ಆ್ಯಪ್ನಗರ

ಚಿನ್ನದ ವ್ಯಾಪಾರಿಗೆ ವಂಚನೆ

ಆಭರಣ ಚಿನ್ನ ಕೊಡುವುದಾಗಿ ಹೇಳಿ ಪರಿಚಿತ ಚಿನ್ನದ ವ್ಯಾಪಾರಿಯಿಂದ 1 ಕೆ.ಜಿ 400 ಗ್ರಾಂ ಅಪರಂಜಿ ಚಿನ್ನ ಪಡೆದ ವ್ಯಕ್ತಿಯೊಬ್ಬರು ವಂಚಿಸಿರುವ ಘಟನೆ ನಗರತ್‌ಪೇಟೆಯಲ್ಲಿ ನಡೆದಿದೆ.

Vijaya Karnataka Web 20 Apr 2018, 5:00 am
ವಿಕ ಸುದ್ದಿಲೋಕ ಬೆಂಗಳೂರು
Vijaya Karnataka Web fraud gold merchant files complaint
ಚಿನ್ನದ ವ್ಯಾಪಾರಿಗೆ ವಂಚನೆ


ಆಭರಣ ಚಿನ್ನ ಕೊಡುವುದಾಗಿ ಹೇಳಿ ಪರಿಚಿತ ಚಿನ್ನದ ವ್ಯಾಪಾರಿಯಿಂದ 1 ಕೆ.ಜಿ 400 ಗ್ರಾಂ ಅಪರಂಜಿ ಚಿನ್ನ ಪಡೆದ ವ್ಯಕ್ತಿಯೊಬ್ಬರು ವಂಚಿಸಿರುವ ಘಟನೆ ನಗರತ್‌ಪೇಟೆಯಲ್ಲಿ ನಡೆದಿದೆ.

ಕಿಲಾರಿ ರಸ್ತೆ ಆಭರಣ ವ್ಯಾಪಾರಿ ಬಾಪು ಬಾಲು ಸಾವಂತ್‌(34) ವಂಚನೆಗೆ ಒಳಗಾದವರು.

ಚಿಕ್ಕಲಸಂದ್ರದ ಉತ್ತರಹಳ್ಳಿ ರಸ್ತೆಯ ನಿವಾಸಿ ದಲ್ಪತ್‌ ರಾಜ್‌(60) ಎಂಬುವವರು ವಂಚನೆ ಮಾಡಿದ್ದಾರೆಂದು ಆರೋಪಿಸಿ ಹಲಸೂರು ಗೇಟ್‌ ಪೊಲೀಸ್‌ ಠಾಣೆಗೆ ಬಾಲು ಸಾವಂತ್‌ ದೂರು ನೀಡಿದ್ದಾರೆ.

ಏ.12ರಂದು ಅಂಗಡಿ ಬಳಿಗೆ ಬಂದಿದ್ದ ದಲ್ಪತ್‌, ತುರ್ತಾಗಿ 300 ಗ್ರಾಂ ಅಪರಂಜಿ ಚಿನ್ನ ಕೊಡಿ. ಅದರ ಬದಲಿಗೆ ರಾತ್ರಿಯೇ ಆಭರಣ ಚಿನ್ನ ಕೊಡುವುದಾಗಿ ಹೇಳಿ ಪಡೆದುಕೊಂಡು ಹೋಗಿದ್ದ. ಏ.13ರಂದು ಮತ್ತೆ ಅಂಗಡಿ ಬಳಿಗೆ ಬಂದು 1 ಕೆಜಿ 100 ಗ್ರಾಂ ಚಿನ್ನ ಪಡೆದು ರಾತ್ರಿ ವೇಳೆಗೆ ವಾಪಸ್‌ ತಂದು ಕೊಡುವುದಾಗಿ ಹೇಳಿ ಹೋಗಿದ್ದಾನೆ. ಆದರೆ, ರಾತ್ರಿ 10 ಗಂಟೆಯಾದರೂ ಚಿನ್ನ ಮರಳಿಸಿಲ್ಲ. ಕರೆ ಮಾಡಿದಾಗ ಮೊಬೈಲ್‌ ಫೋನ್‌ ಸ್ವಿಚ್ಡ್‌ ಆಫ್‌ ಮಾಡಿಕೊಂಡಿದ್ದಾನೆ. ಆಭರಣ ಪಡೆದು ವಂಚಿಸಿರುವ ಆರೋಪಿಯನ್ನು ಪತ್ತೆ ಮಾಡಿ ಕಾನೂನು ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ಬಾಲು ಸಾವಂತ್‌ ಕೋರಿದ್ದಾರೆ.

ಬಾಲು ಸಾವಂತ್‌ ಯಾವ ಕಾರಣಕ್ಕೆ ಇಷ್ಟೊಂದು ಚಿನ್ನವನ್ನು ಕೊಟ್ಟಿದ್ದಾರೆ ಎಂಬುದು ಆರೋಪಿಯ ಬಂಧನದ ಬಳಿಕ ತಿಳಿದು ಬರಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹಲಸೂರು ಗೇಟ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ