ಕೊಳ್ಳೇಗಾಲ: ತಾಲೂಕು ಪಂಚಾಯಿತಿ ಉಪಾಧ್ಯಕ್ಷೆಯಾಗಿ ಕುಣಗಳ್ಳಿ ಕ್ಷೇತ್ರದ ಪೂರ್ಣಿಮಾ ಕೆಂಪರಾಜು ಅವಿರೋಧವಾಗಿ ಆಯ್ಕೆಯಾದರು.
ಕೊನೆಯ 20 ತಿಂಗಳ ಅವಧಿಯ ಮೊದಲ 10 ತಿಂಗಳ ಅವಧಿಗೆ ಒಪ್ಪಂದಂತೆ ಉಮಾಲಿಂಗರಾಜು ಉಪಾಧ್ಯಕ್ಷರಾಗಿದ್ದರು. ಅವರ ಅವಧಿ ಪೂರ್ಣಗೊಂಡಿದ್ದರಿಂದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು. ಪೂರ್ಣಿಮಾ ಕೆಂಪರಾಜು ಒಬ್ಬರೇ ನಾಮ ಪತ್ರ ಸಲ್ಲಿಸಿದ್ದರಿಂದ ಹಾಗೂ ನಾಮ ಪತ್ರ ಕ್ರಮ ಬದ್ಧವಾಗಿದ್ದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಉಪ ವಿಭಾಗಾಧಿಕಾರಿ ಕವಿತಾ ರಾಜಾರಾ ಆಯ್ಕೆಯನ್ನು ಅವಿರೋಧ ಎಂದು ಘೋಷಿಸಿದರು.
ಅಧ್ಯಕ್ಷ ಮುರುಡುಶ್ವೇರಸ್ವಾಮಿ, ಸದಸ್ಯರಾದ ಮಲ್ಲಯ್ಯ, ನಸ್ರೂಲ್ಲಾ ಷರೀಫ್, ಸಣ್ಣೇಗೌಡ, ನಂಜೇಗೌಡ, ದಾಕ್ಷಾಯಣಿ, ಪ್ರಮೀಳಾ, ನಾಗಲಾಂಬಿಕಾ, ಇಒ ಶ್ರೀಧರ್ ಹಾಜರಿದ್ದರು.
ಕೊನೆಯ 20 ತಿಂಗಳ ಅವಧಿಯ ಮೊದಲ 10 ತಿಂಗಳ ಅವಧಿಗೆ ಒಪ್ಪಂದಂತೆ ಉಮಾಲಿಂಗರಾಜು ಉಪಾಧ್ಯಕ್ಷರಾಗಿದ್ದರು. ಅವರ ಅವಧಿ ಪೂರ್ಣಗೊಂಡಿದ್ದರಿಂದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಗುರುವಾರ ಚುನಾವಣೆ ನಡೆಯಿತು. ಪೂರ್ಣಿಮಾ ಕೆಂಪರಾಜು ಒಬ್ಬರೇ ನಾಮ ಪತ್ರ ಸಲ್ಲಿಸಿದ್ದರಿಂದ ಹಾಗೂ ನಾಮ ಪತ್ರ ಕ್ರಮ ಬದ್ಧವಾಗಿದ್ದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ ಉಪ ವಿಭಾಗಾಧಿಕಾರಿ ಕವಿತಾ ರಾಜಾರಾ ಆಯ್ಕೆಯನ್ನು ಅವಿರೋಧ ಎಂದು ಘೋಷಿಸಿದರು.
ಅಧ್ಯಕ್ಷ ಮುರುಡುಶ್ವೇರಸ್ವಾಮಿ, ಸದಸ್ಯರಾದ ಮಲ್ಲಯ್ಯ, ನಸ್ರೂಲ್ಲಾ ಷರೀಫ್, ಸಣ್ಣೇಗೌಡ, ನಂಜೇಗೌಡ, ದಾಕ್ಷಾಯಣಿ, ಪ್ರಮೀಳಾ, ನಾಗಲಾಂಬಿಕಾ, ಇಒ ಶ್ರೀಧರ್ ಹಾಜರಿದ್ದರು.