ಆ್ಯಪ್ನಗರ

ಬಿಸಿಯೂಟದಲ್ಲಿ ಡಬಲ್‌ ಸಾಲ್ಟ್‌ ಬಳಕೆಗೆ ಕೇಂದ್ರ ಸೂಚನೆ, ಸಾಧ್ಯವಿಲ್ಲವೆಂದ ರಾಜ್ಯ

ರಾಜ್ಯ-ಕೇಂದ್ರ ಸರಕಾರಗಳ ‘ಬಿಸಿಯೂಟ’ದ ಪ್ರತಿಷ್ಠೆಯ ತಾಕಲಾಟ ಮತ್ತೊಂದು ಹಂತ ತಲುಪಿದೆ. ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ‘ಡಬಲ್‌ ಸಾಲ್ಟ್‌’ ಮತ್ತು ಜೇನುತುಪ್ಪ ನೀಡಲು ಸಾಧ್ಯವಿಲ್ಲ ಎಂದು ರಾಜ್ಯ ಸರಕಾರವು ಕೇಂದ್ರ ಸರಕಾರಕ್ಕೆ ತಿಳಿಸಿದೆ.

Edited byಶ್ರೀಲಕ್ಷ್ಮೀ ಎಚ್ಎಲ್ | Vijaya Karnataka Web 7 Aug 2023, 9:35 am

ಹೈಲೈಟ್ಸ್‌:

  • ಮತ್ತೊಂದು ಹಂತ ತಲುಪಿದ ರಾಜ್ಯ-ಕೇಂದ್ರ ಸರಕಾರಗಳ ‘ಬಿಸಿಯೂಟ’ದ ಪ್ರತಿಷ್ಠೆ
  • ಬಿಸಿಯೂಟದಲ್ಲಿ ಡಬಲ್‌ ಸಾಲ್ಟ್‌ ಬಳಕೆ ಸಾಧ್ಯ ಇಲ್ಲ ಎಂದ ರಾಜ್ಯ
  • ಸದ್ಯ ಒಡಿಶಾದಲ್ಲಿ ಮಾತ್ರ ಡಬಲ್‌ ಸಾಲ್ಟ್‌ ಬಳಕೆಯಲ್ಲಿದೆ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web ಶಾಲೆಯಲ್ಲಿ ಬಿಸಿಯೂಟ ಸವಿಯುತ್ತಿರುವ ಮಕ್ಕಳು
ಶಾಲೆಯಲ್ಲಿ ಬಿಸಿಯೂಟ ಸವಿಯುತ್ತಿರುವ ಮಕ್ಕಳು
  • ದೇವರಾಜ್‌ ಕನಕಪುರ
ಬೆಂಗಳೂರು: ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ‘ಡಬಲ್‌ ಸಾಲ್ಟ್‌’ ಮತ್ತು ಜೇನುತುಪ್ಪ ನೀಡಲು ಸಾಧ್ಯವಿಲ್ಲ ಎಂದು ರಾಜ್ಯ ಸರಕಾರವು ಕೇಂದ್ರ ಸರಕಾರಕ್ಕೆ ತಿಳಿಸಿದೆ.
ಇದರೊಂದಿಗೆ ಈಗ ರಾಜ್ಯ-ಕೇಂದ್ರ ಸರಕಾರಗಳ ‘ಬಿಸಿಯೂಟ’ದ ಪ್ರತಿಷ್ಠೆಯ ತಾಕಲಾಟ ಮತ್ತೊಂದು ಹಂತ ತಲುಪಿದೆ. ಸೋಡಿಯಂ ಜತೆಗೆ ಪೊಟ್ಯಾಷಿಯಂ ಮತ್ತಿತರ ಲವಣಾಂಶಗಳನ್ನು ಹೊಂದಿರುವ, ಅಂದರೆ ಒಂದಕ್ಕಿಂತ ಹೆಚ್ಚು ಲವಣಗಳಿರುವ ಉಪ್ಪು(ಡಬಲ್‌ ಸಾಲ್ಟ್‌) ನಮ್ಮ ರಾಜ್ಯದಲ್ಲಿ ಸಿಗುವುದೇ ಇಲ್ಲ. ಇನ್ನು ಜೇನುತುಪ್ಪವಿದ್ದರೂ ಅಗಾಧ ಪ್ರಮಾಣದಲ್ಲಿ ದೊರೆಯುವುದಿಲ್ಲ.

ಹೀರೋ ಅಧ್ಯಕ್ಷ ಪವನ್‌ ಮುಂಜಾಲ್‌ ಮನೆ ಮೇಲೆ ಇ.ಡಿ ದಾಳಿ, ಕಂಪನಿ ಷೇರು ಭಾರೀ ಕುಸಿತ
ಈ ಎರಡು ಕಾರಣಗಳಿಂದ ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಇವೆರಡನ್ನೂ ನೀಡಲು ಸಾಧ್ಯವಿಲ್ಲ ಎನ್ನುವುದು ರಾಜ್ಯ ಸರಕಾರದ ವಿವರಣೆಯಾಗಿದೆ. ಇತ್ತೀಚೆಗಷ್ಟೇ ಕೇಂದ್ರ ಸರಕಾರವು ರಾಜ್ಯಕ್ಕೆ ಬಿಸಿಯೂಟ ಯೋಜನೆಯಲ್ಲಿ ರಾಗಿ ಮತ್ತು ಜೋಳ ನೀಡುವುದಕ್ಕೂ ಸಾಧ್ಯವಿಲ್ಲಎಂದು ತಿಳಿಸಿತ್ತು.

ಈಗ ಡಬಲ್‌ ಸಾಲ್ಟ್‌ನಿಂದಲೂ ಮಕ್ಕಳು ವಂಚಿತರಾಗಬೇಕಿದೆ. ಇತ್ತೀಚೆಗಷ್ಟೇ ಕೇಂದ್ರವು ಪಿಎಂ ಪೋಷಣ್‌ ಯೋಜನೆಯಡಿ ಶಾಲಾ ಮಕ್ಕಳಿಗೆ ಮತ್ತಷ್ಟು ಪೌಷ್ಟಿಕಾಂಶ ಕಲ್ಪಿಸಿಕೊಡುವ ಉದ್ದೇಶದಿಂದ ಅಡುಗೆಗೆ ಡಬಲ್‌ ಸಾಲ್ಟ್‌ ಬಳಸಲು ರಾಜ್ಯ ಸರಕಾರಕ್ಕೆ ಸೂಚಿಸಿತ್ತು. ಅಲ್ಲದೆ, ಜೇನುತುಪ್ಪದಲ್ಲಿ ಹೆಚ್ಚಿನ ಪ್ರಮಾಣ ಪೌಷ್ಟಿಕಾಂಶ ಇರುವುದರಿಂದ ಅದನ್ನು ನೀಡಿ ಎಂದು ತಿಳಿಸಿತ್ತು.

ಗ್ಯಾರಂಟಿ ಯೋಜನೆಗಳಿಗೆ ವಿರೋಧವನ್ನು ಸಾರ್ವಜನಿಕವಾಗಿ ದಾಖಲಿಸಿ; ಪ್ರಧಾನಿ ಮೋದಿಗೆ ಸಿಎಂ ಸವಾಲು
ಆದರೆ, ನಮ್ಮ ರಾಜ್ಯದಲ್ಲಿ ಐಯೋಡಿನ್‌ ಉಪ್ಪು ಸಿಗುತ್ತಿದ್ದು, ಸದ್ಯ ಇದನ್ನು ಊಟದ ತಯಾರಿಕೆಯಲ್ಲಿಈಗಾಗಲೇ ಬಳಸಲಾಗುತ್ತಿದೆ. ಆದರೆ, ಡಬಲ್‌ ಸಾಲ್ಟ್‌ ರಾಜ್ಯದಲ್ಲಿ ಬಳಕೆಯಲ್ಲಿ ಇಲ್ಲದೇ ಇರುವುದರಿಂದ ಖರೀದಿಗೆ ಸಿಗುತ್ತಿಲ್ಲ. ಹೀಗಾಗಿ ಈ ಸೂಚನೆಯ ಅನುಷ್ಠಾನ ಸಾಧ್ಯವಿಲ್ಲ ಎಂದು ಶಿಕ್ಷಣ ಇಲಾಖೆಯ ಮಧ್ಯಾಹ್ನ ಉಪಹಾರ ಯೋಜನೆ ವಿಭಾಗವು ಕೇಂದ್ರ ಸರಕಾರಕ್ಕೆ ಸ್ಪಷ್ಟಪಡಿಸಿದೆ.

ಸದ್ಯ ಒಡಿಶಾದಲ್ಲಿ ಮಾತ್ರ ಡಬಲ್‌ ಸಾಲ್ಟ್‌ ಬಳಕೆಯಲ್ಲಿದೆ. ಏಕೆಂದರೆ, ಅಲ್ಲಿಈ ಉಪ್ಪಿನ ಲಭ್ಯತೆ ಇದೆ. ಕರ್ನಾಟಕದಲ್ಲಿಅದು ಸಿಗುವುದಿಲ್ಲಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಲೇಖಕರ ಬಗ್ಗೆ
ಶ್ರೀಲಕ್ಷ್ಮೀ ಎಚ್ಎಲ್
ಶ್ರೀಲಕ್ಷ್ಮೀ ಅವರು ಮಲೆನಾಡ ಹೆಬ್ಬಾಗಿಲು ಶಿವಮೊಗ್ಗೆಯವರು. ಕಳೆದ 5 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಸದ್ಯ ವಿಜಯ ಕರ್ನಾಟಕ ಆನ್‌ಲೈನ್‌ ನಲ್ಲಿ ಡಿಜಿಟಲ್ ಕಂಟೆಂಟ್ ಪ್ರೊಡ್ಯೂಸರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ದೇಶೀಯ ಸುದ್ದಿಗಳು, ಲೈಫ್‌ಸ್ಟೈಲ್ ಸುದ್ದಿಗಳನ್ನು ಬರೆಯುವುದು ಅಚ್ಚುಮೆಚ್ಚು. ಹೊಸ ಹೊಸ ವಿಚಾರಗಳಿಗೆ ತೆರೆದುಕೊಳ್ಳುವುದು, ಕಲಿಯುವುದು, ಹೊಸ ಜಾಗಗಳಿಗೆ ಭೇಟಿ ನೀಡುವುದು ಇಷ್ಟದ ವಿಚಾರ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ