ಆ್ಯಪ್ನಗರ

ದೂಧಸಾಗರ ಬಳಿ ಗುಡ್ಡ ಕುಸಿತ; ರೈಲು ಸಂಚಾರ ಅಸ್ತವ್ಯಸ್ತ

ಬೆಳಗಾವಿ: ದೂಧಸಾಗರ ಮತ್ತು ಸೋನೊಲಿಂ ರೈಲು ನಿಲ್ದಾಣಗಳ ನಡುವಿನ ಸುರಂಗ ಮಾರ್ಗ ...

Vijaya Karnataka 8 Sep 2019, 5:00 am
ಬೆಳಗಾವಿ: ದೂಧಸಾಗರ ಮತ್ತು ಸೋನೊಲಿಂ ರೈಲು ನಿಲ್ದಾಣಗಳ ನಡುವಿನ ಸುರಂಗ ಮಾರ್ಗ ಬಳಿ ಶನಿವಾರ ಗುಡ್ಡ ಕುಸಿದು ಗೋವಾ-ಬೆಳಗಾವಿ ರೈಲು ಸಂಚಾರ ಅಸ್ತವ್ಯಸ್ತಗೊಂಡಿದೆ.
Vijaya Karnataka Web 7TRAIN101148


ಗುಡ್ಡ ಕುಸಿದ ಹಿನ್ನೆಲೆಯಲ್ಲಿ ಬೆಳಗಾವಿ ಮೂಲಕ ಸಂಚರಿಸಬೇಕಿದ್ದ ವಾಸ್ಕೋ-ಹಜತರ್‌ ನಿಜಾಮುದ್ದೀನ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರವನ್ನು ಮಡಗಾಂವ, ರೋಹಾ, ಕಲ್ಯಾಣ್‌ ಮೂಲಕ ಪ್ರಯಾಣ ಬೆಳೆಸಿದೆ. ಈಚೆಗಷ್ಟೇ ಹೊಸದಾಗಿ ಆರಂಭಗೊಂಡಿದ್ದ ದೂಧಸಾಗರ ಮೂಲಕ ಸಂಚರಿಸುವ ವಾಸ್ಕೋಡಗಾಮಾ-ಬೆಳಗಾವಿ ವಿಶೇಷ ರೈಲು ಕೂಲಂವರೆಗೆ ಮಾತ್ರ ಸಂಚರಿಸಿದೆ. ಹಳಿ ಮೇಲೆ ಬಿದ್ದ ಮಣ್ಣು ತೆರವುಗೊಳಿಸುವ ಕಾರ್ಯ ಚಾಲನೆಯಲ್ಲಿದ್ದು ಭಾನುವಾರ ಬೆಳಗ್ಗೆಯಿಂದಲೇ ಎಲ್ಲ ರೈಲುಗಳು ಎಂದಿನಂತೆ ಸಂಚರಿಸುತ್ತವೆ ಎಂದು ಹುಬ್ಬಳ್ಳಿ ರೈಲ್ವೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ