ಹೊಳೆನರಸೀಪುರ: ಅನುಮತಿ ಇಲ್ಲದೆ ಸಾಗಿಸುತ್ತಿದ್ದ ಹುಣಸೆ ಮರದ ನಾಟ ತುಂಬಿದ್ದ 1ಲಾರಿ ಮತ್ತು ಟ್ರಾಕ್ಟರ್ನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ.
ಚಾಲಕ ಪರಾರಿಯಾಗಿದ್ದು, 1 ಲಕ್ಷ ರೂ ಮೌಲ್ಯದ ಮರ ಹಾಗೂ ಲಾರಿ, ಟ್ರಾಕ್ಟರ್ಗಳನ್ನು ವಲಯ ಅರಣ್ಯಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಹಾಸನದ ಕಡೆಯಿಂದ ರಾಗೀಹಳ್ಳಿ ಸುತ್ತಮುತ್ತಲ ಗ್ರಾಮಕ್ಕೆ ಹೊಗೆಸೊಪ್ಪು ಬೇಯಿಸಿ ಸಂಸ್ಕರಿಸಲು ಉರುವಲುವಾಗಿ ಬಳಸಲು ಸಾಗಾಣಿಕೆ ನಡೆಸಲಾಗುತ್ತಿತ್ತು. ರಾತ್ರಿ ಗಸ್ತಿನಲ್ಲಿದ್ದಾಗ ಶುಕ್ರವಾರ ರಾತ್ರಿ ರಾಗೀಹಳ್ಳಿ ಬಳಿ ಸಾಗುತ್ತಿದ್ದ ಲಾರಿ , ಟ್ರಾಕ್ಟರ್ ತಡೆದು ಪರಿಶೀಲಿಸಿದಾಗ ಪರವಾನಗಿ ಪಡೆದಿಲ್ಲದ್ದು ಕಂಡುಬಂತು. ಚಾಲಕರಿಬ್ಬರೂ ಪರಾರಿಯಾದರು ಎಂದು ವಲಯ ಅರಣ್ಯಾಧಿಕಾರಿ ಅನಿಲ್ಕುಮಾರ್ ತಿಳಿಸಿದ್ದಾರೆ. ಸಿಬ್ಬಂದಿಗಳಾದ ರಂಗಸ್ವಾಮಿ, ಪ್ರದೀಪ್ ಕಾರ್ಯಾಚರಣೆಯಲ್ಲಿದ್ದರು. ಪ್ರಕರಣ ದಾಖಲಾಗಿದೆ.