Please enable javascript.Karnataka Session,ಸದನ ಹೈಲೈಟ್ಸ್ : ಕೋಟಾ ಗೈರಿಗೆ ಅಸಮಾಧಾನ, ಮಾತು ಕೇಳದ ಶಾಸಕರ ಮೇಲೂ ಸ್ಪೀಕರ್ ಗರಂ! - speaker vishweshwar hegde kageri anger against ministers who have absent in karnataka assembly session - Vijay Karnataka

ಸದನ ಹೈಲೈಟ್ಸ್ : ಕೋಟಾ ಗೈರಿಗೆ ಅಸಮಾಧಾನ, ಮಾತು ಕೇಳದ ಶಾಸಕರ ಮೇಲೂ ಸ್ಪೀಕರ್ ಗರಂ!

Vijaya Karnataka Web 16 Feb 2022, 1:45 pm
Subscribe

ಸೋಮವಾರದಿಂದ ಕರ್ನಾಟಕದ ಜಂಟಿ ಅಧಿವೇಶನ ಆರಂಭಗೊಂಡಿದೆ. ಇನ್ನು ಸದನಕ್ಕೆ ಸಚಿವರು ಗೈರು ಹಿನ್ನೆಲೆ ಸ್ಪೀಕರ್ ಕಾಗೇರಿ ಗರಂ ಆದ ಘಟನೆ ನಡೆದಿದೆ. ವಿಧಾನಸಭೆ ಪ್ರಶ್ನೋತ್ತರ ಅವಧಿಗೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಗೈರಿಗೆ ಸ್ಪೀಕರ್ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದರು. ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಹೈಲೈಟ್ಸ್‌:

  • ಸಚಿವ ಕೋಟಾ ಗೈರಿಗೆ ಸ್ಪೀಕರ್ ಕಾಗೇರಿ ಅಸಮಾಧಾನ
  • ಮಾತು ಕೇಳದ ಶಾಸಕರ ಮೇಲೂ ಸ್ಪೀಕರ್ ಗರಂ
  • ಸದನದ ಇಗೀನ ಪ್ರಮುಖಾಂಶಗಳು ಇಲ್ಲಿವೆ


karnataka session
ಬೆಂಗಳೂರು: ವಿಧಾನಸಭೆ ಪ್ರಶ್ನೋತ್ತರ ಅವಧಿಗೆ ಸಚಿವ ಕೋಟಾ ಶ್ರೀನಿವಾಸ್ ಪೂಜಾರಿ ಗೈರಿಗೆ ಸ್ಪೀಕರ್ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದರು. ಪ್ರತಿಪಕ್ಷದ ಆಡಳಿತ ಪಕ್ಷದ ನಾಯಕರೂ ಆಗಿರುವ ಕೋಟಾ ಶ್ರೀನಿವಾಸ್ ಪೂಜಾರಿ ಪ್ರಶ್ನೋತ್ತರ ಅವಧಿಯಲ್ಲಿ ವಿಧಾನಸಭೆಗೆ ಬಂದಿರಲಿಲ್ಲ. ಅವರ ಇಲಾಖೆಗೆ ಸಂಬಂಧಿಸಿದ ಪ್ರಶ್ನೆ ಇದ್ದರೂ ಸಚಿವ ಗೋವಿಂದ ಕಾರಜೋಳ ಅದಕ್ಕೆ ಉತ್ತರಿಸಲು ಎದ್ದು ನಿಂತರು.
ಈ ಸಂದರ್ಭದಲ್ಲಿ ಸಚಿವ ಕೋಟಾ ಗೈರಿಗೆ ಆಕ್ಷೇಪ ವ್ಯಕ್ತಪಡಿಸಿದ ಸ್ಪೀಕರ್, ಈ ಸದನಕ್ಕೆ ಬರದೇ ಇರುವ ಸ್ಥಿತಿ ನಿರ್ಮಾಣ ಆಗಬಾರದು. ಕೋಟಾ ಶ್ರೀನಿವಾಸ್ ಪೂಜಾರಿ ಗೆ ಹೇಳಿದ್ದೇನೆ, ಪ್ರಶ್ನೋತ್ತರ ಅವಧಿಗಾದರೂ ಸದನಕ್ಕೆ ಬರಬೇಕೆಂದು. ಆದರೆ ಪರಿಷತ್ ನಲ್ಲಿ ನಿಲುವಳಿ ಸೂಚನೆ ಇದೆ ಎಂದು ಹೇಳಿದ್ದಾರೆ ಎಂದು ಸಚಿವ ಗೋವಿಂದ ಕಾರಜೋಳ ಬಳಿ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಶ್ನೋತ್ತರಕ್ಕಾದರೂ ಸಚಿವರ ಮುಖ ಕಾಣಬೇಕಲ್ವಾ ಇಲ್ಲಿ ಎಂದರು. ಅಡಕೆ ಕೊಯ್ಯಲು ಧೋಟಿ ಯಂತ್ರ ಖರೀದಿಗೆ ಪ್ರೋತ್ಸಾಹ ನೀಡಿ ಅಡಕೆ ಕೊಯ್ಯಲು ಧೋಟಿ ಖರೀದಿಗೆ ಪ್ರೋತ್ಸಾಹ ನೀಡಿ ಎಂದು ಸ್ವೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ತೋಟಗಾರಿಕಾ ಇಲಾಖೆ ಸಚಿವ ಮುನಿರತ್ನ ಅವರಿಗೆ ಮನವಿ ಮಾಡಿದರು.

ರಾಗಿ ಖರೀದಿ ಸ್ಥಗಿತ ಸಂಬಂಧ ಸದನದಲ್ಲಿ ತೀವ್ರ ಗದ್ದಲ, ಸರ್ಕಾರದ ವಿರುದ್ಧ ಕೃಷ್ಣ ಬೈರೇಗೌಡ ಕಿಡಿ

ಶೃಂಗೇರಿ ಶಾಸಕ ರಾಜೇಗೌಡ ಟಿ.ಡಿ ಅವರು ಚಿಕ್ಕಮಗಳೂರು ಜಿಲ್ಲೆಗೆ ತೋಟಗಾರಿಕೆ ಇಲಾಖೆಯಿಂದ ಬಿಡುಗಡೆಯಾದ ಅನುದಾನದ ಬಗ್ಗೆ ಪ್ರಶ್ನೆ ಕೇಳಿದರು. ಇದೇ ಸಂದರ್ಭದಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಗಳ ಬಗ್ಗೆಯೂ ಪ್ರಸ್ತಾಪ ಮಾಡಿದರು.

ಈ ವೇಳೆ ಮಧ್ಯಪ್ರವೇಶ ಮಾಡಿದ ಸ್ಪೀಕರ್ ಕಾಗೇರಿ, ಅಡಿಕೆ ಕೊಯ್ಯಲು ರೈತರಿಗೆ ಅನುಕೂಲವಾಗುವಂತೆ ಧೋಟಿ ಇದೆ. ಅದಕ್ಕೆ ಪ್ರೋತ್ಸಾಹ ಕೊಟ್ಟರೆ ಅಡಿಕೆ ಬೆಳೆಗಾರರಿಗೆ ಅನುಕೂಲ. ಇಂದಿನ ದಿನಗಳಲ್ಲಿ ಅಡಿಕೆ ಕೊಯ್ಯುವವರು ಸಿಗುತ್ತಿಲ್ಲ. ಸಿಕ್ಕರೂ ಮರ ಹತ್ತಿಸುವುದು ಅಪಾಯಕಾರಿಯಾಗಿದೆ. ಹಲವು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಈ ಬಗ್ಗೆ ಗಮನ ಹರಿಸಿ ಎಂದು ತೋಟಗಾರಿಕಾ ಸಚಿವ ಮುನಿರತ್ನ ಅವರಿಗೆ ಮನವಿ ಮಾಡಿದರು. ಇದಕ್ಕೆ ಉತ್ತರ ನೀಡಿದ ಸಚಿವ ಮುನಿರತ್ನ, ಖಂಡಿತವಾಗಿಯೂ ಮಾಹಿತಿ ಪಡೆದು ಸಬ್ಸಿಡಿಯಲ್ಲಿ ನೀಡಲು ಕ್ರಮ ಕೈಗೊಳ್ಳುತ್ತೇನೆ ಎಂದು ಭರವಸೆ ಕೊಟ್ಟರು.

ಗರಂ ಆದ ಸ್ಪೀಕರ್
ಪ್ರಶ್ನೋತ್ತರ ಅವಧಿಯಲ್ಲಿ ಸಹಕಾರ ನೀಡದಿದ್ದಕ್ಕೆ ಶಾಸಕ ನಂಜೇಗೌಡರ ವಿರುದ್ಧ ಸ್ಪೀಕರ್ ಗರಂ ಆದರು. ಕೋಲಾರ ಜಿಲ್ಲೆಗೆ ಕೊಳವೆ ಬಾವಿ ಕೊರೆಸುವ ವಿಚಾರವಾಗಿ ನಂಜೇಗೌಡರು ಎದ್ದು ನಿಂತು ಮಾತನಾಡಲು ಮುಂದಾದರು. ಮಾತನಾಡದಂತೆ ಸೂಚಿಸಿದರೂ ನಂಜೇಗೌಡರರು ಮಾತು ಮುಂದುವರಿಸಿದರು. ಇದಕ್ಕೆ ಗರಂ ಆದ ಸ್ಪೀಕರ್ ಮಾತನಾಡುವವರಿಗೆ ಒಂದು ಹೇಳ್ತೇನೆ.ಬೇರೆಯವರು ಮಾತನಾಡುವುದನ್ನು ಕೇಳಿ ಎಂದು ಗರಂ ಆದರು.

ನಿಮಗೆ ಇದನ್ನು ರಾಜಕೀಯಕ್ಕೆ ಬಳಸಬೇಕಾದರೆ ಸದನದ ಹೊರಗಡೆ ಹೋಗಿ ಬಳಿಸಿ. ನಾಲ್ಕು ವರ್ಷ ಆದರೂ ಅರ್ಥ ಆಗಿಲ್ಲ ಎಂದಾದರೆ ಹೇಗೆ? ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಂಗಾರಪೇಟೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕುಡಿಯುವ ನೀರಿಗಾಗಿ ಕೊಳವೆ ಬಾವಿಗಳನ್ನು ಕೊರೆಸಲಾಗಿದೆ ಎಂಬ ಪ್ರಶ್ನೆಯನ್ನು ಎಸ್.ಎನ್ ನಾರಾಯಣ ಸ್ವಾಮಿ ಪ್ರಶ್ನೆ ಕೇಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ