ಆ್ಯಪ್ನಗರ

ಮಂಡಿ ನೋವು ಜಾಸ್ತಿ ಇದೆಯಾ? ಕರ್ಪೂರದ ಎಣ್ಣೆ ಬಳಸಿ, ಕೂಡಲೇ ಕಮ್ಮಿ ಆಗುತ್ತೆ...

ಮನೆಯಲ್ಲಿ ವಯಸ್ಸಾದವರು ಇದ್ದರೆ, ಇವರಿಗೆ ಪದೇ ಪದೇ ಮಂಡಿ ನೋವು, ಇಲ್ಲಾಂದ್ರೆ ಕೀಲು ನೋವು ಕಾಡುತ್ತಲೇ ಇರುತ್ತದೆ. ಇತ್ತೀಚಿನ ದಿನಗಳಲ್ಲಿ ಯುವಜನತೆಯರಿಗೂ ಕೂಡ ಈ ಸಮಸ್ಯೆ ಸಾಮಾನ್ಯವಾಗಿ ಬಿಟ್ಟಿದೆ. ಆದ್ರೆ ಈ ಸಮಸ್ಯೆಗೆ ದುಬಾರಿ ಖರ್ಚು ಮಾಡಬೇಕಾಗಿಲ್ಲ, ಬದಲಿಗೆ ಕರ್ಪೂರದ ಎಣ್ಣೆ ಹಚ್ಚಿ ಮಸಾಜ್ ಮಾಡಿದರೆ ಸಾಕಾಗುತ್ತದೆ.

Vijaya Karnataka Web 20 Jun 2022, 12:33 pm
ಅಯ್ಯೋ ದೇವರೆ, ಸಿಕ್ಕಾಪಟ್ಟೆ ಮಂಡಿ ನೋವು, ಕೂರಲೂ ಆಗುವುದಿಲ್ಲ, ನಿಲ್ಲಲ್ಲು ಆಗುತ್ತಿಲ್ಲ! ಎಂದು ಮನೆಯಲ್ಲಿ ವಯಸ್ಸಾದವರು ಆಗಾಗ ಹೇಳುತ್ತಿರುವುದು ನೀವು ಕೂಡ ಕೇಳಿರುತ್ತೀರಿ ವಿಪ ರ್ಯಾಸ ಏನೆಂದರೆ, ಇತ್ತೀಚಿನ ದಿನಗಳಲ್ಲಿ ಬಹಳ ಸಣ್ಣ ವಯಸ್ಸಿನಲ್ಲಿಯೇ ಯುವಜನತೆಯರನ್ನು ಈ ಸಮಸ್ಯೆ ಕಾಡುತ್ತಿದೆ.
Vijaya Karnataka Web try these camphor oil remedies to get rid from knee pain natuarlly
ಮಂಡಿ ನೋವು ಜಾಸ್ತಿ ಇದೆಯಾ? ಕರ್ಪೂರದ ಎಣ್ಣೆ ಬಳಸಿ, ಕೂಡಲೇ ಕಮ್ಮಿ ಆಗುತ್ತೆ...


ಕೆಲವರಿಗೆ ನಾಲ್ಕು ಹೆಜ್ಜೆ ನಡೆದರೆ ಸಾಕು, ಮಂಡಿ ನೋವು ಅಥವಾ ಕೀಲು ನೋವು ಕಂಡು ಬರುತ್ತದೆ, ಇನ್ನು ಕೆಲವರಿಗೆ, ಒಂದನೇ ಮಹಡಿಯ ಮಹಡಿ ಮೆಟ್ಟಿಲು ಕೂಡ ಹತ್ತಲು ಸಾಧ್ಯವಾಗುವುದಿಲ್ಲ ಅದಾಗಲೇ ಮಂಡಿಗಳು ಹಿಡಿದುಕೊಂಡಂತೆ ಆಗುತ್ತವೆ. ಕೆಲವೊಮ್ಮೆ ದೇಹದಲ್ಲಿ ಯುರಿಕ್ ಆಮ್ಲ ತನ್ನ ಪ್ರಭಾವ ಹೆಚ್ಚು ಮಾಡಿದಷ್ಟು ಇಂತಹ ಸಮಸ್ಯೆಗಳು ಕಾಡಲು ಶುರುವಾಗುತ್ತದೆಯಂತೆ. ಅದರಲ್ಲೂ ತಂಪಿನ ವಾತಾವರಣ ಇದ್ದರೆ, ಈ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ. ಬನ್ನಿ ಇಂದಿನ ಲೇಖನದಲ್ಲಿ ಕೀಲು ನೋವು ಹಾಗೂ ಮಂಡಿ ನೋವಿನ ಸಮಸ್ಯೆಗೆ ಕರ್ಪೂರದ ಎಣ್ಣೆ ಹೇಗೆ ಸಹಾಯಕ್ಕೆ ನಿಲ್ಲುತ್ತದೆ ಎಂಬುದನ್ನು ನೋಡೋಣ....

ಕರ್ಪೂರದ ಪ್ರಯೋಜನಗಳು

  • ನಮಗೆಲ್ಲಾ ಗೊತ್ತೇ ಇರುವ ಹಾಗೆ, ಕರ್ಪೂರವನ್ನು ಪೂಜಾ ಸಾಮಾಗ್ರಿಯಾಗಿ ಹೆಚ್ಚಾಗಿ ಬಳಸಲಾ ಗುತ್ತದೆ. ಆದರೆ ಈ ಸರಳ ಸಾಮಾಗ್ರಿ ಮಂಡಿ ನೋವಿನಂತಹ ಸಮಸ್ಯೆಯನ್ನು ಕೂಡ ನಿವಾರಣೆ ಮಾಡುತ್ತದೆ ಎಂದರೆ ಅಚ್ಚರಿಯಾಗುತ್ತದೆ!
  • ಒಂದು ವೇಳೆ ದೇಹದ ಭಾಗದಲ್ಲಿ ಬಾವು ಮತ್ತು ಉರಿಯೂತ ಕಾಣಿಸಿಕೊಂಡಿದ್ದರೆ ಇದರ ಉರಿ ಯನ್ನು ಶಮನಗೊಳಿಸಲು ಕರ್ಪೂರವನ್ನು ಬಳಸಬಹುದು. ಇದರ ಎಣ್ಣೆಯಿಂದ ನೋವು ಬಾಧಿತ ಕಡೆಗೆ, ಹಚ್ಚಿ ನಯವಾಗಿ ಮಸಾಜ್ ಮಾಡುವುದರಿಂದ, ಸೂಕ್ತ ಪರಿಹಾರವನ್ನು ಕಾಣಬಹುದಾಗಿದೆ.

ನೋವು ನಿವಾರಕ ಗುಣಲಕ್ಷಣಗಳು ಈ ಎಣ್ಣೆಯಲ್ಲಿ ಕಂಡು ಬರುತ್ತದೆ

  • ಆಯುರ್ವೇದ ತಜ್ಞರು ಹೇಳುವ ಪ್ರಕಾರ, ಕರ್ಪೂರದಲ್ಲಿ ನೋವು ನಿವಾರಕ, ಗುಣಲಕ್ಷಣಗಳು ಯಥೇ ಚ್ಛವಾಗಿ ಕಂಡು ಬರುವುದರಿಂದ, ಮಂಡಿನೋವು, ಕೀಲು ನೋವು ಅಥವಾ ಸಂಧಿವಾತ ಸಮಸ್ಯೆಯ ವಿರುದ್ಧ ಹೋರಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಹೀಗಾಗಿ ಕರ್ಪೂರದ ಎಣ್ಣೆಯನ್ನು ಹಚ್ಚಿ ಮಸಾಜ್ ಮಾಡುವುದಿರಿಂದ, ತ್ವಚೆಯ ಭಾಗದಲ್ಲಿ ಕಂಡು ಬರುವ ಊತ ಮತ್ತು ನೋವು ಬೇಗನೇ ವಾಸಿಯಾಗುತ್ತದೆ.
  • ಪ್ರಮುಖವಾಗಿ ಈ ಎಣ್ಣೆಯನ್ನು ಹಚ್ಚಿ, ನಯವಾಗಿ ಮಸಾಜ್ ಮಾಡುವುದರಿಂದ, ದೇಹದ ರಕ್ತ ಸಂಚಾರ ಸರಾಗವಾಗಿ ನಡೆದು, ನೋವಿನ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಇನ್ನು ಈ ಕರ್ಪೂರದ ಎಣ್ಣೆ ತನ್ನಲ್ಲಿ ತಂಪಾದ ಪ್ರಕ್ರಿಯೆಯನ್ನು ಹೊಂದಿರುವುದರಿಂದ ದೇಹದ ಮೂಳೆಗಳ ಹಾಗೂ ಮಾಂಸಖಂಡಗಳ ಉರಿ ಮತ್ತು ಸೆಳೆತವನ್ನು ಬೇಗನೇ ಕಡಿಮೆಯಾಗಲು ನೆರವಾಗುತ್ತದೆ.

ಗರ್ಭಿಣಿ ಮಹಿಳೆಯರಿಗೆ

  • ಗರ್ಭಾವಸ್ಥೆಯಲ್ಲಿರುವ ಮಹಿಳೆಯರಲ್ಲಿಅನೇಕ ರೀತಿಯ ಸಮಸ್ಯೆಗಳು ಕಂಡು ಬರುತ್ತದೆ. ಇದರಲ್ಲಿ ಕೈ ಕಾಲುಗಳು ಹಾಗೂ ಮುಖದ ಭಾಗ ಕೂಡ ಊದಿಕೊಳ್ಳುವುದು ದೊಡ್ಡ ಸಮಸ್ಯೆಯಾಗಿ ಕಾಡುತ್ತದೆ. ಸಾಮಾನ್ಯವಾಗಿ ಈ ಸಮಸ್ಯೆ ಕಂಡು ಬರಲು, ದೇಹದಲ್ಲಿ ಕೆಲವೊಂದು ಹಾರ್ಮೋನುಗಳ ಬದಲಾ ವಣೆ ಹಾಗೂ ದೇಹದಲ್ಲಿ ದ್ರವದ ಅಂಶದ ಉತ್ಪತ್ತಿ ಹೆಚ್ಚಾಗುವಿಕೆಯಿಂದ ಈ ಸಮಸ್ಯೆ ಕಂಡು ಬರುತ್ತದೆ.
  • ಮುಖ್ಯವಾಗಿ ಎರಡು ಹಾಗೂ ಮೂರನೇಯ ತ್ರೈಮಾಸಿಕದಲ್ಲಿರುವ ಗರ್ಭಿಣಿಯರಲ್ಲಿ ಕಣಕಾಲುಗಳು ಮತ್ತು ಕಾಲುಗಳು ಊದಿಕೊಳ್ಳುವ ಸಮಸ್ಯೆ ಹೆಚ್ಚಾಗಿ ಕಂಡು ಬರುತ್ತದೆ. ಒಂದು ವೇಳೆ ಈ ಸಮಸ್ಯೆ ಕಂಡು ಬಂದರೆ, ಒಂದೆರಡು ಚಮಚ ಕರ್ಪೂರದ ಎಣ್ಣೆಯನ್ನು ಅನ್ವಯಿಸಿ, ನಯವಾಗಿ ಮಸಾಜ್ ಮಾಡುತ್ತಾ ಬರುವುದರಿಂದ, ಉತ್ತಮ ಫಲಿತಾಂಶವನ್ನು ಕಾಣಬಹುದಾಗಿದೆ.

ಕರ್ಪೂದ ಎಣ್ಣೆ ಮಾಡುವ ವಿಧಾನ

  • ಮೊದಲು ಒಂದು ಚಿಕ್ಕದಾದ ಸ್ಟೀಲ್, ಇಲ್ಲಾಂದ್ರೆ ಅಲ್ಯೂಮಿನಿಯಂ ಬೌಲ್ ತೆಗೆದುಕೊಂಡು ಅದಕ್ಕೆ ಮೂರು ಅಥವಾ ನಾಲ್ಕು ಚಮಚ ತೆಂಗಿನ ಎಣ್ಣೆಯನ್ನು ಹಾಕಿ ಎರಡು ನಿಮಿಷಗಳವರೆಗೆ ಬಿಸಿ ಮಾಡಿ
  • ಇನ್ನು ಎರಡು-ಮೂರು ಬಿಲ್ಲೆ ಕರ್ಪೂರವನ್ನು, ಚೆನ್ನಾಗಿ ಕುಟ್ಟಿ ಪುಡಿ ಮಾಡಿ, ಬಿಸಿಯಾಗಿರುವ ತೆಂಗಿನ ಎಣ್ಣೆಗೆ ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಕರ್ಪೂರದ ಬಣ್ಣ ಕಪ್ಪಗೆ ಆದ ಬಳಿಕ, ಗ್ಯಾಸ್ ಆಫ್ ಮಾಡಿ, ಈ ಎಣ್ಣೆಯನ್ನು ತಣಿಯಲು ಬಿಡಿ, ಅ ಬಳಿಕ ಏರ್ ಟೈಟ್ನರ್‌ ಇರುವ ಗಾಜಿನ ಬಾಟಲಿಗೆ ಸೋಸಿಕೊಂಡು, ಮುಂದಿನ ಬಳಕೆಗಾಗಿ ತೆಗೆದಿಟ್ಟುಕೊಳ್ಳಿ.
  • ಒಂದು ವೇಳೆ ಆಗಾಗ, ಮಂಡಿನೋವು ಅಥವಾ ಕೀಲು ನೋವು ಕಾಡುತ್ತಿದ್ದರೆ, ಈ ಎಣ್ಣೆಯಿಂದ ನಯ ವಾಗಿ ಮಸಾಜ್ ಮಾಡುವುದರಿಂದ ಪರಿಹಾರ ಕಾಣಬಹುದಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ