ಕೊಳ್ಳೇಗಾಲ: ಪಟ್ಟಣದ ನ್ಯಾಯಾಲಯದಲ್ಲಿ ನಡೆದ ಮಾಸಿಕ ಲೋಕ್ಅದಾಲತ್ನಲ್ಲಿ ಒಟ್ಟು 559 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಲಾಯಿತು.
ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಬಿ.ಜೆ.ಪ್ರಮೋದ್ ಅಧ್ಯಕ್ಷತೆಯಲ್ಲಿ ನಡೆದ ಅದಾಲತ್ನಲ್ಲಿ ಒಡೆಯರ ಪಾಳ್ಯ ಸಿಂಡಿಕೇಟ್ ಬ್ಯಾಂಕ್ 100 ಪ್ರಕರಣ ಪೈಕಿ 8 ಪ್ರಕರಣಗಳು ಬಗೆಹರಿದು 2.42 ಲಕ್ಷ ಸಾಲ ವಸೂಲಾಯಿತು. ನಗರಸಭೆಯ 78 ಪ್ರಕರಣಗಳು ಇತ್ಯರ್ಥವಾಗಿ 2.39 ಲಕ್ಷ ವಸೂಲಾಯಿತು. ಉಳಿದಂತೆ 473 ಪ್ರಕರಣಗಳು ಪರಸ್ಪರ ಒಪ್ಪಿಗೆ ಮೂಲಕ ಬಗೆಹರಿದವು. ನ್ಯಾಯಾಧೀಶರಾದ ಎಚ್.ಕೆ.ಉಮೇಶ್, ಪುರುಷೋತ್ತಮ್, ವಕೀಲ ರಾಜೇಂದ್ರ, ಬ್ಯಾಂಕ್ ವ್ಯವಸ್ಥಾಪಕ ಚಂದ್ರಕುಮಾರ್ ಹಾಜರಿದ್ದರು.