ಆ್ಯಪ್ನಗರ

ಪಕ್ಷದ ಪ್ರಣಾಳಿಕೆಯಲ್ಲಿ ಪಂಚಮಸಾಲಿ 2ಎ ಮೀಸಲು, ಸರಕಾರಕ್ಕೆ ಮನವಿ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್

‘ಅನ್ಯ ಸಮಾಜದ ಬೆಳವಣಿಗೆಯಲ್ಲಿ ಖುಷಿ ಪಡುವ ಮತ್ತು ಎಲ್ಲಸಮುದಾಯಗಳೊಂದಿಗೆ ಹೊಂದಿಕೊಂಡು ಹೋಗುವ ಗುಣ ಪಂಚಮಸಾಲಿ ಸಮಾಜಕ್ಕಿದೆ. ಪಂಚಮಸಾಲಿ ಸಮಾಜಕ್ಕೆ ನ್ಯಾಯ ಸಿಗುವ ನಿಟ್ಟಿನಲ್ಲಿಅಧಿಕಾರ ಇದ್ದಾಗ, ಇಲ್ಲದಿದ್ದಾಗೂ ಹೋರಾಟ ಇರುತ್ತದೆ’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು. ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲು ನೀಡುವ ಬಗ್ಗೆ ಉಲ್ಲೇಖವಿದೆ. ನಮ್ಮ ಸರಕಾರಕ್ಕೆ ಮನವಿ ಮಾಡಿ 2ಎ ಮೀಸಲು ಜಾರಿಗೆ ಒತ್ತಾಯಿಸುತ್ತೇವೆ ಎಂದರು.

Edited byಶ್ರೀಲಕ್ಷ್ಮೀ ಎಚ್ಎಲ್ | Vijaya Karnataka 29 Oct 2023, 11:00 pm

ಹೈಲೈಟ್ಸ್‌:

  • ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲು ನೀಡುವ ಬಗ್ಗೆ ಉಲ್ಲೇಖವಿದೆ: ಲಕ್ಷ್ಮಿ ಹೆಬ್ಬಾಳ್ಕರ್
  • ನಮ್ಮ ಸರಕಾರಕ್ಕೆ ಮನವಿ ಮಾಡಿ 2ಎ ಮೀಸಲು ಜಾರಿಗೆ ಒತ್ತಾಯಿಸುತ್ತೇವೆ ಎಂದು ಭರವಸೆ
  • ಎಲ್ಲ ಸಮುದಾಯಗಳೊಂದಿಗೆ ಹೊಂದಿಕೊಂಡು ಹೋಗುವ ಗುಣ ಪಂಚಮಸಾಲಿ ಸಮಾಜಕ್ಕಿದೆ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್
ಹಾನಗಲ್ಲ: ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲು ನೀಡುವ ಬಗ್ಗೆ ಉಲ್ಲೇಖವಿದೆ. ನಮ್ಮ ಸರಕಾರಕ್ಕೆ ಮನವಿ ಮಾಡಿ 2ಎ ಮೀಸಲು ಜಾರಿಗೆ ಒತ್ತಾಯಿಸುತ್ತೇವೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.
ತಾಲೂಕಿನ ಸಾಂವಸಗಿ ಗ್ರಾಮದಲ್ಲಿ ನಡೆದ ವೀರರಾಣಿ ಕಿತ್ತೂರ ಚನ್ನಮ್ಮ ಮೂರ್ತಿ ಅನಾವರಣ ಸಮಾರಂಭದಲ್ಲಿಅವರು ಮಾತನಾಡಿದರು. ‘ಅನ್ಯ ಸಮಾಜದ ಬೆಳವಣಿಗೆಯಲ್ಲಿ ಖುಷಿ ಪಡುವ ಮತ್ತು ಎಲ್ಲ ಸಮುದಾಯಗಳೊಂದಿಗೆ ಹೊಂದಿಕೊಂಡು ಹೋಗುವ ಗುಣ ಪಂಚಮಸಾಲಿ ಸಮಾಜಕ್ಕಿದೆ. ಪಂಚಮಸಾಲಿ ಸಮಾಜಕ್ಕೆ ನ್ಯಾಯ ಸಿಗುವ ನಿಟ್ಟಿನಲ್ಲಿಅಧಿಕಾರ ಇದ್ದಾಗ, ಇಲ್ಲದಿದ್ದಾಗೂ ಹೋರಾಟ ಇರುತ್ತದೆ' ಎಂದರು.


‘ಕಿತ್ತೂರ ರಾಣಿ ಚನ್ನಮ್ಮ ನನ್ನ ಆದರ್ಶ, ನನ್ನ ದೈವ, ನನ್ನ ಜೀವನದ ಸ್ಫೂರ್ತಿ. ಹೋರಾಟದಿಂದಲೇ ಚನ್ನಮ್ಮ ಸಮಾಜದಲ್ಲಿ ಶಾಶ್ವತ ಸ್ಥಾನ ಪಡೆದಿದ್ದಾಳೆ. ನಾನು ಎಲ್ಲೇ ಹೋದರೂ, ಯಾವುದೇ ಕಾರ್ಯಕ್ರಮ ಇರಲಿ ಚನ್ನಮ್ಮನನ್ನು ಸ್ಮರಿಸುತ್ತೇನೆ’ ಎಂದರು.

ಕೂಡಲಸಂಗಮದ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಆಶೀರ್ವಚನ ನೀಡಿ, ‘ಪಂಚಮಸಾಲಿ ಸಮಾಜ ಈಗ ಬದಲಾಗಿದೆ. ಸಮಾಜದ ಸಂಘಟನೆ, ಅಭಿವೃದ್ಧಿಗಾಗಿ ಹೋರಾಡುವವರನ್ನು ಈ ಸಮಾಜ ನಾಯಕರನ್ನಾಗಿ ಮಾಡುತ್ತದೆ’ ಎಂದರು.

‘ರಾಷ್ಟ್ರಪ್ರಜ್ಞೆ ರೂಪಿಸುವಲ್ಲಿಶರಣರು, ಸಾಧಕರು, ಹೋರಾಟಗಾರರ ಮೂರ್ತಿ ಸ್ಥಾಪನೆ ಅಗತ್ಯ. ಪ್ರತಿಮೆ ಸ್ಥಾಪನೆ ಸಮುದಾಯಗಳ ನಡುವಿನ ಸಂಘರ್ಷಕ್ಕೆ ಕಾರಣವಾಗಬಾರದು’ ಎಂದರು.

ಬಳ್ಳಾರಿಯ ಸ್ಲಮ್‌ನಲ್ಲಿ ಹುಟ್ಟಿದ ಶ್ರೀರಾಮುಲು ಶಾಸಕರನ್ನಾಗಿ ಮಾಡಿದ್ದು ನಾನು - ಶಾಸಕ ಜನಾರ್ದನ ರೆಡ್ಡಿ
‘ಮೀಸಲಿಗಾಗಿ ನಮ್ಮ ಹೋರಾಟ ನಿಲ್ಲದು. ಅಧಿಕಾರದಲ್ಲಿ ಯಾವುದೇ ಪಕ್ಷವಿರಲಿ ಹೋರಾಟ ನಿರಂತರ. ಸದ್ಯ 5 ಜಿಲ್ಲೆಗಳಲ್ಲಿಹೋರಾಟ ನಡೆಯುತ್ತಿದ್ದು, ಹಾವೇರಿ ಜಿಲ್ಲೆಯಲ್ಲಿ ಶೀಘ್ರ ವಿಸ್ತರಿಸಲಿದೆ ’ ಎಂದರು.

ಶಾಸಕ ಶ್ರೀನಿವಾಸ ಮಾನೆ ಮಾತನಾಡಿ, ‘ಹಾನಗಲ್ಲದಲ್ಲಿ ಪಂಚಮಸಾಲಿ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ 8 ಗುಂಟೆ ಜಾಗೆ ಮೀಸಲಿಡಲಾಗಿದೆ. ಮತ್ತಷ್ಟು ಜಾಗದ ಬೇಡಿಕೆ ಬಂದರೆ ಒದಗಿಸಲಾಗುತ್ತದೆ’ ಎಂದರು.

ರಾಣೇಬೆನ್ನೂರ ಮಾಜಿ ಶಾಸಕ ಅರುಣಕುಮಾರ ಪೂಜಾರ, ಮಾಜಿ ಸಂಸದ ಮಂಜುನಾಥ ಕುನ್ನೂರ, ರಾಣೇಬೆನ್ನೂರ ಶನೇಶ್ವರ ಮಠದ ಶಿವಯೋಗಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.

ಪರಿಶಿಷ್ಟ ಪಂಗಡಗಳ ಅಭಿವೃದ್ಧಿಗೆ ಪ್ರತ್ಯೇಕ ಸಚಿವಾಲಯ ಸ್ಥಾಪನೆ - ಮುಖ್ಯಮಂತ್ರಿ ಸಿದ್ದರಾಮಯ್ಯ
ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ಮಹದೇವಪ್ಪ ಬಾಗಸರ, ಹರ ಸಂಘದ ಅಧ್ಯಕ್ಷ ಸಿದ್ಧು ಓಣಿಕೇರಿ, ಮಾಜಿ ಶಾಸಕರಾದ ಶಿವರಾಜ ಸಜ್ಜನರ, ವಿರುಪಾಕ್ಷಪ್ಪ ಬಳ್ಳಾರಿ, ಗಣ್ಯರಾದ ಎ.ಎಸ್‌.ಬಳ್ಳಾರಿ, ಮಾಲತೇಶ ಸೊಪ್ಪಿನ, ರಾಜಶೇಖರ ಕಟ್ಟೆಗೌಡ್ರ, ಯಾಸೀರ್‌ಖಾನ್‌ ಪಠಾಣ, ಎನ್‌.ಎಂ.ಪೂಜಾರ, ಮಾರುತಿ ಶಿಡ್ಲಾಪೂರ, ಸಂಗಯ್ಯಶಾಸ್ತ್ರಿ ಹಿರೇಮಠ ಇದ್ದರು.
ಲೇಖಕರ ಬಗ್ಗೆ
ಶ್ರೀಲಕ್ಷ್ಮೀ ಎಚ್ಎಲ್
ಶ್ರೀಲಕ್ಷ್ಮೀ ಅವರು ಮಲೆನಾಡ ಹೆಬ್ಬಾಗಿಲು ಶಿವಮೊಗ್ಗೆಯವರು. ಕಳೆದ 5 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ವಿಜಯ ಕರ್ನಾಟಕ ಆನ್‌ಲೈನ್‌ ನಲ್ಲಿ ಡಿಜಿಟಲ್ ಕಂಟೆಂಟ್ ಪ್ರೊಡ್ಯೂಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದೇಶೀಯ ಸುದ್ದಿಗಳು, ಲೈಫ್‌ಸ್ಟೈಲ್ ಸುದ್ದಿಗಳನ್ನು ಬರೆಯುವುದು ಅಚ್ಚುಮೆಚ್ಚು. ಹೊಸ ಹೊಸ ವಿಚಾರಗಳಿಗೆ ತೆರೆದುಕೊಳ್ಳುವುದು, ಕಲಿಯುವುದು, ಹೊಸ ಜಾಗಗಳಿಗೆ ಭೇಟಿ ನೀಡುವುದು ಇಷ್ಟದ ವಿಚಾರ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ