ಹರಿಹರ : ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿದ್ದ ಗೋದಾಮಿನ ಮೇಲೆ ಭಾನುವಾರ ರಾತ್ರಿ ಪೊಲೀಸರು ದಾಳಿ ನಡೆಸಿ, ಅಪಾರ ಪ್ರಮಾಣದ ಅಕ್ಕಿ ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ನಗರದ ಕೈಗಾರಿಕಾ ಪ್ರದೇಶದ ಗೋದಾಮೊಂದರಲ್ಲಿ ದಾಸ್ತಾನು ಮಾಡಿದ್ದರೆನ್ನಲಾದ 330 ಚೀಲ ಅಕ್ಕಿ, 14 ಚೀಲ ಗೋದಿ ವಶಪಡಿಸಿಕೊಳ್ಳಲಾಗಿದೆ.
ಗ್ರಾಮಾಂತರ ಉಪವಿಭಾಗ ಡಿವೈಎಸ್ಪಿ ಮಂಜುನಾಥ್ ಗಂಗಲ್ ನೇತೃತ್ವದ ತಂಡ ದಾಳಿ ನಡೆಸಿದೆ. ಸಿಪಿಐ ಲಕ್ಷ ್ಮಣ್ ನಾಯ್ಕ, ಪಿಎಸ್ಐ ಸಿದ್ದೇಗೌಡ, ಎಎಸ್ಐ ಮಾರಣ್ಣ, ಆಹಾರ ನಿರೀಕ್ಷ ಕ ಯು.ಎಚ್. ರಮೇಶ್ ಹಾಗೂ ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.
ಆರೋಪಿ ಪರಾರಿ: ತಾಜುದ್ದೀನ್ ಎಂಬ ವ್ಯಕ್ತಿ ಅಕ್ರಮ ಸಂಗ್ರಹ ಮಾಡಿದ್ದೆನ್ನಲಾಗಿದ್ದು, ಆತ ನಾಪತ್ತೆಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ನಗರ ಠಾಣೆಯಲ್ಲಿ ದೂರು ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ಖಚಿತ ಮಾಹಿತಿ ಮೇರೆಗೆ ನಗರದ ಕೈಗಾರಿಕಾ ಪ್ರದೇಶದ ಗೋದಾಮೊಂದರಲ್ಲಿ ದಾಸ್ತಾನು ಮಾಡಿದ್ದರೆನ್ನಲಾದ 330 ಚೀಲ ಅಕ್ಕಿ, 14 ಚೀಲ ಗೋದಿ ವಶಪಡಿಸಿಕೊಳ್ಳಲಾಗಿದೆ.
ಗ್ರಾಮಾಂತರ ಉಪವಿಭಾಗ ಡಿವೈಎಸ್ಪಿ ಮಂಜುನಾಥ್ ಗಂಗಲ್ ನೇತೃತ್ವದ ತಂಡ ದಾಳಿ ನಡೆಸಿದೆ. ಸಿಪಿಐ ಲಕ್ಷ ್ಮಣ್ ನಾಯ್ಕ, ಪಿಎಸ್ಐ ಸಿದ್ದೇಗೌಡ, ಎಎಸ್ಐ ಮಾರಣ್ಣ, ಆಹಾರ ನಿರೀಕ್ಷ ಕ ಯು.ಎಚ್. ರಮೇಶ್ ಹಾಗೂ ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.
ಆರೋಪಿ ಪರಾರಿ: ತಾಜುದ್ದೀನ್ ಎಂಬ ವ್ಯಕ್ತಿ ಅಕ್ರಮ ಸಂಗ್ರಹ ಮಾಡಿದ್ದೆನ್ನಲಾಗಿದ್ದು, ಆತ ನಾಪತ್ತೆಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ನಗರ ಠಾಣೆಯಲ್ಲಿ ದೂರು ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.