ಆ್ಯಪ್ನಗರ

ಸ್ವಚ್ಛತೆ ಕಾಣದ ಚರಂಡಿ: ರೋಗ ಭೀತಿ

ವಿಕ ಸುದ್ದಿಲೋಕ 14 Mar 2016, 5:38 am
ಚಿಂತಾಮಣಿ: ನಗರದ ವಾರ್ಡ್ ನಂ.15ರ ಟಿಪ್ಪುನಗರದಲ್ಲಿ ತಿಂಗಳುಗಳಿಂದ ಚರಂಡಿಗಳನ್ನು ಸ್ವಚ್ಛಗೊಳಿಸದೇ ಇರುವುದರಿಂದ ವಾರ್ಡ್‌ನಲ್ಲಿ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ.
Vijaya Karnataka Web
ಸ್ವಚ್ಛತೆ ಕಾಣದ ಚರಂಡಿ: ರೋಗ ಭೀತಿ


ಚರಂಡಿಯ ಪಕ್ಕದಲ್ಲೇ ಶಾಲೆಗಳು ಮತ್ತು ಆಂಗನವಾಡಿ ಕೇಂದ್ರಗಳಿದ್ದು ಚರಂಡಿಯಲ್ಲಿನ ಕಸ ವಿಲೇವಾರಿಯಾಗದ ಕಾರಣ ಅಂಗನವಾಡಿಯಲ್ಲಿನ ಮಕ್ಕಳಿಗೂ ಗಬ್ಬುನಾತ ಬೀರಿ ತೊಂದರೆಯಾಗುತ್ತಿದೆ ಎಂದು ಅಲ್ಲಿನ ನಿವಾಸಿಗಳು ದೂರಿದ್ದಾರೆ.

ಚರಂಡಿಗಳನ್ನು ಸ್ವಚ್ಛತೆ ಮಾಡದ ಕಾರಣ ಸೊಳ್ಳೆಗಳ ಉತ್ಪತ್ತಿಯ ತಾಣವಾಗಿದ್ದು ಕಾಯಿಲೆ ಹರಡುವ ಮುನ್ನ ಆದಷ್ಟು ಬೇಗ ಚರಂಡಿಗಳನ್ನು ಸ್ವಚ್ಛಗೊಳಿಸುವಂತೆ ಟಿಪ್ಪುನಗರದ ಜನರು ಆಗ್ರಹಿಸಿದ್ದಾರೆ.

ಕುಡಿಯುವ ನೀರಿನ ಸಮಸ್ಯೆ: ಬಡಾವಣೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು ಬಗೆಹರಿಸುವಂತೆ ಒತ್ತಾಯಿಸಿದ್ದಾರೆ. ಈ ವಾರ್ಡ್‌ನಲ್ಲಿ ಈಗಾಗಲೇ ಮಾಡಿರುವ ಕಾಮಗಾರಿಗಳೆಲ್ಲ ಗುಣಮಟ್ಟದಿಂದ ನಿರ್ವಹಿಸಿದ ಕಾರಣ ಈಗಾಗಲೇ ಹಲವು ಕಡೆ ಮೋರಿಗಳು ಕುಸಿದು ಬಿದ್ದಿವೆ.

ಒಮ್ಮೆ ನಗರಸಭೆ ಅಧ್ಯಕ್ಷರೂ ಟಿಪ್ಪುನಗರಕ್ಕೆ ಭೇಟಿ ನೀಡಿ ಕುಡಿಯುವ ನೀರಿನ ಸಮಸ್ಯೆಯನ್ನು ಪರಿಹರಿಸಿ ಚರಂಡಿಗಳನ್ನು ಸ್ವಚ್ಛ ಮಾಡುವುದಾಗಿ ತಿಳಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ಅಲ್ಲಿನ ನಿವಾಸಿಗಳು ದೂರಿದ್ದಾರೆ.

ತಾನು ಈ ವಾರ್ಡ್‌ನ ನಗರಸಭೆ ಸದಸ್ಯನಾಗಿದ್ದು ತನ್ನ ಮಾತಿಗೂ ಸಹಾ ನಗರಸಭೆಯ ಅದಿಕಾರಿಗಳು ಕಿವಿಗೊಡದೆ ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಈ ಬಗ್ಗೆ ಅನೇಕ ಬಾರಿ ಸಂಬಂಧಪಟ್ಟ ನಗರಸಭೆ ಅಧ್ಯಕ್ಷರಿಗೆ ಹಾಗೂ ಪೌರಾಯುಕ್ತರಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲವೆಂದು ನಗರಸಭಾ ಸದಸ್ಯ ಅಲ್ಲಾಬಕಾಷ್ ಆರೋಪಿಸಿದ್ದಾರೆ.

ಇನ್ನಾದರೂ ಸಂಬಂಧಪಟ್ಟ ನಗರಸಭೆ ಅಧಿಕಾರಿಗಳು ಟಿಪ್ಪುನಗರಕ್ಕೆ ಭೇಟಿ ನೀಡಿ ಇಲ್ಲಿನ ಸಮಸ್ಯೆಗಳನ್ನು ಅಲಿಸಿ ಚರಂಡಿಗಳನ್ನು ಸ್ವಚ್ಛಗೊಳಿಸಿ ಮುಂದೆ ಬರುಬಹುದಾದ ಸಾಂಕ್ರಾಮಿಕ ರೋಗಗಳ ತಡೆಗೆ ಮುಂದಾಗುವಂತೆ ನಗರಸಭೆ ಸದಸ್ಯರು ಒತ್ತಾಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ