ಸಂಕ್ರಾಂತಿ ಹಬ್ಬಕ್ಕೆ ತಯಾರಾಗಿವೆ ಸೂರತ್‌ ವಿದ್ಯಾರ್ಥಿಗಳ ವಿನೂತನ ಗಾಳಿಪಟ..!

ಸಂಕ್ರಾಂತಿ ಹಬ್ಬವನ್ನು ದೇಶದ ವಿವಿಧ ಭಾಗಗಳಲ್ಲಿ ಅನೇಕ ರೀತಿಯ ಹೆಸರು ಹಾಗು ವಿವಿಧ ಸಂಪ್ರದಾಯದೊಂದಿಂಗೆ ಆಚರಿಸುತ್ತಾರೆ. ಅದೇ ರೀತಿ ಗುಜರಾತ್ ನಲ್ಲಿ ಸಂಕ್ರಾಂತಿ ಹಬ್ಬವನ್ನು ಉತ್ತರಾಯಣ ಎಂದು ಕರಿಯುತ್ತಾರೆ. ಈ ಹಬ್ಬಕ್ಕೆ ಗಾಳಿಪಟ ಹೆಚ್ಚಿನ ಪ್ರಾಮುಖ್ಯತೆಯನ್ನು ಪಡೆದುಕೊಳ್ಳುತ್ತದೆ. ವಿವಿಧ ರೀತಿಯ ಗಾಳಿಪಟವನ್ನು ಜನರು ಸ್ವತಃ ತಮ್ಮ ಕೈಯಾರೆ ತಯಾರಿಸಿ ಹಾರಿಸುವ ಪದ್ಧತಿ ಇದೆ. ಅದೇ ನಿಟ್ಟಿನಲ್ಲಿ ಉತ್ತರಾಯಣ ಹಬ್ಬದ ಪ್ರಯುಕ್ತ ಸೂರತ್‌ನ ಐಡಿಟಿ ಫ್ಯಾಶನ್ ಸಂಸ್ಥೆಯ ವಿದ್ಯಾರ್ಥಿಗಳು ಹಬ್ಬವನ್ನು ವಿಶಿಷ್ಟ ವಿಚಾರಗಳೊಂದಿಗೆ ಆಚರಿಸಲು ನಿರ್ಧರಿಸಿದ್ದಾರೆ. ಹಕ್ಕಿಗಳು ಕೆಂಪು ಬಣ್ಣ, ಬೆಳ್ಳುಳ್ಳಿ ಮತ್ತು ಪುದೀನ ವಾಸನೆಗೆ ಹೆದರುತ್ತವೆ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ. ಆದ್ದರಿಂದ, ಗಾಳಿಪಟಗಳು ಮತ್ತು ಗಾಳಿಪಟ-ತಂತಿಗಳನ್ನುಕೆಂಪು ಬಣ್ಣ ಬೆಳ್ಳುಳ್ಳಿ ಮತ್ತು ಪುದೀನಾದಿಂದ ತಯಾರಿಸಲು ವಿದ್ಯಾರ್ಥಿಗಳು ನಿರ್ಧರಿಸಿ ವಿಧವಿಧವಾದ ಗಾಳಿಪಟಗಳನ್ನು ತಯಾರಿಸಿದ್ದಾರೆ.

Vijaya Karnataka Web 13 Jan 2021, 11:43 am
Loading ...