Please enable javascript.ಲೋಕ್ ಅದಾಲತ್: 559 ಪ್ರಕರಣ ಇತ್ಯರ್ಥ - ಲೋಕ್ ಅದಾಲತ್: 559 ಪ್ರಕರಣ ಇತ್ಯರ್ಥ - Vijay Karnataka

ಲೋಕ್ ಅದಾಲತ್: 559 ಪ್ರಕರಣ ಇತ್ಯರ್ಥ

Vijaya Karnataka Web 12 Oct 2015, 5:00 am
Subscribe

ಪಟ್ಟಣದ ನ್ಯಾಯಾಲಯದಲ್ಲಿ ನಡೆದ ಮಾಸಿಕ ಲೋಕ್‌ಅದಾಲತ್‌ನಲ್ಲಿ ಒಟ್ಟು 559 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಲಾಯಿತು.

 559
ಲೋಕ್ ಅದಾಲತ್: 559 ಪ್ರಕರಣ ಇತ್ಯರ್ಥ

ಕೊಳ್ಳೇಗಾಲ: ಪಟ್ಟಣದ ನ್ಯಾಯಾಲಯದಲ್ಲಿ ನಡೆದ ಮಾಸಿಕ ಲೋಕ್‌ಅದಾಲತ್‌ನಲ್ಲಿ ಒಟ್ಟು 559 ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಬಗೆಹರಿಸಲಾಯಿತು.

ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಬಿ.ಜೆ.ಪ್ರಮೋದ್ ಅಧ್ಯಕ್ಷತೆಯಲ್ಲಿ ನಡೆದ ಅದಾಲತ್‌ನಲ್ಲಿ ಒಡೆಯರ ಪಾಳ್ಯ ಸಿಂಡಿಕೇಟ್ ಬ್ಯಾಂಕ್ 100 ಪ್ರಕರಣ ಪೈಕಿ 8 ಪ್ರಕರಣಗಳು ಬಗೆಹರಿದು 2.42 ಲಕ್ಷ ಸಾಲ ವಸೂಲಾಯಿತು. ನಗರಸಭೆಯ 78 ಪ್ರಕರಣಗಳು ಇತ್ಯರ್ಥವಾಗಿ 2.39 ಲಕ್ಷ ವಸೂಲಾಯಿತು. ಉಳಿದಂತೆ 473 ಪ್ರಕರಣಗಳು ಪರಸ್ಪರ ಒಪ್ಪಿಗೆ ಮೂಲಕ ಬಗೆಹರಿದವು. ನ್ಯಾಯಾಧೀಶರಾದ ಎಚ್.ಕೆ.ಉಮೇಶ್, ಪುರುಷೋತ್ತಮ್, ವಕೀಲ ರಾಜೇಂದ್ರ, ಬ್ಯಾಂಕ್ ವ್ಯವಸ್ಥಾಪಕ ಚಂದ್ರಕುಮಾರ್ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ