ಹುಬ್ಬಳ್ಳಿ: ಗ್ರಾಮೀಣ ಪ್ರದೇಶದ ಜನರಿಗೆ ಅನುಕೂಲವಾಗುವಂತೆ ಕೆನರಾ ಬ್ಯಾಂಕ್ ಮಿತ್ರ ಯೋಜನೆ ಜಾರಿಗೆ ತಂದಿದೆ. ಈ ಮೂಲಕ ಬ್ಯಾಂಕಿನ ಸೌಲಭ್ಯಗಳು ಗ್ರಾಹಕರ ಮನೆ ಬಾಗಿಲಿನಲ್ಲಿಯೇ ಲಭ್ಯ ಎಂದು ಹುಬ್ಬಳ್ಳಿ ಕ್ಷೇತ್ರೀಯ ಕಚೇರಿ ಎಜಿಎಂ ಸುರೇಶಕುಮಾರ ಎಂ. ತಿಳಿಸಿದ್ದಾರೆ. ಕ್ಷೇತ್ರೀಯ ಎಲ್ಲಬ್ಯಾಂಕ್ ಮಿತ್ರರ ಕಾರ್ಯಕ್ಷೇತ್ರಗಳಿಗೆ ಭೇಟಿ ನೀಡಿ ನಂತರ ಅವರು ಮಾತನಾಡಿದರು.
ಪ್ರಸಕ್ತ ಲಾಕ್ಡೌನ್ ಸನ್ನಿವೇಶದಲ್ಲಿಕೇಂದ್ರ ಮತ್ತು ರಾಜ್ಯ ಸರಕಾರಗಳು ಘೋಷಿಸಿರುವ ಆರ್ಥಿಕ ನೆರವನ್ನುಫಲಾನುಭವಿಗಳಿಗೆ, ಮಹಿಳೆಯರಿಗೆ, ಪಿಂಚಣಿದಾರರಿಗೆ, ರೈತರಿಗೆ ಮತ್ತು ಅಸಂಘಟಿತ ಕಾರ್ಮಿಕ ವರ್ಗದವರಿಗೆ ತಲುಪಿಸುವ ನಿಟ್ಟಿನಲ್ಲಿಬ್ಯಾಂಕ್ ಮಿತ್ರರು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರು.
ಅಣ್ಣಿಗೇರಿ ಶಾಖೆಯ ವಿನಾಯಕ ಭೋಸಲೆ, ದೀಪಕ ಮತ್ತು ಮನೋಜ್ ಅವರು ಹಳ್ಳಿಗಳಿಗೆ ಹೋಗಿ ಸೇವೆ ನೀಡುತ್ತಿದ್ದಾರೆ. ಗಜೇಂದ್ರಗಡ ಶಾಖೆಗೆ ಬರುವ ಬೈರಾಪುರ ಮತ್ತು ಬೈರಾಪುರ ತಾಂಡದಂತಹ ಸಣ್ಣಹಳ್ಳಿಗಳಲ್ಲಿಬ್ಯಾಂಕ್ ಮಿತ್ರರು ಸೇವೆ ನೀಡುತ್ತಿರುವುದು ಶ್ಲಾಘನೀಯ. ಸೇವೆ ಪಡೆಯಲು ಜನರು ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದ್ದಾರೆ.
ಪ್ರಸಕ್ತ ಲಾಕ್ಡೌನ್ ಸನ್ನಿವೇಶದಲ್ಲಿಕೇಂದ್ರ ಮತ್ತು ರಾಜ್ಯ ಸರಕಾರಗಳು ಘೋಷಿಸಿರುವ ಆರ್ಥಿಕ ನೆರವನ್ನುಫಲಾನುಭವಿಗಳಿಗೆ, ಮಹಿಳೆಯರಿಗೆ, ಪಿಂಚಣಿದಾರರಿಗೆ, ರೈತರಿಗೆ ಮತ್ತು ಅಸಂಘಟಿತ ಕಾರ್ಮಿಕ ವರ್ಗದವರಿಗೆ ತಲುಪಿಸುವ ನಿಟ್ಟಿನಲ್ಲಿಬ್ಯಾಂಕ್ ಮಿತ್ರರು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರು.
ಅಣ್ಣಿಗೇರಿ ಶಾಖೆಯ ವಿನಾಯಕ ಭೋಸಲೆ, ದೀಪಕ ಮತ್ತು ಮನೋಜ್ ಅವರು ಹಳ್ಳಿಗಳಿಗೆ ಹೋಗಿ ಸೇವೆ ನೀಡುತ್ತಿದ್ದಾರೆ. ಗಜೇಂದ್ರಗಡ ಶಾಖೆಗೆ ಬರುವ ಬೈರಾಪುರ ಮತ್ತು ಬೈರಾಪುರ ತಾಂಡದಂತಹ ಸಣ್ಣಹಳ್ಳಿಗಳಲ್ಲಿಬ್ಯಾಂಕ್ ಮಿತ್ರರು ಸೇವೆ ನೀಡುತ್ತಿರುವುದು ಶ್ಲಾಘನೀಯ. ಸೇವೆ ಪಡೆಯಲು ಜನರು ಮುಂಜಾಗ್ರತಾ ಕ್ರಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ತಿಳಿಸಿದ್ದಾರೆ.