ಆ್ಯಪ್ನಗರ

ಬಡಾವಣೆಯಲ್ಲಿ ಓಡಿದ ಚೊಚ್ಚಲ ಸಿಟಿ ಬಸ್‌

ಇಲ್ಲಿನ ನ್ಯೂ ರಾಘವೇಂದ್ರ ಕಾಲೊನಿಯಲ್ಲಿ ಸಾರಿಗೆ ಸಂಸ್ಥೆಯ ಚೊಚ್ಚಲ ಸಿಟಿ ಬಸ್‌ ಸಂಪರ್ಕಕ್ಕೆ ಶನಿವಾರ ಚಾಲನೆ ನೀಡಲಾಯಿತು.

ವಿಕ ಸುದ್ದಿಲೋಕ 15 May 2016, 3:49 pm

ಕಲಬುರಗಿ: ಇಲ್ಲಿನ ನ್ಯೂ ರಾಘವೇಂದ್ರ ಕಾಲೊನಿಯಲ್ಲಿ ಸಾರಿಗೆ ಸಂಸ್ಥೆಯ ಚೊಚ್ಚಲ ಸಿಟಿ ಬಸ್‌ ಸಂಪರ್ಕಕ್ಕೆ ಶನಿವಾರ ಚಾಲನೆ ನೀಡಲಾಯಿತು.

ರಸ್ತೆಯ ಸಂಪರ್ಕದ ಕೊರತೆಯಿಂದಾಗಿ ಬಸ್‌ ವ್ಯವಸ್ಥೆ ಕಲ್ಪಿಸಿರಲಿಲ್ಲ. ಇತ್ತೀಚೆಗೆ ಝಂಗೆ ಬ್ರದರ್ಸ್‌ ರಸ್ತೆ ಅಗಲೀಕರಣದ ಬಳಿಕ ವಾಹನ ಚಲನೆಗೆ ಅಗತ್ಯ ರಸ್ತೆ ಲಭ್ಯ ಇರುವುದರಿಂದ ಕೂಡಲೇ ಬಸ್‌ ಬಿಡುವಂತೆ ಬಡಾವಣೆ ನಿವಾಸಿಗಳ ಬಹುದಿನ ಬೇಡಿಕೆ ಇತ್ತು. ಅದಕ್ಕೆ ಪೂರಕವಾಗಿ ಕಾರ್ಪೋರೇಟರ್‌ ರಮೇಶ್‌ ಕಮಕನೂರ, ನಿರಂಜನ್‌, ಹರ್ಷಾ ಅವರ ಶ್ರಮದಿಂದಾಗಿ ಬಸ್‌ ಸೌಕರ್ಯ ಕಲ್ಪಿಸಲಾಗಿದೆ.

ಹಾಲಿ ಸಂಪರ್ಕ ಕಲ್ಪಿಸಲಾಗಿರುವ ಸಿಟಿ ಬಸ್‌ ಮೊಹರೆ ಕಾಂಪ್ಲೆಕ್ಸ್‌ನಿಂದ ಸೂಪರ್‌ ಮಾರ್ಕೆಟ್‌ ಹಾಗೂ ಸರದಾರ್‌ ವಲ್ಲಭಭಾಯಿ ಪಟೇಲ್‌ ವೃತ್ತದ ಮೂಲಕ ಪ್ರಯಾಣ ಬೆಳೆಸಲಿದೆ. ಒಂದುವೇಳೆ, ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಪ್ರಯಾಣಿಸಿದ್ದಲ್ಲಿ ಇನ್ನೊಂದು ಬಸ್‌ ಬಿಡುವುದಾಗಿ ಎನ್‌ಇಕೆಆರ್‌ಟಿಸಿ ಅಧ್ಯಕ್ಷ ಭೀಮಣ್ಣ ಸಾಲಿ ಭರವಸೆ ನೀಡಿದರು.

ಬಡಾವಣೆಗಳಿಗೆ 80 ಮಿನಿ ಬಸ್‌: ಮುಖ್ಯ ರಸ್ತೆಯಲ್ಲಿ ಓಡಾಡುವ ಸಿಟಿ ಬಸ್‌ಗಳು ಬಡಾವಣೆಗಳತ್ತ ಬರುವುದು ಕಷ್ಟ. ಇದನ್ನು ಮನಗಂಡು ಸಾರ್ವಜನಿಕರ ಅನುಕೂಲಕ್ಕಾಗಿ ಇಲ್ಲಿನ ಕರುಣೇಶ್ವರ ಬಡಾವಣೆ, ಬಿದ್ದಾಪುರ ಸೇರಿದಂತೆ ಮತ್ತಿತರ ಕಡೆಗಳಲ್ಲಿ ಮಿನಿ ಬಸ್‌ಗಳನ್ನು ಓಡಿಸುವ ಯೋಜನೆ ಇದೆ. ಇದಕ್ಕಾಗಿ ಸುಮಾರು 80 ಮಿನಿ ಬಸ್‌ಗಳನ್ನು ರಸ್ತೆಗೆ ಬಿಡಲಾಗುವುದು. ಈ ಮೂಲಕ ಪ್ರತಿಯೊಂದು ಬಡಾವಣೆಯಲ್ಲೂ ಸಾರಿಗೆ ಸಂಸ್ಥೆಯ ಬಸ್‌ಗಳ ಸಂಪರ್ಕ ಕಲ್ಪಿಸಿದಂತಾಗಲಿದೆ ಎಂದು ಹೇಳಿದರು.

ಬಡಾವಣೆಯ ಹಿರಿಯ ನಾಯಕ ನಾಗಪ್ಪ ಜಮಾದಾರ, ಸುಭಾಷ್ಚಂದ್ರ ಬಳಕನಳ್ಳಿ, ದೇವೇಂದ್ರಪ್ಪ ಮಾಡಿಯಾಳ, ಮಹ್ಮದ್‌ ವಾಯಿದ್‌ ಕೋತ್ವಾಲ್‌, ಗುರುರಾಜ್‌ ಕುಲಕರ್ಣಿ, ನಿರಂಜನ್‌, ಹರ್ಷ ಸೇರಿದಂತೆ ಇತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ