Please enable javascript.ಸ್ಥಳೀಯ ಕೈಗಾರಿಕೆಯಿಂದ ಉದ್ಯೋಗ ವೃದ್ಧಿ ; ಮಂಗೇಶ ಬೆಂಡೆ - job growth by local industry; mangesh bende - Vijay Karnataka

ಸ್ಥಳೀಯ ಕೈಗಾರಿಕೆಯಿಂದ ಉದ್ಯೋಗ ವೃದ್ಧಿ ; ಮಂಗೇಶ ಬೆಂಡೆ

Vijaya Karnataka 10 Nov 2020, 5:00 am
Subscribe

ಹುಬ್ಬಳ್ಳಿ: ವೋಕಲ್‌ ಫಾರ್‌ ಲೋಕಲ್‌ ಎಂಬಂತೆ ಸ್ಥಳೀಯ ಮಟ್ಟದಲ್ಲಿಕೈಗಾರಿಕೆಗಳನ್ನು ಸ್ಥಾಪಿಸುವುದರಿಂದ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಲಭಿಸುತ್ತದೆ. ಅಲ್ಲದೆ, ಇಲ್ಲಿನ ಉತ್ಪನ್ನಗಳು ಇತರೆಡೆ ಪೂರೈಕೆಯಾಗಿ ಉದ್ಯಮ ಬೆಳೆಯುತ್ತದೆ ಎಂದು ಆರ್‌ಎಸ್‌ಎಸ್‌ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಬೆಂಡೆ ಹೇಳಿದರು.

9 SANTOSH BHENDE_21
ಗಾಮನಗಟ್ಟಿ ಕೈಗಾರಿಕಾ ವಸಾಹತು ಪ್ರದೇಶದಲ್ಲಿಆರಂಭಗೊಂಡ ಚರ್ಮೋದ್ಯಮ ಘಟಕದಲ್ಲಿಮಂಗೇಶ ಭೆಂಡೆ, ಸಚಿವ ಜಗದೀಶ ಶೆಟ್ಟರ್‌ ಉತ್ಪನ್ನಗಳನ್ನು ವೀಕ್ಷಿಸಿದರು.
ಹುಬ್ಬಳ್ಳಿ: ವೋಕಲ್‌ ಫಾರ್‌ ಲೋಕಲ್‌ ಎಂಬಂತೆ ಸ್ಥಳೀಯ ಮಟ್ಟದಲ್ಲಿಕೈಗಾರಿಕೆಗಳನ್ನು ಸ್ಥಾಪಿಸುವುದರಿಂದ ಸ್ಥಳೀಯರಿಗೆ ಹೆಚ್ಚಿನ ಉದ್ಯೋಗ ಲಭಿಸುತ್ತದೆ. ಅಲ್ಲದೆ, ಇಲ್ಲಿನ ಉತ್ಪನ್ನಗಳು ಇತರೆಡೆ ಪೂರೈಕೆಯಾಗಿ ಉದ್ಯಮ ಬೆಳೆಯುತ್ತದೆ ಎಂದು ಆರ್‌ಎಸ್‌ಎಸ್‌ ಅಖಿಲ ಭಾರತೀಯ ವ್ಯವಸ್ಥಾ ಪ್ರಮುಖ ಮಂಗೇಶ ಬೆಂಡೆ ಹೇಳಿದರು.

ಇಲ್ಲಿನ ಗಾಮನಗಟ್ಟಿ ಕೈಗಾರಿಕಾ ವಸಾಹತು ಪ್ರದೇಶದಲ್ಲಿಎಲ್‌.ಎನ್‌. ಲೆದರ್‌ ಇಂಡಸ್ಟ್ರೀಸ್‌ ಉದ್ಯಾಟನೆ ವೇಳೆ ಅವರು ಮಾತನಾಡಿದರು.

ಚರ್ಮೋದ್ಯಮ ನಾಶ ಆಗುತ್ತಿದೆ ಎಂಬ ಆತಂಕ ಸಮಾಜದಲ್ಲಿದೆ. ಕೈಗಾರಿಕೀಕರಣಗೊಂಡು ಹೊಸ ರೂಪಕ್ಕೆ ತಿರುಗಿ ಉದ್ಯಮ ರೂಪ ಪಡೆದರೂ ಪರಂಪರಾಗತ ಈ ವೈಶಿಷ್ಟ್ಯ ಕಲೆಯನ್ನು ಉಳಿಸಿಕೊಳ್ಳುವ ಅಗತ್ಯವಿದೆ ಎಂದರು.

ಚರ್ಮೋದ್ಯಮ ಪರಂಪರಾಗತ ಕಲೆಯಾಗಿದ್ದು, ಉತ್ಪನ್ನದ ಗುಣಮಟ್ಟದಲ್ಲಿರಾಜಿ ಮಾಡಿಕೊಳ್ಳದೆ ಸಮಯಕ್ಕೆ ಸರಿಯಾಗಿ ಪೂರೈಕೆ ಮಾಡುವುದು ಹಾಗೂ ನಿರಂತರವಾಗಿ ನಾವೀನ್ಯತೆ ಅಳವಡಿಸಿಕೊಳ್ಳುವುದರಿಂದ ಉದ್ಯಮ ಯಶಸ್ವಿಯಾಗುತ್ತದೆ ಎಂದು ಹೇಳಿದರು.

ಇದಕ್ಕೂ ಮುನ್ನ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್‌ ಎಲ್‌. ಎನ್‌. ಲೆದರ್‌ ಇಂಡಸ್ಟ್ರೀಸ್‌ ಉದ್ಘಾಟಿಸಿದರು. ಈ ವೇಳೆ ಶಿವಾನಂದ ಆವಟೆ, ಮಹೇಶ ಟೆಂಗಿನಕಾಯಿ, ದೊಡ್ಡಬಸವರಾಜ, ಜಗದೀಶ ಬೆಟಗೀರಿ, ಯಲ್ಲಪ್ಪ ಬೆಂಡಿಗೇರಿ, ಮಹೇಶ ಬುರ್ಲಿ ಸೇರಿದಂತೆ ಹಲವರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ