ಆ್ಯಪ್ನಗರ

ರಂಗಭೂಮಿ ಸಮಷ್ಟಿ ಕಲೆ

ಶೃಂಗೇರಿಯು ಜಾನಪದ ಮತ್ತು ಶಿಷ್ಟ ಕಲೆಗಳ ಅತ್ಯುತ್ತಮ ಸಮಾಗಮ ಸ್ಥಳವಾಗಿದ್ದು, ನಿರಂತರ ಸಾಂಸ್ಕೃತಿಕ ಚಟುವಟಿಕೆಯ ಮೂಲಕ ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಎಚ್‌.ಎಂ ನಾಗರಾಜರಾವ್‌ ಹೇಳಿದರು.

Vijaya Karnataka 5 Dec 2019, 7:32 pm
ಶೃಂಗೇರಿ: ಶೃಂಗೇರಿಯು ಜಾನಪದ ಮತ್ತು ಶಿಷ್ಟ ಕಲೆಗಳ ಅತ್ಯುತ್ತಮ ಸಮಾಗಮ ಸ್ಥಳವಾಗಿದ್ದು, ನಿರಂತರ ಸಾಂಸ್ಕೃತಿಕ ಚಟುವಟಿಕೆಯ ಮೂಲಕ ಸಾಂಸ್ಕೃತಿಕ ಶ್ರೀಮಂತಿಕೆ ಹೊಂದಿದೆ ಎಂದು ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಎಚ್‌.ಎಂ ನಾಗರಾಜರಾವ್‌ ಹೇಳಿದರು.
Vijaya Karnataka Web theater ensemble art
ರಂಗಭೂಮಿ ಸಮಷ್ಟಿ ಕಲೆ


ಮೆಣಸೆಯ ರಾಜೀವಗಾಂಧಿ ಕಾಲೇಜು ಆವರಣದಲ್ಲಿಶ್ರೀಭಾರತೀತೀರ್ಥ ಸಾಂಸ್ಕೃತಿಕ ಕೇಂದ್ರ ಟ್ರಸ್ಟ್‌ ಮತ್ತು ಕಾಳಿಂಗ ನಾವಡ ಪ್ರತಿಷ್ಠಾನ ಜಂಟಿಯಾಗಿ ಸೋಮವಾರ ಆಯೋಜಿಸಿದ್ದ ರಂಗಕಾರ್ತಿಕ ನಾಟಕೋತ್ಸವದಲ್ಲಿಅವರು ಮಾತನಾಡಿದರು.

ಊರಿನಲ್ಲಿದ್ದ ಕಲಾ ಚಟುವಟಿಕೆ ನನ್ನ ಕ್ರಿಯಾಶೀಲತೆಗೆ ಕಾರಣವಾಯಿತು. ಈ ಭಾಗದಲ್ಲಿರಂಗಭೂಮಿಯನ್ನು ಜೀವಂತವಾಗಿಟ್ಟಿರುವ ರಮೇಶ್‌ ಬೇಗಾರ್‌ ಗರಡಿ ಸೇರಿದ್ದರಿಂದ ನಟನಾಗಿ ಮತ್ತು ಸಂಘಟನೆಯಲ್ಲಿನನ್ನನ್ನು ತೊಡಗಿಸಿಕೊಳ್ಳಲು ಸಾಧ್ಯವಾಯಿತು. ಜಿಲ್ಲೆಯ ಒಟ್ಟಾರೆ ನಾಟಕ ಚಟುವಟಿಕೆಯಲ್ಲಿಮುಂಚೂಣಿಯಲ್ಲಿರುವ ಶೃಂಗೇರಿಯಲ್ಲಿಅಕಾಡೆಮಿ ಮೂಲಕ ಒಂದಷ್ಟು ಪ್ರಾಯೋಗಿಕ ಕೆಲಸ ಮಾಡಲು ಉದ್ದೇಶಿಸಲಾಗಿದೆ ಎಂದರು.

ಕೊಪ್ಪದ ಡಾ.ಉದಯ ಶಂಕರ್‌ ಮಾತನಾಡಿ, ರಂಗಕಲೆ ಒಂದು ಜೀವಂತ ಮತ್ತು ಸಮಷ್ಟಿ ಕಲೆಯಾಗಿದೆ. ನಾಟಕ ಹೊಸ ತಲೆಮಾರನ್ನು ತಲುಪಬೇಕಾಗಿದೆ. ಇಂದಿನ ಯುವ ಜನಾಂಗವನ್ನು ತೊಡಗಿಸಬೇಕು ಎಂದರು.

ಪತ್ರಕರ್ತ ಎಚ್‌.ಜಿ. ರಾಘವೇಂದ್ರ ಮಾತನಾಡಿ, ಶೃಂಗೇರಿಯ ಭಾರತೀತೀರ್ಥ ಸಂಸ್ಥೆಯಿಂದಾಗಿ ಅಪರಿಚಿತವಾದ ಕಲಾ ಪ್ರಕಾರವನ್ನು ಅತಿ ಹೆಚ್ಚು ನೋಡಿದ ಭಾಗ್ಯ ಈ ಭಾಗದ ಕಲಾಭಿಮಾನಿಗಳದ್ದಾಗಿದೆ ಎಂದರು.

ಪುಷ್ಪಾಲಕ್ಷಿತ್ರ್ಮೕನಾರಾಯಣ್‌ ಮಾತನಾಡಿ, ಸಾಂಸ್ಕೃತಿಕ ಕ್ಷೇತ್ರದಲ್ಲಿದುಡಿಯುತ್ತಿರುವ ಮಲೆನಾಡ ಮಹನೀಯರ ದಾಖಲೀಕರಣ ಮಾಡಬೇಕಾಗಿದೆ. ಇದರಿಂದ ಇತರರಿಗೆ ಸ್ಪೂರ್ತಿ ತುಂಬಬೇಕಾಗಿದೆ ಎಂದರು.

ಪಪಂ ಮಾಜಿ ಸದಸ್ಯೆ ಶೋಭಾಅನಂತಯ್ಯ ಮಾತನಾಡಿದರು.ನಂತರ ನಡೆದ ಕರ್ಣಭಾರ ಎಂಬ ಏಕಾಂಕ ನಾಟಕ ನೋಡುಗರ ಮನಸೂರೆಗೊಂಡಿತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ