Please enable javascript.ಹಿರಿಯರ ಅನುಭವ ಕಿರಿಯರಿಗೆ ದಾರಿದೀಪ - ಹಿರಿಯರ ಅನುಭವ ಕಿರಿಯರಿಗೆ ದಾರಿದೀಪ - Vijay Karnataka

ಹಿರಿಯರ ಅನುಭವ ಕಿರಿಯರಿಗೆ ದಾರಿದೀಪ

ವಿಕ ಸುದ್ದಿಲೋಕ 15 Oct 2014, 2:00 am
Subscribe

ಹಿರಿಯ ನಾಗರಿಕರಿಗೆ ಗೌರವ ತೋರುವುದು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ತೋಟಗಾರಿಕೆ ಕಾಲೇಜಿನ ಮುಖ್ಯಸ್ಥ ಡಾ.ಬಿ. ಮಂಹತೇಶ್ ತಿಳಿಸಿದರು.

ಹಿರಿಯರ ಅನುಭವ ಕಿರಿಯರಿಗೆ ದಾರಿದೀಪ
ಹಿರಿಯೂರು: ಹಿರಿಯ ನಾಗರಿಕರಿಗೆ ಗೌರವ ತೋರುವುದು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿದೆ ಎಂದು ತೋಟಗಾರಿಕೆ ಕಾಲೇಜಿನ ಮುಖ್ಯಸ್ಥ ಡಾ.ಬಿ. ಮಂಹತೇಶ್ ತಿಳಿಸಿದರು.

ತಾಲೂಕಿನ ಬಬ್ಬೂರು ಾರಂನಲ್ಲಿರುವ ತೋಟಗಾರಿಕೆ ಕಾಲೇಜಿನಲ್ಲಿ ಸೋಮವಾರ ಏರ್ಪಡಿಸಿದ್ದ ‘ವಿಶ್ವ ಹಿರಿಯ ನಾಗರಿಕರ ದಿನಾಚರಣೆ’ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಂದೆ, ತಾಯಿ ಮತ್ತು ವಯೋವೃದರು, ಗುರು ಹಿರಿಯರಿಗೆ ಗೌರವ ನೀಡುವುದರ ಜತೆಗೆ ಅವರ ಅನುಭವನ್ನು ಕೇಳಿ ತಿಳಿದುಕೊಳ್ಳಬೇಕು. ಅವರ ಜ್ಞಾನ ಭಂಡಾರಕ್ಕೆ ಮನ್ನಣೆ ನೀಡಬೇಕು. ಉಜ್ವಲವಾದ ಸಂಸ್ಕೃತಿ ಪರಂಪರೆಗೆ ಹೆಸರಾದ ದೇಶ ಭಾರತ ಎಂದರು.

ಕಾಲೇಜಿನಲ್ಲಿ ಓದಿ ವಿಜ್ಞಾನಿಗಳಾಗುವ ನಮಗಿಂತ ಕೃಷಿ, ತೋಟಗಾರಿಕೆ, ಹೈನುಗಾರಿಕೆ ಕ್ಷೇತ್ರದಲ್ಲಿ ಹೆಚ್ಚಿನ ಪ್ರಾಯೋಗಿಕ ಅನುಭವ ಮನೆಯ ಹಿರಿಯರಿಗೆ ಇರುತ್ತದೆ. ನಮ್ಮ ಓದು ಹಿರಿಯರ ಅನುಭವ ಎರಡೂ ಬೇರೆ. ಕೃಷಿ, ತೋಟಗಾರಿಕೆಯಲ್ಲಿ ಗಮನಾರ್ಹ ಸುಧಾರಣೆ ತರಬಹುದಾಗಿದೆ. ಆದರೆ, ಈಚೆಗೆ ಆಧುನಿಕತೆಯ ಭರಾಟೆಯಲ್ಲಿ ಹಿರಿಯರನ್ನು ದೂರವಿಡುವ ಸಂಸ್ಕೃತಿ ಬೆಳೆಯುತ್ತಿದೆ ಎಂದರು.

ಸಹ ಪ್ರಾಧ್ಯಾಪಕ ಡಾ. ಸುೀಂದ್ರ ಮಾತನಾಡಿ, ಮನೆಯಲ್ಲಿರುವ ಹಿರಿಯರನ್ನು ನಾವು ಕಡೆಗಣಿಸಿದರೆ ವೃದ್ಧಾಪ್ಯದಲ್ಲಿ ನಮಗೂ ಇಂತಹದ್ದೇ ಪರಿಸ್ಥಿತಿ ಬರುತ್ತದೆ ಎಂಬ ತಿಳುವಳಿಕೆ ಎಲ್ಲರಲ್ಲಿ ಮೂಡಬೇಕಿದೆ ಎಂದರು.

ಪ್ರಾಧ್ಯಾಪಕರಾದ ಡಾ.ಕೆ.ಟಿ. ರಾಜೇಂದ್ರಪ್ರಸಾದ್, ಡಾ.ಬಿ.ಎನ್. ಹರೀಶ್ ಬಾಬು, ಪಿ.ಹೇಮಂತ ಕುಮಾರ್, ಡಿ.ಶಶಿಕಲಾ ಬಾಯಿ, ಆರ್.ಶ್ರೀಧರ್, ಕೆ.ಬಿ. ಕಲಾವತಿ, ಅನುಜ್ಞಾ, ಆರ್.ಶ್ರೀಧರ್, ಸೂರ್ತಿ ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ