ಔರಾದ್: ಸಾಲ ಬಾಧೆಯಿಂದ ರೈತನೊಬ್ಬ ನೇಣು ಹಾಕಿಕೊಂಡು ಖಾನಾಪುರದಲ್ಲಿ ಶನಿವಾರ ಬೆಳಗಿನ ಜಾವ ಆತ್ಮಹತ್ಯೆ ಮಾಡಿಕೊಂದ್ದಾನೆ. ಮಧುಕರ ವೆಂಕಟರಾವ್ ಖಾನಾಪುರ (48) ಆತ್ಮಹತ್ಯೆ ಮಾಡಿಕೊಂಡ ರೈತ.
ಡಿಸಿಸಿ ಬ್ಯಾಂಕ್ನಲ್ಲಿ ಒಂದು ಲಕ್ಷ ರೂ., ಮಹಿಂದ್ರಾ ಫೈನಾನ್ಸ್ ಬೀದರ್ನಿಂದ 3 ಲಕ್ಷ ರೂ., ಮಕ್ಕಳ ಶಿಕ್ಷ ಣಕ್ಕಾಗಿ ಒಂದು ಲಕ್ಷ ರೂ. ಹಾಗೂ ಖಾಸಗಿ ಸಾಲಯಿದೆ ಎನ್ನಲಾಗಿದೆ. 4 ಹೆಣ್ಣು ಮಕ್ಕಳು, 1 ಗಂಡು ಮಗುವಿದೆ.
ಸ್ಥಳಕ್ಕೆ ತಹಸೀಲ್ದಾರ್ ಎಂ. ಚಂದ್ರಶೇಖರ, ಸಿಪಿಐ ರಮೇಶಕುಮಾರ, ಸಹಾಯಕ ಕೃಷಿ ನಿರ್ದೇಶಕ ಸಂಜುಕುಮಾರ ಮಾನಕಾರಿ, ಪಿಎಸ್ಐ ರಘುನಾಥರಡ್ಡಿ ಭೇಟಿ ನೀಡಿ ಮಾಹಿತಿ ಪಡೆದರು. ಈ ಕುರಿತು ಸಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಾಲ ಬಾಧೆ ರೈತ ಆತ್ಮಹತ್ಯೆ
ವಿಕ ಸುದ್ದಿಲೋಕ 26 Feb 2017, 4:18 pm
Subscribe