Please enable javascript.​ ಲೇಖಕ ಯಳನಾಡು ಅಂಜನಪ್ಪ ಇನ್ನಿಲ್ಲ - Anjanappa yalanadu author dies - Vijay Karnataka

​ ಲೇಖಕ ಯಳನಾಡು ಅಂಜನಪ್ಪ ಇನ್ನಿಲ್ಲ

ವಿಕ ಸುದ್ದಿಲೋಕ 20 Aug 2016, 5:21 pm
Subscribe

ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷ ಕ ಹಾಗೂ ಸಾಹಿತಿ ಯಳನಾಡು ಅಂಜನಪ್ಪ (73) ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ಮುಂಜಾನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

anjanappa yalanadu author dies
​ ಲೇಖಕ ಯಳನಾಡು ಅಂಜನಪ್ಪ ಇನ್ನಿಲ್ಲ
ಹಿರಿಯೂರು : ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷ ಕ ಹಾಗೂ ಸಾಹಿತಿ ಯಳನಾಡು ಅಂಜನಪ್ಪ (73) ಅಲ್ಪಕಾಲದ ಅನಾರೋಗ್ಯದಿಂದ ಗುರುವಾರ ಮುಂಜಾನೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರಿಗೆ ಪತ್ನಿ, ಪುತ್ರ, ಇಬ್ಬರು ಪುತ್ರಿಯರಿದ್ದಾರೆ. ಪಾರ್ಥಿವ ಶರೀರವನ್ನು ನಗರದ ಟಿ.ಟಿ.ರಸ್ತೆಯ ಮೃತರ ಸ್ವಗೃಹದಲ್ಲಿ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಇಡಲಾಗಿತ್ತು. ನಂತರ ತಾಲೂಕಿನ ಯಳನಾಡು ಗ್ರಾಮದ ಶ್ರೀತಿಮ್ಮಾರ್ಯ ಆಧ್ಯಾತ್ಮ ಅಧ್ಯಯನ ಕೇಂದ್ರದ ಆವರಣದಲ್ಲಿ ಗುರುವಾರ ಸಂಜೆ ಅಂತ್ಯಕ್ರಿಯೆ ನಡೆಸಲಾಯಿತು.

ಯಳನಾಡು ಗ್ರಾಮದಲ್ಲಿ 1843 ಮಾ.2ರಂದು ಜನಿಸಿದ ಅಂಜನಪ್ಪ ಯಳನಾಡು, ಹಿರಿಯೂರು, ತುಮಕೂರು, ಬೆಂಗಳೂರಲ್ಲಿ ವ್ಯಾಸಂಗ ಮುಗಿಸಿ ತಾಲೂಕಿನ ಆರನಕಟ್ಟೆ ಗ್ರಾಮದ ಶ್ರೀವಾಣಿವಿಲಾಸ ಗ್ರಾಮಾಂತರ ಪ್ರೌಢಶಾಲೆಯ ವಿಜ್ಞಾನ ಶಿಕ್ಷ ಕರಾಗಿ, ಮುಖ್ಯಶಿಕ್ಷ ಕರಾಗಿ ಸೇವೆ ಸಲ್ಲಿಸಿ 2001 ರಲ್ಲಿ ನಿವೃತ್ತರಾಗಿದ್ದರು. ಇವರು ಕವಿ, ಕತೆಗಾರ, ವಿಮರ್ಶಕರಾಗಿಯೂ ಹೆಸರಾಗಿದ್ದರು.

ಕೃತಿಗಳು: 'ಮಿಂಚು' (ಕವನ ಸಂಕಲನ), 'ಗ್ರಹಣ'(ಮಕ್ಕಳ ನೀಳ್ಗತೆ), 'ವನಸುಮ' ಮತ್ತು 'ಆಲ್ಬರ್ಟ್‌ ಐನ್‌ಸ್ಟೀನ್‌' (ಜೀವನ ಚಿತ್ರಣ), 'ಹಗಲು ವೇಷದವರ ಸಂಸ್ಕೃತಿ' (ಉಪಸಂಸ್ಕೃತಿ ಅಧ್ಯಯನ), 'ನೇಣು ಮತ್ತು ಇತರ ಕಥೆಗಳು' (ಕಥಾಸಂಕಲನ), 'ಬೆಳಕಿನೊಂದು ಕಿರಣ' (ವಿಮರ್ಶಾ ಪ್ರಬಂಧ), 'ಧರ್ಮ ಮತ್ತು ಮುಕ್ತ ವಿಚಾರ ಸಾಹಿತ್ಯ' (ವೈಚಾರಿಕ ಕೃತಿ).

ಜಿಲ್ಲಾ ಮತ್ತು ತಾಲೂಕು ಕಸಾಪ ಅಧ್ಯಕ್ಷ ರಾಗಿದ್ದರು. ಜಿಲ್ಲಾ ಜನಪರ ಸಾಹಿತ್ಯ ಪರಿಷತ್‌ ಅಧ್ಯಕ್ಷ ರಾಗಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾಗಿದ್ದರು. ಬಂಡಾಯ ಸಾಹಿತ್ಯ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.

ಅಕ್ಷ ರವಾಣಿ ಪಠ್ಯಪುಸ್ತಕ ರಚನಾ ಸಮಿತಿ ಸದಸ್ಯ, ಬೀದರ್‌ ಸಾಹಿತ್ಯ ಸಮ್ಮೇಳನ ಹಾಗೂ ಗುಡಿಬಂಡೆ ಬಂಡಾಯ ಸಾಹಿತ್ಯ ಸಮ್ಮೇಳನಗಳಲ್ಲಿ ಪ್ರಬಂಧ ಮಂಡಿಸಿದ್ದರು. ಚಿತ್ರದುರ್ಗದಲ್ಲಿ 2009 ರಲ್ಲಿ ನಡೆದ ಅಖಿಲ ಭಾರತ ಸಾಹಿತ್ಯ ಸಮ್ಮೇಳನದಲ್ಲಿ ಕಾವ್ಯ ವಾಚಿಸಿದ್ದರು. ರಾಜ್ಯ ಸಾಹಿತ್ಯ ಅಕಾಡೆಮಿ 2011ರಲ್ಲಿ ಗೌರವ ಪ್ರಶಸ್ತಿ ಲಭಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ