಿನ ಪ್ರಥಮ ಆಹಾರವಾಗಿ ಕುಡಿಯಿರಿ.
  • ನಿಂಬೆ ವಿಟಮಿನ್ ಸಿ ಯಿಂದ ಸಮೃದ್ಧವಾಗಿದೆ ಮತ್ತು ದೇಹದಿಂದ ವಿಷವನ್ನು ಹೊರಹಾಕುವ ಆಂಟಿ ಆಕ್ಸಿಡೆಂಟ್ ರೂಪದಲ್ಲಿ ಕಾರ್ಯನಿರ್ವಹಿಸುತ್ತದೆ, ತನ್ಮೂಲಕ ಹೆಚ್ಚುವರಿ ಪ್ರಯೋಜನವನ್ನು ಪಡೆಯಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ