ಚಾಮರಾಜನಗರ: ನಗರಸಭೆ ಚುನಾವಣೆಯ ಅಂತಿಮ ಕಣದಲ್ಲಿ ಉಳಿಯುವವರು ಯಾರಾರಯರು? ಬಿಜೆಪಿ, ಕಾಂಗ್ರೆಸ್ ಕೆಲ ವಾರ್ಡ್ಗಳಲ್ಲಿ ತಮ್ಮ ಅಧಿಕೃತ ಅಭ್ಯರ್ಥಿಗಳ ವಿರುದ್ಧ ಸ್ಪರ್ಧಿಸಿರುವ ಬಂಡಾಯಗಾರರನ್ನು ಮನವೊಲಿಸಲಿದೆಯೇ?
ಇಂಥ ಪ್ರಶ್ನೆಗಳಿಗೆ ಉತ್ತರ ಸಿಗಲು ಇನ್ನು ಕೆಲವೇ ತಾಸು ಸಾಕು. ನಗರಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳಾಗಬಯಸಿ ನಾಮಪತ್ರ ಸಲ್ಲಿಸುವ ಮಂದಿ ತಮ್ಮ ಉಮೇದುವಾರಿಕೆಯನ್ನು ವಾಪಸ್ ಪಡೆಯಲು ಆ. 23 (ಗುರುವಾರ) ಕೊನೆ ದಿನ. ಹೀಗಾಗಿ ಇಂದು ಸಂಜೆ ವೇಳೆಗೆ ಚುನಾವಣಾ ಅಖಾಡದ ಅಂತಿಮ ಕಣದಲ್ಲಿ ಯಾರಾರಯರು ಉಳಿಯಲಿದ್ದಾರೆ. ಯಾರಾರಯರಿಗೆ ನೇರ ಪೈಪೋಟಿ ಏರ್ಪಡಲಿದೆ ಎಂಬುದರ ಪೂರ್ಣ ಚಿತ್ರಣ ಗುರುವಾರ ಸಂಜೆ ವೇಳೆಗೆ ಲಭಿಸಲಿದೆ.
ಸದ್ಯ ಚಾ.ನಗರ ಹಾಗೂ ಕೊಳ್ಳೇಗಾಲ ನಗರಸಭೆಗಳ ತಲಾ 31 ವಾರ್ಡ್ಗಳಿಗೆ ಸ್ಪರ್ಧೆ ಬಯಸಿ ಕ್ರಮವಾಗಿ 162 ಹಾಗೂ 112 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಇಷ್ಟು ಮಂದಿಯಲ್ಲಿ ಗುರುವಾರ ಯಾರು ನಾಮಪತ್ರ ಹಿಂಪಡೆಯಬಹುದು ಎಂಬುದು ಸದ್ಯದ ಕುತೂಹಲ.
ಬಂಡಾಯಗಾರರ ಮನವೊಲಿಕೆ: ಪಕ್ಷಗಳಿಂದ ಅಧಿಕೃತವಾಗಿ ಸ್ಪರ್ಧೆ ಮಾಡಿರುವ ಮಂದಿ ನಾಮಪತ್ರ ಹಿಂಪಡೆಯುವುದಿಲ್ಲ. ಆದರೆ, ಕೆಲ ವಾರ್ಡ್ಗಳಲ್ಲಿ ಇಂಥ ಅಧಿಕೃತ ಅಭ್ಯರ್ಥಿಗಳಿಗೆ ಬಂಡಾಯವಾಗಿ ಸ್ಫರ್ಧೆ ಮಾಡಿರುವಂತವರು, ಪಕ್ಷೇತರರಾಗಿ ಸ್ಪರ್ಧೆ ಮಾಡಿರುವವರ ಮನವೊಲಿಸಿ, ಅವರ ನಾಮಪತ್ರವನ್ನು ಹಿಂತೆಗೆಸುವ ಕಸರತ್ತು ಜೋರಾಗಿಯೇ ನಡೆದಿದೆ. ಆದರೆ, ಆ ಕಸರತ್ತು, ಮನವೊಲಿಕೆ ಎಷ್ಟರ ಮಟ್ಟಿಗೆ ನಡೆದಿದೆ ಎಂಬುದನ್ನು ಅರಿಯಬೇಕಾದರೆ, ಗುರುವಾರ ಸಂಜೆವರೆಗೆ ಕಾಯಬೇಕು.
ಚಾಮರಾಜನಗರ ನಗರಸಭೆಯಲ್ಲಿ ಕಾಂಗ್ರೆಸ್ಗೆ 15ನೇ ವಾರ್ಡ್, 24ನೇ ವಾರ್ಡ್ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಂಡಾಯದ ಬಿಸಿ ತಟ್ಟಿದೆ.
ಇನ್ನು ಬಿಜೆಪಿಗೆ 12 ಹಾಗೂ 23ನೇ ವಾರ್ಡ್ನಲ್ಲಿ ಬಂಡಾಯ ಇದೆ. ಇನ್ನು ಜಾ.ದಳ, ಬಿಎಸ್ಪಿ ಪಕ್ಷಗಳು ಈ ಚುನಾವಣೆಯಲ್ಲಿ ಸೀಟು ಹೊಂದಾಣಿಕೆಯೊಂದಿಗೆ ಕಣಕ್ಕಿಳಿಯಲು ನಿರ್ಧರಿಸಿದ್ದವು. ಅದು ಕೊಳ್ಳೇಗಾಲದಲ್ಲಿ ಯಶಸ್ವಿಯೂ ಆಗಿದೆ.
ಆದರೆ, ಚಾ.ನಗರದಲ್ಲಿ 17, 15 ಸ್ಥಾನದ ಹೊಂದಾಣಿಕೆ ಇತ್ತಾದರೂ , ಮೂರು ವಾರ್ಡ್ಗಳಲ್ಲಿ ಎರಡೂ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಿರುವುದು ಆಯಾ ಪಕ್ಷಗಳ ಮುಖಂಡರಲ್ಲಿ ಇರುಸು, ಮುರುಸು ತರಿಸಿದೆ.
ಹೀಗಾಗಿ ಅಂಥ ವಾರ್ಡ್ಗಳಲ್ಲಿ ಒಂದು ಪಕ್ಷದವರ ಮನವೊಲಿಸಿ , ನಾಮಪತ್ರ ಹಿಂತೆಗೆದುಕೊಳ್ಳುವಂತೆ ಮನವೊಲಿಸುವ ಯತ್ನ ಸಾಗಿದೆ. ಈ ಬಗ್ಗೆ ಜಾ.ದಳ ಜಿಲ್ಲಾಧ್ಯಕ್ಷ ಕಾಮರಾಜು ಅವರು ಸಹ, ಅದೇ ಪ್ರಯತ್ನದಲ್ಲಿ ನಾವಿದ್ದೇವೆ ಎಂದು ಪ್ರತಿಕ್ರಿಯಿಸಿದರು.
ಇನ್ನು ಕೊಳ್ಳೇಗಾಲದಲ್ಲೂ ಕಾಂಗ್ರೆಸ್ಗೆ 14ನೇ ವಾರ್ಡ್ನಲ್ಲಿ ಬಂಡಾಯದ ಭೀತಿ ಇದ್ದರೆ, ಬಿಜೆಪಿಗೆ 7, 13 ಹಾಗೂ 18ನೇ ವಾರ್ಡ್ನಲ್ಲಿ ಬಂಡಾಯಗಾರರಿದ್ದಾರೆ. ಇವರ ನಾಮಪತ್ರ ಹಿಂಪಡೆಯುವಂತೆ ಮಾಡುವ ಪ್ರಕ್ರಿಯೆ ಚುರುಕಾಗಿ ಸಾಗಿದೆ ಎನ್ನುತ್ತಾರೆ ಪಕ್ಷದ ಮುಖಂಡರು.
ಒಟ್ಟಾರೆ ಆ. 23ರಂದು ಗುರುವಾರ ಸಂಜೆ ವೇಳೆಗೆ ಜಿಲ್ಲೆಯ ಎರಡು ನಗರಸಭೆ ಚುನಾವಣೆಯ ಅಂತಿಮ ಕಣದ ಪಟ್ಟಿ ತಿಳಿಯಲಿದೆ. ಅಲ್ಲಿಂದ ಆ. 31ರವರೆಗೂ ನಗರ ಸ್ಥಳೀಯ ಸಂಸ್ಥೆಯ ಚುನಾವಣೆ ಮತ್ತಷ್ಟು ರಂಗು ಪಡೆದುಕೊಳ್ಳಲಿದೆ. ಪ್ರಚಾರ, ಭರಾಟೆ ಬಿರುಸಾಗಿ ಸಾಗಲಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.
ಇಂಥ ಪ್ರಶ್ನೆಗಳಿಗೆ ಉತ್ತರ ಸಿಗಲು ಇನ್ನು ಕೆಲವೇ ತಾಸು ಸಾಕು. ನಗರಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳಾಗಬಯಸಿ ನಾಮಪತ್ರ ಸಲ್ಲಿಸುವ ಮಂದಿ ತಮ್ಮ ಉಮೇದುವಾರಿಕೆಯನ್ನು ವಾಪಸ್ ಪಡೆಯಲು ಆ. 23 (ಗುರುವಾರ) ಕೊನೆ ದಿನ. ಹೀಗಾಗಿ ಇಂದು ಸಂಜೆ ವೇಳೆಗೆ ಚುನಾವಣಾ ಅಖಾಡದ ಅಂತಿಮ ಕಣದಲ್ಲಿ ಯಾರಾರಯರು ಉಳಿಯಲಿದ್ದಾರೆ. ಯಾರಾರಯರಿಗೆ ನೇರ ಪೈಪೋಟಿ ಏರ್ಪಡಲಿದೆ ಎಂಬುದರ ಪೂರ್ಣ ಚಿತ್ರಣ ಗುರುವಾರ ಸಂಜೆ ವೇಳೆಗೆ ಲಭಿಸಲಿದೆ.
ಸದ್ಯ ಚಾ.ನಗರ ಹಾಗೂ ಕೊಳ್ಳೇಗಾಲ ನಗರಸಭೆಗಳ ತಲಾ 31 ವಾರ್ಡ್ಗಳಿಗೆ ಸ್ಪರ್ಧೆ ಬಯಸಿ ಕ್ರಮವಾಗಿ 162 ಹಾಗೂ 112 ಮಂದಿ ನಾಮಪತ್ರ ಸಲ್ಲಿಸಿದ್ದಾರೆ. ಇಷ್ಟು ಮಂದಿಯಲ್ಲಿ ಗುರುವಾರ ಯಾರು ನಾಮಪತ್ರ ಹಿಂಪಡೆಯಬಹುದು ಎಂಬುದು ಸದ್ಯದ ಕುತೂಹಲ.
ಬಂಡಾಯಗಾರರ ಮನವೊಲಿಕೆ: ಪಕ್ಷಗಳಿಂದ ಅಧಿಕೃತವಾಗಿ ಸ್ಪರ್ಧೆ ಮಾಡಿರುವ ಮಂದಿ ನಾಮಪತ್ರ ಹಿಂಪಡೆಯುವುದಿಲ್ಲ. ಆದರೆ, ಕೆಲ ವಾರ್ಡ್ಗಳಲ್ಲಿ ಇಂಥ ಅಧಿಕೃತ ಅಭ್ಯರ್ಥಿಗಳಿಗೆ ಬಂಡಾಯವಾಗಿ ಸ್ಫರ್ಧೆ ಮಾಡಿರುವಂತವರು, ಪಕ್ಷೇತರರಾಗಿ ಸ್ಪರ್ಧೆ ಮಾಡಿರುವವರ ಮನವೊಲಿಸಿ, ಅವರ ನಾಮಪತ್ರವನ್ನು ಹಿಂತೆಗೆಸುವ ಕಸರತ್ತು ಜೋರಾಗಿಯೇ ನಡೆದಿದೆ. ಆದರೆ, ಆ ಕಸರತ್ತು, ಮನವೊಲಿಕೆ ಎಷ್ಟರ ಮಟ್ಟಿಗೆ ನಡೆದಿದೆ ಎಂಬುದನ್ನು ಅರಿಯಬೇಕಾದರೆ, ಗುರುವಾರ ಸಂಜೆವರೆಗೆ ಕಾಯಬೇಕು.
ಚಾಮರಾಜನಗರ ನಗರಸಭೆಯಲ್ಲಿ ಕಾಂಗ್ರೆಸ್ಗೆ 15ನೇ ವಾರ್ಡ್, 24ನೇ ವಾರ್ಡ್ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಂಡಾಯದ ಬಿಸಿ ತಟ್ಟಿದೆ.
ಇನ್ನು ಬಿಜೆಪಿಗೆ 12 ಹಾಗೂ 23ನೇ ವಾರ್ಡ್ನಲ್ಲಿ ಬಂಡಾಯ ಇದೆ. ಇನ್ನು ಜಾ.ದಳ, ಬಿಎಸ್ಪಿ ಪಕ್ಷಗಳು ಈ ಚುನಾವಣೆಯಲ್ಲಿ ಸೀಟು ಹೊಂದಾಣಿಕೆಯೊಂದಿಗೆ ಕಣಕ್ಕಿಳಿಯಲು ನಿರ್ಧರಿಸಿದ್ದವು. ಅದು ಕೊಳ್ಳೇಗಾಲದಲ್ಲಿ ಯಶಸ್ವಿಯೂ ಆಗಿದೆ.
ಆದರೆ, ಚಾ.ನಗರದಲ್ಲಿ 17, 15 ಸ್ಥಾನದ ಹೊಂದಾಣಿಕೆ ಇತ್ತಾದರೂ , ಮೂರು ವಾರ್ಡ್ಗಳಲ್ಲಿ ಎರಡೂ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಿರುವುದು ಆಯಾ ಪಕ್ಷಗಳ ಮುಖಂಡರಲ್ಲಿ ಇರುಸು, ಮುರುಸು ತರಿಸಿದೆ.
ಹೀಗಾಗಿ ಅಂಥ ವಾರ್ಡ್ಗಳಲ್ಲಿ ಒಂದು ಪಕ್ಷದವರ ಮನವೊಲಿಸಿ , ನಾಮಪತ್ರ ಹಿಂತೆಗೆದುಕೊಳ್ಳುವಂತೆ ಮನವೊಲಿಸುವ ಯತ್ನ ಸಾಗಿದೆ. ಈ ಬಗ್ಗೆ ಜಾ.ದಳ ಜಿಲ್ಲಾಧ್ಯಕ್ಷ ಕಾಮರಾಜು ಅವರು ಸಹ, ಅದೇ ಪ್ರಯತ್ನದಲ್ಲಿ ನಾವಿದ್ದೇವೆ ಎಂದು ಪ್ರತಿಕ್ರಿಯಿಸಿದರು.
ಇನ್ನು ಕೊಳ್ಳೇಗಾಲದಲ್ಲೂ ಕಾಂಗ್ರೆಸ್ಗೆ 14ನೇ ವಾರ್ಡ್ನಲ್ಲಿ ಬಂಡಾಯದ ಭೀತಿ ಇದ್ದರೆ, ಬಿಜೆಪಿಗೆ 7, 13 ಹಾಗೂ 18ನೇ ವಾರ್ಡ್ನಲ್ಲಿ ಬಂಡಾಯಗಾರರಿದ್ದಾರೆ. ಇವರ ನಾಮಪತ್ರ ಹಿಂಪಡೆಯುವಂತೆ ಮಾಡುವ ಪ್ರಕ್ರಿಯೆ ಚುರುಕಾಗಿ ಸಾಗಿದೆ ಎನ್ನುತ್ತಾರೆ ಪಕ್ಷದ ಮುಖಂಡರು.
ಒಟ್ಟಾರೆ ಆ. 23ರಂದು ಗುರುವಾರ ಸಂಜೆ ವೇಳೆಗೆ ಜಿಲ್ಲೆಯ ಎರಡು ನಗರಸಭೆ ಚುನಾವಣೆಯ ಅಂತಿಮ ಕಣದ ಪಟ್ಟಿ ತಿಳಿಯಲಿದೆ. ಅಲ್ಲಿಂದ ಆ. 31ರವರೆಗೂ ನಗರ ಸ್ಥಳೀಯ ಸಂಸ್ಥೆಯ ಚುನಾವಣೆ ಮತ್ತಷ್ಟು ರಂಗು ಪಡೆದುಕೊಳ್ಳಲಿದೆ. ಪ್ರಚಾರ, ಭರಾಟೆ ಬಿರುಸಾಗಿ ಸಾಗಲಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಿಲ್ಲ.