ಆ್ಯಪ್ನಗರ

ಪ್ರಶಸ್ತಿ ಹಿಗ್ಗಿನಿಂದ ರಾಷ್ಟ್ರಪತಿಗೆ ಆಶೀರ್ವದಿಸಿದೆ: ಸಾಲುಮರದ ತಿಮ್ಮಕ್ಕ

ಡಾ.ಜಿ.ಪರಮೇಶ್ವರ ದಂಪತಿಯಿಂದ ಗೌರವ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಸಾಲು ಮರದ ತಿಮ್ಮಕ್ಕ ''ದಿಲ್ಲಿಗೆ ತೆರಳಿ ಪ್ರಶಸ್ತಿ ಪಡೆಯುವುದೆಂದರೆ ನನ್ನಂಥವರಿಗೆ ಕನಸಿನ ಮಾತು. ಪ್ರಶಸ್ತಿ ಸ್ವೀಕಾರದ ವೇಳೆ ಸಂತೋಷ ಜಾಸ್ತಿಯಾಗಿತ್ತು. ಅದೇ ಖುಷಿಯಲ್ಲಿ ರಾಷ್ಟ್ರಪತಿಯವರನ್ನು ಆಶೀರ್ವದಿಸಿದೆ. ಪ್ರಶಸ್ತಿ ಪಡೆದು ವಾಪಸಾಗುವಾಗ ಪ್ರಧಾನಿ ಮೋದಿಯವರಿಗೂ ನಮಸ್ಕರಿಸಿದೆ. ಅದಕ್ಕೆ ಪ್ರತಿಯಾಗಿ ಅವರೂ ನಮಸ್ಕಾರ ಮಾಡಿದರು. ಇದು ಮರೆಯಲಾರದ ಕ್ಷಣ,'' ಎಂದು ಭಾವುಕರಾದರು.

Vijaya Karnataka 19 Mar 2019, 10:34 am
ಬೆಂಗಳೂರು :''ಪದ್ಮಶ್ರೀ ಪ್ರಶಸ್ತಿ ಕೊಟ್ಟಿದ್ದಕ್ಕೆ ಖುಷಿಯಾಯ್ತು. ಅದೇ ಹಿಗ್ಗಿನಲ್ಲಿ ರಾಷ್ಟ್ರಪತಿಯವರನ್ನು ಆಶೀರ್ವಾದ ಮಾಡಿದೆ ಅಷ್ಟೇ''
Vijaya Karnataka Web timmakka


ಇದು ಇತ್ತೀಚಿಗೆ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸುವ ವೇಳೆ ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಅವರ ತಲೆ ಮುಟ್ಟಿ ಆಶೀರ್ವಾದ ಮಾಡಿದ ಬಳಿಕ ದೇಶಾದ್ಯಂತ ಸುದ್ದಿಯಾಗಿರುವ ಸಾಲು ಮರದ ತಿಮ್ಮಕ್ಕ ಅವರ ಪ್ರತಿಕ್ರಿಯೆ.

ಡಾ.ಜಿ.ಪರಮೇಶ್ವರ ದಂಪತಿಯಿಂದ ಗೌರವ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಸಾಲು ಮರದ ತಿಮ್ಮಕ್ಕ ''ದಿಲ್ಲಿಗೆ ತೆರಳಿ ಪ್ರಶಸ್ತಿ ಪಡೆಯುವುದೆಂದರೆ ನನ್ನಂಥವರಿಗೆ ಕನಸಿನ ಮಾತು. ಪ್ರಶಸ್ತಿ ಸ್ವೀಕಾರದ ವೇಳೆ ಸಂತೋಷ ಜಾಸ್ತಿಯಾಗಿತ್ತು. ಅದೇ ಖುಷಿಯಲ್ಲಿ ರಾಷ್ಟ್ರಪತಿಯವರನ್ನು ಆಶೀರ್ವದಿಸಿದೆ. ಪ್ರಶಸ್ತಿ ಪಡೆದು ವಾಪಸಾಗುವಾಗ ಪ್ರಧಾನಿ ಮೋದಿಯವರಿಗೂ ನಮಸ್ಕರಿಸಿದೆ. ಅದಕ್ಕೆ ಪ್ರತಿಯಾಗಿ ಅವರೂ ನಮಸ್ಕಾರ ಮಾಡಿದರು. ಇದು ಮರೆಯಲಾರದ ಕ್ಷಣ,'' ಎಂದು ಭಾವುಕರಾದರು.

ತಿಮ್ಮಕ್ಕ ಅವರು ರಾಷ್ಟ್ರಪತಿಗೆ ಆಶೀರ್ವಾದ ಮಾಡಿದ ಭಾವಚಿತ್ರ ನಾಡಿನೆಲ್ಲೆಡೆ ವೈರಲ್‌ ಆಗಿತ್ತು. ಸ್ವತ: ರಾಮನಾಥ್‌ ಕೋವಿಂದ್‌ ಅವರು ತಮ್ಮ ಟ್ವಿಟರ್‌ ಖಾತೆಯಲ್ಲಿ ತಿಮ್ಮಕ್ಕ ನಡೆಯನ್ನು ಮೆಚ್ಚಿಕೊಂಡಿದ್ದರು. ಈ ಚಿತ್ರವನ್ನು ನೆಟ್ಟಿಗರು ದೊಡ್ಡ ಮಟ್ಟದಲ್ಲಿ ಶೇರ್‌ ಮಾಡಿದ್ದರು.

ಪರಿಸರ ನಾಶದ ವಿರುದ್ಧ ಕೂಗು ಎದ್ದಿರುವಾಗಲೇ ತಿಮ್ಮಕ್ಕ ಸಾಧನೆಗೆ ಪದ್ಮಶ್ರೀ ಗೌರವ ದೊರೆತಿರುವುದು ಹೆಮ್ಮೆಯ ಸಂಗತಿ. ಪ್ರಶಸ್ತಿ ನೀಡಿ ಗೌರವಿಸಿದ ಕೇಂದ್ರ ಸರಕಾರಕ್ಕೆ ಕೃತಜ್ಞತೆ ಅರ್ಪಿಸುವೆ.
- ಡಾ.ಜಿ.ಪರಮೇಶ್ವರ , ಡಿಸಿಎಂ

ತಿಮ್ಮಕ್ಕ ಸೇವೆ ಎಲ್ಲರಿಗೂ ಮಾದರಿ :
ಇದಕ್ಕೂ ಮುನ್ನ ತಿಮ್ಮಕ್ಕ ಅವರನ್ನು ಡಾ.ಜಿ.ಪರಮೇಶ್ವರ ದಂಪತಿ ಗೌರವಿಸಿದರು. ''ಸಣ್ಣ ಹಳ್ಳಿಯಲ್ಲಿ ಇದ್ದುಕೊಂಡೇ ಹಿರಿದಾದ ಸೇವೆ ಮಾಡಿರುವ ತಿಮ್ಮಕ್ಕ ಅವರ ಸೇವೆ ಎಲ್ಲರಿಗೂ ಮಾದರಿಯಾಗಿದೆ. ಮಕ್ಕಳಿಲ್ಲವೆಂದು ರಸ್ತೆಯುದ್ದಕ್ಕೂ ಗಿಡ ನೆಟ್ಟು ಮರಗಳಾಗಿಸಿ ಅವುಗಳನ್ನೇ ತನ್ನ ಮಕ್ಕಳಂತೆ ಸಲಹಿದ್ದು ದೊಡ್ಡ ವಿಷಯ. ಅವರ ಪರಿಸರ ಕಾಳಜಿ ನಮ್ಮೆಲ್ಲರಿಗೂ ಪ್ರೇರಣೆ ನೀಡಿದೆ,'' ಎಂದು ಡಾ,ಪರಮೇಶ್ವರ ಸ್ಮರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ