ಕೊಣ್ಣೂರ: ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ ಮೂಲಕ ಭವ್ಯ ಭಾರತ ನಿರ್ಮಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಉತ್ತಮ ಆಡಳಿತ ನೀಡುತ್ತಿದ್ದಾರೆ ಎಂದು ಗ್ರಾಪಂ ಅಧ್ಯಕ್ಷ ಹನಮಂತ ಕಾಡಪ್ಪನವರ ಹೇಳಿದರು. ಸಮೀಪದ ಶಿರೋಳದಲ್ಲಿ ನಡೆದ ಮೇರಾ ಪರಿವಾರ್ ಭಾಜಪ ಪರಿವಾರ್ ಅಭಿಯಾನದಲ್ಲಿ ಅವರು ಮಾತನಾಡಿದರು.
ನರಗುಂದ ತಾಲೂಕು ಬಿಜಿಪಿ ಮಹಿಳಾ ಅಧ್ಯಕ್ಷೆ ಶಾರದಾ ಜವಳಿ ಮಾತನಾಡಿ, ಮಹಿಳೆಯರಿಗೆ ಸ್ವಸಹಾಯ ಸಂಘಗಳ ಮೂಲಕ, ಕಾರ್ಮಿಕರಿಗೆ ಪಿಂಚಣಿ, ಬಡವರಿಗೆ ಆರೋಗ್ಯ ಯೋಜನೆ, ರೈತರಿಗೆ ಬೆಳೆ ಸಹಾಯಧನ ಮುಂತಾದ ಯೋಜನೆ ಜಾರಿಗೊಳಿಸಿದ್ದಾರೆ ಎಂದರು.
ಕೆಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ನಿಂಗಣ್ಣ ಗಾಡಿ, ಶೇಖಣ್ಣ ಗಟ್ಟಿ, ಬಸವರಾಜ ಗಡೆಖಾರ, ಶಿವಾನಂದ ಯಲಬಳ್ಳಿ, ಮಹಾಂತೇಶ ಕರ್ಕಿಕಟ್ಟಿ, ಈರಣ್ಣ ಕರ್ಕಿಕಟ್ಟಿ, ಮಹಾಂತೇಶ ಬಾಳಿಕಾಯಿ, ನಾಗರಾಜ ನಿಂಬರಗಿ, ಮಂಜುನಾಥ ಕವಡಿಮಟ್ಟಿ, ಶಿವಯೋಗಿ ಶಾಂತಗೇರಿ, ವಿ.ಎಸ್.ಚವಡಿ ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.
ನರಗುಂದ ತಾಲೂಕು ಬಿಜಿಪಿ ಮಹಿಳಾ ಅಧ್ಯಕ್ಷೆ ಶಾರದಾ ಜವಳಿ ಮಾತನಾಡಿ, ಮಹಿಳೆಯರಿಗೆ ಸ್ವಸಹಾಯ ಸಂಘಗಳ ಮೂಲಕ, ಕಾರ್ಮಿಕರಿಗೆ ಪಿಂಚಣಿ, ಬಡವರಿಗೆ ಆರೋಗ್ಯ ಯೋಜನೆ, ರೈತರಿಗೆ ಬೆಳೆ ಸಹಾಯಧನ ಮುಂತಾದ ಯೋಜನೆ ಜಾರಿಗೊಳಿಸಿದ್ದಾರೆ ಎಂದರು.
ಕೆಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ನಿಂಗಣ್ಣ ಗಾಡಿ, ಶೇಖಣ್ಣ ಗಟ್ಟಿ, ಬಸವರಾಜ ಗಡೆಖಾರ, ಶಿವಾನಂದ ಯಲಬಳ್ಳಿ, ಮಹಾಂತೇಶ ಕರ್ಕಿಕಟ್ಟಿ, ಈರಣ್ಣ ಕರ್ಕಿಕಟ್ಟಿ, ಮಹಾಂತೇಶ ಬಾಳಿಕಾಯಿ, ನಾಗರಾಜ ನಿಂಬರಗಿ, ಮಂಜುನಾಥ ಕವಡಿಮಟ್ಟಿ, ಶಿವಯೋಗಿ ಶಾಂತಗೇರಿ, ವಿ.ಎಸ್.ಚವಡಿ ಹಾಗೂ ಬಿಜೆಪಿ ಕಾರ್ಯಕರ್ತರು ಇದ್ದರು.