Please enable javascript.ಸಹಿ ಹಾಕದ ಪ್ರಾಚಾರ್ಯ: ತರಾಟೆ - ಸಹಿ ಹಾಕದ ಪ್ರಾಚಾರ್ಯ: ತರಾಟೆ - Vijay Karnataka

ಸಹಿ ಹಾಕದ ಪ್ರಾಚಾರ್ಯ: ತರಾಟೆ

ವಿಕ ಸುದ್ದಿಲೋಕ 11 Jul 2014, 4:28 am
Subscribe

ವಸತಿ ನಿಲಯಗಳಿಗೆ ಅರ್ಜಿ ಸಲ್ಲಿಸಲು ಗುರುವಾರ ಕೊನೆ ದಿನವಾಗಿದ್ದರೂ ಸಹಿ ಹಾಕಲು ನಿರಾಕರಿಸಿದ ಸ್ಥಳೀಯ ಬಾಲಕರ ಸರಕಾರಿ ಜೂನಿಯರ್ ಕಾಲೇಜು ಪ್ರಾಚಾರ್ಯರನ್ನು, ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡರು.

ಸಹಿ ಹಾಕದ ಪ್ರಾಚಾರ್ಯ: ತರಾಟೆ
ಗಂಗಾವತಿ; ವಸತಿ ನಿಲಯಗಳಿಗೆ ಅರ್ಜಿ ಸಲ್ಲಿಸಲು ಗುರುವಾರ ಕೊನೆ ದಿನವಾಗಿದ್ದರೂ ಸಹಿ ಹಾಕಲು ನಿರಾಕರಿಸಿದ ಸ್ಥಳೀಯ ಬಾಲಕರ ಸರಕಾರಿ ಜೂನಿಯರ್ ಕಾಲೇಜು ಪ್ರಾಚಾರ್ಯರನ್ನು, ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರು ತರಾಟೆಗೆ ತೆಗೆದುಕೊಂಡರು.

ಎಸ್ಸಿ, ಎಸ್ಟಿ ಮೆಟ್ರಿಕ್ ಪೂರ್ವ ವಸತಿ ನಿಲಯಗಳಿಗೆ ಅರ್ಜಿ ಸಲ್ಲಿಸಲು ಕೊನೆ ದಿನ ನಿಗದಿಯಾಗಿದೆ. ನಾನಾ ಗ್ರಾಮಗಳಿಂದ ಬಂದ ವಿದ್ಯಾರ್ಥಿಗಳು, ಪ್ರಾಚಾರ್ಯ ಲಕ್ಷ್ಮಣ ವಡಕಿ ಅವರ ಸಹಿ ಹಾಕಿಸಿಕೊಳ್ಳಲು ಆಗಮಿಸಿದ್ದಾರೆ. ಆದರೆ, ಸಹಿ ಹಾಕಲು ಹಿಂದೇಟು ಹಾಕಿದ್ದಾರೆ. ನೊಂದ ವಿದ್ಯಾರ್ಥಿಗಳು ನೀಡಿದ ದೂರಿನ ಮೇರೆಗೆ ದಲಿತ ಸಂಘಟನೆ ಕಾರ್ಯಕರ್ತರು, ಕಾಲೇಜಿಗೆ ಆಗಮಿಸಿದರು. ಪ್ರಾಚಾರ್ಯರು, ಕೂಡಲೇ ವಸತಿ ನಿಲಯಕ್ಕೆ ಸಲ್ಲಿಕೆಯಾಗುವ ಅರ್ಜಿಗಳಿಗೆ ಸಹಿ ಮಾಡಬೇಕು ಎಂದು ತಾಕೀತು ಮಾಡಿದರು. ಇದರ ಮಧ್ಯೆ ವಿದ್ಯಾರ್ಥಿಗಳು ಮಾತನಾಡಿ, ಬಸ್ ಪಾಸ್ ಪಡೆಯಲು ಸಹಿ ಹಾಕುತ್ತಿಲ್ಲ ಎಂದು ಆರೋಪಿಸಿದರು. ಇದರಿಂದ ಕುಪಿತರಾದ ಕಾರ್ಯಕರ್ತರು, ಸರಕಾರಿ ಯೋಜನೆಗಳನ್ನು ವಿದ್ಯಾರ್ಥಿಗಳಿಗೆ ಮುಟ್ಟಿಸಬೇಕು. ಒಂದು ವೇಳೆ ನಿರಾಕರಿಸಿದ್ದೇ ಆದಲ್ಲಿ ಕಾಲೇಜು ಮುಂದೆ ಧರಣಿ ಮಾಡುವುದಾಗಿ ಸಂಘಟನೆ ಜಿಲ್ಲಾ ಸಂಚಾಲಕ ಹಂಪೇಶ ಹರಿಗೋಲ ಎಚ್ಚರಿಕೆ ನೀಡಿದರು.

ಈ ವೇಳೆ ತಾಲೂಕು ಸಂಚಾಲಕ ಹನುಮೇಶ್ ಭೋವಿ, ಸದಸ್ಯರಾದ ಹಂಪೇಶ ನೀರಲೂಟಿ, ಬಾಷಾಸಾಬ್, ಕಷ್ಣಪ್ಪ ಹೆಗಡೆ, ಅಶೋಕ ಕರಡಿ, ಶಿವರಾಜ ಹೆಗಡೆ, ಮುದ್ದಣ್ಣ ನಾಯಕ, ಶ್ಯಾಮಣ್ಣ ಸಿದ್ದಾಪೂರ, ದುರುಗಪ್ಪ ಮಾಸ್ಟರ್ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ