ಹಿರೇಕೆರೂರು:ತಾಲೂಕಿನ ಮಾಸೂರ ಗ್ರಾಮದ ಚನ್ನಮಲ್ಲಿಕಾರ್ಜುನ ಪ್ರೌಢಶಾಲೆ ಆವರಣದಲ್ಲಿ ಡಿ.15ರಂದು ಮಧ್ಯಾಹ್ನ 1ಗಂಟೆಗೆ ತಾಲೂಕು ಪ್ರೌಢಶಾಲೆ ಮುಖ್ಯೋಪಾಧ್ಯಾಯರ ಮಂಡಳಿ ಆಶ್ರಯದಲ್ಲಿ ಮುಖ್ಯೋಪಾಧ್ಯಾಯರ ಸಭೆ ನಡೆಯಲಿದೆ.
ತಾಲೂಕಿನಲ್ಲಿರುವ ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರ ಸಭೆ ನಡೆಯಲಿದ್ದು, ತಾಲೂಕು ಪ್ರೌಢಶಾಲೆ ಮುಖ್ಯೋಪಾಧ್ಯಾಯರ ಮಂಡಳಿ ಅಧ್ಯಕ್ಷ ಆರ್.ಕೆ. ಲಮಾಣಿ ಅಧ್ಯಕ್ಷ ತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕ್ಷೇತ್ರ ಶಿಕ್ಷ ಣಾದಿಕಾರಿ ಸಿ.ಪ್ರಸನ್ನಕುಮಾರ ಭಾಗವಹಿಸುವರು. ಆದ್ದರಿಂದ ಮುಖ್ಯೋಪಾಧ್ಯಾಯರು ತಪ್ಪದೆ ಸಭೆಗೆ ಆಗಮಿಸಬೇಕು ಎಂದು ಮಂಡಳಿ ಪ್ರಧಾನ ಕಾರ್ಯದರ್ಶಿ ಎಂ.ಎಂ. ಅಡ್ಮನಿ ತಿಳಿಸಿದ್ದಾರೆ.