ಗಂಗಾವತಿ: ಮುಸ್ಲಿಂ ಧರ್ಮದ ವಿರುದ್ಧ ಫೇಸ್ಬುಕ್ನಲ್ಲಿ ಅವಹೇಳನಕಾರಿ ಸಂದೇಶ ಪ್ರಕಟಿಸಿದ ಆರೋಪ ಆಧರಿಸಿ, ಸ್ಥಳೀಯ ಯುವಕರಿಬ್ಬರನ್ನು ನಗರ ಠಾಣೆಯ ಪೊಲೀಸರು ಸೋಮವಾರ ತಡರಾತ್ರಿ ಬಂಧಿಸಿದ್ದಾರೆ.
ಚನ್ನಬಸವ ಹಾಗೂ ವಿನಾಯಕ ಬಂಧಿತರು. ಮತೊಬ್ಬ ಯುವಕ ಕಾಂತೇಶ ನಾಪತ್ತೆಯಾಗಿದ್ದಾನೆ. ಈ ಮೂವರು ಯುವಕರು, ನ.7ರಂದು ತಮ್ಮ ಫೇಸ್ಬುಕ್ ಅಕೌಂಟ್ನಲ್ಲಿ ಮುಸ್ಲಿಂ ಧರ್ಮದ ವಿರುದ್ಧ ಅವಹೇಳನಕಾರಿ ಸಂದೇಶ ಪ್ರಕಟಿಸಿದ್ದರು. ಇದರಿಂದ ಆಕ್ರೋಶಗೊಂಡ ಕಿಲ್ಲಾ ಏರಿಯಾ ನಿವಾಸಿಗಳು, ನಗರ ಠಾಣೆ ಮುಂದೆ ಕೆಲ ಕಾಲ ಪ್ರತಿಭಟನೆ ನಡೆಸಿದರು. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಮುಂಜಾಗ್ರತಾ ಕ್ರಮವಾಗಿ ನಗರದ ಕಿಲ್ಲಾ ಏರಿಯಾ, ಪ್ರಶಾಂತ ನಗರ, ಮಲ್ಲಿಕಾರ್ಜುನ ಮಠದ ಏರಿಯಾ ಸೇರಿ ಇತರೆಡೆ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದಾರೆ. ನಗರ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಚನ್ನಬಸವ ಹಾಗೂ ವಿನಾಯಕ ಬಂಧಿತರು. ಮತೊಬ್ಬ ಯುವಕ ಕಾಂತೇಶ ನಾಪತ್ತೆಯಾಗಿದ್ದಾನೆ. ಈ ಮೂವರು ಯುವಕರು, ನ.7ರಂದು ತಮ್ಮ ಫೇಸ್ಬುಕ್ ಅಕೌಂಟ್ನಲ್ಲಿ ಮುಸ್ಲಿಂ ಧರ್ಮದ ವಿರುದ್ಧ ಅವಹೇಳನಕಾರಿ ಸಂದೇಶ ಪ್ರಕಟಿಸಿದ್ದರು. ಇದರಿಂದ ಆಕ್ರೋಶಗೊಂಡ ಕಿಲ್ಲಾ ಏರಿಯಾ ನಿವಾಸಿಗಳು, ನಗರ ಠಾಣೆ ಮುಂದೆ ಕೆಲ ಕಾಲ ಪ್ರತಿಭಟನೆ ನಡೆಸಿದರು. ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಮುಂಜಾಗ್ರತಾ ಕ್ರಮವಾಗಿ ನಗರದ ಕಿಲ್ಲಾ ಏರಿಯಾ, ಪ್ರಶಾಂತ ನಗರ, ಮಲ್ಲಿಕಾರ್ಜುನ ಮಠದ ಏರಿಯಾ ಸೇರಿ ಇತರೆಡೆ ಪೊಲೀಸರು ಬಂದೋಬಸ್ತ್ ಕೈಗೊಂಡಿದ್ದಾರೆ. ನಗರ ಠಾಣೆಯಲ್ಲಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.