ಆ್ಯಪ್ನಗರ

ಸಾಲಮನ್ನಾ ದಾಖಲಾತಿ ಲೋಪ ಬ್ಯಾಂಕ್‌ನಿಂದ ರೈತರು ನಿರ್ಗಮನ

ದಾಖಲಾತಿಗಳಲ್ಲಿ ಸಣ್ಣ ಪುಟ್ಟ ಲೋಪ ದೋಷಗಳ ಕಾರಣಕ್ಕೆ ಸಾಲಮನ್ನಾ ಆಗುವುದಿಲ್ಲವೆಂದು ಬ್ಯಾಂಕಿನ ಅಧಿಕಾರಿಗಳು ತಿಳಿಸಿದ ಹಿನ್ನೆಲೆ ರೈತರು ಬ್ಯಾಂಕಿನಿಂದ ವಾಪಸ್‌ ಹೋದ ಘಟನೆ ತಾಲೂಕಿನ ಗುಂಡಗತ್ತಿ ಸಿಂಡಿಕೇಟ್‌ ಬ್ಯಾಂಕಿನಲ್ಲಿ ಮಂಗಳವಾರ ನಡೆದಿದೆ.

Vijaya Karnataka 19 Dec 2018, 5:00 am
ಹರಪನಹಳ್ಳಿ : ದಾಖಲಾತಿಗಳಲ್ಲಿ ಸಣ್ಣ ಪುಟ್ಟ ಲೋಪ ದೋಷಗಳ ಕಾರಣಕ್ಕೆ ಸಾಲಮನ್ನಾ ಆಗುವುದಿಲ್ಲವೆಂದು ಬ್ಯಾಂಕಿನ ಅಧಿಕಾರಿಗಳು ತಿಳಿಸಿದ ಹಿನ್ನೆಲೆ ರೈತರು ಬ್ಯಾಂಕಿನಿಂದ ವಾಪಸ್‌ ಹೋದ ಘಟನೆ ತಾಲೂಕಿನ ಗುಂಡಗತ್ತಿ ಸಿಂಡಿಕೇಟ್‌ ಬ್ಯಾಂಕಿನಲ್ಲಿ ಮಂಗಳವಾರ ನಡೆದಿದೆ.
Vijaya Karnataka Web debt exit from farmers record lapabank
ಸಾಲಮನ್ನಾ ದಾಖಲಾತಿ ಲೋಪ ಬ್ಯಾಂಕ್‌ನಿಂದ ರೈತರು ನಿರ್ಗಮನ


ಗ್ರಾಮದ ಸಿಂಡಿಕೇಟ್‌ ಬ್ಯಾಂಕಿನ ಸೂಚನಾ ಫಲಕದಲ್ಲಿ ಸಾಲಮನ್ನಾ ಆಯ್ಕೆ ಕುರಿತು ಸಾವಿರ ರೈತರ ಹೆಸರನ್ನು ಪ್ರಕಟಿಸಿ, ಈ ರೈತರು ಸಾಲಮನ್ನಾಕ್ಕೆ ಪಹಣಿ, ಪಡಿತರ ಚೀಟಿ, ಆಧಾರ ಕಾರ್ಡ, ವಂಶವೃಕ್ಷ ದಾಖಲೆಗಳ ಸಲ್ಲಿಸಲು ಬ್ಯಾಂಕ್‌ ಸೂಚಿಸಿದೆ.

ಅದರಂತೆ ತಾಲೂಕಿನ ತಲುವಾಗಲು, ರಾಗಿಮಸಲವಾಡ, ಬೆಂಡಿಗೇರಿ, ಯಡಿಹಳ್ಳಿ ಸೇರಿ ಸುತ್ತಲ 15 ಹಳ್ಳಿಗಳ ರೈತರು ಗುಂಡಗತ್ತಿ ಸಿಂಡಿಕೇಟ್‌ ಬ್ಯಾಂಕಿಗೆ ಆಗಮಿಸಿದ್ದರು. ಬ್ಯಾಂಕಿನವರು ಸೂಚಿಸಿದ ಪ್ರಕಾರ ದಾಖಲಾತಿ ನೀಡಿದ್ದಾರೆ. ಆದರೆ ಬ್ಯಾಂಕಿನ ವ್ಯವಸ್ಥಾಪಕರು ನಿಮ್ಮ ಕೆಲ ದಾಖಲಾತಿಗಳಲ್ಲಿ ಇರುವ ಹೆಸರುಗಳಲ್ಲಿ ಸ್ವಲ್ಪ ವ್ಯತ್ಯಾಸ ಇವೆ, ಆನ್‌ಲೈನ್‌ನಲ್ಲಿ ನಿಮ್ಮ ಮಾಹಿತಿ ನಮೂದು ಆಗುತ್ತಿಲ್ಲ ಎಂದು ಹೇಳಿದ್ದಾರೆ.

ಆಗ ಎಪಿಎಂಸಿ ಮಾಜಿ ಅಧ್ಯಕ್ಷ ಬೆಣ್ಣಿಹಳ್ಳಿ ಹಾಲೇಶಪ್ಪ, ಇನ್ಸಿಲ್‌ ಅಥವಾ ಹೆಸರಿನಲ್ಲಿ ಒಂದೊಂದು ದಾಖಲೆಗಳಲ್ಲಿ ಸಣ್ಣ ಪುಟ್ಟ ವ್ಯತ್ಯಾಸಗಳಿದ್ದರೆ ಸಾಲ ಮನ್ನಾಕ್ಕೆ ಅರ್ಹರಲ್ಲ ಎಂದರೆ ಹೇಗೆ ? ಸಾಲ ಕೊಡುವಾಗ ಇದೇ ದಾಖಲೆಗಳ ಪಡೆದು ಕೊಟ್ಟಿದ್ದಿರಲ್ಲ ಎಂದು ಪ್ರಶಸ್ನಿಸಿದರು. ಬ್ಯಾಂಕಿನವರು, ಆಗ ಹಾಗಿತ್ತು ಸಾಲ ಕೊಟ್ಟಿದ್ದೇವೆ, ಈಗ ನಿಯಮದಂತೆ ನಡೆಯಬೇಕು. ಏನು ಮಾಡಕ್ಕಾಗಲ್ಲ ಎಂದು ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಗೆ ದೂರವಾಣಿ ಮೂಲಕ ೕ ವಿಷಯ ಪ್ರಶ್ನಿಸಿದಾಗ ಅಲ್ಲಿಂದ ಸರಕಾರದ ಆದೇಶದಂತೆ ಕಾರ್ಯನಿರ್ವಹಿಸಲಾಗುತ್ತಿದೆ ಎಂಬ ಉತ್ತರ ರೈತರಿಗೆ ಬಂದಿದೆ. ಇದರಿಂದ ಬೇಸರಗೊಂಡ ನೂರಾರು ರೈತರು ದಾಖಲಾತಿ ಹಿಡಿದುಕೊಂಡು ಮನೆಗೆ ಹಿಂತಿರುಗಿದ್ದಾರೆ.

ಬೆಳೆ ಹಾಗೂ ಎತ್ತಿನ ಬಂಡಿಗಾಗಿ 1 ಲಕ್ಷ ರೂ. ಸಾಲ ತೆಗೆದುಕೊಂಡಿದ್ದೇನೆ. ಆದರೆ ಈಗ ದಾಖಲಾತಿಯಲ್ಲಿ ವ್ಯತ್ಯಾಸವಿದೆ ಎಂದು ಬ್ಯಾಂಕಿನವರು ಹೇಳುತ್ತಾರೆ. ಹಿಂಗ ಇದ್ದರೆ ಸಾಲ ಮನ್ನಾ ಘೋಷಣೆಯಾದರೂ ಏಕೆ ಮಾಡಬೇಕು. ಸಾಲ ಕೊಡುವಾಗ ಇಲ್ಲದ ಷರತ್ತುಗಳು ಸಾಲಮನ್ನಾ ಮಾಡುವಾಗ ಯಾಕೆ. ಸಾಲಮನ್ನಾ ಕೇವಲ ಘೋಷಣೆಗಷ್ಟೆ ಸೀಮಿತವಾಗಿದೆ.
- ಬೆಣ್ಣಿಹಳ್ಳಿ ಹಾಲೇಶಪ್ಪ, ಎಪಿಎಂಸಿ ಮಾಜಿ ಅಧ್ಯಕ್ಷ .

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ