ಆ್ಯಪ್ನಗರ

ರಾಯರ ಸ್ಮರಣೆಯಿಂದ ಸಂಕಷ್ಟ ದೂರ

ಗುತ್ತಲ :ರಾಯರ ನಿತ್ಯ ಸ್ಮರಣೆಯಿಂದ ಸಕಲ ಕಷ್ಟಗಳು ಪರಿಹಾರವಾಗುತ್ತವೆ. ಅವರ ಉಪಾಸನೆ ಮಾಡುವ ಮೂಲಕ ಎಲ್ಲರೂ ರಾಯರ ಕೃಪೆಗೆ ಪಾತ್ರರಾಗಬೇಕು ಎಂದು ಮಂತ್ರಾಲಯ ಶ್ರೀರಾಘವೇಂದ್ರ ಮಠದ ಸುಬುಧೇಂದ್ರ ತೀರ್ಥ ಸ್ವಾಮಿಗಳು ಹೇಳಿದರು. ಭಾನುವಾರ ಇಲ್ಲಿನ ಅಕ್ಷತಾ ವೃಂದಾವನವಿರುವ ರಾಯರ ಮಠಕ್ಕೆ ಭೇಟಿ ನೀಡಿ ಆಶೀರ್ವಚನ ನೀಡಿದ ಅವರು ರಾಜ್ಯದ ಬಹುತೇಕ ಊರುಗಳಲ್ಲಿ ರಾಯರ ವೃಂದಾವನಗಳಿವೆ. ಭಕ್ತರು ಅವರ ಸೇವೆಯನ್ನು ಮಾಡುತ್ತಿದ್ದು ಆ ಮೂಲಕ ಸಕಲ ಇಷ್ಟಾರ್ಥಗಳನ್ನು

Vijaya Karnataka 17 Jul 2018, 5:00 am
ಗುತ್ತಲ :ರಾಯರ ನಿತ್ಯ ಸ್ಮರಣೆಯಿಂದ ಸಕಲ ಕಷ್ಟಗಳು ಪರಿಹಾರವಾಗುತ್ತವೆ. ಅವರ ಉಪಾಸನೆ ಮಾಡುವ ಮೂಲಕ ಎಲ್ಲರೂ ರಾಯರ ಕೃಪೆಗೆ ಪಾತ್ರರಾಗಬೇಕು ಎಂದು ಮಂತ್ರಾಲಯ ಶ್ರೀರಾಘವೇಂದ್ರ ಮಠದ ಸುಬುಧೇಂದ್ರ ತೀರ್ಥ ಸ್ವಾಮಿಗಳು ಹೇಳಿದರು.
Vijaya Karnataka Web distressed by roys memory
ರಾಯರ ಸ್ಮರಣೆಯಿಂದ ಸಂಕಷ್ಟ ದೂರ

ಭಾನುವಾರ ಇಲ್ಲಿನ ಅಕ್ಷತಾ ವೃಂದಾವನವಿರುವ ರಾಯರ ಮಠಕ್ಕೆ ಭೇಟಿ ನೀಡಿ ಆಶೀರ್ವಚನ ನೀಡಿದ ಅವರು ರಾಜ್ಯದ ಬಹುತೇಕ ಊರುಗಳಲ್ಲಿ ರಾಯರ ವೃಂದಾವನಗಳಿವೆ. ಭಕ್ತರು ಅವರ ಸೇವೆಯನ್ನು ಮಾಡುತ್ತಿದ್ದು ಆ ಮೂಲಕ ಸಕಲ ಇಷ್ಟಾರ್ಥಗಳನ್ನು ಈಡೇರಿಸಿಕೊಳ್ಳ್ಳುತ್ತಿದ್ದಾರೆ. ರಾಯರು ಜಾತ್ಯತೀತವಾಗಿ ಸಕಲ ಭಕ್ತರನ್ನು ಉದ್ಧರಿಸುತ್ತಿದ್ದು ಅವರ ಸೇವೆ ಮಾಡಿದವರಿಗೆ ಸಂಕಷ್ಟ ಬರುವುದಿಲ್ಲ ಎಂದು ಸ್ವಾಮಿಗಳು ಹೇಳಿದರು.

ರಾಯರ ಮಠದ ಕಟ್ಟಡ ಹಾಗೂ ನವೀಕರಣ ಕಾಮಗಾರಿ ವೀಕ್ಷಿಸಿದ ಶ್ರೀಗಳು ಮೆಚ್ಚುಗೆ ವ್ಯಕ್ತಪಡಿಸಿದರು. ರಾಘವೇಂದ್ರ ಮುಳಗುಂದ ಅವರು ಪ್ರಗತಿಯ ಮಾಹಿತಿ ವಿವರಿಸಿದರು.

ಇದೇ ವೇಳೆ ಮಠದ ಉಸ್ತುವಾರಿ ಸಮಿತಿಯ ರಾಘವೇಂದ್ರ ಮುಳಗುಂದ, ವಿನಾಯಕ ನಾಡಗೇರ ,ಶ್ರೀಧರ ಆಚಾರ ಹುಬ್ಬಳೀಕರ, ಲಕ್ಷ್ಮಣರಾವ್‌ ಕುಲಕರ್ಣಿ, ಗಾಯತ್ರಿ ಮಹಿಳಾ ಮಂಡಳದ ಸದಸ್ಯೆಯರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ