- ದೇವರಾಜ್ ಕನಕಪುರ
ಈ ಎರಡು ಕಾರಣಗಳಿಂದ ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ಇವೆರಡನ್ನೂ ನೀಡಲು ಸಾಧ್ಯವಿಲ್ಲ ಎನ್ನುವುದು ರಾಜ್ಯ ಸರಕಾರದ ವಿವರಣೆಯಾಗಿದೆ. ಇತ್ತೀಚೆಗಷ್ಟೇ ಕೇಂದ್ರ ಸರಕಾರವು ರಾಜ್ಯಕ್ಕೆ ಬಿಸಿಯೂಟ ಯೋಜನೆಯಲ್ಲಿ ರಾಗಿ ಮತ್ತು ಜೋಳ ನೀಡುವುದಕ್ಕೂ ಸಾಧ್ಯವಿಲ್ಲಎಂದು ತಿಳಿಸಿತ್ತು.
ಈಗ ಡಬಲ್ ಸಾಲ್ಟ್ನಿಂದಲೂ ಮಕ್ಕಳು ವಂಚಿತರಾಗಬೇಕಿದೆ. ಇತ್ತೀಚೆಗಷ್ಟೇ ಕೇಂದ್ರವು ಪಿಎಂ ಪೋಷಣ್ ಯೋಜನೆಯಡಿ ಶಾಲಾ ಮಕ್ಕಳಿಗೆ ಮತ್ತಷ್ಟು ಪೌಷ್ಟಿಕಾಂಶ ಕಲ್ಪಿಸಿಕೊಡುವ ಉದ್ದೇಶದಿಂದ ಅಡುಗೆಗೆ ಡಬಲ್ ಸಾಲ್ಟ್ ಬಳಸಲು ರಾಜ್ಯ ಸರಕಾರಕ್ಕೆ ಸೂಚಿಸಿತ್ತು. ಅಲ್ಲದೆ, ಜೇನುತುಪ್ಪದಲ್ಲಿ ಹೆಚ್ಚಿನ ಪ್ರಮಾಣ ಪೌಷ್ಟಿಕಾಂಶ ಇರುವುದರಿಂದ ಅದನ್ನು ನೀಡಿ ಎಂದು ತಿಳಿಸಿತ್ತು.
ಆದರೆ, ನಮ್ಮ ರಾಜ್ಯದಲ್ಲಿ ಐಯೋಡಿನ್ ಉಪ್ಪು ಸಿಗುತ್ತಿದ್ದು, ಸದ್ಯ ಇದನ್ನು ಊಟದ ತಯಾರಿಕೆಯಲ್ಲಿಈಗಾಗಲೇ ಬಳಸಲಾಗುತ್ತಿದೆ. ಆದರೆ, ಡಬಲ್ ಸಾಲ್ಟ್ ರಾಜ್ಯದಲ್ಲಿ ಬಳಕೆಯಲ್ಲಿ ಇಲ್ಲದೇ ಇರುವುದರಿಂದ ಖರೀದಿಗೆ ಸಿಗುತ್ತಿಲ್ಲ. ಹೀಗಾಗಿ ಈ ಸೂಚನೆಯ ಅನುಷ್ಠಾನ ಸಾಧ್ಯವಿಲ್ಲ ಎಂದು ಶಿಕ್ಷಣ ಇಲಾಖೆಯ ಮಧ್ಯಾಹ್ನ ಉಪಹಾರ ಯೋಜನೆ ವಿಭಾಗವು ಕೇಂದ್ರ ಸರಕಾರಕ್ಕೆ ಸ್ಪಷ್ಟಪಡಿಸಿದೆ.
ಸದ್ಯ ಒಡಿಶಾದಲ್ಲಿ ಮಾತ್ರ ಡಬಲ್ ಸಾಲ್ಟ್ ಬಳಕೆಯಲ್ಲಿದೆ. ಏಕೆಂದರೆ, ಅಲ್ಲಿಈ ಉಪ್ಪಿನ ಲಭ್ಯತೆ ಇದೆ. ಕರ್ನಾಟಕದಲ್ಲಿಅದು ಸಿಗುವುದಿಲ್ಲಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.