ಬೆಂಗಳೂರು (ಮೇ. 14): ರಾಜ್ಯ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ರಾಜ್ಯ ಕಾಂಗ್ರೆಸ್ 34 ವರ್ಷಗಳ ನಂತರ 136 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿ ದಾಖಲೆ ಸೃಷ್ಟಿಸಿದೆ. ಕಾಂಗ್ರೆಸ್ನಲ್ಲಿ ಸಂತಸ ಮನೆ ಮಾಡಿದ್ದು, ನಂದಿನಿ ಸಿಹಿ ತಿನಿಸನ್ನು ತಿಂದು ನಾಯಕರು, ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ಈ ಮೂಲಕ ಸಂದೇಶ ರವಾನಿಸಿದ್ದಾರೆ. 'ನಂದಿನಿ ಇಲ್ಲದೆ ಕರ್ನಾಟಕದಲ್ಲಿ ಯಾವುದೂ ಪೂರ್ಣವಾಗುವುದಿಲ್ಲ. ನಂದಿನಿ ಈಗ ಎಲ್ಲ ಕನ್ನಡಿಗರೊಂದಿಗೆ ಅವರನ್ನು ಮೀರಿಸಿದೆ' ಎಂದು ಹೇಳುವ ಮೂಲಕ ಕಾಂಗ್ರೆಸ್ ನಾಯಕ ರಂದೀಪ್ ಸುರ್ಜೇವಾಲ ಬಿಜೆಪಿಗೆ ಟಾಂಗ್ ನೀಡಿದ್ದಾರೆ.ಚುನಾವಣೆಗೂ ಮುನ್ನ ಗುಜರಾತ್ನ ಅಮುಲ್ ಬೆಂಗಳೂರಿನಲ್ಲಿ ತಾಜಾ ಹಾಲು ಮತ್ತು ಮೊಸರನ್ನು ಪ್ರಾರಂಭಿಸುವುದಾಗಿ ಘೋಷಿಸಿದ ನಂತರ ನಂದಿನಿ ರಾಜ್ಯದಲ್ಲಿ ಚುನಾವಣಾ ವಿಷಯವಾಯಿತು. ನಂದಿನಿ V/S ಅಮುಲ್ ವಿಚಾರ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ದೊಡ್ಡ ಮಟ್ಟದ ವಾರ್ಗೆ ಕಾರಣವಾಯಿತು.
ನಮ್ಮ ರಾಜ್ಯದ ಹೆಮ್ಮೆಯ ಅಸ್ಮಿತೆಯಾದ 'ನಂದಿನಿ' ಯ ಪರವಾಗಿ ಕಾಂಗ್ರೆಸ್ ಬಲವಾಗಿ ನಿಂತರೆ, ರಾಜ್ಯದಲ್ಲಿ ಅಮುಲ್ VS ನಂದಿನಿ ಯುದ್ಧ ಅಲ್ಲ ಇದು. ಕರ್ನಾಟಕದ ಮಾರುಕಟ್ಟೆಯಲ್ಲಿ ನಂದಿನಿಯ ಜೊತೆಗೆ ಅಮುಲ್ ಕೂಡಾ ಇರಲಿದೆ ಎಂದು ಬಿಜೆಪಿ ಪ್ರತಿಪಾದಿಸಿತು. ಈ ವಿಚಾರ ಎರಡೂ ಪಕ್ಷಗಳ ನಾಯಕರ ಪ್ರಚಾರದಲ್ಲಿ ಆಹಾರವಾಯಿತು.
ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಲಕ್ಷಾಂತರ ರೈತರ, ಹೈನು ಉತ್ಪಾದಕರ ಹಿತಾಸಕ್ತಿಯನ್ನು ಕಡೆಗಣಿಸಿ, ಕರ್ನಾಟಕದ ಬ್ರಾಂಡ್ ನಂದಿನಿಯನ್ನು ಲೂಟಿ ಮಾಡಲು ಬಿಜೆಪಿಯವರು ನಿಂತಿದ್ದಾರೆ. ಇದನ್ನು ಜನ ಸಹಿಸುವುದಿಲ್ಲ. ಚುನಾವಣೆಯಲ್ಲಿ ಜನ ಸೋಲಿಸುತ್ತಾರೆ" ಎಂದಿದ್ದರು. ಅದರಂತೆ ಬಿಜೆಪಿಯ ಸೋಲಿಗೆ ನಂದಿನಿ ವಿಚಾರವೂ ಒಂದು ಎಂದರೆ ತಪ್ಪಾಗಲಿಕ್ಕಿಲ್ಲ. ಗುಜರಾತಿನ ಅಮೂಲ್ ಜೊತೆ ನಂದಿನಿಯನ್ನು ವಿಲೀನಗೊಳಿಸಬಹುದು ಎಂಬ ವದಂತಿ, ಸುತ್ತಲಿನ ಬೆಳವಣಿಗೆಯನ್ನು ನಿಭಾಯಿಸಲು ಬಿಜೆಪಿ ನಾಯಕರು ಸೋತಿದ್ದಾರೆ.
ಏನಿದು ನಂದಿನಿ -ಅಮುಲ್ ವಿವಾದ..?
ಕೇಂದ್ರ ಸಹಕಾರ ಸಚಿವ, ಗೃಹ ಮಂತ್ರಿ ಅಮಿತ್ ಶಾ 2022, ಡಿಸಂಬರ್ನಲ್ಲಿ ರಾಜ್ಯಕ್ಕೆ ಆಗಮಿಸಿದ್ದರು. ಮಂಡ್ಯದಲ್ಲಿ 260 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಮೆಗಾ ಡೈರಿಯನ್ನು ಉದ್ಘಾಟಿಸಿ, ಮಾಡಿದ ಭಾಷಣ ಈ ವಿವಾದಕ್ಕೆ ಕಾರಣವಾಯಿತು.
ರೈತರನ್ನು ಉದ್ದೇಶಿಸಿ ಮಾತನಾಡುತ್ತಾ, "ನಂದಿನಿ ಹಾಗೂ ಅಮುಲ್ ಒಟ್ಟಾಗಿ ಕಾರ್ಯ ನಿರ್ವಹಿಸಿದರೆ ರೈತರಿಗೆ ಅನುಕೂಲವಾಗುತ್ತದೆ. ಮುಂಬರುವ ವರ್ಷಗಳಲ್ಲಿ ಪ್ರತಿ ಗ್ರಾಮ ಮಟ್ಟದಲ್ಲಿ ಪ್ರಾಥಮಿಕ ಡೈರಿಗಳು ಇರುತ್ತವೆ. ಈ ನಿಟ್ಟಿನಲ್ಲಿ ಗುಜರಾತ್ ಹಾಗೂ ಕರ್ನಾಟಕ ಒಗ್ಗೂಡಿದರೆ ರೈತರಿಗೆ ಅನುಕೂಲವಾಗಲಿದೆ. ಹೈನು ಉದ್ಯಮ ಹೊಸ ದಿಕ್ಕಿನೆಡೆ ಸಾಗಲಿದೆ" ಎಂದಿದ್ದಾರೆ. ಅಮಿತ್ ಶಾ ಅವರ ಈ ಹೇಳಿಕೆ ಬೇರೆ ಬೇರೆ ಸ್ವರೂಪ ಪಡೆಯಿತು.
ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್, ಇದನ್ನ ಅಸ್ತ್ರವಾಗಿ ಬಳಸಿಕೊಂಡು, ಕನ್ನಡಿಗರ ಭಾವನೆಯನ್ನು ಕೆರಳಿಸಿದರು. ಅಮುಲ್ ಜೊತೆ ನಂದಿನಿ ವಿಲೀನವಾಗಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಡಿ, ದೊಡ್ಡ ಮಟ್ಟದಲ್ಲಿ ಪರ ವಿರೋಧ ಚರ್ಚೆ ನಡೆಯಿತು. ಲಕ್ಷಾಂತರ ರೈತರು, ಕುಟುಂಬಗಳು ಕೆಎಂಎಫ್ ನಂಬಿ ಬದುಕುತ್ತಿವೆ. ಅಮುಲ್ -ನಂದಿನಿ ವಿಲೀನದಿಂದ ಅವರೆಲ್ಲ ಭವಿಷ್ಯವೇನು..? ಎಂಬಂತಹ ಮಾತುಗಳು ಕೇಳಿ ಬಂದಿವು. ಕನ್ನಡಿಗರ ಮೇಲೆ ಗುಜರಾತಿಗಳ ದಬ್ಬಾಳಿಕೆ, ಗುಜರಾತಿ ಸಂಸ್ಕೃತಿ ಹೇರಿಕೆ ಎಂಬ ಮಾತುಗಳು ಕೇಳಿ ಬಂದವು. ಇವೆಲ್ಲವನ್ನು ನಿಭಾಯಿಸಲು, ಸತ್ಯವನ್ನು ಜನರಿಗೆ ಅರ್ಥ ಮಾಡಿಸಲು ಬಿಜೆಪಿ ನಾಯಕರು ವಿಫಲವಾಗಿದ್ದಾರೆ. ಪರಿಣಾಮ ಚುನಾವಣಾ ಫಲಿತಾಂಶದಲ್ಲಿ ಪ್ರತಿಫಲಿಸಿದೆ.
ನಮ್ಮ ರಾಜ್ಯದ ಹೆಮ್ಮೆಯ ಅಸ್ಮಿತೆಯಾದ 'ನಂದಿನಿ' ಯ ಪರವಾಗಿ ಕಾಂಗ್ರೆಸ್ ಬಲವಾಗಿ ನಿಂತರೆ, ರಾಜ್ಯದಲ್ಲಿ ಅಮುಲ್ VS ನಂದಿನಿ ಯುದ್ಧ ಅಲ್ಲ ಇದು. ಕರ್ನಾಟಕದ ಮಾರುಕಟ್ಟೆಯಲ್ಲಿ ನಂದಿನಿಯ ಜೊತೆಗೆ ಅಮುಲ್ ಕೂಡಾ ಇರಲಿದೆ ಎಂದು ಬಿಜೆಪಿ ಪ್ರತಿಪಾದಿಸಿತು. ಈ ವಿಚಾರ ಎರಡೂ ಪಕ್ಷಗಳ ನಾಯಕರ ಪ್ರಚಾರದಲ್ಲಿ ಆಹಾರವಾಯಿತು.
ಚುನಾವಣಾ ಪ್ರಚಾರದಲ್ಲಿ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಲಕ್ಷಾಂತರ ರೈತರ, ಹೈನು ಉತ್ಪಾದಕರ ಹಿತಾಸಕ್ತಿಯನ್ನು ಕಡೆಗಣಿಸಿ, ಕರ್ನಾಟಕದ ಬ್ರಾಂಡ್ ನಂದಿನಿಯನ್ನು ಲೂಟಿ ಮಾಡಲು ಬಿಜೆಪಿಯವರು ನಿಂತಿದ್ದಾರೆ. ಇದನ್ನು ಜನ ಸಹಿಸುವುದಿಲ್ಲ. ಚುನಾವಣೆಯಲ್ಲಿ ಜನ ಸೋಲಿಸುತ್ತಾರೆ" ಎಂದಿದ್ದರು. ಅದರಂತೆ ಬಿಜೆಪಿಯ ಸೋಲಿಗೆ ನಂದಿನಿ ವಿಚಾರವೂ ಒಂದು ಎಂದರೆ ತಪ್ಪಾಗಲಿಕ್ಕಿಲ್ಲ. ಗುಜರಾತಿನ ಅಮೂಲ್ ಜೊತೆ ನಂದಿನಿಯನ್ನು ವಿಲೀನಗೊಳಿಸಬಹುದು ಎಂಬ ವದಂತಿ, ಸುತ್ತಲಿನ ಬೆಳವಣಿಗೆಯನ್ನು ನಿಭಾಯಿಸಲು ಬಿಜೆಪಿ ನಾಯಕರು ಸೋತಿದ್ದಾರೆ.
ಏನಿದು ನಂದಿನಿ -ಅಮುಲ್ ವಿವಾದ..?
ಕೇಂದ್ರ ಸಹಕಾರ ಸಚಿವ, ಗೃಹ ಮಂತ್ರಿ ಅಮಿತ್ ಶಾ 2022, ಡಿಸಂಬರ್ನಲ್ಲಿ ರಾಜ್ಯಕ್ಕೆ ಆಗಮಿಸಿದ್ದರು. ಮಂಡ್ಯದಲ್ಲಿ 260 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಮೆಗಾ ಡೈರಿಯನ್ನು ಉದ್ಘಾಟಿಸಿ, ಮಾಡಿದ ಭಾಷಣ ಈ ವಿವಾದಕ್ಕೆ ಕಾರಣವಾಯಿತು.
ರೈತರನ್ನು ಉದ್ದೇಶಿಸಿ ಮಾತನಾಡುತ್ತಾ, "ನಂದಿನಿ ಹಾಗೂ ಅಮುಲ್ ಒಟ್ಟಾಗಿ ಕಾರ್ಯ ನಿರ್ವಹಿಸಿದರೆ ರೈತರಿಗೆ ಅನುಕೂಲವಾಗುತ್ತದೆ. ಮುಂಬರುವ ವರ್ಷಗಳಲ್ಲಿ ಪ್ರತಿ ಗ್ರಾಮ ಮಟ್ಟದಲ್ಲಿ ಪ್ರಾಥಮಿಕ ಡೈರಿಗಳು ಇರುತ್ತವೆ. ಈ ನಿಟ್ಟಿನಲ್ಲಿ ಗುಜರಾತ್ ಹಾಗೂ ಕರ್ನಾಟಕ ಒಗ್ಗೂಡಿದರೆ ರೈತರಿಗೆ ಅನುಕೂಲವಾಗಲಿದೆ. ಹೈನು ಉದ್ಯಮ ಹೊಸ ದಿಕ್ಕಿನೆಡೆ ಸಾಗಲಿದೆ" ಎಂದಿದ್ದಾರೆ. ಅಮಿತ್ ಶಾ ಅವರ ಈ ಹೇಳಿಕೆ ಬೇರೆ ಬೇರೆ ಸ್ವರೂಪ ಪಡೆಯಿತು.
ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಜೆಡಿಎಸ್, ಇದನ್ನ ಅಸ್ತ್ರವಾಗಿ ಬಳಸಿಕೊಂಡು, ಕನ್ನಡಿಗರ ಭಾವನೆಯನ್ನು ಕೆರಳಿಸಿದರು. ಅಮುಲ್ ಜೊತೆ ನಂದಿನಿ ವಿಲೀನವಾಗಲಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಡಿ, ದೊಡ್ಡ ಮಟ್ಟದಲ್ಲಿ ಪರ ವಿರೋಧ ಚರ್ಚೆ ನಡೆಯಿತು. ಲಕ್ಷಾಂತರ ರೈತರು, ಕುಟುಂಬಗಳು ಕೆಎಂಎಫ್ ನಂಬಿ ಬದುಕುತ್ತಿವೆ. ಅಮುಲ್ -ನಂದಿನಿ ವಿಲೀನದಿಂದ ಅವರೆಲ್ಲ ಭವಿಷ್ಯವೇನು..? ಎಂಬಂತಹ ಮಾತುಗಳು ಕೇಳಿ ಬಂದಿವು. ಕನ್ನಡಿಗರ ಮೇಲೆ ಗುಜರಾತಿಗಳ ದಬ್ಬಾಳಿಕೆ, ಗುಜರಾತಿ ಸಂಸ್ಕೃತಿ ಹೇರಿಕೆ ಎಂಬ ಮಾತುಗಳು ಕೇಳಿ ಬಂದವು. ಇವೆಲ್ಲವನ್ನು ನಿಭಾಯಿಸಲು, ಸತ್ಯವನ್ನು ಜನರಿಗೆ ಅರ್ಥ ಮಾಡಿಸಲು ಬಿಜೆಪಿ ನಾಯಕರು ವಿಫಲವಾಗಿದ್ದಾರೆ. ಪರಿಣಾಮ ಚುನಾವಣಾ ಫಲಿತಾಂಶದಲ್ಲಿ ಪ್ರತಿಫಲಿಸಿದೆ.