ಆ್ಯಪ್ನಗರ

ಜಲಾಶಯದಿಂದ 4 ಸಾವಿರ ಕ್ಯೂಸೆಕ್ಸ್‌ ನದಿಗೆ

ತಾಲೂಕಿನಾದ್ಯಂತ ಬಿಡುವಿಲ್ಲದೆ ಸುರಿಯುತ್ತಿರುವ ಮಳೆಯಿಂದ ಯಗಚಿ ಅಣೆಕಟ್ಟೆಗೆ ಒಳಹರಿವು ಪ್ರಮಾಣ ಹೆಚ್ಚಿದ್ದು, 5 ಕ್ರಸ್ಟ್‌ ಗೇಟ್‌ ಮೂಲಕ 4 ಸಾವಿರ ಕ್ಯೂಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿದೆ.

Vijaya Karnataka 22 Oct 2019, 5:00 am
ಬೇಲೂರು: ತಾಲೂಕಿನಾದ್ಯಂತ ಬಿಡುವಿಲ್ಲದೆ ಸುರಿಯುತ್ತಿರುವ ಮಳೆಯಿಂದ ಯಗಚಿ ಅಣೆಕಟ್ಟೆಗೆ ಒಳಹರಿವು ಪ್ರಮಾಣ ಹೆಚ್ಚಿದ್ದು, 5 ಕ್ರಸ್ಟ್‌ ಗೇಟ್‌ ಮೂಲಕ 4 ಸಾವಿರ ಕ್ಯೂಸೆಕ್‌ ನೀರನ್ನು ನದಿಗೆ ಬಿಡಲಾಗುತ್ತಿದೆ.
Vijaya Karnataka Web HSN 21 BLRP--4_16


ಜಲಾಶಯಕ್ಕೆ ಒಳಹರಿವು 4 ಸಾವಿರ ಕ್ಯೂಸೆಕ್‌ ಇದ್ದು, ಇದೇ ಪ್ರಮಾಣದಲ್ಲಿನೀರನ್ನು ಹೊರಬಿಡಲಾಗುತ್ತಿದೆ. ಜಲಾಶಯದಲ್ಲಿಇದೀಗ 3.4 ಟಿಎಂಸಿ ನೀರು ಸಂಗ್ರಹವಿದೆ ಎಂದು ಯಗಚಿ ಯೋಜನಾ ಎಂಜಿನಿಯರ್‌ ತಿಳಿಸಿದ್ದಾರೆ.

ಹಗಲಿನಲ್ಲಿಒಂದಿಷ್ಟು ಬಿಡುವು ಕೊಟ್ಟರೂ ಸಂಜೆ ಆಗುತ್ತಿದ್ದಂತೆ ಮಳೆ ಬಿರುಸಾಗಿ ಬರಲಾರಂಭಿಸುತ್ತದೆ. ಭಾನುವಾರ ರಾತ್ರಿಯಲ್ಲಾಮಳೆ ಬಂದಿದೆ. ಬಯಲು ಸೀಮೆ ಪ್ರದೇಶವಾದ ಹಳೇಬೀಡು ಭಾಗದಲ್ಲಿಯೂ ಮಳೆ ಬರತೊಡಗಿದ್ದು, ಹಳೇಬೀಡು ಭಾಗದಲ್ಲಿ5 ಮನೆಗಳು ಮಳೆಯಿಂದ ಶಿಥಿಲಗೊಂಡಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಮಲೆನಾಡ ಭಾಗವಾದ ಅರೇಹಳ್ಳಿ, ಗೆಂಡೆಹಳ್ಳಿ, ನಾಗೇನಹಳ್ಳಿ ಈ ಭಾಗದಲ್ಲಿನ 6 ಸಣ್ಣಪುಟ್ಟ ಮರಗಳು ಧರೆಗೆ ಉರುಳಿವೆ.

ಮಳೆ ಪ್ರಮಾಣ: ಬೇಲೂರು ಕಸಬಾ 47.8 ಮಿ.ಮೀ., ಹಳೇಬೀಡು 55 ಮಿ.ಮೀ., ಹಗರೆ 17 ಮಿ.ಮೀ., ಬಿಕ್ಕೋಡು 14.2 ಮಿ.ಮೀ., ಗೆಂಡೇಹಳ್ಳಿ 75 ಮಿ.ಮೀ., ಅರೇಹಳ್ಳಿ 40 ಮಿ.ಮೀ. ಮಳೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ