ಹಾವೇರಿ:ಕರ್ನಾಟಕ ರಾಜ್ಯ ವಕ್ಪ್ ಕೌನ್ಸಿಲ್ ಅಧಿಕಾರೇತರ ಸದಸ್ಯರಾಗಿದ್ದ ಉಡುಪಿ ಜಿಲ್ಲೆ ಹಸನಬ್ಬ ಶಿರ್ವ ಅವರನ್ನು ಸರಕಾರದ ಅಧಿಸೂಚನೆಯಂತೆ ನೇಮಕ ಮಾಡಲಾಗಿತ್ತು. ನಂತರ ನಾಮನಿರ್ದೇಶಿಸಿ ಅಧಿಸೂಚಿಸಲಾಗಿರುವುದನ್ನು ರದ್ದುಪಡಿಸಿ ಇವರ ಬದಲಿಗೆ ಬ್ಯಾಡಗಿ ತಾಲೂಕಿನ ಕಾಗಿನೆಲೆ ಗ್ರಾಮದ ಅಯೂಬಖಾನ್ ಮಲ್ಲೂರ ಅವರನ್ನು ಕರ್ನಾಟಕ ರಾಜ್ಯ ವಕ್ಪ್ ಕೌನ್ಸಿಲ್ನ ಅಧಿಕಾರೇತರ ಸದಸ್ಯರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ಮತ್ತು ಮುಂದಿನ ಆದೇಶದವರೆಗೂ ನಾಮ ನಿರ್ದೇಶಿಸಿ ಅಧಿಸೂಚಿಸಲಾಗಿದೆ ಎಂದು ಕರ್ನಾಟಕ ರಾಜ್ಯಪಾಲರ ಆದೇಶದನುಸಾರವಾಗಿ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಪ್ ಇಲಾಖೆ ಅಧಿಕಾರಿ ಎಂ.ನಾಗರತ್ನ ಆದೇಶ ಹೋರಡಿಸಿದ್ದಾರೆ.
ವಕ್ಪ್ ಕೌನ್ಸಿಲ್ಗೆ ನಾಮನಿರ್ದೇಶನ
ವಿಕ ಸುದ್ದಿಲೋಕ 28 May 2017, 5:00 am
Subscribe