ಕಮಲಾಪುರ (ಬಳ್ಳಾರಿ); ಇಲ್ಲಿನ ಐತಿಹಾಸಿಕ ಕೆರೆಯ ಬಳಿ, ಸೋಮವಾರ, ಬೈಕ್ಗೆ ಟಾಟಾಏಸ್ ಡಿಕ್ಕಿ ಹೊಡೆದು, ದಂಪತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಹೊಸಪೇಟೆ ತಾಲೂಕಿನ ಕಂಪ್ಲಿ ಸಮೀಪದ ಶಿಬಿರದಿನ್ನೆ ಗ್ರಾಮದ ರೆಹಮಾನ್ಸಾಬ್(33) ಹಾಗೂ ಅವರ ಪತ್ನಿ ಹೊನ್ನೂರ್ಬೀ(27) ಮೃತರು. ಅವರ ಜತೆಗಿದ್ದ ಮಗ ಆಸೀಫ್ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಮೂವರು ಹೊಸಪೇಟೆಯಿಂದ ತಮ್ಮ ಸ್ವಗ್ರಾಮಕ್ಕೆ ಬೈಕ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಟಾಟಾ ಏಸ್ ಡಿಕ್ಕಿ ಹೊಡೆದಿದೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟಾಟಾಏಸ್ನ ಚಾಲಕ ವೆಂಕಟಾಪುರ ಕ್ಯಾಂಪ್ ನಿವಾಸಿ ಸಂತೋಷ್ನನ್ನು ಬಂಧಿಸಲಾಗಿದೆ ಎಂದು ಪಿಎಸ್ಐ ವೈ.ಎಸ್.ಹನುಮಂತಪ್ಪ ತಿಳಿಸಿದ್ದಾರೆ.
ಹೊಸಪೇಟೆ ತಾಲೂಕಿನ ಕಂಪ್ಲಿ ಸಮೀಪದ ಶಿಬಿರದಿನ್ನೆ ಗ್ರಾಮದ ರೆಹಮಾನ್ಸಾಬ್(33) ಹಾಗೂ ಅವರ ಪತ್ನಿ ಹೊನ್ನೂರ್ಬೀ(27) ಮೃತರು. ಅವರ ಜತೆಗಿದ್ದ ಮಗ ಆಸೀಫ್ಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಮೂವರು ಹೊಸಪೇಟೆಯಿಂದ ತಮ್ಮ ಸ್ವಗ್ರಾಮಕ್ಕೆ ಬೈಕ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಟಾಟಾ ಏಸ್ ಡಿಕ್ಕಿ ಹೊಡೆದಿದೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟಾಟಾಏಸ್ನ ಚಾಲಕ ವೆಂಕಟಾಪುರ ಕ್ಯಾಂಪ್ ನಿವಾಸಿ ಸಂತೋಷ್ನನ್ನು ಬಂಧಿಸಲಾಗಿದೆ ಎಂದು ಪಿಎಸ್ಐ ವೈ.ಎಸ್.ಹನುಮಂತಪ್ಪ ತಿಳಿಸಿದ್ದಾರೆ.