ಆ್ಯಪ್ನಗರ

ಒಮಾನ್‌ ಕಡೆಗೆ ಪಥ ಬದಲಿಸಿದ 'ಕ್ಯಾರ್‌': ಗಂಡಾಂತರದಿಂದ ಪಾರಾದ ಕರ್ನಾಟಕ

ಪಶ್ಚಿಮ ಕರಾವಳಿಗುಂಟ ಅಪ್ಪಳಿಸಿರುವ ಕ್ಯಾರ್‌ ಚಂಡಮಾರುತ ಮುಂದಿನ 24 ಗಂಟೆಗಳಲ್ಲಿ ಉಗ್ರ ರೂಪ ತಾಳಲಿದೆ. ಆದರೆ, ನಂತರ ಒಮಾನ್ ಕಡೆಗೆ ಸಾಗಲಿರುವುದರಿಂದ ರಾಜ್ಯದ ಕರಾವಳಿ ಭಾಗದಲ್ಲಿ ಮಳೆ ಪ್ರಮಾಣ ತಗ್ಗಲಿದೆ.

Vijaya Karnataka Web 25 Oct 2019, 3:08 pm
ಮಂಗಳೂರು : ಅರಬ್ಬಿ ಸಮುದ್ರದಲ್ಲಿ ಉಂಟಾಗಿದ್ದ ವಾಯುಭಾರ ಕುಸಿತ ಈಗ ಚಂಡಮಾರುತದ (ಕ್ಯಾರ್‌ ಸೈಕ್ಲೋನ್‌) ಸ್ವರೂಪ ತಾಳಿದ್ದು, ಮುಂದಿನ 24 ಗಂಟೆಗಳಲ್ಲಿ ಉಗ್ರ ರೂಪ ತಾಳಲಿದೆ. ಇದಾದ ನಂತರ 12 ಗಂಟೆಗಳ ಕಾಲಾ ಬಿರುಗಾಳಿ ಬೀಸಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಭಾತದ ಪಶ್ಚಿಮ ಕರಾವಳಿ ಕ್ಯಾರ್‌ ಚಂಡಮಾರುತ ಅಪಾಯಕ್ಕೆ ಒಳಗಾಗಿದ್ದು, ಕರ್ನಾಟಕ, ಗೋವಾ, ಮಹಾರಾಷ್ಟ್ರದ ತೀರಪ್ರದೇಶದಲ್ಲಿ ಅಪಾಯ ಹೆಚ್ಚಿದೆ.
Vijaya Karnataka Web kyarr


ಚಂಡಮಾರುತ ಭೀತಿ : ಕರಾವಳಿಯಲ್ಲಿ ರೆಡ್‌ ಅಲರ್ಟ್‌ ಘೋಷಣೆ

ಅರಬ್ಬಿ ಸಮುದ್ರದಲ್ಲಿ ಉಂಟಾಗಿರುವ ಚಂಡಮಾರುತ ರತ್ನಗಿರಿಯಿಂದ 3-4 ಕಿಮೀ ದೂರದಲ್ಲಿ ಕೇಂದ್ರೀಕೃತವಾಗಿದ್ದು, ಒಮಾನ್ ಕಡೆಗೆ ಸಾಗಲಿರುವುದರಿಂದ ರಾಜ್ಯದ ಕರಾವಳಿ ಭಾಗದಲ್ಲಿ ಮಳೆ ಪ್ರಮಾಣ ತಗ್ಗಲಿದೆ. ಈ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶುಕ್ರವಾರ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಮುಂಜಾಗ್ರತಾ ಕ್ರಮವಾಗಿ ಶಾಲೆ ಹಾಗೂ ಪಿಯು ಕಾಲೇಜಿಗೆ ರಜೆ ಘೋಷಿಸಲಾಗಿದೆ.

ತಮಿಳುನಾಡು, ಕೇರಳದಲ್ಲಿ ವಾಯುಭಾರ ಕುಸಿತ, ಚಂಡಮಾರುತ, ಕರ್ನಾಟಕದಲ್ಲಿ ಮಳೆ ಸಾಧ್ಯತೆ

ಚಂಡಮಾರುತ ದಿನ ಕಳೆದಂತೆ ಪ್ರಬಲವಾಗುತ್ತಿದ್ದರೂ, 24 ಗಂಟೆಗಳ ನಂತರ ರಾಜ್ಯ ಕರಾವಳಿಯಿಂದ ಬಹು ದೂರಕ್ಕೆ ಸಾಗಲಿದೆ. ಇದು ಒನನ್‌ ರಾಷ್ಟ್ರದ ಕಡೆಗೆ ತನ್ನ ಪಥ ಬದಲಿಸಲಿದೆ. ಹೀಗಾಗಿ ರಾಜ್ಯಕ್ಕೆ ಚಂಡಮಾರುತದ ಪ್ರಭಾವ ತಗ್ಗಲಿದ್ದು, ಮಳೆ ಪ್ರಮಾಣವೂ ಕಡಿಮೆಯಾಗಲಿದೆ.

ಅ.25ರಂದು ಸಂಜೆವರೆಗೂ ಅರಬ್ಬಿ ಸಮುದ್ರದ ಈಶಾನ್ಯ ದಿಕ್ಕಿಗೆ ಚಲಿಸಲಿದೆ. ಅಂದರೆ ಶುಕ್ರವಾರ ಸಂಜೆವರೆಗೂ ಭಾರತದ ಪಶ್ಚಿಮ ಕರಾವಳಿ ಕಡೆಗೆ ಚಲಿಸಲಿದೆ. ನಂತರ ಯುಟರ್ನ್‌ ಪಡೆಯಲಿರುವ ಚಂಡಮಾರುತ ಪಶ್ಚಿಮದ ಕಡೆಗೆ ಚಲಿಸಲಿದೆ. ಕ್ರಮೇಣ ಅರಬ್ಬಿ ಸಮುದ್ರವನ್ನು

ಭಾರಿ ಮಳೆ, ಕರಾವಳಿಯಲ್ಲಿ ರೆಡ್‌ ಅಲರ್ಟ್‌; ದ.ಕ. ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ

ಚಂಡಮಾರುತದಿಂದ ರಾಜ್ಯದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿಗೆ ಹೆಚ್ಚಿನ ಬಾಧಕವಾಗಲಾರದು. ಆಗಾಗ ಬಿರುಸಿನ ಮಳೆಯಾಗುವುದು. ಇನ್ನೆರಡು ದಿನಗಳಲ್ಲಿ ಮಳೆ ಪ್ರಮಾಣ ತಗ್ಗಲಿದೆ ಎಂದು ಶುಕ್ರವಾರ ವಿಜಯ ಕರ್ನಾಟಕ ಜತೆ ಮಾತನಾಡಿದ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವರಿ ಕೇಂದ್ರ ವಿಜ್ಞಾನಿ ಡಾ. ಎಸ್.ಎಸ್.ಎಂ. ಗಾವಸ್ಕರ್ ತಿಳಿಸಿದ್ದಾರೆ.

ಮಹಾರಾಷ್ಟ್ರದ ಕೊಂಕಣ ಮತ್ತು ಗೋವಾ ತೀರ ಪ್ರದೇಶಗಳಿಗೆ ಕ್ಯಾರ್ ಚಂಡಮಾರುತ ಅಪ್ಪಳಿಸಿರುವ ಕಾರಣ ಧಾರಾಕಾರ ಮಳೆ ಸುರಿಯುತ್ತಿದೆ. ಈ ಹಿನ್ನೆಲೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಶಾಲಾ ಕಾಲೇಜುಗಳಿಗೆ ಶುಕ್ರವಾರ ರಜೆ ಘೋಷಿಸಿ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಆದೇಶಿಸಿದ್ದಾರೆ.

ಕರ್ನಾಟಕ, ಕೊಂಕಣ ತೀರ, ರತ್ನಗಿರಿ ಹಾಗು ಗೋವಾದಲ್ಲಿ ಕ್ಯಾರ್‌ ಚಂಡಮಾರುತದ ಅಪಾಯ ಹೆಚ್ಚಿದ್ದು ಪ್ರವಾಸಿಗರು ಅ.27ರವರೆಗೂ ಗೋವಾಕ್ಕೆ ತೆರಳದಿರುವಮತೆ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ