ಆ್ಯಪ್ನಗರ

ಗುರುಗಳ ಮತ ಹಾಕಿಸಲು ಶಿಷ್ಯಂದಿರ ದುಂಬಾಲು; ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಶಾಂತಿಯುತ ಮತದಾನ

ಬೆಂಗಳೂರು ಶಿಕ್ಷಕ ಮತಕ್ಷೇತ್ರದಲ್ಲಿ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಹುತೇಕ ಮತಗಟ್ಟೆಗಳ ಬಳಿ ಆಯಾ ಪಕ್ಷಗಳ ಕಾರ್ಯಕರ್ತರು ಶಿಕ್ಷಕರ ಬಳಿ ಭಕ್ತಿಭಾವದಿಂದಲೇ ಮತ ಕೇಳುತ್ತಿದ್ದರು. ಹಿರಿಯ ಶಿಕ್ಷಕರ ಬಳಿ ತಮ್ಮನ್ನು ನಿಮ್ಮ ಶಿಷ್ಯರೆಂದು ಪರಿಚಯಿಸಿಕೊಂಡು ಮತ ಹಾಕುವಂತೆ ವಿನಂತಿಸಿ ಮತಗಟ್ಟೆ ಬಳಿವರೆಗೂ ಬಿಟ್ಟು ಬರುತ್ತಿದ್ದರು. ಕೆಲವೆಡೆ ಕಾರ್ಯಕರ್ತರು ಶಿಕ್ಷಕರ ಬಳಿ ಹೆಚ್ಚು ಮಾತನಾಡದೆ ಕೈಮುಗಿದೇ ಮತಯಾಚಿಸಿದರು.

Vijaya Karnataka Web 29 Oct 2020, 6:49 am
ಬೆಂಗಳೂರು: ಪ್ರತಿಷ್ಠಿತ ಬೆಂಗಳೂರು ಶಿಕ್ಷಕರ ಕ್ಷೇತ್ರದ ಮತದಾನದ ವೇಳೆ ಶಿಷ್ಯಂದಿರು ತಮ್ಮ ಗುರುಗಳ ಮತವನ್ನು ಆಯಾ ಪಕ್ಷಗಳ ಅಭ್ಯರ್ಥಿಗಳ ಪರ ಚಲಾಯಿಸಲು ದುಂಬಾಲು ಬಿದ್ದ ಪ್ರಸಂಗ ಬುಧವಾರ ನಡೆಯಿತು.
Vijaya Karnataka Web Voting


ನಗರದ 28 ವಿಧಾನಸಭೆ ಮತಕ್ಷೇತ್ರಗಳ ವ್ಯಾಪ್ತಿಯಲ್ಲಿ ಬೆಳಗ್ಗಿನಿಂದಲೇ ಮತದಾನ ಚುರುಕಿನಿಂದ ಸಾಗಿತು. ಮಧ್ಯಾಹ್ನದ ವೇಳೆ ಹೆಚ್ಚಿನವರು ತಮ್ಮ ಮತ ಚಲಾಯಿಸಿದ್ದರು. ಅನ್ಯ ಚುನಾವಣೆಗಳಲ್ಲಿ ಕೊನೆಯ ಒಂದು ಗಂಟೆಯಲ್ಲಿ ಹೆಚ್ಚಿನ ಮತದಾನವಾಗುವುದು ವಾಡಿಕೆ. ಆದರೆ, ವಿಧಾನ ಪರಿಷತ್‌ ಪ್ರತಿನಿಧಿಸುವ ಶಿಕ್ಷಕರ ಚುನಾವಣೆಯಲ್ಲಿ ಕೊನೆ ಗಳಿಗೆಯಲ್ಲಿ ಮತದಾರರು ಮತಗಟ್ಟೆಗೆ ಆಗಮಿಸಿದ್ದು ಕಡಿಮೆ. ಇಡೀ ವಿಧಾನಸಭೆ ಕ್ಷೇತ್ರಕ್ಕೆ ಅಲ್ಲಿನ ಮತದಾರರ ಸಂಖ್ಯೆ ಆಧರಿಸಿ 1-2 ಮತಗಟ್ಟೆಗಳನ್ನು ಸ್ಥಾಪಿಸಿದ್ದರಿಂದ ಒಂದೆಡೆ ಶಿಕ್ಷಕರು ಆಗಮಿಸಿ ಹಕ್ಕು ಚಲಾಯಿಸಿದರು.

ಮೈತ್ರಿ ಸರಕಾರದಲ್ಲಿ 'ಕೈ' ಶಾಸಕರೊಬ್ಬರು ಟೇಬಲ್‌ ಮೇಲೆ ಪತ್ರ ಎಸೆದಿದ್ದರು: ಕುಮಾರಸ್ವಾಮಿ ಬೇಸರ

ಬಹುತೇಕ ಮತಗಟ್ಟೆಗಳ ಬಳಿ ಆಯಾ ಪಕ್ಷಗಳ ಕಾರ್ಯಕರ್ತರು ಶಿಕ್ಷಕರ ಬಳಿ ಭಕ್ತಿಭಾವದಿಂದಲೇ ಮತ ಕೇಳುತ್ತಿದ್ದರು. ಹಿರಿಯ ಶಿಕ್ಷಕರ ಬಳಿ ತಮ್ಮನ್ನು ನಿಮ್ಮ ಶಿಷ್ಯರೆಂದು ಪರಿಚಯಿಸಿಕೊಂಡು ಮತ ಹಾಕುವಂತೆ ವಿನಂತಿಸಿ ಮತಗಟ್ಟೆ ಬಳಿವರೆಗೂ ಬಿಟ್ಟು ಬರುತ್ತಿದ್ದರು. ಕೆಲವೆಡೆ ಕಾರ್ಯಕರ್ತರು ಶಿಕ್ಷಕರ ಬಳಿ ಹೆಚ್ಚು ಮಾತನಾಡದೆ ಕೈಮುಗಿದೇ ಮತಯಾಚಿಸಿದರು. ಮತಗಟ್ಟೆ ಕೇಂದ್ರದ ಹೊರಗೆ ಶಿಕ್ಷಕ ಸಮುದಾಯಕ್ಕಿಂತ ಶಿಷ್ಯಂದಿರ ಗಡಿಬಿಡಿ ಹೆಚ್ಚಾಗಿತ್ತು.

ದಯವಿಟ್ಟು ನನ್ನ ತಾಯಿ ಬಗ್ಗೆ ಮಾತನಾಡಬೇಡಿ ಎಂದು ಕಣ್ಣೀರು ಹಾಕಿದ ಬಿಜೆಪಿ ಅಭ್ಯರ್ಥಿ ಮುನಿರತ್ನ..!

ಗುಂಪುಗಳಲ್ಲಿಆಗಮಿಸಿದ ಶಿಕ್ಷಕಿಯರು:
ಬೆಂಗಳೂರು ಶಿಕ್ಷಕ ಮತಕ್ಷೇತ್ರದಲ್ಲಿ ಮಹಿಳಾ ಮತದಾರರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಬಹುತೇಕ ಮತಗಟ್ಟೆಗಳ ಬಳಿ ಶಿಕ್ಷಕಿಯರು ಸಾಲುಗಟ್ಟಿ ನಿಂತಿದ್ದು ಕಂಡಿತು. ಒಂದೇ ಸ್ಥಳದಲ್ಲಿ ಮತಗಟ್ಟೆ ಇದ್ದ ಕಾರಣ ಹೆಚ್ಚಿನ ಶಿಕ್ಷಕಿಯರು ಗುಂಪುಗಳಲ್ಲಿ ಆಗಮಿಸಿ ಮತ ಚಲಾಯಿಸಿದರು. ದೂರದ ಸ್ಥಳಗಳಲ್ಲಿದ್ದ ಮತದಾರರನ್ನು ವಾಹನಗಳ ಮೂಲಕ ಕರೆತಂದು ಮತ ಹಾಕಿಸಿದ ಘಟನೆಗಳೂ ನಡೆದವು. ಒಟ್ಟಾರೆ ಚುನಾವಣೆ ಶಾಂತಿಯುತವಾಗಿ ನಡೆಯಿತು.

ಚಿತ್ರರಂಗದಲ್ಲಿದ್ದ ಮುನಿರತ್ನಗೆ ನಟನೆ ಹೊಸದಲ್ಲ; ಮುನಿರತ್ನ ಕಣ್ಣೀರಿಗೆ ದಿನೇಶ್ ಗುಂಡೂರಾವ್ ಟಾಂಗ್

ಶೇ.63 ಮತದಾನ:
ಬೆಂಗಳೂರು ಶಿಕ್ಷಕರ ಕ್ಷೇತ್ರದ ಒಟ್ಟು ಮತದಾರರ ಸಂಖ್ಯೆ 22,089. ಈ ಪೈಕಿ 7,946 ಪುರುಷರು ಹಾಗೂ 14,140 ಮಹಿಳಾ ಮತದಾರರಿದ್ದಾರೆ. ಬುಧವಾರ ಶೇ.63ರಷ್ಟು ಮತ ಚಲಾವಣೆಯಾಗಿದೆ.

ಉಚಿತ ಕೈಗವಸು ವಿತರಣೆ:
ಎಲ್ಲಾ ಮತಗಟ್ಟೆಗಳಲ್ಲಿ ಮತದಾರರನ್ನು ಥರ್ಮಲ್‌ ಸ್ಕ್ಯಾ‌ನಿಂಗ್‌ಗೆ ಒಳಪಡಿಸಲಾಯಿತು. ಸ್ಯಾನಿಟೈಸ್‌ ದ್ರಾವಣ ಹಾಗೂ ಕೈಗವಸನ್ನು ಚುನಾವಣಾ ಆಯೋಗವೇ ಉಚಿತವಾಗಿ ವಿತರಿಸುವ ವ್ಯವಸ್ಥೆ ಮಾಡಿತ್ತು. ಮತದಾನದ ಬಳಿಕ ಕೈಗವಸನ್ನು ವಾಪಸ್‌ ಪಡೆಯಲಾಯಿತು. ಕೆಲವೆಡೆ ಕೈಗವಸನ್ನು ಒಯ್ಯಲು ಯತ್ನಿಸಿದವರಿಂದ ಪೌರಕಾರ್ಮಿಕರು ವಾಪಸ್‌ ಪಡೆದು ನಂತರ ವಿಲೇವಾರಿ ಮಾಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ