ಆ್ಯಪ್ನಗರ

ಲಂಕಾ ಸರಣಿ ಸ್ಫೋಟ: ಕಾಸರಗೋಡಿನ ಇಬ್ಬರ ಸಹಿತ ಕೇರಳದ 3 ಯುವಕರು ಎನ್‌ಐಎ ವಶಕ್ಕೆ

ವಶಕ್ಕೆ ಪಡೆಯಲಾದ ಇಬ್ಬರು ಯುವಕರನ್ನು ಅಬೂಬಕ್ಕರ್‌ ಸಿದ್ಧಿಖಿ ಮತ್ತು ಅಹ್ಮದ್ ಅರಾಫತ್ ಎಂದು ಗುರುತಿಸಲಾಗಿದ್ದು, ಕೊಚ್ಚಿನ್‌ನಿಂದ ಆಗಮಿಸಿದ ಎನ್‌ಐಎ ಅಧಿಕಾರಿಗಳ ತಂಡ ವಿಚಾರಣೆಗಾಗಿ ಎನ್‌ಐಎ ಪ್ರಧಾನ ಕಚೇರಿಗೆ ಕರೆದೊಯ್ದಿದೆ. ಶ್ರೀಲಂಕಾವನ್ನು ನಡುಗಿಸಿದ ಸರಣಿ ಸ್ಫೋಟದ ಸಂಚಿನ ರೂವಾರಿ ಝಹ್ರಾನ್ ಹಾಶಿಂ ಜತೆ ನಿಕಟ ಸಂಪರ್ಕ ಹೊಂದಿದ್ದರು ಎಂಬ ಮಾಹಿತಿ ಮೇರೆಗೆ ಎನ್‌ಐಎ ಈ ಯುವಕರನ್ನು ವಶಕ್ಕೆ ಪಡೆದಿದೆ ಎಂದು ಮೂಲಗಳು ಟೈಮ್ಸ್‌ ನೌಗೆ ತಿಳಿಸಿವೆ. ಈ ಯುವಕರು ಝಹ್ರಾನ್ ಚಿಂತನೆಗಳಿಂದ ಆಕರ್ಷಿತರಾಗಿದ್ದರು ಎಂದು ಮೂಲಗಳು ಹೇಳಿವೆ.

Vijaya Karnataka Web 28 Apr 2019, 5:40 pm
ಕಾಸರಗೋಡು: ಶ್ರೀಲಂಕಾದ ಸರಣಿ ಸ್ಫೋಟಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಕಾಸರಗೋಡಿನ ಶಂಕಿತ ಉಗ್ರರ ಮನೆಗಳಿಗೆ ಭಾಣುವಾರ ಬೆಳಗ್ಗೆ ದಾಳಿ ನಡೆಸಿದ್ದು ಮೂವರು ಯುವಕರನ್ನು ವಶಕ್ಕೆ ಪಡೆದುಕೊಂಡಿದೆ.
Vijaya Karnataka Web Sri Lanka Terror


ವಶಕ್ಕೆ ಪಡೆಯಲಾದ ಇಬ್ಬರು ಯುವಕರನ್ನು ಅಬೂಬಕ್ಕರ್‌ ಸಿದ್ಧಿಖಿ ಮತ್ತು ಅಹ್ಮದ್ ಅರಾಫತ್ ಎಂದು ಗುರುತಿಸಲಾಗಿದ್ದು, ಕೊಚ್ಚಿನ್‌ನಿಂದ ಆಗಮಿಸಿದ ಎನ್‌ಐಎ ಅಧಿಕಾರಿಗಳ ತಂಡ ವಿಚಾರಣೆಗಾಗಿ ಎನ್‌ಐಎ ಪ್ರಧಾನ ಕಚೇರಿಗೆ ಕರೆದೊಯ್ದಿದೆ.

ಶ್ರೀಲಂಕಾವನ್ನು ನಡುಗಿಸಿದ ಸರಣಿ ಸ್ಫೋಟದ ಸಂಚಿನ ರೂವಾರಿ ಝಹ್ರಾನ್ ಹಾಶಿಂ ಜತೆ ನಿಕಟ ಸಂಪರ್ಕ ಹೊಂದಿದ್ದರು ಎಂಬ ಮಾಹಿತಿ ಮೇರೆಗೆ ಎನ್‌ಐಎ ಈ ಯುವಕರನ್ನು ವಶಕ್ಕೆ ಪಡೆದಿದೆ ಎಂದು ಮೂಲಗಳು ಟೈಮ್ಸ್‌ ನೌಗೆ ತಿಳಿಸಿವೆ. ಈ ಯುವಕರು ಝಹ್ರಾನ್ ಚಿಂತನೆಗಳಿಂದ ಆಕರ್ಷಿತರಾಗಿದ್ದರು ಎಂದು ಮೂಲಗಳು ಹೇಳಿವೆ.

ಕುಖ್ಯಾತ ಅಂತಾರಾಷ್ಟ್ರೀಯ ಭಯೋತ್ಪಾದಕ ಸಂಘಟನೆ ಐಸಿಸ್ ಜತೆಗೂ ಈ ಯುವಕರು ನಿಕಟ ಸಂಪರ್ಕ ಹೊಂದಿದ್ದರು ಎಂದು ಎನ್‌ಐಎ ತಿಳಿಸಿದೆ. ಶಂಕಿತರಿಂದ ವಿವಾದಾತ್ಮಕ ಇಸ್ಲಾಂ ಬೋಧಕ ಝಾಕಿರ್ ನಾಯ್ಕ್‌ನ ಬೋಧನೆಗಳ ಡಿವಿಡಿಗಳು ಮೊಬೈಲ್‌ ಫೋನ್‌ಗಳು ಮತ್ತು ಇತರ ವಸ್ತುಗಳನ್ನು ಎನ್‌ಐಎ ಅಧಿಕಾರಿಗಳು ಜಪ್ತಿ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

'2016ರ ಐಸಿಸ್‌ ಕಾಸರಗೋಡು ಮೋಡ್ಯೂಲ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳದಲ್ಲಿ ಮೂರು ಕಡೆ ಎನ್‌ಐಎ ಶೋಧ ಕಾರ್ಯಾಚರಣೆ ನಡೆಸಿದೆ. ಐಸಿಸ್/ದಾಯಿಶ್‌ ನಂತಹ ಉಗ್ರ ಸಂಘಟನೆಗಳನ್ನು ಸೇರಿಕೊಳ್ಳಲು ಈ ಶಂಕಿತ ಆರೋಪಿಗಳಲ್ಲಿ ಕೆಲವರು ದೇಶಬಿಟ್ಟು ತೆರಳಿದ್ದರು' ಎಂದು ಎನ್‌ಐಎ ಪ್ರಕಟಣೆ ತಿಳಿಸಿದೆ.

ಕಾಸರಗೋಡಿನಿಂದ ಇಬ್ಬರು ಮತ್ತು ಪಾಲಕ್ಕಾಡ್‌ನಿಂದ ಒಬ್ಬ ಶಂಕಿತ ಉಗ್ರನನ್ನು ಬಂಧಿಸಲಾಗಿದ್ದು, ಅವರ ಮನೆಗಳಿಂದ ಮೊಬೈಲ್ ಫೋನ್‌ಗಳು ಮತ್ತು ಸಿಮ್ ಕಾರ್ಡ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಸೋಮವಾರ ವಿಸ್ತೃತ ವಿಚಾರಣೆ ನಡೆಸುವ ಸಾಧ್ಯತೆಯಿದೆ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.

ಈ ನಡುವೆ, ಶ್ರೀಲಂಕಾದಲ್ಲಿ ಶುಕ್ರವಾರ ನಡೆದ ಎನ್‌ಕೌಂಟರ್‌ನಲ್ಲಿ ಇಬ್ಬರು ಸೋದರರು ಮತ್ತು ಅವರ ತಂದೆ (ಸರಣಿ ಸ್ಫೋಟಗಳ ಪ್ರಧಾನ ಸಂಚುಕೋರರು) ಹತರಾಗಿದ್ದಾರೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ರಾಯ್ಟರ್ಸ್ ವರದಿ ಮಾಡಿದೆ. ಗುಂಡಿನ ಕಾಳಗದಲ್ಲಿ 6 ಮಕ್ಕಳು, ಮೂವರು ಮಹಿಳೆಯರು ಸೇರಿದಂತೆ 15 ಮಂದಿ ಮೃತಪಟ್ಟಿದ್ದರು.

ಝೈನೀ ಹಾಶಿಂ, ರಿಲ್ವಾನ್ ಹಾಶಿಂ ಮತ್ತು ಇವರಿಬ್ಬರ ತಂದೆ ಮೊಹಮ್ಮದ್ ಹಾಶಿಂ ಈ ಗುಂಡಿನ ಕಾಳಗದಲ್ಲಿ ಹತರಾಗಿದ್ದಾರೆ. ಈ ಮೂವರ ಜತೆಗೆ ಕಾಸರಗೋಡಿನ ಯುವಕರಿಗೂ ಸಂಪರ್ಕವಿತ್ತು ಎಂದು ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ