ಗಂಗಾವತಿ; ವಸತಿ ನಿಲಯಗಳಿಗೆ ಅರ್ಜಿ ಸಲ್ಲಿಸಲು ಗುರುವಾರ ಕೊನೆ ದಿನವಾಗಿದ್ದರೂ ಸಹಿ ಹಾಕಲು ನಿರಾಕರಿಸಿದ ಸ್ಥಳೀಯ ಬಾಲಕರ ಸರಕಾರಿ ಜೂನಿಯರ್ ಕಾಲೇಜು ಪ್ರಾಚಾರ್ಯರನ್ನು, ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡರು.
ಎಸ್ಸಿ, ಎಸ್ಟಿ ಮೆಟ್ರಿಕ್ ಪೂರ್ವ ವಸತಿ ನಿಲಯಗಳಿಗೆ ಅರ್ಜಿ ಸಲ್ಲಿಸಲು ಕೊನೆ ದಿನ ನಿಗದಿಯಾಗಿದೆ. ನಾನಾ ಗ್ರಾಮಗಳಿಂದ ಬಂದ ವಿದ್ಯಾರ್ಥಿಗಳು, ಪ್ರಾಚಾರ್ಯ ಲಕ್ಷ್ಮಣ ವಡಕಿ ಅವರ ಸಹಿ ಹಾಕಿಸಿಕೊಳ್ಳಲು ಆಗಮಿಸಿದ್ದಾರೆ. ಆದರೆ, ಸಹಿ ಹಾಕಲು ಹಿಂದೇಟು ಹಾಕಿದ್ದಾರೆ. ನೊಂದ ವಿದ್ಯಾರ್ಥಿಗಳು ನೀಡಿದ ದೂರಿನ ಮೇರೆಗೆ ದಲಿತ ಸಂಘಟನೆ ಕಾರ್ಯಕರ್ತರು, ಕಾಲೇಜಿಗೆ ಆಗಮಿಸಿದರು. ಪ್ರಾಚಾರ್ಯರು, ಕೂಡಲೇ ವಸತಿ ನಿಲಯಕ್ಕೆ ಸಲ್ಲಿಕೆಯಾಗುವ ಅರ್ಜಿಗಳಿಗೆ ಸಹಿ ಮಾಡಬೇಕು ಎಂದು ತಾಕೀತು ಮಾಡಿದರು. ಇದರ ಮಧ್ಯೆ ವಿದ್ಯಾರ್ಥಿಗಳು ಮಾತನಾಡಿ, ಬಸ್ ಪಾಸ್ ಪಡೆಯಲು ಸಹಿ ಹಾಕುತ್ತಿಲ್ಲ ಎಂದು ಆರೋಪಿಸಿದರು. ಇದರಿಂದ ಕುಪಿತರಾದ ಕಾರ್ಯಕರ್ತರು, ಸರಕಾರಿ ಯೋಜನೆಗಳನ್ನು ವಿದ್ಯಾರ್ಥಿಗಳಿಗೆ ಮುಟ್ಟಿಸಬೇಕು. ಒಂದು ವೇಳೆ ನಿರಾಕರಿಸಿದ್ದೇ ಆದಲ್ಲಿ ಕಾಲೇಜು ಮುಂದೆ ಧರಣಿ ಮಾಡುವುದಾಗಿ ಸಂಘಟನೆ ಜಿಲ್ಲಾ ಸಂಚಾಲಕ ಹಂಪೇಶ ಹರಿಗೋಲ ಎಚ್ಚರಿಕೆ ನೀಡಿದರು.
ಈ ವೇಳೆ ತಾಲೂಕು ಸಂಚಾಲಕ ಹನುಮೇಶ್ ಭೋವಿ, ಸದಸ್ಯರಾದ ಹಂಪೇಶ ನೀರಲೂಟಿ, ಬಾಷಾಸಾಬ್, ಕಷ್ಣಪ್ಪ ಹೆಗಡೆ, ಅಶೋಕ ಕರಡಿ, ಶಿವರಾಜ ಹೆಗಡೆ, ಮುದ್ದಣ್ಣ ನಾಯಕ, ಶ್ಯಾಮಣ್ಣ ಸಿದ್ದಾಪೂರ, ದುರುಗಪ್ಪ ಮಾಸ್ಟರ್ ಇದ್ದರು.
ಎಸ್ಸಿ, ಎಸ್ಟಿ ಮೆಟ್ರಿಕ್ ಪೂರ್ವ ವಸತಿ ನಿಲಯಗಳಿಗೆ ಅರ್ಜಿ ಸಲ್ಲಿಸಲು ಕೊನೆ ದಿನ ನಿಗದಿಯಾಗಿದೆ. ನಾನಾ ಗ್ರಾಮಗಳಿಂದ ಬಂದ ವಿದ್ಯಾರ್ಥಿಗಳು, ಪ್ರಾಚಾರ್ಯ ಲಕ್ಷ್ಮಣ ವಡಕಿ ಅವರ ಸಹಿ ಹಾಕಿಸಿಕೊಳ್ಳಲು ಆಗಮಿಸಿದ್ದಾರೆ. ಆದರೆ, ಸಹಿ ಹಾಕಲು ಹಿಂದೇಟು ಹಾಕಿದ್ದಾರೆ. ನೊಂದ ವಿದ್ಯಾರ್ಥಿಗಳು ನೀಡಿದ ದೂರಿನ ಮೇರೆಗೆ ದಲಿತ ಸಂಘಟನೆ ಕಾರ್ಯಕರ್ತರು, ಕಾಲೇಜಿಗೆ ಆಗಮಿಸಿದರು. ಪ್ರಾಚಾರ್ಯರು, ಕೂಡಲೇ ವಸತಿ ನಿಲಯಕ್ಕೆ ಸಲ್ಲಿಕೆಯಾಗುವ ಅರ್ಜಿಗಳಿಗೆ ಸಹಿ ಮಾಡಬೇಕು ಎಂದು ತಾಕೀತು ಮಾಡಿದರು. ಇದರ ಮಧ್ಯೆ ವಿದ್ಯಾರ್ಥಿಗಳು ಮಾತನಾಡಿ, ಬಸ್ ಪಾಸ್ ಪಡೆಯಲು ಸಹಿ ಹಾಕುತ್ತಿಲ್ಲ ಎಂದು ಆರೋಪಿಸಿದರು. ಇದರಿಂದ ಕುಪಿತರಾದ ಕಾರ್ಯಕರ್ತರು, ಸರಕಾರಿ ಯೋಜನೆಗಳನ್ನು ವಿದ್ಯಾರ್ಥಿಗಳಿಗೆ ಮುಟ್ಟಿಸಬೇಕು. ಒಂದು ವೇಳೆ ನಿರಾಕರಿಸಿದ್ದೇ ಆದಲ್ಲಿ ಕಾಲೇಜು ಮುಂದೆ ಧರಣಿ ಮಾಡುವುದಾಗಿ ಸಂಘಟನೆ ಜಿಲ್ಲಾ ಸಂಚಾಲಕ ಹಂಪೇಶ ಹರಿಗೋಲ ಎಚ್ಚರಿಕೆ ನೀಡಿದರು.
ಈ ವೇಳೆ ತಾಲೂಕು ಸಂಚಾಲಕ ಹನುಮೇಶ್ ಭೋವಿ, ಸದಸ್ಯರಾದ ಹಂಪೇಶ ನೀರಲೂಟಿ, ಬಾಷಾಸಾಬ್, ಕಷ್ಣಪ್ಪ ಹೆಗಡೆ, ಅಶೋಕ ಕರಡಿ, ಶಿವರಾಜ ಹೆಗಡೆ, ಮುದ್ದಣ್ಣ ನಾಯಕ, ಶ್ಯಾಮಣ್ಣ ಸಿದ್ದಾಪೂರ, ದುರುಗಪ್ಪ ಮಾಸ್ಟರ್ ಇದ್ದರು.