ಸೊಂಪಾಗಿ ಬೆಳೆ ಬಂದಿದ್ದರೂ ದ್ರಾಕ್ಷಿಗೆ ಇಲ್ಲ ಬೆಳೆ: ಚಿಕ್ಕಬಳ್ಳಾಪುರದ ರೈತರ ಬವಣೆ ಕೇಳುವವರು ಯಾರು?

ಕೈ ಕೆಸರಾದ್ರೆ ಬಾಯಿ ಮೊಸರು ಅನ್ನೊ ಹಾಗೆ... ಪಾತಾಳದಿಂದ ಹನಿ ಹನಿ ನೀರು ಬಸಿದು ಚಿಕ್ಕಬಳ್ಳಾಫುರ ಜಿಲ್ಲೆಯ ರೈತರು, ವಿನೂತನ ಮಾದರಿಯಲ್ಲಿ ಹನಿ ನೀರಾವರಿಯನ್ನೆ ನಂಬಿಕೊಂಡು ಜಿಲ್ಲೆಯಾದ್ಯಂತ 9375 ಎಕರೆ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯುತ್ತಾರೆ. ಆದ್ರೆ ಈ ಭಾರಿ ಉತ್ತಮ ದ್ರಾಕ್ಷಿ ಫಸಲು ಬಂದಿದೆ. ಇನ್ನೇನು ದ್ರಾಕ್ಷಿ ಕಟಾವು ಮಾಡಿ ಮಾರುಕಟ್ಟೆಗೆ ಹಾಕಬೇಕು ಆದ್ರೆ ಪಸ್ತುತ ದ್ರಾಕ್ಷಿ ಹಣ್ಣಿನ ಬೆಲೆ ಕುಸಿದಿದೆ. ಕೆ.ಜಿ ದಿಲ್ ಖುಷ್ ದ್ರಾಕ್ಷಿಯ ಬೆಲೆ ಕೇವಲ 15 ರೂಪಾಯಿಯಿಂದ 20 ರೂಪಾಯಿಗೆ ಮಾತ್ರ ಮಾರಾಟವಾಗ್ತಿದೆ. ಇನ್ನೂ... ದುಬಾರಿ ನಿರ್ವಾಹಣೆಗೆ ಹೆಸರುವಾಸಿಯಾಗಿರುವ ಶರತ್, ರೆಡ್ ಗ್ಲೋಬ್ , ಸುಪರ್ ಸೋನಾಲಿಕಾ ದ್ರಾಕ್ಷಿಗೂ ಬೇಡಿಕೆ ಕಡಿಮೆಯಾಗಿದ್ದು... ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಇನ್ನೂ ಚಿಕ್ಕಬಳ್ಳಾಪುರ ತಾಲೂಕಿನ ಗೂಣೂರು ನಿವಾಸಿ ವೆಂಕಟೇಶ ಅನ್ನೊ ರೈತ, ತನ್ನ ಒಂದುವರೆ ಎಕೆರೆ ಜಮೀನಿನಲ್ಲಿ ದಿಲ್ ಖುಷ್ ತಳಿಯ ದ್ರಾಕ್ಷಿ ಬೆಳೆದಿದ್ದು, ದ್ರಾಕ್ಷಿ ತೋಟ ನಿರ್ವಾಹಣೆಗೆ ಬರೋಬ್ಬರಿ 5 ಲಕ್ಷ ರೂಪಾಯಿ ಖರ್ಚು ಮಾಡಿದ್ದಾನೆ. ತೋಟದಲ್ಲಿ ಅತ್ತುತ್ತಮ ಕ್ವಾಲಿಟಿ ಗ್ರೇಪ್ಸ್ ಸಹ ಬಂದಿದೆ. ಕೆ.ಜಿ ದ್ರಾಕ್ಷಿಗೆ ಕನಿಷ್ಠ 50 ರೂಪಾಯಿ ಸಿಕ್ಕರೆ... ಹಾಕಿದ ಬಂಡವಾಳ ವರ್ಕ್ ಔಟ್ ಆಗುತ್ತೆ, ಆದ್ರೆ ಈಗ ಕೆ.ಜಿ ದ್ರಾಕ್ಷಿಗೆ ಕೇವಲ 20 ರೂಪಾಯಿಗೆ ಮಾರಾಟ ಮಾಡಿದ್ದಾನೆ.

ಕೊರೊನಾ ಕಾಟ ಹಾಗೂ ಮಹಾ ಮಳೆಯ ಹೊಡೆತದಿಂದ ಚೇತರಿಸಿಕೊಳ್ತಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ರೈತರ ಮೇಲೆ, ಒಂದೆಡೆ ಆಲಿಕಲ್ಲು ಎಪೇಕ್ಟ್ ಆಗಿ, ನೂರಾರು ಎಕೆರೆ ದ್ರಾಕ್ಷಿ ತೋಟದಲ್ಲಿ ಹಾಳಾಗಿದೆ, ಇನ್ನೂ ಅಳಿದುಳಿದ ದ್ರಾಕ್ಷಿಗೂ... ಈಗ ಬೆಲೆ ಇಲ್ಲದಂತಾಗಿದ್ದು, ರೈತರ ನೆಮ್ಮದಿಗೆ ಕೊಳ್ಳಿ ಇಟ್ಟಿದೆ.

Vijaya Karnataka Web 11 May 2022, 1:08 pm
Loading ...