ಆ್ಯಪ್ನಗರ

ಇಂತಹ ಆಹಾರಗಳನ್ನು ಗರ್ಭಿಣಿಯರು ತಿಂದರೆ ಸಮಸ್ಯೆಗಳು ಬರುವುದು ಗ್ಯಾರೆಂಟಿ!

ಗರ್ಭಿಣಿಯರು ತಿಳಿಯದೇ ಕೂಡ ಸೇವಿಸಬಾರದು ಈ ಆಹಾರಗಳನ್ನು. ಅವು ಯಾವುವು ಇಲ್ಲಿದೆ ಮಾಹಿತಿ.

Authored by ಸೌಮ್ಯ ಟೇಮ್ಕರ್ | Vijaya Karnataka Web 20 Jul 2023, 12:35 pm

All PC: iStock

ಗರ್ಭಿಣಿಯರ ಬಯಕೆ ಎಂದು ನೀವು ಅಡ್ಡಾದಿಡ್ಡಿಯಾಗಿ ಆಹಾರಗಳನ್ನು ಸೇವಿಸುವಂತಿಲ್ಲ. ಗರ್ಭಾವಸ್ಥೆ ಒಂದು ರೋಗವಲ್ಲವಾರದೂ, ಶಿಶುವಿನ ಆರೋಗ್ಯಕರ ಬೆಳವಣಿಗೆಗೆ ಅಗತ್ಯವಾದ ಆಹಾರಗಳನ್ನು ಸೇವಿಸುವುದು ಉತ್ತಮ. ನಮ್ಮ ಭಾರತೀಯ ಸಂಪ್ರದಾಯಗಳಲ್ಲಿ ಗರ್ಭಾವಸ್ಥೆಯಲ್ಲಿ ಕೆಲವು ಹಣ್ಣು ಹಾಗು ತರಕಾರಿಗಳನ್ನು ಸೇವಿಸುವಂತಿಲ್ಲ. ಅವು ಭ್ರೂಣದ ಬೆಳವಣಿಗೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬ ನಂಬಿಕೆ ಇದೆ.

ಅಂತಹ ಆಹಾರಗಳನ್ನು “ಗರ್ಭಿಣಿಯರಿಗೆ ಕಳಪೆ ಆಹಾರಗಳು” ಎಂದು ಪರಿಗಣಿಸಲಾಗಿದೆ. ಬಹುಶಃ ಕಾಫಿ, ಪಿಜ್ಜಾ, ಪಾಸ್ಟಾವನ್ನು ಹಠಾತ್ತನೆ ತ್ಯಜಿಸುವುದು ಕಷ್ಟಕರವೆಂದು ನಮಗೂ ತಿಳಿದಿದೆ. ಆದಾಗ್ಯೂ, ಶಿಶುವಿನ ಆರೋಗ್ಯಕ್ಕೆ ಮಾರಕವಾಗಬಲ್ಲ ಆಹಾರಗಳನ್ನು ಕೈಬಿಡುವುದು ಬಹಳ ಮುಖ್ಯ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬೇಕು. ಹಾಗಾದರೆ ಯಾವೆಲ್ಲಾ ಆಹಾರಗಳು ಗರ್ಭಿಣಿಯರಿಗೆ ಸಮಸ್ಯೆಗಳನ್ನು ಸೃಷ್ಟಿಸುತ್ತದೆ?

Vijaya Karnataka Web avoid these indian food in pregnancy
ಇಂತಹ ಆಹಾರಗಳನ್ನು ಗರ್ಭಿಣಿಯರು ತಿಂದರೆ ಸಮಸ್ಯೆಗಳು ಬರುವುದು ಗ್ಯಾರೆಂಟಿ!


ಪಪ್ಪಾಯಿ

ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿಯಾಗಿರುವ ಪಪ್ಪಾಯಿ ಗರ್ಭಾವಸ್ಥೆಯಲ್ಲಿ ಸೇವನೆ ಮಾಡಲು ಶಿಫಾರಸು ಮಾಡಲಾಗುವುದಿಲ್ಲ. ಇದೊಂದು ಪೋಷಕಾಂಶವುಳ್ಳ ಹಾಗು ರುಚಿಯಾದ ಹಣ್ಣು ಮಾತ್ರವಲ್ಲ ಅನೇಕ ಆರೋಗ್ಯ ಸಮಸ್ಯೆಗಳನ್ನು ಆರಂಭದಲ್ಲಿಯೇ ನಿಯಂತ್ರಿಸುವ ಸೂಪರ್‌ ಫ್ರೂಟ್‌ ಆಗಿದೆ.


ಇಂತಹ ಹಣ್ಣು ಗರ್ಭಿಣಿಯರು ತಿನ್ನುವಂತಿಲ್ಲ. ಹೌದು, ಈ ಹಣ್ಣು ದೇಹದಲ್ಲಿ ಉಷ್ಣತೆಯನ್ನು ಹೆಚ್ಚಿಸುವುದರ ಮೂಲಕ ಗರ್ಭಾಶಯದ ಸಂಕೋಚನ, ರಕ್ತಸ್ರಾವ, ಗರ್ಭಪಾತಕ್ಕೂ ಕಾರಣವಾಗುವುತ್ತದೆ ಎಂದು ನಂಬಲಾಗಿದೆ.

ತುಳಸಿ ಎಲೆಗಳು

ಬಹುಶಃ ತುಳಸಿ ಎಲೆಗಳನ್ನು ಗರ್ಭಿಣಿಯರು ಸೇವಿಸುವಂತಿಲ್ಲ ಎಂಬುದು ನಿಮಗೆ ಮೊದಲೇ ತಿಳಿದಿಲ್ಲದಿರಬಹುದು. ತುಳಸಿ ಎಲೆಗಳು ಅನೇಕ ಸೌಮ್ಯ ಕಾಯಿಲೆಗಳನ್ನು ಗುಣಪಡಿಸುವ ಅದ್ಭುತವಾದ ದಿವ್ಯೌಷಧವಾಗಿದೆ.

ನೆಗಡಿ, ಕೆಮ್ಮಿಗೆ ಪರಿಣಾಮಕಾರಿಯಾಗಿ ಇದು ಚಿಕಿತ್ಸೆ ನೀಡಬಲ್ಲದು. ಆದರೆ ಈ ಅದ್ಭುತವಾದ ಎಲೆಗಳು ಗರ್ಭಿಣಿಯರಿಗೆ ಒಳ್ಳೆಯದಲ್ಲ ಎಂದು ಪರಿಗಣಿಸಲಾಗಿದೆ. ತೀರಾ ಅಗತ್ಯವಿದ್ದಾಗ ಒಂದರಿಂದ ಎರಡು ಎಲೆಗಳು ತಿನ್ನಬಹುದು ಅಷ್ಟೇ.

ಮೆಂತ್ಯೆ ಕಾಳುಗಳು

ಮೆಂತ್ಯೆಕಾಳುಗಳ ಉಪಯೋಗಗಳ ಬಗ್ಗೆ ಹೆಚ್ಚಿಗೆ ಹೇಳುವ ಅಗತ್ಯವಿಲ್ಲ. ಇದು ಮಧುಮೇಹವನ್ನು ನಿಯಂತ್ರಿಸಲು ಹಾಗು ದೇಹದಲ್ಲಿ ಶಕ್ತಿಯನ್ನು ಪುನರುಜ್ಜೀವನಗೊಳಿಸಲು ಉತ್ತೇಜಿಸುತ್ತದೆ. ಇಂತಹ ಮೆಂತ್ಯೆ ಕಾಳುಗಳು ಹೆರಿಗೆಯ ನಂತರ ಸೇವಿಸುವುದರಿಂದ ಎದೆ ಹಾಲು ಹೆಚ್ಚಾಗುತ್ತದೆ. ಆದರೆ ಗರ್ಭಾವಸ್ಥೆಯಲ್ಲಿ ಮಾತ್ರ ಮೆಂತ್ಯೆ ಕಾಳುಗಳಿಂದ ದೂರವಿರಬೇಕು. ಇದು ಗರ್ಭದಲ್ಲಿರುವ ಶಿಶುವಿಗೆ ಸಮಸ್ಯೆಯನ್ನು ತಂದೊಡ್ಡಬಹುದು.

ಗರ್ಭಿಣಿಯರು ಕಡ್ಡಾಯವಾಗಿ ಪಾಲಿಸಬೇಕಾದ ಆಹಾರ ಕ್ರಮಗಳಿವು

​​ಅನಾನಸ್​

ಪೈನಾಪಲ್‌ ಅಥವಾ ಅನಾನಸ್‌ ಪಪ್ಪಾಯಿ ಹಣ್ಣಿನಂತೆ ಬಹಳ ಅಪಾಯಕಾರಿಯಾಗಿದೆ. ಗರ್ಭಧಾರಣೆಯ ಮೊದಲ ತ್ರೈಮಾಸಿಕದಲ್ಲಿ ಅನಾನಸ್‌ ಹಣ್ಣು ತಿನ್ನಲು ಶಿಫಾರಸು ಮಾಡುವುದಿಲ್ಲ. ಈ ರುಚಿಕರವಾದ ಹಣ್ಣು ಬ್ರೋಮೆಲಿನ್‌ ಎಂಬ ಕಿಣ್ವವನ್ನು ಹೊಂದಿರುತ್ತದೆ.

ಇದು ಗರ್ಭಕಂಠವನ್ನು ಮೃದುಗೊಳಿಸಿ, ಗರ್ಭಪಾತವನ್ನು ಪ್ರಚೋದಿಸುತ್ತದೆ.

ಹಸಿ ಮೊಟ್ಟೆ

ಹಸಿ ಮೊಟ್ಟೆ ಅಥವಾ ಸರಿಯಾಗಿ ಬೇಯಿಸದ ಮೊಟ್ಟೆಯನ್ನು ಸೇವಿಸುವ ಅಭ್ಯಾಸ ನಿಮಗಿದ್ದರೆ ಗರ್ಭಾವಸ್ಥೆಯಯಲ್ಲಿ ತ್ಯಜಿಸಿ. ಏಕೆಂದರೆ ಇದು ನಿಮ್ಮ ಹಾಗು ಮಗುವಿನ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಆದಷ್ಟು ಬೇಯಿಸಿದ ಮೊಟ್ಟೆಗಳನ್ನು ಸೇವಿಸಿ. ಹಸಿ ಮೊಟ್ಟೆಗಳು ಸಾಲ್ಮೊನೆಲ್ಲಾ ವೈರಸ್ ಅನ್ನು ಒಳಗೊಂಡಿರುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತವೆ.

ಇದನ್ನೂ ಓದಿ: ಒಂದು ತಿಂಗಳ ಗರ್ಭಿಣಿಯರಲ್ಲಿ ಭ್ರೂಣದ ಬೆಳವಣಿಗೆ ಹೇಗಿರುತ್ತದೆ?

ಈ ಆಹಾರಗಳು ಬೇಡವೇ ಬೇಡ

ಈ ಮೇಲಿನ 5 ಆಹಾರಗಳ ಜೊತೆ ಉಪ್ಪಿನಿಂದ ಕೂಡಿದ ಸಾಲ್ಟ್‌ ಬಿಸ್ಕೇಟ್‌, ಚಿಪ್ಸ್‌ಗಳನ್ನು ಸೇವಿಸದಿರಿ.

ಸಿಹಿ ತಿಂಡಿಗಳನ್ನು ತಿನ್ನುವುದನ್ನು ನಿಯಂತ್ರಣದಲ್ಲಿಡಿ. ಏಕೆಂದರೆ ಇದು ಗರ್ಭಾವಸ್ಥೆಯ ಮಧುಮೇಹಕ್ಕೆ ಕಾರಣವಾಗಬಹುದು.

ಬೀದಿ ಬದಿಯ ಆಹಾರಗಳಿಂದ ದೂರವಿರಿ.

ಸಮುದ್ರಾಹಾರಗಳು ದೇಹದಲ್ಲಿ ಉಷ್ಣತೆಯನ್ನು ಹೆಚ್ಚಿಸುವ ಕಾರಣ ಮಿತವಾಗಿ ಸೇವಿಸಿ.

ಚಿಕನ್‌, ಬದನೆಕಾಯಿ, ಕರಿ ದ್ರಾಕ್ಷಿ ಬೇಡ

ಮೈದಾದಿಂದ ತಯಾರಿಸಿದ ಯಾವುದೇ ಆಹಾರಗಳು ಹಾಗು ನುಗ್ಗೆಕಾಯಿ, ಮೂಲಂಗಿ ಇನ್ನು ಅನೇಕ ತರಕಾರಿಗಳು ಗರ್ಭಾವಸ್ಥೆಯಲ್ಲಿ ಕೈಬಿಡಿ.

ಇದನ್ನೂ ಓದಿ: 3 ತಿಂಗಳ ಗರ್ಭಿಣಿಯರು ಸಂಭೋಗದಲ್ಲಿ ಪಾಲ್ಗೊಳ್ಳಬಹುದೇ?

ಲೇಖಕರ ಬಗ್ಗೆ
ಸೌಮ್ಯ ಟೇಮ್ಕರ್
ಸೌಮ್ಯ ಟೇಮ್ಕರ್ ಅವರು ತಮ್ಮ ಉದ್ಯಮದಲ್ಲಿ 4 ವರ್ಷಗಳ ಅನುಭವ ಹೊಂದಿರುವ ಮಾಧ್ಯಮ ವೃತ್ತಿಪರರಾಗಿದ್ದಾರೆ. ಪ್ರಯಾಣಕ್ಕೆ ಸಂಬಂಧಿಸಿದ ಲೇಖನವನ್ನು ಅಚ್ಚುಕಟ್ಟಾಗಿ ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದಾರೆ. ಸೌಮ್ಯಾ ಕಥೆಗಳನ್ನು ಹೇಳುವ ಹಾಗು ಪ್ರಯಾಣದ ಅನುಭವವನ್ನು ತಮ್ಮ ಲೇಖನದ ಮೂಲಕ ಹಂಚಿಕೊಳ್ಳಲು ಹೆಚ್ಚು ಇಷ್ಟ ಪಡುತ್ತಾರೆ. ತನ್ನ ವೃತ್ತಿಜೀವನದ ಅವಧಿಯಲ್ಲಿ, ಪ್ರಪಂಚದ ಅನೇಕ ಸ್ಥಳಗಳ ಬಗ್ಗೆ ರಸವತ್ತಾದ ಲೇಖನಗಳನ್ನು ಓದುಗರಿಗಾಗಿ ಬರೆಯುತ್ತಾ ಬಂದಿದ್ದಾರೆ. ಪ್ರವಾಸದಲ್ಲಿ ಹೆಚ್ಚಿನ ಆಸಕ್ತಿ ಹೊಂದಿರುವ ಸೌಮ್ಯ, ಪ್ರಯಾಣಕ್ಕೆ ಸಂಬಂಧಿಸಿದಂತೆ ಕೆಲವೊಂದು ಟಿಪ್ಸ್‌ಗಳನ್ನು ಕೂಡ ಹಂಚಿಕೊಳ್ಳುತ್ತಾರೆ. ವಾಸ್ತವವಾಗಿ, ಆಕೆಯ ಬರವಣಿಗೆಯ ಶೈಲಿಯು ಸ್ಪಷ್ಟ ಮತ್ತು ನಿಖರತೆಯನ್ನು ಹೊಂದಿರುತ್ತದೆ. ಓದುಗರನ್ನು ತನ್ನ ಬರವಣಿಗೆಯಿಂದ ಸೆಳೆಯುವ ವಿಶಿಷ್ಟ ಸಾಮರ್ಥ್ಯ ಆಕೆಯಲ್ಲಿದೆ. ಪ್ರಯಾಣದ ಉತ್ಸಾಹಿಗಳಿಗೆ ಅವಳ ಲೇಖನಗಳನ್ನು ಓದಲೇಬೇಕು ಎನ್ನುವ ಭಾವ ಉಂಟಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಸೌಮ್ಯಾ ಕೇವಲ ಪ್ರವಾಸಗಳಲ್ಲಿ ಮಾತ್ರ ಅತ್ಯಾಸಕ್ತಿ ಹೊಂದಿರುವ ವ್ಯಕ್ತಿಯಲ್ಲ, ಬದಲಾಗಿ ಕಾದಂಬರಿಗಳನ್ನು ಓದುವುದನ್ನು ಆನಂದಿಸುತ್ತಾಳೆ. ಜೊತೆಗೆ ಪ್ರತಿನಿತ್ಯ ನಡೆಯುವ ರಾಜಕೀಯ ಸುದ್ದಿಗಳ ಮಾಹಿತಿಗಳನ್ನು ಸಂಗ್ರಹಿಸುತ್ತಾಳೆ. ಒಟ್ಟಾರೆ ಸೌಮ್ಯಾ ಜೀವನದ ಬಗ್ಗೆ ವಿಶಿಷ್ಟ ದೃಷ್ಟಿಕೋನವನ್ನು ಹೊಂದಿರುವ ಸುಸಂಬದ್ಧ ವ್ಯಕ್ತಿ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ