Please enable javascript.Tesla Cyber Truck Car,‘ಟೆಸ್ಲಾ ಸೈಬರ್ ಟ್ರಕ್’ ಕಾರಿನಲ್ಲಿ ಕುಳಿತು ಖುಷಿಪಟ್ಟ ನಾಗತಿಹಳ್ಳಿ ಚಂದ್ರಶೇಖರ್ - film director nagathihalli chandrashekhar drives tesla cyber truck - Vijay Karnataka

‘ಟೆಸ್ಲಾ ಸೈಬರ್ ಟ್ರಕ್’ ಕಾರಿನಲ್ಲಿ ಕುಳಿತು ಖುಷಿಪಟ್ಟ ನಾಗತಿಹಳ್ಳಿ ಚಂದ್ರಶೇಖರ್

Authored byಚೇತನ್ ಓ.ಆರ್. | Vijaya Karnataka Web 18 May 2024, 11:50 am
Subscribe

ನಾಗತಿಹಳ್ಳಿ ಚಂದ್ರಶೇಖರ್ ಅವರು, ಟೆಸ್ಲಾ ಕಂಪನಿಯ ಸೈಬರ್ ಟ್ರಕ್ ಮಾದರಿಯ ಕಾರೊಂದರಲ್ಲಿ ಕುಳಿತಿರುವ ಫೋಟೋಗಳನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಸಲಿಗೆ, ಈ ಶೋರೂಂ ಎಲ್ಲಿಯದ್ದು ಎಂದು ಅವರು ಹೇಳಿಲ್ಲ. ಬಾಲಕನಾಗಿದ್ದಾಗ ಅವರು, ತಮ್ಮ ಊರ ಹತ್ತಿರದ ಹೆದ್ದಾರಿಯಲ್ಲಿ ಹೋಗುವ ಲಾರಿಗಳನ್ನು ನೋಡಿ ತಾವೂ ಲಾರಿ ಡ್ರೈವರ್ ಆಗಬೇಕು ಎಂದು ಅಂದುಕೊಂಡಿದ್ದರಂತೆ. ಟ್ರಕ್ ಗಳ ಮೇಲೆ ಆಲ್ ಇಂಡಿಯಾ ಪರ್ಮಿಟ್ ಎಂದು ಬರೆದಿದ್ದನ್ನು ನೋಡಿ ಹಾಗೆ ಅಂದುಕೊಂಡಿದ್ದರಂತೆ. ಆ ಆಸೆ ಮೊನ್ನೆ ಈಡೇರಿತು. ನಾನೀಗ ಟ್ರಕ್ ನಲ್ಲಿ (ಟೆಸ್ಲಾ ಸೈಬರ್ ಟ್ರಕ್ ಕಾರು) ಕುಳಿತಿದ್ದೇನೆ ಎಂದು ಹೇಳಿದ್ದಾರೆ. ಭಾರತದಲ್ಲಿ ಈ ಕಾರಿನ ಬೆಲೆ ಬಹುಶಃ 50.2 ಲಕ್ಷ ರೂ. ಆಗಬಹುದೆಂದು ಅಂದಾಜಿಸಲಾಗಿದೆ.

ಹೈಲೈಟ್ಸ್‌:

  • ಟೆಸ್ಲಾ ಸೈಬರ್ ಕಾರಿನಲ್ಲಿ ಕುಳಿತು ಖುಷಿಪಟ್ಟ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್.
  • ಬಾಲಕನಾಗಿದ್ದಾಗ ಟ್ರಕ್ ಡ್ರೈವರ್ ಆಗಬೇಕೆಂದು ಕನಸು ಕಂಡಿದ್ದೆ; ಈಗ ಅದು ನೆರವೇರಿತು ಎಂದು ಹೇಳಿಕೊಂಡಿರುವ ನಾಗತಿಹಳ್ಳಿ.
  • ಟ್ವಿಟರ್ ನಲ್ಲಿರುವ ಅವರ ಈ ಪೋಸ್ಟ್ ಗೆ ಅನೇಕರಿಂದ ಉತ್ತಮ ಪ್ರತಿಕ್ರಿಯೆ.
Film director Nagathihalli Chandrashekhar drives Tesla Cyber Truck
ಟೆಸ್ಲಾ ಸೈಬರ್ ಕಾರಿನೊಂದಿಗೆ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್.
ಬೆಂಗಳೂರು: ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರು ಇತ್ತೀಚೆಗೆ ಟೆಸ್ಲಾ ಕಾರು ಶೋರೂಂಗೆ ಹೋಗಿ, ಅಲ್ಲಿ ಪ್ರದರ್ಶಕ್ಕೆ ಇಡಲಾಗಿರುವ ಟೆಸ್ಲಾ ಸೈಬರ್ ಟ್ರಕ್ ಕಾರಿನಲ್ಲಿ ಕುಳಿತು ಅದನ್ನು ಡ್ರೈವ್ ಮಾಡಿ ಎಂಜಾಯ್ ಮಾಡಿದ್ದಾರೆ. ಆದರೆ, ಈ ಶೋರೂಂ ಎಲ್ಲಿಯದ್ದು, ಏನು ಎತ್ತ ಎಂಬುದರ ಬಗ್ಗೆ ಅವರು ಮಾಹಿತಿ ಹಂಚಿಕೊಂಡಿಲ್ಲ. ಆದರೂ, ಈ ಪೋಟೋವನ್ನು ಅಮೆರಿಕದಲ್ಲಿರುವ ಟೆಸ್ಲಾ ಶೋರೂಂ ಒಂದರಲ್ಲಿ ಕ್ಲಿಕ್ಕಿಸಿರಬಹುದು ಎಂದೆನ್ನಿಸುತ್ತದೆ.
ಕಾರಿನಲ್ಲಿ ಕುಳಿತುಕೊಂಡಿರುವ ಫೋಟೋಗಳೊಂದಿಗೆ ಕಾರಿನಲ್ಲಿ ಕುಳಿತಿರುವ ತಮ್ಮ ಅನುಭವವನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ಹೀಗೆ ಹಂಚಿಕೊಂಡಿದ್ದಾರೆ. “ಬಾಲಕನಾಗಿದ್ದಾಗ ಊರ ಬದಿ ಹೆದ್ದಾರಿಯಲ್ಲಿ ಹೋಗುತ್ತಿದ್ದ ‘ಆಲ್ ಇಂಡಿಯಾ ಪರ್ಮಿಟ್ ಟ್ರಕ್’ ಗಳನ್ನು ನೋಡಿ ‘ಟ್ರಕ್ ಡ್ರೈವರ್’ ಆಗಬೇಕೆಂದು ಆಸೆಪಟ್ಟಿದ್ದೆ. ಅದು ದೇಶ ಸುತ್ತುವ ಆಸೆಯಾಗಿತ್ತು. ಈ ಆಸೆ ಮೊನ್ನೆ ಭಾಗಶಃ ಈಡೇರಿತು. ಇದು ಇಲಾನ್ ಮಸ್ಕ್ ನ ‘ಸೈಬರ್ ಟ್ರಕ್’!’’ ಎಂದು ಅವರು ಹೇಳಿದ್ದಾರೆ.ಮತ್ತೊಬ್ಬರು, “ಹಿಂದಗಡೆ 'horn ok please' ಹಾಕಿಸಿ ಬಿಡಿ …’’ ಎಂದು ಹಾಸ್ಯಚಟಾಕಿ ಹಾಕಿಸಿದ್ದಾರೆ.



ಕ್ಯಾಪಿಟಲಿಸ್ಟ್ ಗೆ ಬೆಂಬಲ ಬೇಡ ಅಂದ ನೆಟ್ಟಿಗರು!

ನಾಗತಿಹಳ್ಳಿಯವರು ಚಿತ್ರ ನಿರ್ದೇಶಕರಾಗಿ ಮಾತ್ರವಲ್ಲದೆ, ಸಾಮಾಜಿಕ ಚಿಂತಕರಾಗಿಯೂ ಗುರುತಿಸಿಕೊಂಡಿದ್ದಾರೆ. ಆ ಹಿನ್ನೆಲೆಯಲ್ಲಿ, ಕೆಲವು ಟ್ವಿಟರ್ ದಾರರು, ತಮ್ಮ ರಾಜಕೀಯ ಆಧಾರಿತ ವಿಶ್ಲೇಷಣೆಯನ್ನು ನಾಗತಿಹಳ್ಳಿಯವರ ಟೆಸ್ಲಾ ಕಾರು ಪೋಸ್ಟ್ ನ ಕಮೆಂಟ್ಸ್ ಸೆಕ್ಷನ್ ನಲ್ಲಿ ಮಂಡಿಸಿದ್ದಾರೆ. ರಾಘವೇಂದ್ರ ಉಡುಪ ಎಂಬುವರು, “ಎಲಾನ್ ಮಸ್ಕ್ ಒಬ್ಬ ಕ್ಯಾಪಿಟಲಿಸ್ಟ್ ಅಲ್ವ? ಅದ್ಹೆಂಗೆ ಬೇರೆ ದೇಶದವನಾದರೆ ಬಂಡವಾಳಗಾರ ಇಷ್ಟ ಆಗ್ತಾರೆ. ನಿಮ್ಮದು ದ್ವಂದ್ವ ನಿಲುವು’’ ಎಂದು ಹೇಳಿದ್ದಾರೆ. ಪ್ರಾಣೇಶ್ ಎಂಬುವರು “Capitalist support ಮಾಡೋದು ಬೇಡ’’ ಎಂದು ತಿಳಿಹೇಳಿದ್ದಾರೆ. ವಶಿಷ್ಟ 1971 ಎಂಬ ಖಾತೆಯಿಂದ “ಸರ್, ಎಲಾನ್ ಮಸ್ಕ್ ಅವರು ಬಂಡವಾಳದಾರರಲ್ಲವೇ ? ಬಂಡವಾಳಶಾಹಿ..?’’ ಎಂದು ಪ್ರಶ್ನಿಸಿದ್ದಾರೆ.

ಭಾರತದಲ್ಲಿ ಟೆಸ್ಲಾ ಸೈಬರ್ ಟ್ರಕ್ ಬೆಲೆ ಎಷ್ಟು ಗೊತ್ತೇ?

ಸೈಬರ್ ಟ್ರಕ್ ಹೆಸರಿನೊಂದಿಗೆ ಟೆಸ್ಲಾ ಕಂಪನಿ ಈಗಾಗಲೇ ಹಲವಾರು ಕಾರುಗಳನ್ನು ಉತ್ಪಾದಿಸಿ ಮಾರಾಟ ಮಾಡುತ್ತಿದೆ. ನಾಗತಿಹಳ್ಳಿಯವರು ತಮ್ಮ ಫೋಟೋಗಳಲ್ಲಿ ಕುಳಿತಿರುವ ಕಾರು ಸೈಬರ್ ಟ್ರಕ್ ನ್ಯೂ ಎಂಬ ಮಾಡೆಲ್ ಆಗಿದ್ದು ಅದಿನ್ನೂ ಭಾರತಕ್ಕೆ ಕಾಲಿಟ್ಟಿಲ್ಲ. ಸದ್ಯವೇ ಭಾರತಕ್ಕೆ ಕಾಲಿಡುವ ಸಾಧ್ಯತೆಗಳಿವೆ. ಇದು ಸಂಪೂರ್ಣ ವಿದ್ಯುತ್ ಚಾಲಿತ ಕಾರು ಆಗಿದ್ದು, ಸಂಪೂರ್ಣವಾಗಿ ವಿದ್ಯುನ್ಮಾನ ಸಲಕರಣೆಗಳಿಂದ ನಿಯಂತ್ರಿಸಬಹುದಾಗಿದೆ. ಭಾರತದಲ್ಲಿ ಇದರ ಬೆಲೆ ಪ್ರಾಯಶಃ 50.2 ಲಕ್ಷ ರೂ. ಆಗಿರಲಿದೆ ಎಂದು ಹೇಳಲಾಗಿದೆ.

Nagathihalli Chandrashekhar: ಕೆಎಸ್‌ಡಿಎಲ್‌ ಉತ್ಪಾದಿಸುವ ಮೈಸೂರು ಸ್ಯಾಂಡಲ್‌ ಸೋಪ್‌ ಬಳಸಲೂ ಹಿಂಜರಿಕೆ ಪಡುವಂತಾಗಿದೆ- ನಾಗತಿಹಳ್ಳಿ ಚಂದ್ರಶೇಖರ್‌

ಡಾ. ಮಂಜುನಾಥ್ ಬಗ್ಗೆ ಬೇಸರಗೊಂಡಿದ್ದ ನಾಗತಿಹಳ್ಳಿ

ಸದ್ಯಕ್ಕೆ ಸಿನಿಮಾ ಲೋಕದಿಂದ ದೂರ ಉಳಿದಿರುವ ನಾಗತಿಹಳ್ಳಿ ಚಂದ್ರಶೇಖರ್ ಅವರು, ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕರಾಗಿ, ಆ ಆಸ್ಪತ್ರೆಯನ್ನು ಅಂತಾರಾಷ್ಟ್ರೀಯ ಮಟ್ಟದ ಖ್ಯಾತಿಗೊಳಗಾಗುವಂತೆ ಮಾಡಿದ್ದ ಡಾ. ಮಂಜುನಾಥ್ ಅವರು ಇತ್ತೀಚೆಗೆ ರಾಜಕೀಯ ಪ್ರವೇಶಿಸಿದ್ದಕ್ಕೆ ಬೇಸರಗೊಂಡಿದ್ದರು. ಅಂಥ ಉತ್ತಮರು ರಾಜಕೀಯಕ್ಕೆ ಬರಬಾರದು ಎಂದು ತಮ್ಮ ಮನಸ್ಸಿನಾಳದ ಮಾತುಗಳನ್ನು ಟ್ವೀಟರ್ ಮೂಲಕ ಹಂಚಿಕೊಂಡಿದ್ದರು. ಡಾ. ಮಂಜುನಾಥ್ ಅವರು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ ಪಡೆದು ಚುನಾವಣಾ ಕಣಕ್ಕೆ ಇಳಿದಿದ್ದರು. ಅವರಿಗೆ ಹಾಲಿ ಸಂಸದ ಡಿ.ಕೆ. ಸುರೇಶ್ ಅವರು ಪ್ರಬಲ ಎದುರಾಳಿಯಾಗಿದ್ದಾರೆ. ಆ ಕ್ಷೇತ್ರದಲ್ಲಿ ಏ. 26ರಂದು ಮತದಾನವಾಗಿದ್ದು, ಜೂ. 4ರಂದು ಫಲಿತಾಂಶ ಹೊರಬೀಳಲಿದೆ.
ಚೇತನ್ ಓ.ಆರ್.
ಲೇಖಕರ ಬಗ್ಗೆ
ಚೇತನ್ ಓ.ಆರ್.
ಪ್ರಸ್ತುತ, ವಿಜಯ ಕರ್ನಾಟಕ ವೆಬ್ ನಲ್ಲಿ ಪತ್ರಕರ್ತನಾಗಿ 2022ರಿಂದ ಪತ್ರಕರ್ತನಾಗಿ ಸೇವೆ ಸಲ್ಲಿಸುತ್ತಿದ್ದಾರೆ. 2007ರಲ್ಲಿ ತುಮಕೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ 5ನೇ ರ‍್ಯಾಂಕ್ ನೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರುವ ಇವರು ಮೈಸೂರು ವಿವಿಯಿಂದ ಪತ್ರಿಕೋದ್ಯಮದಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ. ಜಿಲ್ಲಾ ಸುದ್ದಿಗಳಿಂದ ಹಿಡಿದು ಕ್ರೀಡೆ, ದೇಶ- ವಿದೇಶ, ಸಿನಿಮಾ, ವಿಜ್ಞಾನ- ತಂತ್ರಜ್ಞಾನ ಇತ್ಯಾದಿ ವೈವಿಧ್ಯಯಮ ವಿಷಯಗಳ ಬಗ್ಗೆ ಬರೆಯುವ ಇವರಿಗೆ, ನಾನಾ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಈವರೆಗೆ 16 ವರ್ಷ ಕೆಲಸ ಮಾಡಿದ ಅನುಭವವಿದೆ. ಫೋಟೋಗ್ರಫಿ ಇವರ ಅಚ್ಚುಮೆಚ್ಚಿನ ಹವ್ಯಾಸ. ಸಿನಿಮಾ, ಸಾಕ್ಷ್ಯಚಿತ್ರ, ಸಾಹಿತ್ಯ, ವಿಡಿಯೋ ಸಂಕಲನ, ಪತ್ರಿಕೆ ಪುಟ ವಿನ್ಯಾಸ, ಹಾಡುಗಾರಿಕೆ, ಚಿತ್ರಕಲೆ, ಅನಿಮೇಶನ್, ಸಂಗೀತದಲ್ಲಿಯೂ ಆಸಕ್ತಿಯಿದೆ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ