ಶ್ರೀಕಾಂತ್ ಹುಣಸವಾಡಿ
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರು ನಿಯಮಗಳನ್ನು ಉಲ್ಲಂಘಿಸಿ ನಡೆಸುವ ಅಕ್ರಮಗಳಿಗೆ 'ಬ್ರೇಕ್' ಹಾಕುವಂತೆ ಆಯೋಗದ ಕಾರ್ಯದರ್ಶಿಯಾಗಿದ್ದ ವಿಕಾಸ್ ಕಿಶೋರ್ ಸುರಳ್ಕರ್ ಸರಕಾರಕ್ಕೆ ವರದಿ ನೀಡಿದ್ದಾರೆ.ವರ್ಗಾವಣೆಗೂ ಮುನ್ನ ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಗೆ (ಡಿಪಿಎಆರ್) ವಿಸ್ತೃತವಾದ ವರದಿಯನ್ನು ಸಲ್ಲಿಸಿದ್ದಾರೆ. ಅದರ ಪ್ರತಿ ಅಧಿಕೃತ ಮೂಲಗಳಿಂದ 'ವಿಜಯಕರ್ನಾಟಕ'ಕ್ಕೆ ಲಭ್ಯವಾಗಿದೆ.
ಸಂದರ್ಶನ ಬೋರ್ಡ್ಗೆ ಅಭ್ಯರ್ಥಿಗಳ ಹಂಚಿಕೆಗೆ ಲಾಟರಿ ಬದಲು ಆಟೋಮ್ಯಾಟಿಕ್ ಜನರೇಷನ್ ತಾಂತ್ರಿಕತೆ ಅಳವಡಿಸಿಕೊಳ್ಳಬೇಕು. ಒಮ್ಮೆ ಸಂದರ್ಶನಕ್ಕೆ ಆಯ್ಕೆಯಾದ ವಿಷಯ ತಜ್ಞರನ್ನು ಮತ್ತೆ 2-3 ವರ್ಷ ಆಯ್ಕೆ ಮಾಡಬಾರದು. ಆಯೋಗ ನೇಮಕ ಪಟ್ಟಿಗಳಿಗೆ ಅನುಮೋದನೆ ನೀಡಲು ಕಾಲಮಿತಿ ನಿಗದಿ ಮಾಡುವುದೂ ಸೇರಿದಂತೆ ಮೂರು ಅಂಶಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ. ಅಷ್ಟೇ ಅಲ್ಲದೆ, ಅದಕ್ಕೆ ಪೂರಕ ದಾಖಲೆಗಳನ್ನೂ ಒದಗಿಸಿದ್ದಾರೆ.
ಸರಕಾರದ ಉದ್ದೇಶಗಳನ್ನು ಅರ್ಥ ಮಾಡಿಕೊಳ್ಳದೆ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿರುವ ಅಧ್ಯಕ್ಷರ ಕಾರ್ಯವೈಖರಿಯಿಂದ ಅಭ್ಯರ್ಥಿಗಳು, ಆಯೋಗ ಹಾಗೂ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಲು ಆಡಳಿತ ಅನುಭವ ಹೊಂದಿರುವವರನ್ನು ಅಧ್ಯಕ್ಷರನ್ನಾಗಿ ನೇಮಿಸುವುದು ಸೂಕ್ತ ಎಂದು ಹಿಂದಿನ ಕಾರ್ಯದರ್ಶಿ ಶಿಫಾರಸು ಮಾಡಿದ್ದಾರೆ.
ಇತ್ತೀಚೆಗೆ ನಡೆಸಿದ ಗೆಜೆಟೆಡ್ ಪ್ರೊಬೇಷನರಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳ ಸಂದರ್ಶನಕ್ಕೆ ನೀಡಲಾದ ಅಂಕಗಳ ಬಗ್ಗೆ ವಿಶ್ಲೇಷಣೆ ನಡೆಸಿದಾಗ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ತಜ್ಞರು ಹೆಚ್ಚು ಅಂಕ ನೀಡಿದ್ದರೂ, ಆಯೋಗದ ಅಧ್ಯಕ್ಷರು/ಸದಸ್ಯರು ಕಡಿಮೆ ಅಂಕ ನೀಡಿರುವುದು, ಕೆಲ ಅಭ್ಯರ್ಥಿಗಳಿಗೆ ಅತಿ ಹೆಚ್ಚು ಅಂಕ ನೀಡಿರುವುದು ಮತ್ತಿತರ ಅಂಶಗಳನ್ನು ಅವರು ಉದಾಹರಣೆ ಸಮೇತ ವಿವರಿಸಿದ್ದಾರೆ.
ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರು ನಿಯಮಗಳನ್ನು ಉಲ್ಲಂಘಿಸಿ ನಡೆಸುವ ಅಕ್ರಮಗಳಿಗೆ 'ಬ್ರೇಕ್' ಹಾಕುವಂತೆ ಆಯೋಗದ ಕಾರ್ಯದರ್ಶಿಯಾಗಿದ್ದ ವಿಕಾಸ್ ಕಿಶೋರ್ ಸುರಳ್ಕರ್ ಸರಕಾರಕ್ಕೆ ವರದಿ ನೀಡಿದ್ದಾರೆ.ವರ್ಗಾವಣೆಗೂ ಮುನ್ನ ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಆಡಳಿತ ಮತ್ತು ಸಿಬ್ಬಂದಿ ಸುಧಾರಣಾ ಇಲಾಖೆಗೆ (ಡಿಪಿಎಆರ್) ವಿಸ್ತೃತವಾದ ವರದಿಯನ್ನು ಸಲ್ಲಿಸಿದ್ದಾರೆ. ಅದರ ಪ್ರತಿ ಅಧಿಕೃತ ಮೂಲಗಳಿಂದ 'ವಿಜಯಕರ್ನಾಟಕ'ಕ್ಕೆ ಲಭ್ಯವಾಗಿದೆ.
ಸಂದರ್ಶನ ಬೋರ್ಡ್ಗೆ ಅಭ್ಯರ್ಥಿಗಳ ಹಂಚಿಕೆಗೆ ಲಾಟರಿ ಬದಲು ಆಟೋಮ್ಯಾಟಿಕ್ ಜನರೇಷನ್ ತಾಂತ್ರಿಕತೆ ಅಳವಡಿಸಿಕೊಳ್ಳಬೇಕು. ಒಮ್ಮೆ ಸಂದರ್ಶನಕ್ಕೆ ಆಯ್ಕೆಯಾದ ವಿಷಯ ತಜ್ಞರನ್ನು ಮತ್ತೆ 2-3 ವರ್ಷ ಆಯ್ಕೆ ಮಾಡಬಾರದು. ಆಯೋಗ ನೇಮಕ ಪಟ್ಟಿಗಳಿಗೆ ಅನುಮೋದನೆ ನೀಡಲು ಕಾಲಮಿತಿ ನಿಗದಿ ಮಾಡುವುದೂ ಸೇರಿದಂತೆ ಮೂರು ಅಂಶಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದ್ದಾರೆ. ಅಷ್ಟೇ ಅಲ್ಲದೆ, ಅದಕ್ಕೆ ಪೂರಕ ದಾಖಲೆಗಳನ್ನೂ ಒದಗಿಸಿದ್ದಾರೆ.
ಸರಕಾರದ ಉದ್ದೇಶಗಳನ್ನು ಅರ್ಥ ಮಾಡಿಕೊಳ್ಳದೆ ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿರುವ ಅಧ್ಯಕ್ಷರ ಕಾರ್ಯವೈಖರಿಯಿಂದ ಅಭ್ಯರ್ಥಿಗಳು, ಆಯೋಗ ಹಾಗೂ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಗಳನ್ನು ತಪ್ಪಿಸಲು ಆಡಳಿತ ಅನುಭವ ಹೊಂದಿರುವವರನ್ನು ಅಧ್ಯಕ್ಷರನ್ನಾಗಿ ನೇಮಿಸುವುದು ಸೂಕ್ತ ಎಂದು ಹಿಂದಿನ ಕಾರ್ಯದರ್ಶಿ ಶಿಫಾರಸು ಮಾಡಿದ್ದಾರೆ.
ಲಾಟರಿ ನಂತರ ಗೋಲ್ಮಾಲ್
ಹೋಟಾ ಸಮಿತಿಯ ಶಿಫಾರಸಿನಂತೆ ಸಂದರ್ಶನ ಪ್ರಕ್ರಿಯೆಯನ್ನು ನ್ಯಾಯಯುತ ಮತ್ತು ಪಾರರ್ದಶಕವಾಗಿ ನಡೆಸಲು ಸಂದರ್ಶನಕ್ಕೆ ಅರ್ಹರಾಗಿರುವ ಅಭ್ಯರ್ಥಿಗಳನ್ನು ಸಂದರ್ಶನ ಬೋರ್ಡ್ಗೆ ಹಂಚಿಕೆ ಮಾಡಲು ಸಂದರ್ಶನದ ದಿನದಂದು ಬೆಳಿಗ್ಗೆ 9 ಗಂಟೆಗೆ ಲಾಟರಿ ಪ್ರಕ್ರಿಯೆ ನಡೆಸಲಾಗುವುದು. ಆ ಪ್ರಕ್ರಿಯೆ ಆಯೋಗದ ಅಧ್ಯಕ್ಷರು ಹಾಗೂ ಪರೀಕ್ಷಾ ನಿಯಂತ್ರಕರ ಉಪಸ್ಥಿತಿಯಲ್ಲಿಅಧ್ಯಕ್ಷರ ಕೊಠಡಿಯಲ್ಲಿ ನಡೆಯುತ್ತದೆ. ಇದರ ಉದ್ದೇಶ ಯಾವ ಬೋರ್ಡ್ಗೆ ಯಾವ ಅಭ್ಯರ್ಥಿಯನ್ನು ಹಂಚಿಕೆ ಮಾಡಲಾಗುತ್ತದೆ ಮತ್ತು ಯಾವ ಯಾವ ಸದಸ್ಯರು ಯಾವ ಬೋರ್ಡ್ನಲ್ಲಿರಲಿದ್ದಾರೆಂಬ ಮಾಹಿತಿ ಗೌಪ್ಯತೆ ಕಾಯ್ದುಕೊಳ್ಳಲು. ಅಲ್ಲದೆ, ಬೋರ್ಡ್ನ ಸದಸ್ಯರಿಗೂ ಯಾವ ಅಭ್ಯರ್ಥಿ ಯಾವ ಬೋರ್ಡ್ಗೆ ಹಾಜರಾಗುತ್ತಾರೆಂಬ ಮಾಹಿತಿ ಇರುವುದಿಲ್ಲ.ಅನ್ಯಾಯವಾಗುತ್ತಿದ್ದು ಎಲ್ಲಿ?
ಅಭ್ಯರ್ಥಿಗಳ ಲಾಟರಿ ಆಯ್ಕೆಯ ಉದ್ದೇಶಕ್ಕೆ ವ್ಯತಿರಿಕ್ತವಾಗಿ ಲಾಟರಿ ಪ್ರಕ್ರಿಯೆ ಮುಗಿದ ಕೂಡಲೇ ಸಂದರ್ಶನ ಆರಂಭಕ್ಕೂ ಮುನ್ನ ಆಯೋಗದ ಅಧ್ಯಕ್ಷರು, ಇತರೆ ಸದಸ್ಯರೊಂದಿಗೆ ಸಮಾಲೋಚನೆ ನಡೆಸುತ್ತಾರೆ ಹಾಗೂ ಅಭ್ಯರ್ಥಿಗಳನ್ನು ಹಂಚಿಕೆ ಮಾಡಲಾದ ಮಾಹಿತಿ ಹಂಚಿಕೊಳ್ಳುತ್ತಾರೆ ಮತ್ತು ತಜ್ಞರೊಂದಿಗೂ ಪ್ರತ್ಯೇಕ ಸಮಾಲೋಚನೆ ನಡೆಸುತ್ತಾರೆ. ಆಗ ಅಭ್ಯರ್ಥಿಗಳ ವಿವರಗಳನ್ನು ಹಂಚಿಕೊಳ್ಳುತ್ತಾರೆ. ಇದರಿಂದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗುತ್ತಿದೆ. ಇದು ನಿಯಮಗಳ ಸ್ಪಷ್ಟ ಉಲ್ಲಂಘನೆ ಹಾಗೂ ಅಕ್ರಮವಾಗಿದೆ. ಇದಕ್ಕೆ ಕಡಿವಾಣ ಹಾಕಲು ಲಾಟರಿ ಪ್ರಕ್ರಿಯೆ ಬದಲು ಆಟೋಮ್ಯಾಟಿಕ್ ಜನರೇಷನ್ ತಾಂತ್ರಿಕತೆ ಅಳವಡಿಸಿಕೊಂಡು, ಸಂದರ್ಶನ ಆರಂಭವಾಗುವ ಮುನ್ನ ಪರೀಕ್ಷಾ ನಿಯಂತ್ರಕರು ನೇರವಾಗಿ ಬೋರ್ಡ್ನ ಸದಸ್ಯರು, ತಜ್ಞರಿಗೆ ಮಾಹಿತಿ ನೀಡಬಹುದೆಂದು ಕಾರ್ಯದರ್ಶಿ ಶಿಫಾರಸು ಮಾಡಿದ್ದಾರೆ.ವಿಷಯ ತಜ್ಞರ ಜತೆಯೂ ಅಡ್ಜಸ್ಟ್ಮೆಂಟ್
ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರು ವಿಷಯ ತಜ್ಞರ ಜತೆಯೂ 'ಅಡ್ಜಸ್ಟ್ಮೆಂಟ್' ಮಾಡಿಕೊಳ್ಳುತ್ತಾರೆ ಎಂಬ ಅಂಶವನ್ನೂ ಕಾರ್ಯದರ್ಶಿ ಉಲ್ಲೇಖಿಸಿದ್ದಾರೆ. ವಿವಿಧ ವಿಶ್ವವಿದ್ಯಾಲಯಗಳ ಸಾಕಷ್ಟು ತಜ್ಞರ ಪಟ್ಟಿ ಲಭ್ಯವಿದ್ದರೂ ಕೆಲವೇ ತಜ್ಞರನ್ನು ಸಂದರ್ಶನಕ್ಕೆ ಆಯ್ಕೆ ಮಾಡಿಕೊಳ್ಳಲಾಗುತ್ತಿದೆ. ಇದರಿಂದ ಅಧ್ಯಕ್ಷರು, ಸದಸ್ಯರು ಮತ್ತು ತಜ್ಞರ ನಡುವೆ ಬಾಂಧವ್ಯ ಹೆಚ್ಚಾಗಿ ಸಂದರ್ಶನದ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಆದ್ದರಿಂದ ಒಂದು ಬಾರಿ ಸಂದರ್ಶನಕ್ಕೆ ಆಯ್ಕೆ ಮಾಡಿದ ತಜ್ಞರನ್ನು ಮತ್ತೆ 2-3 ವರ್ಷಗಳ ಕಾಲ ಆಯ್ಕೆ ಮಾಡದಿರುವುದು ಸೂಕ್ತ ಎಂದು ಶಿಫಾರಸು ಮಾಡಿದ್ದಾರೆ.ಇತ್ತೀಚೆಗೆ ನಡೆಸಿದ ಗೆಜೆಟೆಡ್ ಪ್ರೊಬೇಷನರಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಹುದ್ದೆಗಳ ಸಂದರ್ಶನಕ್ಕೆ ನೀಡಲಾದ ಅಂಕಗಳ ಬಗ್ಗೆ ವಿಶ್ಲೇಷಣೆ ನಡೆಸಿದಾಗ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ತಜ್ಞರು ಹೆಚ್ಚು ಅಂಕ ನೀಡಿದ್ದರೂ, ಆಯೋಗದ ಅಧ್ಯಕ್ಷರು/ಸದಸ್ಯರು ಕಡಿಮೆ ಅಂಕ ನೀಡಿರುವುದು, ಕೆಲ ಅಭ್ಯರ್ಥಿಗಳಿಗೆ ಅತಿ ಹೆಚ್ಚು ಅಂಕ ನೀಡಿರುವುದು ಮತ್ತಿತರ ಅಂಶಗಳನ್ನು ಅವರು ಉದಾಹರಣೆ ಸಮೇತ ವಿವರಿಸಿದ್ದಾರೆ.