ಆ್ಯಪ್ನಗರ

ಮಾನವ ಹಕ್ಕು ಅರಿವು ಕಾರ್ಯಾಗಾರ

'ಮಾನವ ಹಕ್ಕು' ಮನುಷ್ಯ ಬದುಕಲು ಬೇಕಾದ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದೆ ಎಂದು ಸಕ್ರಿ ಐಟಿಐ ಕಾಲೇಜಿನ ಉಪನ್ಯಾಸಕ ಕಿರಣ್‌ಕುಮಾರ್‌ ಹೇಳಿದರು.

ವಿಕ ಸುದ್ದಿಲೋಕ 21 May 2017, 6:17 pm
ಹರಿಹರ : 'ಮಾನವ ಹಕ್ಕು' ಮನುಷ್ಯ ಬದುಕಲು ಬೇಕಾದ ಮೂಲಭೂತ ಹಕ್ಕುಗಳಲ್ಲಿ ಒಂದಾಗಿದೆ ಎಂದು ಸಕ್ರಿ ಐಟಿಐ ಕಾಲೇಜಿನ ಉಪನ್ಯಾಸಕ ಕಿರಣ್‌ಕುಮಾರ್‌ ಹೇಳಿದರು.
Vijaya Karnataka Web
ಮಾನವ ಹಕ್ಕು ಅರಿವು ಕಾರ್ಯಾಗಾರ


ನಗರದ ಸಕ್ರಿ ಐಟಿಐ ಕಾಲೇಜಿನಲ್ಲಿ ಶುಕ್ರವಾರ ನಿಸರ್ಗ ಗ್ರಾಮೀಣ ಅಭಿವೃದ್ಧಿ ಮತ್ತು ವಿದ್ಯಾ ಸಂಸ್ಥೆ, ರಾಜ್ಯ ಮಾನವ ಹಕ್ಕುಗಳ ಆಯೋಗ, ತಾಲೂಕು ಕಾನೂನು ಸೇವಾ ಸಮಿತಿ ಆಶ್ರಯದಲ್ಲಿ ಏರ್ಪಡಿಸಿದ್ದ ಮಾನವ ಹಕ್ಕುಗಳ ಅರಿವು, ರಕ್ಷ ಣೆ, ನೆರವು ಒಂದು ದಿನದ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

ಉಪನ್ಯಾಸ ನೀಡಿದ ಶೈಲಜಾ ಕೆ.ಎಂ. ಭಾರತವು 1993ರಲ್ಲಿ ಪ್ರಥಮ ಬಾರಿಗೆ ಮಾನವ ಹಕ್ಕುಗಳ ಸಂರಕ್ಷ ಣಾ ಅಧಿನಿಯಮದ ಆಯೋಗ ರಚಿಸಿತು. ಹೆಣ್ಣು ಭ್ರೂಣ ಹತ್ಯೆ, ಬಾಲ್ಯ ವಿವಾಹ, ಬಾಲ ಕಾರ್ಮಿಕ, ಹಿಂದುಳಿದ ವರ್ಗಗಳ ಮೇಲೆ ನಡೆಯುವ ಶೋಷಣೆಗಳನ್ನು ತಡೆಯುವುದು ಇಂದು ಅಗತ್ಯವಿದೆ ಎಂದು ತಿಳಿಸಿದರು.

ಶಿಕ್ಷ ಣ ಸಂಯೋಜಕ ಮೆಹಬೂಬ್‌ ಬಾಷಾ ಮಾತನಾಡಿ, 6ರಿಂದ 14 ವರ್ಷದವರಗೆ ಉಚಿತ ಹಾಗೂ ಕಡ್ಡಾಯವಾಗಿ ಶಿಕ್ಷ ಣ ನೀಡುವುದು ಸರಕಾರ ಹಾಗೂ ಪೋಷಕರ ಕರ್ತವ್ಯ ಎಂದರು. ಮೀನಾಕ್ಷ ಮ್ಮ ಪರಿಸರ ಮತ್ತು ಮೂಲಭೂತ ಹಕ್ಕು,

ಡಾ.ವಿಶ್ವನಾಥ ಆರೋಗ್ಯದ ಹಕ್ಕುಗಳ ಕುರಿತು ಮಾತನಾಡಿದರು. ವಿದ್ಯಾರ್ಥಿಗಳು, ಮಹಿಳಾ ಸ್ರೀ ಶಕ್ತಿ ಸಂಘದವರು ಹಾಗೂ ಸಾರ್ವಜನಿಕರು ಮತ್ತು ಸಂಸ್ಥೆಯ ಪದಾಧಿಕಾರಿಗಳು ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ