Please enable javascript.ಸದ್ಭಾವನೆ ಯುವಶಾಂತಿ ರ‌್ಯಾಲಿ - ಸದ್ಭಾವನೆ ಯುವಶಾಂತಿ ರ‌್ಯಾಲಿ - Vijay Karnataka

ಸದ್ಭಾವನೆ ಯುವಶಾಂತಿ ರ‌್ಯಾಲಿ

ವಿಕ ಸುದ್ದಿಲೋಕ 27 Aug 2013, 10:18 pm
Subscribe

‘‘ಎಲ್ಲ ಪ್ರಾಣಿಗಳಿಗಿಂತಲೂ ಶ್ರೇಷ್ಠವಾಗಿರುವ ಮಾನವ ಜನ್ಮ ದೇಶ ಸೇವೆ ಮಾಡದ ಹೊರತು ವ್ಯರ್ಥ,’’ ಎಂದು ಪುರಸಭೆ ಸದಸ್ಯ ಕೆ. ಭಾಸ್ಕರ್ ತಿಳಿಸಿದರು.

ಸದ್ಭಾವನೆ ಯುವಶಾಂತಿ ರ‌್ಯಾಲಿ
ವಿಜಯಪುರ : ‘‘ಎಲ್ಲ ಪ್ರಾಣಿಗಳಿಗಿಂತಲೂ ಶ್ರೇಷ್ಠವಾಗಿರುವ ಮಾನವ ಜನ್ಮ ದೇಶ ಸೇವೆ ಮಾಡದ ಹೊರತು ವ್ಯರ್ಥ,’’ ಎಂದು ಪುರಸಭೆ ಸದಸ್ಯ ಕೆ. ಭಾಸ್ಕರ್ ತಿಳಿಸಿದರು.

ಇಲ್ಲಿನ ಬಾಲಕಿಯರ ಪ್ರೌಢಶಾಲೆಯ ಆವರಣದಲ್ಲಿ ಸರ್ವೀಸ್, ಸಿವಿಲ್ ಇಂಟರ್‌ನ್ಯಾಷನಲ್ ಕರ್ನಾಟಕ, ನೆಹರೂ ಯುವ ಕೇಂದ್ರ ಬೆಂ. ಗ್ರಾ. ಜಿಲ್ಲೆ, ಸ್ಪಂದನ ಯುವಜನ ಸೇವಾ ಸಂಘ, ವಿಜಯಪುರ ಜೆಸಿಐ ಮತ್ತು ಶಾಲೆ ಕಾಲೇಜುಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಶಾಂತಿ ದಿನದ ಪ್ರಯುಕ್ತ ಏರ್ಪಡಿಸಿದ್ದ ‘ಸದ್ಭಾವನೆ ಯುವಶಾಂತಿ ರ‌್ಯಾಲಿ’ ಹಾಗೂ ‘ನನ್ನ ಭೂಮಿ, ನನ್ನ ಕರ್ತವ್ಯ’ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶ್ರೀ ಬಸವ ಕಲ್ಯಾಣ ಮಠದ ಮಹದೇವ ಸ್ವಾಮೀಜಿ ಮಾತನಾಡಿ, ‘‘ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೇ, ದೇಶಕ್ಕೆ ಮಾಡುವ ಸೇವೆಯೇ ಸತ್ಯವಾದ ಸೇವೆಯಾಗಿರುತ್ತದೆ,’’ ಎಂದು ತಿಳಿಸಿದರು.

ಪತಂಜಲಿ ಯೋಗ ಶಿಕ್ಷಣ ಸಮಿತಿಯ ದೀಪಾ ಮಾತನಾಡಿ, ‘‘ನಮ್ಮ ನಿತ್ಯ ಜೀವನದ ಅವಿಭಾಜ್ಯ ಅಂಗವಾಗಿ ಯೋಗ, ಧ್ಯಾನ, ಭಜನೆಯನ್ನು ಅಳವಡಿಸಿಕೊಂಡಾಗ ಯಾವುದೇ ಕಾರ್ಯವನ್ನು ಒತ್ತಡ ರಹಿತವಾಗಿ ಹಾಗೂ ಯಶಸ್ವಿಯಾಗಿ ಸಾಧಿಸಲು ಸಾಧ್ಯ,’’ ಎಂದರು.

ಸರ್ವೀಸ್, ಸಿವಿಲ್ ಇಂಟರ್‌ನ್ಯಾಷನಲ್ ಕಾರ್ಯದರ್ಶಿ ಸುಹಾಸ್ ಮಾತನಾಡಿದರು. ಸರಕಾರಿ ಬಾಲಕಿಯರ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎ. ಎನ್. ಕೃಷ್ಣಮೂರ್ತಿ, ಇಸ್ಲಾಂ ಧರ್ಮ ಗುರು ಬಾಬಾ ರಿಯಾಜ್ ಉದ್ದೀನ್, ವಿ. ಎನ್. ಸೂರ್ಯಪ್ರಕಾಶ್ ಮಾತನಾಡಿದರು.

ಮುಖಂಡರಾದ ವಿ. ಸೂರ್ಯನಾರಾಯಣ್, ಬಿ. ವಿ. ಪ್ರಕಾಶ್, ವಿ. ಬಸವರಾಜ್, ಹರೀಶ್‌ಕುಮಾರ್, ವಿ.ಪ್ರಶಾಂತ್, ಅನೀಸ್ ಉರ ರೆಹಮಾನ್, ಮೋಹನ್, ಪುನೀತ್, ವಿ. ಮಹೇಶ್, ವಿ.ಶಿವಕುಮಾರ್ ಉಪಸ್ಥಿತರಿದ್ದರು. ಸುಮಾರು 600 ಕ್ಕೂ ಹೆಚ್ಚು ಶಾಲೆ ವಿದ್ಯಾರ್ಥಿಗಳು ಪಟ್ಟಣದ ಪ್ರಮುಖ ಬೀದಿಗಳಲ್ಲಿ ರ‌್ಯಾಲಿ ನಡೆಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ